ಬಿಷ್ಣೋಯಿ ಬಳಿ ಕ್ಷಮೆ ಕೇಳುವಂತೆ ಸಲ್ಮಾನ್ ಖಾನಗೆ ಗಾಯಕ ಜಲೋಟಾ ಸಲಹೆ

ಮುಂಬೈ: ದೇಶಾದ್ಯಂತ ಸದಾ ಸುದ್ದಿಯಲ್ಲಿರುವ ನಟ ಸಲ್ಮಾನ್ ಖಾನ್ ಹಾಗೂ ಲಾರೆನ್ಸ್ ಬಿಷ್ಣೋಯಿ ಅವರ ನಡುವಿನ ವೈಷಮ್ಯ ತಾರಕ್ಕೆ ಏರಿದೆ. ಹಲವು ಬಾರಿ ಸಲ್ಲು ಮೇಲೆ ಹತ್ಯೆ ಯತ್ನ ನಡೆಸಿದ್ದು, ಸದ್ಯ ಬಿಗಿ ಭದ್ರತೆಯಲ್ಲಿ…

ಮುಂಬೈ: ದೇಶಾದ್ಯಂತ ಸದಾ ಸುದ್ದಿಯಲ್ಲಿರುವ ನಟ ಸಲ್ಮಾನ್ ಖಾನ್ ಹಾಗೂ ಲಾರೆನ್ಸ್ ಬಿಷ್ಣೋಯಿ ಅವರ ನಡುವಿನ ವೈಷಮ್ಯ ತಾರಕ್ಕೆ ಏರಿದೆ. ಹಲವು ಬಾರಿ ಸಲ್ಲು ಮೇಲೆ ಹತ್ಯೆ ಯತ್ನ ನಡೆಸಿದ್ದು, ಸದ್ಯ ಬಿಗಿ ಭದ್ರತೆಯಲ್ಲಿ ಕಾಲ ಕಳೆಯುವಂತೆ ಆಗಿದೆ. ಈ ಬೆನ್ನಲ್ಲೇ ಗಾಯಕ ಅನೂಪ್ ಅವರು ಸಲ್ಮಾನ್ ಖಾನಗೆ ಸಲಹೆವೊಂದನ್ನು ನೀಡಿದ್ದಾರೆ.

ಹೌದು, ನಟ ಸಲ್ಮಾನ್‌ ಖಾನ್‌ ಅವರು, ತಮ್ಮ ಸ್ನೇಹಿತರಿಗೆ ಅಥವಾ ಕುಟುಂಬದವರಿಗೆ ಹಾನಿಯಾಗುವುದನ್ನು ತಡೆಯಬೇಕೆಂದರೆ ಮೊದಲು ಬಿಷ್ಣೋಯಿ ಸಮುದಾಯದ ಬಳಿ ಕ್ಷಮೆಯಾಚಿಸಬೇಕು ಎಂದು ಖ್ಯಾತ ಗಾಯಕ ಅನೂಪ್ ಜಲೋಟಾ ಮನವಿ ಮಾಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘1998ರಲ್ಲಿ ರಾಜಸ್ಥಾನದ ಜೋಧಪುರದಲ್ಲಿ ‘ಹಮ್ ಸಾಥ್ ಸಾಥ್ ಹೈ’ ಚಿತ್ರೀಕರಣದ ವೇಳೆ ಬಿಷ್ಣೋಯಿ ಸಮುದಾಯ ಪೂಜ್ಯ ಪ್ರಾಣಿಯಾದ ಕೃಷ್ಣಮೃಗವನ್ನು ಸಲ್ಮಾನ್‌ ಬೇಟಿಯಾಡಿದ್ದರು ಎಂಬ ಆರೋಪ ಹೊತ್ತಿದ್ದಾರೆ. ಹೀಗಾಗಿ ಆ ಸಮುದಾಯದ ಪಾತಕಿ ಲಾರೆನ್ಸ್‌ ಬಿಷ್ಣೋಯಿ, ಸಲ್ಮಾನ್‌ಗೆ ಕೊಲೆ ಬೆದರಿಕೆ ಹಾಕಿದ್ದಾನೆ. ಅಲ್ಲದೆ, ಅವರ ಜತೆ ಸಂಬಂಧ ಹೊಂದಿದ್ದಕ್ಕೆ ಎನ್‌ಸಿಪಿ ನಾಯಕ ಬಾಬಾ ಸಿದ್ದಿಕಿಯನ್ನೂ ಕೊಲೆ ಮಾಡಿದ್ದಾನೆ. ಹೀಗಾಗಿ ಸಲ್ಮಾನ್‌ ಇತರ ಸ್ನೇಹಿತರನ್ನು ಹಾಗೂ ಕುಟುಂಬಸ್ಥರನ್ನು ಕಳೆದುಕೊಳ್ಳುವ ಮುನ್ನ ಬಿಷ್ಣೋಯಿ ಸಮುದಾಯದ ಬಳಿ ಕ್ಷಮೆಯಾಚಿಸಬೇಕು’ ಎಂದಿದ್ದಾರೆ.

Vijayaprabha Mobile App free
WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.