ಬೆಂಗಳೂರು: ದೇಶದೆಲ್ಲೆಡೆ ಕರೋನ 2ನೇ ಅಲೆಯ ಹಿನ್ನಲೆ, ಇದರ ಕಡಿವಾಣಕ್ಕೆ ದೇಶದ ವಿವಿಧ ರಾಜ್ಯಗಳು ಸೇರಿದಂತೆ ರಾಜ್ಯದಲ್ಲಿ ಸಹ ಲಾಕ್ ಡೌನ್ ಘೋಷಣೆ ಮಾಡಿದ್ದು, ಅಗತ್ಯ ವಸ್ತುಗಳನ್ನು ಹೊರತುಪಡಿಸಿ ಉಳಿದೆಲ್ಲ ಚಟುವಟಿಕೆಗಳನ್ನು ಬಂದ್ ಮಾಡಲಾಗಿದೆ.
ಕೊರೋನಾ 2ನೇ ಅಲೆಯ ಹಿನ್ನಲೆ, ಕೆಲಸವಿಲ್ಲದೇ ಆರ್ಥಿಕವಾಗಿ ಸಂಕಷ್ಟದಲ್ಲಿರುವ ಕಲಾವಿದರಿಗೆ ರಾಜ್ಯ ಸರ್ಕಾರ ಸಹಾಯಧನ ಘೋಷಣೆ ಮಾಡಿದ್ದು, ಇದನ್ನು ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ.. ಅರ್ಹ ಕಲಾವಿದರು ‘ಸೇವಾ ಸಿಂಧು’ ಪೋರ್ಟಲ್ ಗೆ https://sevasindhu.karnataka.gov.in/ಗೆ ಭೇಟಿ ನೀಡಿ, ಅರ್ಜಿ ಸಲ್ಲಿಸಲು ಇಂದೇ (ಜೂನ್ 5) ಕಡೆ ದಿನವಾಗಿದೆ.
ಕಲಾಕ್ಷೇತ್ರದಲ್ಲಿ ಕನಿಷ್ಟ 10 ವರ್ಷಗಳ ಸೇವೆ ಸಲ್ಲಿಸಿದ ಕಲಾವಿದರಿಗೆ ₹3,000 ಸಹಾಯಧನ ನೀಡಲಾಗುತಿದ್ದು, ಕನ್ನಡ & ಸಂಸ್ಕೃತಿ ಇಲಾಖೆಯಿಂದ ಮಾಸಾಶನ ಪಡೆಯುತ್ತಿರುವವರು ಇದಕ್ಕೆ ಅರ್ಹರಿರುವುದಿಲ್ಲ.
ಇನ್ನು, ಇತ್ತೀಚಿಗೆ ಕೆಲಸವಿಲ್ಲದೇ ಆರ್ಥಿಕವಾಗಿ ಸಂಕಷ್ಟದಲ್ಲಿರುವ ಕಲಾವಿದರಿಗೆ ಖ್ಯಾತ ನಟ ರಾಕಿಂಗ್ ಸ್ಟಾರ್ ಯಶ್ ಅವರು ಸುಮಾರು 3,000 ಕಲಾವಿದರಿಗೆ ತಲಾ 5000 ರೂಗಳ ಸಹಾಯಧನ ಮಾಡಿದ್ದರು.