ರಾಜ್ಯ ಬಜೆಟ್‌ನಲ್ಲಿ​ ರೈತರಿಗೆ ಸಿಕ್ಕಿದ್ದೇನು? ಯಾವುದಕ್ಕೆ ಎಷ್ಟು ಅನುದಾನ? ಇಲ್ಲಿದೆ ಡೀಟೇಲ್ಸ್!

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ 8ನೇ ಬಾರಿಗೆ ಮಂಡಿಸುತ್ತಿರುವ ಬಜೆಟ್, 2,46,206 ಕೋಟಿ ಗಾತ್ರದ್ದಾಗಿದೆ. ಕೃಷಿ ವಲಯಕ್ಕೆ ಬರೋಬ್ಬರಿ 31,021 ಕೋಟಿ ರೂ. ಅನುದಾನ ಮೀಸಲಿಟ್ಟಿದ್ದಾರೆ. ಈ ಬಾರಿಯ ಬಜೆಟ್‌ನಲ್ಲಿ ಕೃಷಿ ವಲಯದ ಅಭಿವೃದ್ಧಿಗಾಗಿ…

Farmers vijayaprabha news

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ 8ನೇ ಬಾರಿಗೆ ಮಂಡಿಸುತ್ತಿರುವ ಬಜೆಟ್, 2,46,206 ಕೋಟಿ ಗಾತ್ರದ್ದಾಗಿದೆ. ಕೃಷಿ ವಲಯಕ್ಕೆ ಬರೋಬ್ಬರಿ 31,021 ಕೋಟಿ ರೂ. ಅನುದಾನ ಮೀಸಲಿಟ್ಟಿದ್ದಾರೆ. ಈ ಬಾರಿಯ ಬಜೆಟ್‌ನಲ್ಲಿ ಕೃಷಿ ವಲಯದ ಅಭಿವೃದ್ಧಿಗಾಗಿ ಹಲವಾರು ಹೊಸ ಯೋಜನೆಗಳನ್ನು ಸಹ ಸಿಎಂ ಕೈಗೊಂಡಿದ್ದಾರೆ. ಮುಖ್ಯವಾಗಿ ಸಾವಯವ ಕೃಷಿಗೆ ಉತ್ತೇಜನ, ಹೈಬ್ರಿಡ್ ಬೀಜ ನೀತಿ, ಆಹಾರ ಸಂರಕ್ಷಣೆ, ಉದ್ಯಮದಲ್ಲಿ ಆತ್ಮ ನಿರ್ಭರ ಹಾಗೂ ರೈತರಿಗೆ ಮಾರುಕಟ್ಟೆ, ಅವಕಾಶಗಳ ವಿಸ್ತರಣೆಯಂತಹ ಘೋಷಣೆ ಮಾಡಲಾಗಿದೆ.

ಕೃಷಿ ಹಾಗೂ ಪೂರಕ ವಲಯಗಳಿಗೆ 31,028 ಕೋಟಿ: ಯಾವುದಕ್ಕೆ ಎಷ್ಟು ಅನುದಾನ

* ಹಳದಿ ಎಲೆ ರೋಗದ ಸಂಶೋಧನೆಗೆ 25 ಕೋಟಿ ಅನುದಾನ.
* ಪ್ರಧಾನ ಮಂತ್ರಿ ಮತ್ಸ್ಯ ಸಂಪ್ರದಾ ಯೋಜನೆಗೆ 62 ಕೋಟಿ ಅನುದಾನ.
* ಮೀನು ಮಾರಾಟ, ಮತ್ಸ್ಯ ದರ್ಶಿನಿಗಳ ಸ್ಥಾಪನೆಗೆ 30 ಕೋಟಿ.
* ಹೂವಿನ ಮಾರುಕಟ್ಟೆ ನಿರ್ಮಾಣಕ್ಕೆ 50 ಕೋಟಿ.
* ಬಳ್ಳಾರಿಯಲ್ಲಿ ಐತಿಹಾಸಿಕ ಅವಶೇಷಗಳ ಮ್ಯೂಸಿಯಂಗೆ 2 ಕೋಟಿ.
* ಮಹದಾಯಿ ಯೋಜನೆಗೆ 1677 ಕೋಟಿ.
* ಕೃಷ್ಣಾ ಭಾಗ್ಯ ಜಲನಿಗಮಕ್ಕೆ 5600 ಕೋಟಿ.
* 234 ಕೆರೆ ತುಂಬಿಸುವ ಯೋಜನೆಗೆ 500 ಕೋಟಿ.
* ಪಶ್ಚಿಮ ವಾಹಿನಿ ಯೋಜನೆಗೆ 3986 ಕೋಟಿ.

Vijayaprabha Mobile App free
WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.