Diwali festival : ದೀಪಾವಳಿ ಮುಗಿಯುವ ಮುನ್ನ ಹಣತೆ, ಬಿಳಿ ಪಲಾಶ ಸಸ್ಯ, ಆಭರಣಗಳು ಸೇರಿದಂತೆ ಈ ವಸ್ತುಗಳನ್ನು ಮನೆಗೆ ತಂದರೆ ಧನಲಾಭವಾಗಲಿದೆ ಎನ್ನುತ್ತಾರೆ ಜ್ಯೋತಿಷ್ಯ ತಜ್ಞರು.
ಹಣತೆ
ದೀಪಾವಳಿ ಹಬ್ಬದ ಸಮಯದಲ್ಲಿ ಮನೆಗೆ ಹಣತೆ ತರುವುದರಿಂದ ಒಳ್ಳೆಯ ಫಲಗಳು ಸಿಗುತ್ತದೆ ಎನ್ನಲಾಗುತ್ತದೆ. ಇದರಿಂದ ಜೀವನದಲ್ಲಿ ಸಮೃದ್ಧಿ ಹಾಗೂ ಸಂತೋಷ ಹೆಚ್ಚಾಗುತ್ತದೆ ಎನ್ನುವ ನಂಬಿಕೆ ಇದೆ. ಮನೆಗೆ ಹಣತೆ ತರುವುದರಿ೦ದ ಲಕ್ಷ್ಮಿ ಆಶೀರ್ವಾದವೂ ಸಿಗುತ್ತದೆ.
ಬಿಳಿ ಪಲಾಶ ಸಸ್ಯ
ಬಿಳಿ ಹೂವುಗಳನ್ನು ಹೊಂದಿರುವ ಬಿಳಿ ಪಲಾಶ ಸಸ್ಯವು ತುಂಬಾ ಸು೦ದರವಾಗಿ ಕಾಣುವ ಸಸ್ಯ. ಜೊತೆಗೆ ಇದು ಧಾರ್ಮಿಕ ಮತ್ತು ಔಷಧೀಯ ಗುಣಗಳನ್ನು ಹೊಂದಿದ್ದು, ಸಸ್ಯದಲ್ಲಿ ಲಕ್ಷ್ಮಿ ಮತ್ತು ತ್ರಿಮೂರ್ತಿಗಳು ನೆಲೆಸಿದ್ದಾರೆ ಎಂದು ಹೇಳಲಾಗುತ್ತದೆ. ದೀಪಾವಳಿ ವೇಳೆ ಈ ಗಿಡವನ್ನು ನೆಟ್ಟಲ್ಲೆಲ್ಲಾ ಲಕ್ಷ್ಮಿ ದೇವಿಯ ಕೃಪೆ ಸದಾ ಇರುತ್ತದೆ ಎನ್ನುತ್ತಾರೆ.
ಇದನ್ನೂ ಓದಿ: Diwali | ಮನೆಯಲ್ಲಿ ಈ ವಸ್ತುಗಳಿದ್ದರೆ ತಪ್ಪದೆ ದೀಪಾವಳಿಯ ಮುನ್ನ ಹೊರಹಾಕಿ..!
ಆಭರಣಗಳು
ದೀಪಾವಳಿ ಹಬ್ಬದ ದಿನ ಮನೆಗೆ ಚಿನ್ನ ಹಾಗೂ ಬೆಳ್ಳಿಯ ಆಭರಣಗಳನ್ನು ಖರೀದಿಸಿ ತಂದರೆ ಶುಭ. ಇದರಿಂದ ತಾಯಿ ಲಕ್ಷ್ಮಿ ಆ ಮನೆಯಲ್ಲಿ ನೆಲೆಸುತ್ತಾಳೆ ಎನ್ನಲಾಗಿದ್ದು, ಇದರ ಜೊತೆಗೆ ಇದು ಜಾತಕದಲ್ಲಿನ ಸೂರ್ಯನ ಶಕ್ತಿಯನ್ನ ಸಹ ಬಲಗೊಳಿಸುತ್ತದೆ. ಹೀಗಾಗಿ, ಸಾಧ್ಯವಾದರೆ ದೀಪಾವಳಿ ಹಬ್ಬದ ಸಮಯದಲ್ಲಿ ಆಭರಣಗಳನ್ನ ಖರೀದಿ ಮಾಡಿ ಎನ್ನುತ್ತಾರೆ
ಲೋಹದ ಆಮೆ
ಲೋಹದ ಆಮೆಯು ನಮ್ಮ ಬಳಿ ಇರುವ ಹಣಕ್ಕೆ ಸ್ಥಿರತೆ ಒದಗಿಸುತ್ತದೆ, ಅಂದರೆ ನಮ್ಮಲ್ಲೇ ನೆಲೆಸುವಂತೆ ಕಾಪಾಡುತ್ತದೆ. ಅಲ್ಲದೇ ಎಲ್ಲಾ ನಕಾರಾತ್ಮಕ ಶಕ್ತಿಯನ್ನು ತೆಗೆದುಹಾಕುತ್ತದೆ ಮತ್ತು ನಮ್ಮ ಸುತ್ತಲಿನ ಪರಿಸರವನ್ನು ಸಮತೋಲನದಲ್ಲಿ ಇಡುತ್ತದೆ. ಹಾಗಾಗಿ ದೀಪಾವಳಿಯಲ್ಲಿ ಲೋಹದ ಆಮೆಯನ್ನು ತರುವುದು ಉತ್ತಮ.
ಇದನ್ನೂ ಓದಿ : Diwali Rashi Prediction 2024 : ಈ ದೀಪಾವಳಿಯಿಂದ ವರ್ಷವಿಡೀ ಈ ರಾಶಿಗಳ ಮೇಲೆ ಲಕ್ಷ್ಮಿ ದೇವಿಯ ವಿಶೇಷ ಕೃಪೆ; ನಿಮ್ಮ ರಾಶಿ ಇದೆಯೇ..?
ಲಕ್ಷ್ಮಿ ವಿಗ್ರಹಗಳು
ದೀಪಾವಳಿಗೆ ಲಕ್ಷ್ಮಿ ವಿಗ್ರಹಗಳನ್ನು ಖರೀದಿಸುವುದು ಶುಭವೆಂದು ಪರಿಗಣಿಸಲಾಗಿದೆ. ನಿಮ್ಮ ಮನೆಯ ಅಥವಾ ವ್ಯಾಪಾರ ಮಾಡುವ ಸ್ಥಳದ ಪೂಜಾ ಸ್ಥಳದಲ್ಲಿ ಲಕ್ಷ್ಮೀ ವಿಗ್ರಹವನ್ನು ಇಡುವುದರಿಂದ ಅದೃಷ್ಟ ಮತ್ತು ಸಮೃದ್ಧಿ ನಿಮ್ಮದಾಗುತ್ತದೆ.
ಮನಿ ಪ್ಲಾಂಟ್
ಮನಿ ಪ್ಲಾಂಟ್ ಅನ್ನು ಅತ್ಯಂತ ಪವಿತ್ರವೆಂದು ಪರಿಗಣಿಸಲಾಗಿದೆ. ಇದು ಪ್ರತಿಯೊಂದು ಮನೆಯಲ್ಲೂ ಕಂಡುಬರುತ್ತದೆ. ಆದರೆ ಯಾರ ಮನೆಯಲ್ಲಿ ಮನಿ ಪ್ಲಾಂಟ್ ಇರುವುದಿಲ್ಲವೊ ಅವರು ಈ ದೀಪಾವಳಿಯಲ್ಲಿ ಖ೦ಡಿತವಾಗಿಯೂ ಅದನ್ನು ತಮ್ಮಮನೆಗೆ ತರಬಹುದು. ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಮನಿ ಪ್ಲಾಂಟ್ ಇಟ್ಟರೆ ಮನೆಯಲ್ಲಿ ಹಣದ ಕೊರತೆ ಇರುವುದಿಲ್ಲ ಎನ್ನುತ್ತಾರೆ ಜ್ಯೋತಿಷಿಗಳು