Mauni Amavasya | ಮೌನಿ ಅಮವಾಸ್ಯೆಗೆ ಯಾಕೆ ಇಷ್ಟೊಂದು ಮಹತ್ವ? ಇಲ್ಲಿದೆ ಸಂಪೂರ್ಣ ಮಾಹಿತಿ

Mauni Amavasya |  ಮೌನಿ ಅಮಾವಾಸ್ಯೆ (Mauni amavasya) ಹಿನ್ನೆಲೆಯಲ್ಲಿ ಕೋಟ್ಯಾಂತರ ಭಕ್ತರು ಮಹಾಕುಂಭಕ್ಕೆ ಆಗಮಿಸಿದ್ದಾರೆ. ಮೌನಿ ಅಮಾವಾಸ್ಯೆಯಂದು ನದಿಯಲ್ಲಿ ಸ್ನಾನ ಮಾಡುವುದು ಅತ್ಯಂತ ಶ್ರೇಷ್ಠಕರ ಎಂದು ಹಿಂದೂ ಪಂಚಾಂಗಗಳು ಹೇಳುತ್ತವೆ. ಈ ದಿನ…

Mauni Amavasya

Mauni Amavasya |  ಮೌನಿ ಅಮಾವಾಸ್ಯೆ (Mauni amavasya) ಹಿನ್ನೆಲೆಯಲ್ಲಿ ಕೋಟ್ಯಾಂತರ ಭಕ್ತರು ಮಹಾಕುಂಭಕ್ಕೆ ಆಗಮಿಸಿದ್ದಾರೆ. ಮೌನಿ ಅಮಾವಾಸ್ಯೆಯಂದು ನದಿಯಲ್ಲಿ ಸ್ನಾನ ಮಾಡುವುದು ಅತ್ಯಂತ ಶ್ರೇಷ್ಠಕರ ಎಂದು ಹಿಂದೂ ಪಂಚಾಂಗಗಳು ಹೇಳುತ್ತವೆ.

ಈ ದಿನ ನದಿಯಲ್ಲಿ ಸ್ನಾನ ಮಾಡುವುದರಿಂದ ಮಾಡಿರುವ ಪಾಪಗಳೆಲ್ಲಾ ತೊಳೆದು ಹೋಗುತ್ತವೆ ಎಂದು ಹೇಳಲಾಗುತ್ತದೆ. ಈ ದಿನ ಮೌನ ವ್ರತ ಇಲ್ಲವೇ, ಉಪವಾಸ ಮಾಡುವುದರಿಂದ ಪುಣ್ಯ ಲಭಿಸುತ್ತದೆ ಎನ್ನಲಾಗಿದೆ. ಮೌನಿ ಅಮಾವಾಸ್ಯೆಯಂದು ಪಿತೃಗಳ ಮೋಕ್ಷಕ್ಕಾಗಿ ಶ್ರಾದ್ಧ, ತರ್ಪಣ ಮತ್ತು ಪಿಂಡದಾನವನ್ನು ಕೂಡ ಮಾಡಬಹುದು.

Mauni Amavasya 2025 | ಮೌನಿ ಅಮಾವಾಸ್ಯೆ ಏನು ಮಾಡಬೇಕು & ಏನು ಮಾಡಬಾರದು

Vijayaprabha Mobile App free

Mauni Amavasya | ಹಿಂದೂ ಧರ್ಮದಲ್ಲಿ ಪ್ರಮುಖ ಮಹತ್ವವನ್ನು ಹೊಂದಿರುವ ಮೌನಿ ಅಮಾವಾಸ್ಯೆ

ಧಾರ್ಮಿಕ ಗ್ರಂಥಗಳಲ್ಲಿ, ಅಮಾವಾಸ್ಯೆಯನ್ನು ಬಹಳ ಮಂಗಳಕರ ಮತ್ತು ಪವಿತ್ರವೆಂದು ಪರಿಗಣಿಸಲಾಗಿದೆ. ವರ್ಷದಲ್ಲಿ ಒಟ್ಟು 12 ಅಮಾವಾಸ್ಯೆ ತಿಥಿಗಳು ಬರಲಿದ್ದು, ಪುಷ್ಯ ಮಾಸದ ಕೃಷ್ಣ ಪಕ್ಷದ ಅಮಾವಾಸ್ಯೆ ತಿಥಿಯನ್ನು ಮೌನಿ ಅಮಾವಾಸ್ಯೆ ಅಥವಾ ಅವದಾತ್ರಿ ಅಮಾವಾಸ್ಯೆ ಅಥವಾ ದರ್ಶ ಅಮಾವಾಸ್ಯೆ ಎಂದು ಕರೆಯಲಾಗುತ್ತದೆ. ಈ ದಿನದಂದು ಪವಿತ್ರ ನದಿಗಳಲ್ಲಿ ಹಾಗೂ ಸಂಗಮಗಳಲ್ಲಿ ಸ್ನಾನ ಮಾಡುವ ಪದ್ಧತಿಯಿದೆ. ಸೂರ್ಯ ದೇವ ಮತ್ತು ಪೂರ್ವಜರ ಪೂಜೆಯ ಜೊತೆಗೆ ದಾನ ಕಾರ್ಯಗಳನ್ನು ಸಹ ಹೆಚ್ಚಿನ ಸಂಖ್ಯೆಯಲ್ಲಿ ಮಾಡಲಾಗುತ್ತದೆ.

ಇದನ್ನೂ ಓದಿ: Rashi bhavishya | ಮಂಗಳವಾರದ ರಾಶಿ ಭವಿಷ್ಯ, 28 ಜನವರಿ 2025

Mauni Amavasya | ಮೌನಿ ಅಮಾವಾಸ್ಯೆಯು ಗಂಗಾ ಸ್ನಾನಕ್ಕೆ ಅತ್ಯುತ್ತಮ ದಿನವಾಗಿದೆ

ಮೌನಿ ಅಮವಾಸ್ಯೆಯ ದಿನ ಗಂಗಾಜಲ ಅಮೃತದಂತೆ ಆಗುತ್ತದೆ ಎಂಬ ನಂಬಿಕೆ ಇರುವುದರಿಂದ ಈ ದಿನ ಗಂಗಾ ಸ್ನಾನ ಮಾಡಲಾಗುತ್ತದೆ. ಇದರಿಂದ ಸಕಲ ಪಾಪಗಳಿಂದ ಮುಕ್ತಿ ದೊರೆಯುತ್ತದೆ. ಆದ್ದರಿಂದ, ಮೌನಿ ಅಮಾವಾಸ್ಯೆಯನ್ನು ಗಂಗಾ ಸ್ನಾನಕ್ಕೆ ಅತ್ಯುತ್ತಮ ದಿನವೆಂದು ಪರಿಗಣಿಸಲಾಗಿದೆ. ಈ ಬಾರಿ, ಶ್ರಾವಣ ನಕ್ಷತ್ರ ಮತ್ತು ಉತ್ತರಾಷಾಢ ನಕ್ಷತ್ರವು ಮೌನಿ ಅಮಾವಾಸ್ಯೆಯ ದಿನದಂದು ಉಳಿಯುವುದರಿಂದ ಶಾಶ್ವತ ಫಲಗಳನ್ನು ಪಡೆಯಬಹುದು. ಗಂಗಾ ನದಿಗೆ ಹೋಗಲು ಸಾಧ್ಯವಾಗದಿದ್ದರೆ ಪವಿತ್ರ ನದಿ ಅಥವಾ ಸರೋವರದಲ್ಲಿ ಸ್ನಾನ ಮಾಡಬಹುದು.

Mauni Amavasya | ಮೌನಿ ಅಮಾವಾಸ್ಯೆಯಂದು ಈ ಸಮಯದಲ್ಲಿ ಸ್ನಾನ ಮಾಡಬೇಡಿ

ಮೌನಿ ಅಮಾವಾಸ್ಯೆಯಂದು ಪವಿತ್ರ ಸ್ನನಕೆ ಬಹಳ ಮಹತ್ವವಿದೆ. ಈ ದಿನದಂದು ಮುಂಜಾನೆ ಬೇಗ ಎದ್ದು ಸ್ನಾನ ಮಾಡಿ ಶುದ್ಧರಾಗಬೇಕು. ಪೂರ್ವಜರಿಗೆ ತರ್ಪಣ ಅರ್ಪಿಸಿ ಮತ್ತು ದಾನ ಮಾಡಬೇಕು. ಬೆಳಗ್ಗೆ 11:34 ರಿಂದ ರಾಹುಕಾಲ ಆರಂಭವಾಗುತ್ತದೆ. ಇದು ಮಧ್ಯಾಹ್ನ 01:55 ರವರೆಗೆ ಇರುತ್ತದೆ. ಆದ್ದರಿಂದ ಈ ಸಮಯದಲ್ಲಿ ಯಾರೂ ಕೂಡ ಅಪ್ಪಿತಪ್ಪಿಯೂ ಸ್ನಾನ ಮಾಡಬಾರದು ಅಥವಾ ದಾನ ಮಾಡಬಾರದು. ಹಿಂದೂ ಧರ್ಮದಲ್ಲಿ, ರಾಹುಕಾಲದಲ್ಲಿ ಯಾವುದೇ ಶುಭ ಕಾರ್ಯಗಳನ್ನು ಮಾಡುವುದನ್ನು ನಿಷೇಧಿಸಲಾಗಿದೆ.

ಇದನ್ನೂ ಓದಿ: Rashi bhavishya | ಮೌನಿ ಅಮಾವಾಸ್ಯೆ ನಂತರ ಈ 5 ರಾಶಿಗೆ ಬಂಪ‌ರ್ ಲಾಟರಿ

Mauni Amavasya | ಮೌನಿ ಅಮವಾಸ್ಯೆಯಂದು ಅಪ್ಪಿತಪ್ಪಿಯೂ ಇವುಗಳನ್ನು ದಾನ ಮಾಡಬೇಡಿ

ಮೌನಿ ಅಮಾವಾಸ್ಯೆಯ ದಾನ ಮಾಡುವುದರಿಂದ, ಜಾತಕದಲ್ಲಿರುವ ಯಾವುದೇ ರೀತಿಯ ದೋಷದಿಂದ ಮುಕ್ತಿ ಪಡೆಯಬಹುದು ಎನ್ನಲಾಗುತ್ತದೆ. ಈ ದಿನ ಕಬ್ಬಿಣದ ವಸ್ತುಗಳು, ಸಾಸಿವೆ ಎಣ್ಣೆ, ಉಪ್ಪು, ಚರ್ಮದ ವಸ್ತುಗಳು ಮತ್ತು ಕಪ್ಪು ಬಣ್ಣದ ವಸ್ತುಗಳನ್ನು ದಾನ ಮಾಡಬಾರದು. ಈ ವಸ್ತುಗಳನ್ನು ದಾನ ಮಾಡುವುದರಿಂದ ಆರ್ಥಿಕ ಸಮಸ್ಯೆಗಳು ಹೆಚ್ಚಾಗಬಹುದು. ಆದ್ದರಿಂದ ಇವುಗಳನ್ನು ದಾನ ಮಾಡಬಾರದು. ಇನ್ನು, ಬಟ್ಟೆ, ಕಪ್ಪು ಎಳ್ಳು, ಬಿಳಿ ಸಿಹಿತಿಂಡಿ, ಪಾದರಕ್ಷೆ-ಚಪ್ಪಲಿ ಮತ್ತು ಆಹಾರವನ್ನು ದಾನ ಮಾಡುವುದು ತುಂಬಾ ಮಂಗಳಕರವೆಂದು ಪರಿಗಣಿಸಲಾಗಿದೆ.

Mauni Amavasya | ಈ 4 ರಾಶಿಯವರಿಗೆ ಆಕಸ್ಮಿಕ ಧನಲಾಭ

ಜ್ಯೋತಿಷ್ಯ ಲೆಕ್ಕಾಚಾರಗಳ ಪ್ರಕಾರ, ಮೌನಿ ಅಮಾವಾಸ್ಯೆಯಂದು ಮೂರು ಗ್ರಹಗಳ ವಿಶೇಷ ಸಂಯೋಜನೆಯು ರೂಪುಗೊಳ್ಳುತ್ತಿದೆ, ಇದನ್ನು ತ್ರಿಗ್ರಹಿ ಸಂಯೋಗ ಎಂದು ಕರೆಯಲಾಗುತ್ತದೆ. ಮೌನಿ ಅಮಾವಾಸ್ಯೆಯಂದು, ಸೂರ್ಯ, ಚಂದ್ರ ಮತ್ತು ಬುಧ ಮಕರ ರಾಶಿಯಲ್ಲಿರುತ್ತಾರೆ. ಮೂರು ಗ್ರಹಗಳು ಒಟ್ಟಿಗೆ ಇದ್ದರೆ ತ್ರಿಗ್ರಹಿ ಯೋಗ ಉಂಟಾಗುತ್ತದೆ. ಇದು ಕೆಲವು ರಾಶಿಚಕ್ರ ಚಿಹ್ನೆಗಳಿಗೆ ಪ್ರಯೋಜನಕಾರಿ ಫಲಿತಾಂಶಗಳನ್ನು ನೀಡುತ್ತದೆ.
ಕೃಪೆ: RG Tv Kannada

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.