Rashi bhavishya | ಸೋಮವಾರದ ರಾಶಿ ಭವಿಷ್ಯ, 20 ಜನವರಿ 2025

Rashi bhavishya : ಜಾತಕ ಇಂದು 20 ಸೋಮವಾರ 2025 ಜ್ಯೋತಿಷ್ಯ ಶಾಸ್ತ್ರದ (Astrology), ಪ್ರಕಾರ 12 ರಾಶಿ ಸೇರಿದಂತೆ ಹೆಚ್ಚಿನ ಮಾಹಿತಿಗೆ ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು  ಸೂರ್ಯೋದಯ…

Today rashi bhavishya

Rashi bhavishya : ಜಾತಕ ಇಂದು 20 ಸೋಮವಾರ 2025 ಜ್ಯೋತಿಷ್ಯ ಶಾಸ್ತ್ರದ (Astrology), ಪ್ರಕಾರ 12 ರಾಶಿ ಸೇರಿದಂತೆ ಹೆಚ್ಚಿನ ಮಾಹಿತಿಗೆ ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು 

  • ಸೂರ್ಯೋದಯ – 6:53 ಬೆ.
  • ಸೂರ್ಯಾಸ್ತ – 6:01 ಸಂ.
  • ಶಾಲಿವಾಹನ ಶಕೆ -1946
  • ಸಂವತ್-2080
  • ಕ್ರೋಧಿನಾಮ ಸಂವತ್ಸರ,
  • ಉತ್ತರ ಅಯಣ,
  • ಶುಕ್ಲ ಪಕ್ಷ,
  • ಹೇಮಂತ್ ಋತು,
  • ಪುಷ್ಯ ಮಾಸ,
  • ತಿಥಿ – ಷಷ್ಠಿ
  • ನಕ್ಷತ್ರ – ಹಸ್ತ
  • ಯೋಗ – ಸುಕರ್ಮ
  • ಕರಣ – ವಣಿಜ 9:59
  • ರಾಹು ಕಾಲ – 07:30 ದಿಂದ 09:00 ವರೆಗೆ
  • ಯಮಗಂಡ – 10:30 ದಿಂದ 12:00 ವರೆಗೆ
  • ಗುಳಿಕ ಕಾಲ – 01:30 ದಿಂದ 03:00 ವರೆಗೆ
  • ಬ್ರಹ್ಮ ಮುಹೂರ್ತ – 5:17 ಬೆ ದಿಂದ 6:05 ಬೆ ವರೆಗೆ
  • ಅಮೃತ ಕಾಲ – 1:44 ಮ ದಿಂದ 3:32 ಮ ವರೆಗೆ
  • ಅಭಿಜಿತ್ ಮುಹುರ್ತ – 12:04 ಮ ದಿಂದ 12:49 ಮ ವರೆಗೆ

ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
“ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು”
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

ಮೇಷ ರಾಶಿ ಭವಿಷ್ಯ (Mesha rashi bhavishya)

Mesha rashi bhavishya

Vijayaprabha Mobile App free

ಪತ್ರಿಕಾ ಮಾಧ್ಯಮದವರಿಗೆ ಖುಷಿ ಸಂದೇಶ,ಉದ್ಯಮದಾರರಿಗೆ ಕೂಲಿ ಕಾರ್ಮಿಕರ ಕೊರತೆ, ತಡೆಹಿಡಿದ ಸರಕಾರಿ ಕೆಲಸ ಕಾರ್ಯಗಳು ಸುಗಮ, ವ್ಯಾಪಾರ ವಹಿವಾಟಗಳಲ್ಲಿ ಮಿಶ್ರ ಫಲ, ನ್ಯಾಯಾಲಯ ತೀರ್ಪು ಪ್ರಗತಿ, ಮಂಗಳ ಕಾರ್ಯ ನಡೆಸುವ ಪ್ರಯತ್ನ ಯಶಸ್ಸು, ಪ್ರೇಮಿಗಳಿಗೆ ಮನಸ್ಸಿಗೆ ಅಘಾತ, ದಾಯಾದಿಗಳ ಕಲಹ, ಸಲ್ಲದ ಅಪವಾದ,ಮುಖ್ಯ ರಸ್ತೆ ಬದಿಯಲ್ಲಿ ವಾಣಿಜ್ಯ ಮಳಿಗೆ ಕಟ್ಟುವ ಯೋಜನೆ ರೂಪಿಸುವಿರಿ, ಸಂಜೇವೇಳೆಯಲ್ಲಿ ಇಂದು ನೀವು ಹಣದ ಪ್ರಯೋಜನವನ್ನು ಪಡೆಯುವ ಪೂರ್ತಿ ಸಾಧ್ಯತೆ ಇದೆ.

ನಿಮ್ಮ ಮೂಲಕ ನೀಡಿರುವ ಹಣ ಇಂದು ನಿಮಗೆ ಮರಳಿ ಸಿಗಬಹುದು, ನಿಮ್ಮ ಪ್ರೀತಿಪಾತ್ರರು ನಿಮಗೆ ಅಪಾರ ಸಂತೋಷ ತರುತ್ತಾರೆ, ಉದ್ಯಮದಾರರು ಕೆಲವು ಅನಿರೀಕ್ಷಿತ ಲಾಭವನ್ನು ನಿರೀಕ್ಷಿಸಬಹುದು, ಸಂಗಾತಿ ಜೊತೆಗೆ ಆನಂದಿಸಲು ನೀವು ನಿಮ್ಮ ಸಮಯ ನೀಡಬೇಕು, ಯೋಗ ಶಾಲೆ ನಡೆಸುವರಿಗೆ ಧನಲಾಭ, ಉದ್ಯೋಗಸ್ಥರಿಗೆ ಮತ್ತು ವ್ಯಾಪಾರಸ್ಥರಿಗೆ ಆರ್ಥಿಕ ಭದ್ರತೆ ಹಾಗೂ ಹೂಡಿಕೆ ಹೆಚ್ಚಿಸುತ್ತದೆ, ನಿಮ್ಮ ಜ್ಞಾನದಾಹ ನಿಮಗೆ ಹೊಸ ಉದ್ಯೋಗ ಸಿಗಲು ಸಹಾಯ ಮಾಡುತ್ತದೆ, ಬಿಜಿನೆಸ್ ಮೀಟಿಂಗ್ ಗಳಲ್ಲಿ ನೇರ ಮಾತಿನಿಂದ ನಿಷ್ಠರ ಆಗುವ ಸಾಧ್ಯತೆ, ಮೆಟ್ಟಿಲು ಹತ್ತುವಾಗ ಇಳಿಯುವಾಗ ಜಾಗೃತಿ ವಹಿಸಿ, ಕೆಲವರಿಗೆ ಅನಿವಾರ್ಯ ಕಾರಣದಿಂದ ಒತ್ತಾಯಪೂರ್ವಕವಾಗಿ ಮದುವೆ ಒಪ್ಪಿಕೊಳ್ಳುವ ಸಾಧ್ಯತೆ.

ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಅತ್ತೆ-ಸೊಸೆ ಜಗಳ, ಸಂತಾನ ಭಾಗ್ಯ, ಸಾಲ ಬಾಧೆ, ಶತ್ರುಗಳಿಂದ ತೊಂದರೆ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಜನ್ಮ ರಾಶಿ ನಕ್ಷತ್ರಗಳ ಮೇಲೆ ವ್ಯಾಪಾರ, ರಾಶಿಗಳಿಗೆ ಅನುಗುಣವಾಗಿ ಜನ್ಮರಾಶಿ ಹರಳು, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು.

ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
“ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು”
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

ಇದನ್ನೂ ಓದಿ: Rashi bhavishya | ಭಾನುವಾರದ ರಾಶಿ ಭವಿಷ್ಯ, 19 ಜನವರಿ 2025

ವೃಷಭ ರಾಶಿ ಭವಿಷ್ಯ (Vrushabha rashi bhavishya)

Vrushabha rashi bhavishya

ಕೆಲಸ ಕಾರ್ಯಗಳಲ್ಲಿ ಅಡಚಣೆ,ಶುಭ ಕಾರ್ಯ ಅಡಚಣೆ, ವ್ಯಾಪಾರದಲ್ಲಿ ಸಾಧಾರಣ ಲಾಭ, ಕುಟುಂಬದಲ್ಲಿ ಅಹಿತಕರ ವಾತಾವರಣ, ದಾಯಾದಿ ಕಲಹ ಮುಂದುವರಿಯಲಿದೆ, ಬಿಜಿನೆಸ್ ಮೀಟಿಂಗನಲ್ಲಿ ನಿಮ್ಮ ಮಾತಿನ ಮೇಲೆ ನಿಯಂತ್ರಣವಿರಲಿ, ಎದುರಾಳಿ ಜೊತೆ ಸೋಲೊಪ್ಪುವ ಸಾಧ್ಯತೆ, ನಿಮ್ಮ ಸಂಗಾತಿಯ ವರ್ತನೆ ನಿಮಗೆ ಅನುಮಾನ, ನಿರಾಸೆ ಅನೇಕ ದುರ್ಗಣಗಳಿಂದ ಮುಕ್ತಿ ಹೊಂದುವ ಸಾಧ್ಯತೆಗಳಿವೆ, ನೀವು ತ್ವರಿತ ಹಣ ಗಳಿಸುವಿರಿ.

ಆತ್ಮೀಯ ಸ್ನೇಹಿತರು ಮತ್ತು ಬಂಧು ವಿರೋಧಿಗಳ ಆಗುವ ಸಾಧ್ಯತೆ, ಸರಕಾರ ಉದ್ಯೋಗ ಪಡೆಯಲು ಕಠಿಣ ಪ್ರಯತ್ನ ಮಾಡುತ್ತಿದ್ದೀರಿ, ನಿಮ್ಮ ಅಸಭ್ಯ ವರ್ತನೆಯಿಂದ ಸಂಗಾತಿಗೆ ಬೇಸರ, ಕ್ಷಮೆ ಕೇಳಬಹುದು, ಉದ್ಯೋಗಿಗಳು ಹೆಚ್ಚಿನ ಕೆಲಸದ ಒತ್ತಡ ಹಾಗೂ ಬಾಸ್ ಕಡೆಯಿಂದ ಕಿರುಕುಳ ಎದುರಿಸುವ ಸಾಧ್ಯತೆ, ಒಂದೇ ಒಂದು ದಿನದ ರಜೆಗಾಗಿ ಬೇಡಿಕೆ, ಕೆಲವರಿಗೆ ವರ್ಗಾವಣೆ ಬಯಸಿದವರಿಗೆ ಸೂಕ್ತ ಕಾಲ, ಪ್ರಮೋಷನ್ ಅಡತಡೆ ಸಂಭವ, ಸಾರ್ವಜನಿಕ ಕ್ಷೇತ್ರದಲ್ಲಿ ಕರ್ತವ್ಯ ನಿರ್ವಹಿಸುವ ಉದ್ಯೋಗಿಗಳಿಗೆ ಪ್ರಭಾವಿ ವ್ಯಕ್ತಿಗಳಿಂದ ಆತಂಕ ಎದುರಿಸುವ ಸಾಧ್ಯತೆ.

ಇದನ್ನೂ ಓದಿ: Rashi bhavishya | ಶನಿವಾರ ರಾಶಿ ಭವಿಷ್ಯ, 18 ಜನವರಿ 2025

ಮಿಥುನ ರಾಶಿ ಭವಿಷ್ಯ (Mithuna rashi bhavishya)

Mithuna rashi bhavishya

ಇನ್ನು ಮುಂದೆ ಹಣಕಾಸಿನ ಪರಿಸ್ಥಿತಿಯಲ್ಲಿ ಸುಧಾರಣೆ, ಬಂಧು ಮಿತ್ರರ ಕಡೆಯಿಂದ ಸಹಾಯ, ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ, ಕಚೇರಿಗೆ ಸಂಬಂಧಿಸಿದ ಬಹುಮುಖ್ಯ ದಾಖಲಾತಿ ಮಿಸ್ಸಿಂಗ್ ಆಗಿರುವ ಬಗ್ಗೆ ಚಿಂತನೆ, ಹಿರಿಯ ಅಧಿಕಾರಿ ಜೊತೆಗೆ ವಾದವಿವಾದ ಬೇಡ, ವ್ಯಾಪಾರಿಗಳಿಗಾಗಿ ಧನಲಾಭ ಸಾಮಾನ್ಯ ದಿನವಾಗಿದೆ, ಹೊಸ ಉದ್ಯಮ ಪ್ರಾರಂಭಿಸುವ ಮೊದಲು ಅದರ ಬಗ್ಗೆ ಮಾಹಿತಿ ಪಡೆದುಕೊಳ್ಳಿ, ಹಣ ಹೂಡಿಕೆ ಸದ್ಯಕ್ಕೆ ಬೇಡವೇ ಬೇಡ, ಜನಪ್ರತಿನಿಧಿಗಳಿಗೆ ವಿಶೇಷ ಸೂಚನೆ ಸಂಯಮದಿಂದ ವರ್ತಿಸಿ, ನಿಮ್ಮ ಮಕ್ಕಳ ಬಗ್ಗೆ ಜಾಗೃತಿ ವಹಿಸಿ, ಪ್ರೇಮಿಗಳ ಮದುವೆ ವಿಳಂಬ ಆದರೆ ಸಮಾಧಾನ ಮುಖ್ಯ, ನಿಮ್ಮ ಅತಿಯಾದ ಹಾಸ್ಯ ಮಾರಕವಾಗಲಿದೆ.

ಹೂಡಿಕೆ ಮಾಡಿರುವ ಹಣದಿಂದ ನಿವೇಶನ ಖರೀದಿಸುವ ಸಾಧ್ಯತೆ, ಗಂಡ ಹೆಂಡತಿ ಕೂಡಿ ಬಾಳಲು ಕಷ್ಟಕರ ಎನಿಸಬಹುದು, ತಂತ್ರಜ್ಞಾನ ಮತ್ತು ಕೌಶಲ್ಯ ತರಬೇತಿ ಪಡೆದವರಿಗೆ ಸುವರ್ಣವಕಾಶ, ಅಲ್ಪಾವಧಿ ಸಾಲ ಮುಕ್ತಾಯವಾಗಲಿದೆ, ನಿಮ್ಮ ಮಕ್ಕಳ ಕುಟುಂಬದ ಸಮಸ್ಯೆಗಳ ಮೇಲೆ ಗಮನ ನೀಡಬೇಕು, ನಿಮ್ಮ ಸಂಗಾತಿ ನಿಮಗಾಗಿ ವಿಶೇಷವಾದ ಕಾಣಿಕೆ ನೀಡುವರು, ದೈಹಿಕ ಹಾಗೂ ಮಾನಸಿಕ ಸದೃಢತೆಗೆ ಧ್ಯಾನ ಮತ್ತು ಯೋಗ ಇಂದು ಪ್ರಾರಂಭಿಸಿ.

ಇದನ್ನೂ ಓದಿ: Pushya Sankashta Chaturthi | ಪುಷ್ಯ ಸಂಕಷ್ಟ ಚತುರ್ಥಿ ಶುಭ ಮುಹೂರ್ತ, ಪೂಜೆ ವಿಧಾನ

ಕರ್ಕಾಟಕ ರಾಶಿ ಭವಿಷ್ಯ (Karkataka rashi bhavishya)

Karkataka rashi bhavishya

ಉದ್ಯೋಗಕ್ಕಾಗಿ ಅಧಿಕ ತಿರುಗಾಟ,ಹಣಕಾಸಿನಕ್ಕಾಗಿ ಅಧಿಕ ತಿರುಗಾಟ, ಸರ್ಕಾರಿ ಕೆಲಸ ಕಾರ್ಯಗಳಲ್ಲಿ ಅಡಚಣೆ, ಮನಸ್ಸಿಗೆ ಭಯ,ಇಂದು ದುಃಖದ ಸಮಯ, ಹೂಡಿಕೆ ಮಾಡಿರುವ ಹಣ ಕಣ್ಣೀರು ಒರೆಸಲು ಇದೆ, ಹೊಸತನ ಪ್ರಾರಂಭಿಸುವ ಮೊದಲು ಪತ್ನಿಯ ಮಾರ್ಗದರ್ಶನ ಪಡೆಯಿರಿ, ಪ್ರೇಮಿಗಳು ಮದುವೆ ಫಲಿತಾಂಶ ಪಡೆಯಲು ಕುಟುಂಬದಲ್ಲಿ ಸಾಮರಸ್ಯ ಸೃಷ್ಟಿಸಿ, ಅಧಿಕಾರಿ ವರ್ಗದವರು ನ್ಯಾಯಯುತವಾದ ಮತ್ತು ಉದಾರ ಪ್ರೀತಿಯಿಂದ ಪುರಸ್ಕೃತಗೊಳ್ಳುವ ಸಾಧ್ಯತೆ ಇದೆ, ಉದ್ಯೋಗ ಕ್ಷೇತ್ರದಲ್ಲಿ ಎಲ್ಲದರಲ್ಲೂ ಮೇಲುಗೈ ಸಾಧಿಸಬಹುದು, ಅನಗತ್ಯ ತೊಡಕುಗಳಿಂದ ನಿಮ್ಮ ಮದುವೆ ವಿಳಂಬ ಸಾಧ್ಯತೆ, ಇಂದು ನಿಮ್ಮ ಸಂಗಾತಿಯ ಪ್ರಣಯದ ಉತ್ಕಟತೆಯನ್ನು ತೋರಿಸುತ್ತದೆ.

ನಿಮ್ಮ ಪ್ರಚಂಡ ಪ್ರಯತ್ನ ಹಾಗೂ ಕುಟುಂಬ ವರ್ಗದವರ ಸಹಕಾರ ದಿಂದಾಗಿ ಉನ್ನತ ಪದವಿ ಪಡೆಯುವಿರಿ, ವ್ಯಾಪಾರಕ್ಕೆ ಸಂಬಂಧಿಸಿದ ವ್ಯಾಪಾರಸ್ಥರಿಗೆ ಇಂದು ಹಣದ ಅವಶ್ಯಕತೆ ಇದೆ, ಹಣಕಾಸಿನ ಕೊರತೆಯಿಂದ ನಿಮ್ಮ ಪ್ರಯತ್ನ ಅರ್ಧಕ್ಕೆ ಮೊಟಕುಗೊಳಿಸಿವಿರಿ, ಪ್ರೇಮಿಗಳ ಸ್ಮರಣೀಯ ನೆನಪುಗಳ ಮುಂಬತ್ತಿ ಬೆಳಕಿನಲ್ಲಿ ಪ್ರೀತಿಪಾತ್ರ ಜೊತೆ ರೆಸೋರ್ಟ್ ನಲ್ಲಿ ಕಾಲ ಕಳೆಯುವಿರಿ, ಜನಪ್ರತಿನಿಧಿಗಳು, ಸಮಾಜ ಸೇವಕರು, ರಾಜಕಾರಣಿಗಳು ನಿಮ್ಮನ್ನು ವ್ಯಕ್ತಪಡಿಸಲು, ಸೃಜನಶೀಲ ಸ್ವರೂಪದ ಯೋಜನೆಗಳಲ್ಲಿ ಕೆಲಸ ಮಾಡಲು ಒಳ್ಳೆಯ ಸಮಯ, ಋತುಚಕ್ರ ತುಂಬ ವೇಗವಾಗಿ ಓಡುತ್ತದೆ,ಆದ್ದರಿಂದ ಇಂದಿನಿಂದಲೇ ನಿಮ್ಮ ಅಮೂಲ್ಯ ಸಮಯವನ್ನು ಸಾರ್ವಜನಿಕ ಜೊತೆಗೆ ಬೆರೆತು ನಡೆಯಿರಿ.

ಸಿಂಹ ರಾಶಿ ಭವಿಷ್ಯ (Simha rashi bhavishya)

Simha rashi bhavishya

ಕೂಲಿ ಕಾರ್ಮಿಕರ ಲಭ್ಯ, ಶುಭಕಾರ್ಯಗಳಲ್ಲಿ ಯಶಸ್ಸು, ಉದ್ಯೋಗದ ಸ್ಥಳ ಬದಲಾವಣೆ, ಕೆಲಸ ಕಾರ್ಯಗಳಲ್ಲಿ ಅಡಚಣೆ, ಹಣಕಾಸಿನ ಪರಿಸ್ಥಿತಿಯಲ್ಲಿ ವ್ಯತ್ಯಾಸ, ಸಂಗಾತಿಯು ನಿಮ್ಮನ್ನು ವಿರೋಧಿಸಬಹುದು, ಕೆಲಸದಲ್ಲಿ ಅನಗತ್ಯ ಒತ್ತಡ ಉದ್ವೇಗ ಉಂಟುಮಾಡುತ್ತದೆ, ಮಧ್ಯಸ್ಥಿಕೆ ಜನರಿಂದ ತೊಂದರೆ ಎದುರಿಸಬಹುದು, ಗಣನೀಯ ಪ್ರಮಾಣದಲ್ಲಿ ಧನ ಲಾಭ ಬರಲಿದೆ, ನಿಮ್ಮ ಬಾಸ್ ನಿಮ್ಮ ಕೆಲಸದಲ್ಲಿ ಸಹಾಯ ಮಾಡುವವರು, ಪ್ರಿಯತಮೆಯ ಪ್ರೀತಿಯನ್ನು ಅನುಭವಿಸುತ್ತೀರಿ, ದಂಪತಿಗಳಿಗೆ ಒಂದು ಸುಂದರವಾದ ಅದ್ಭುತ ದಿನ, ನಿಮ್ಮ ಕೆಲಸದಲ್ಲಿ ಭದ್ರತೆ ಕಾಪಾಡಿಕೊಳ್ಳಿ, ವ್ಯಾಪಾರಸ್ಥರಿಗೆ ಧನಲಾಭ, ವ್ಯಾಪಾರದಲ್ಲಿ ಚೇತರಿಕೆ, ಇದು ನೀವು ನಿಮ್ಮ ಸಂಗಾತಿಗೆ ಸಮಯವನ್ನು ನೀಡಲು ಬಯಸುವಿರಿ, ಆದರೆ ಆಪ್ತರೊಡನೆ ವಿವಾದ ಸೃಷ್ಟಿಯಾಗುವ ಸಾಧ್ಯತೆ.

ರಾತ್ರಿ ವೇಳೆಯಲ್ಲಿ ಕೆಲಸ ಮಾಡೋದು ನಿಲ್ಲಿಸಿ, ವ್ಯಾಪಾರದಲ್ಲಿ ಉತ್ತಮ ಲಾಭ ಗಳಿಸುವ ಸಾಧ್ಯತೆ, ಸಂಗಾತಿಯ ಸಹಕಾರ ವ್ಯಾಪಾರಕ್ಕೆ ಹೊಸ ಎತ್ತರವನ್ನು ಹೇಳಬಹುದು, ನಿಮ್ಮ ಜೀವನದಲ್ಲಿ ಒಂದು ಭವ್ಯವಾದ ಬಂಗಲೆ ಕಟ್ಟುವ ಕನಸು ಕಾಣಲಿದ್ದೀರಿ, ದಾಂಪತ್ಯ ಅಗಲಿಕೆಯಿಂದ ಬೇಸತ್ತು ಜಿಗುಪ್ಸೆ ಎದುರಿಸುತ್ತೀರಿ, ಸಂಗಾತಿಯ ಭಾವನೆಗಳನ್ನು ಅರ್ಥ ಮಾಡಿಕೊಳ್ಳಿ, ಕೆಲಸದ ಸ್ಥಳದಲ್ಲಿ ನಿಮ್ಮ ಹಳೆಯ ಕೇಸ್( ಅಪರಾಧ) ವಿಚಾರಣೆ ನಡೆಸುವ ಸಾಧ್ಯತೆ, ಉದ್ಯಮಿಗಳು ಇಂದು ಹೊಸ ಉದ್ಯಮ ಪ್ರಾರಂಭದ ಚಿಂತನೆ ಮಾಡುವಿರಿ, ನಿಮ್ಮ ಪ್ರಗತಿ ಕೆಲವರಿಗೆ ಸಹಿಸಲಾಗದು, ನಿಮ್ಮ ಮನೆಯಲ್ಲಿ ಬೆಲೆಬಾಳುವ ಆಭರಣ ಕಳೆದಿರುವ ಬಗ್ಗೆ ಚಿಂತನೆ, ನಿಮ್ಮ ವೈವಾಹಿಕ ಜೀವನದ ನೆನಪುಗಳು ಕಾಡಲಿವೆ, ಭಾವಪರವಶತೆಯನ್ನು ಅನುಭವಿಸುತ್ತಿದ್ದೀರಿ.

ಕನ್ಯಾ ರಾಶಿ ಭವಿಷ್ಯ (Kanya rashi bhavishya)

Kanya rashi bhavishya

ವ್ಯಾಪಾರ ವ್ಯವಹಾರಗಳಲ್ಲಿ ಧನ ಲಾಭ, ಆರೋಗ್ಯ ಪರಿಸ್ಥಿತಿ ಸುಧಾರಣೆ, ಬಂಧು ಮಿತ್ರರ ಸಹಾಯ, ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ, ಉದ್ಯೋಗದಲ್ಲಿ ಪ್ರಗತಿ, ಗಂಡ-ಹೆಂಡತಿಯ ಸ್ಮರಣೀಯ ನೆನಪುಗಳ ಭಾವಪರವಶತೆ ಹೊಂದುವಿರಿ, ರಾತ್ರಿ ವೇಳೆಯಲ್ಲಿ ಕೆಲಸ ಮಾಡುವುದು ನಿಷೇಧಿಸಿ, ನಿಮ್ಮ ಅತಿಯಾದ ಕೋಪ ಭಾವೋದ್ರೇಕಗಳು ನಿಮ್ಮ ನರಮಂಡಲಕ್ಕೆ ಹಾನಿ ಮಾಡಬಹುದು, ದೀರ್ಘಕಾಲದ ಹಣ ಉಳಿತಾಯ ಚಿಂತನೆ, ಸಂಗಾತಿಯೊಡನೆ ಮುಸ್ಸಂಜೆ ಕಾಲ ಕಳೆಯಿರಿ, ಮದುವೆ ವಿಚಾರದಲ್ಲಿ ನಿಮ್ಮ ಬಾಳಸಂಗಾತಿ ಸೆಲೆಕ್ಷನ್ ಮಾಡುವ ಹಕ್ಕು ನಿಮಗೆ, ಮೇಲಾಧಿಕಾರಿಗಳ ಸಂವಹನ ಚೆನ್ನಾಗಿರುತ್ತದೆ.

ಈ ದೈಹಿಕ ರಚನೆ ಕಾಯ್ದುಕೊಳ್ಳಲು ಕ್ರೀಡಾ ಚಟುವಟಿಕೆಗಳನ್ನು ಅಳವಡಿಸಿಕೊಳ್ಳಿ, ನಿಮ್ಮ ಪೋಷಕರು ನೀಡಿರುವ ಸಹಾಯದಿಂದ ಹಣಕಾಸಿನ ಸಮಸ್ಯೆಗಳು ನಿವಾರಣೆಯಾಗಲಿವೆ, ಸಹೋದ್ಯೋಗಿಗಳು ನಿಮ್ಮ ಜೊತೆ ಚೆನ್ನಾಗಿ ಮಾತನಾಡುತ್ತಾರೆ ಆದರೆ ಒಳಗೊಳಗೆ ಪಿತೂರಿ ಕೆಲಸ ಮಾಡುತ್ತಾರೆ, ಮುಖ್ಯವಾದ ವಿಷಯಗಳನ್ನು ಬಹಿರಂಗಪಡಿಸಬೇಡಿ, ನಿಮ್ಮ ಮಕ್ಕಳು ಓದು ಮುಗಿಸಿದರು ಸಮಯ ವ್ಯರ್ಥ ಮಾಡುತ್ತಿದ್ದಾರೆ, ಅನೇಕ ದಿನಗಳ ನಂತರ ಗಂಡ ಹೆಂಡತಿ ಕೂಡಿಬಾಳುವ ಸಾಧ್ಯತೆ, ಹಳೆಯ ಸಂಗಾತಿ ನೆನಪು ಕಾಡಲಿವೆ, ರಿಯಲ್ ಎಸ್ಟೇಟ್ ಉದ್ಯಮ ದಾರರಿಗೆ ಧನಲಾಭ, ಮದುವೆ ಪ್ರಸ್ತಾಪ ಬರಲಿದೆ, ದಂಪತಿಗಳಿಗೆ ಸಂತಾನಪ್ರಾಪ್ತಿ.

ತುಲಾ ರಾಶಿ ಭವಿಷ್ಯ (Tula rashi bhavishya) 

Tula rashi bhavishya

ವ್ಯಾಪಾರ ವೈವಾಟುಗಳಲ್ಲಿ ಅಲ್ಪ ಪ್ರಗತಿ, ಸರ್ಕಾರಿ ವ್ಯವಹಾರಗಳಲ್ಲಿ ಅಡಚಣೆ, ಹಣಕಾಸಿನ ಅಡಚಣೆ, ಜೀವನವೇ ವಿರಹ, ಒಂಟಿ ಬದುಕು, ಮನದಲ್ಲಿ ಜಿಗುಪ್ಸೆ ಕಾಡಲಿದೆ,ಮಹಿಳೆಯರು ಮನೆಯಲ್ಲಿ ಕೆಲಸ ಮಾಡುವಾಗ ಜಾಗ್ರತೆವಹಿಸಿ. ಹಣ ಹೂಡಿಕೆ ಯಿಂದ ನಿಮಗೆ ಲಾಭ. ಮಹಿಳೆಯರು ಸಹೋದರರಿಂದ ಪ್ರಯೋಜನ ಪಡೆಯಬಹುದು. ಸಂಗಾತಿ ಜೊತೆ ಕೆಲವು ಭಿನ್ನಾಭಿಪ್ರಾಯ ಬರಬಹುದು, ನಿಮ್ಮ ಸಂಗಾತಿಗೆ ನಿಮ್ಮ ಉದ್ಯೋಗ ಮತ್ತು ಆದಾಯದ ಬಗ್ಗೆ ಮಾಹಿತಿ ನೀಡುವಿರಿ. ನಾಟಕ ಕಲಾವಿದರು, ಚಲನಚಿತ್ರ ಕಲಾವಿದರು, ಸಂಗೀತ, ಹಿನ್ನೆಲೆ ಗಾಯಕರಿಗೆ ಬೇಡಿಕೆ ಹೆಚ್ಚಾಗಲಿದೆ, ಪ್ರತಿಭಾನ್ವಿತ ಕಲಾವಿದರಿಗೆ ಪ್ರತಿಭಾ ಪುರಸ್ಕಾರ ದೊರೆಯಲಿದೆ.

ನೀವು ಉದ್ಯೋಗದ ಭರವಸೆಯ ಮಾಯಾಜಾಲದಲ್ಲಿದ್ದೀರಿ. ಆರ್ಥಿಕ ತಜ್ಞರ ಸಲಹೆ ಪಡೆಯದೆ ಹಣಹೂಡಿಕೆ ಮಾಡಿದಲ್ಲಿ ಆರ್ಥಿಕ ನಷ್ಟದ ಸಾಧ್ಯತೆ ಇದೆ. ಉದ್ಯೋಗದಲ್ಲಿ ಚೈತನ್ಯ ಹೊಂದಿರುತ್ತೀರಿ. ಜನಪ್ರತಿನಿಧಿಗಳು ಜನರ ಭೇಟಿಯಾಗುವ ಸಂಭವ. ಮಾನಸಿಕ ಖಿನ್ನತೆ ಉಳ್ಳವರು ಒಂಟಿಯಾಗಿ ಸಮಯವನ್ನು ಕಳೆಯಲು ಇಷ್ಟಪಡುತ್ತಾರೆ. ನಿಮ್ಮ ಮನೆ ಮತ್ತು ಸುತ್ತಮುತ್ತಲಿನ ಪರ್ಯಾವರಣ ಸ್ವಚ್ಛತೆ ಮಾಡಲು ಬಯಸುವಿರಿ. ನಿಮ್ಮ ಸಂಗಾತಿ ಮೂಡ್ ಆಫ್ ಆದಾಗ ಶಾಂತವಾಗಿ ಬಿಡಿ. ಸ್ನೇಹಿತನಿಗೆ ಧನಸಹಾಯ ಮಾಡುವಿರಿ. ಕಿರಾಣಿ, ಸಿದ್ಧ ಉಡುಪು, ಪ್ಲೇವುಡ್, ಬ್ಯೂಟಿ ಪಾರ್ಲರ್, ಸ್ಟೇಷನರಿ ,ಹಾರ್ಡ್ವೇರ್ ವ್ಯಾಪಾರಸ್ಥರಿಗೆ ಆರ್ಥಿಕ ಧನ ಲಾಭವಾಗಲಿದೆ.

ವೃಶ್ಚಿಕ ರಾಶಿ ಭವಿಷ್ಯ (Vrishchika rashi bhavishya)

Vrishchika rashi bhavishya

ಕೈಗಾರಿಕಾ ಉದ್ಯಮದಾರರಿಗೆ ಕೂಲಿ ಕಾರ್ಮಿಕರ ಸಮಸ್ಯೆ,ಆರೋಗ್ಯದ ಬಗ್ಗೆ ಜಾಗ್ರತೆ ವಹಿಸಿ, ಪಾಲುದಾರಿಕೆ ಬಿಜಿನೆಸ್ನಲ್ಲಿ ಹಣಕಾಸಿನ ಬಗ್ಗೆ ಜಾಗ್ರತೆ ಇರಲಿ, ಕೆಲಸದ ಸ್ಥಳದಲ್ಲಿ ಹಣ ಸ್ವೀಕರಿಸುವಾಗ ಜಾಗೃತಿ ವಹಿಸಿ, ಹೊಸ ಉದ್ಯಮ ಪ್ರಾರಂಭಿಸುವುದು ಸದ್ಯಕ್ಕೆ ಬೇಡ, ಶುಭ ಮಂಗಳ ಕಾರ್ಯ ಮುಂದೂಡುವುದು ಒಳಿತು, ಉದ್ಯೋಗ ಬದಲಾವಣೆ ಬೇಡ.

ತಂತ್ರಜ್ಞಾನ ಪದವಿ ಪಡೆದವರು ಕೌಶಲ್ಯ ತರಬೇತಿ ಕಲಿಯಲು ಮರೆಯದಿರಿ, ಹೊಸ ನಿರ್ಧಾರಗಳು ಬೇಡ, ಪ್ರೇಮಿಗಳ ಮದುವೆ ಹಿರಿಯರ ವಿರೋಧ, ದಾಂಪತ್ಯದಲ್ಲಿ ಕಲಹ, ಸಹೋದರ ಸಹೋದರಿಯರ ಮಧ್ಯೆ ಮನಸ್ತಾಪ, ಆಸ್ತಿಗಾಗಿ ಹೋರಾಟ, ಪಿತ್ರಾರ್ಜಿತ ಆಸ್ತಿಯಲ್ಲಿ ಗೊಂದಲ, ನಿಮ್ಮ ನಿರ್ಧಾರಗಳು ಬಹಿರಂಗ ಪಡಿಸಬೇಡಿ, ಹಣಕಾಸಿನ ವಿಚಾರಕ್ಕಾಗಿ ಯಾರಿಗೂ ಜಾಮೀನು ನೀಡಬೇಡಿ, ಉದ್ಯೋಗಿಗಳಿಗೆ ಮೇಲಾಧಿಕಾರಿ ಕಿರುಕುಳ ಸಂಭವ, ವರ್ಗಾವಣೆ ಅತಂತ್ರ, ಪ್ರಮೋಷನ್ ಸಣ್ಣ ವಿಚಾರಕ್ಕಾಗಿ ತಡೆ.

ಧನಸ್ಸು ರಾಶಿ ಭವಿಷ್ಯ (Dhanu rashi bhavishya)

Dhanu rashi bhavishya

ವಸ್ತ್ರಾಭರಣ ಪ್ರಾಪ್ತಿ, ಧರ್ಮ ಕಾರ್ಯಸಕ್ತಿ ಸಜ್ಜನ ಸಹವಾಸ,ಕೈಗೊಂಡ ಕಾರ್ಯಸಾಧನೆ ಖಚಿತ, ವಸ್ತ್ರಾಭರಣ ವ್ಯಾಪಾರಸ್ಥರಿಗೆ ಧನಲಾಭ, ಕೋರ್ಟು-ಕಚೇರಿ ಅಡಚಣೆ ಎದುರಿಸಲಿದ್ದೀರಿ, ಸ್ಟೇಷನರಿ,ಬ್ಯೂಟಿ ಪಾರ್ಲರ್, ಕಿರಾಣಿ, ವಸ್ತ್ರ ,ಹಾರ್ಡ್ವೇರ್ ವ್ಯವಹಾರದಲ್ಲಿ ವಿಶೇಷ ಧನಲಾಭ ಪ್ರಾಪ್ತಿ, ರಾಜಕಾರಣಿಗಳಿಗೆ ವಿಶೇಷ ಸ್ಥಾನಮಾನ ಸಿಗುವ ಸಾಧ್ಯತೆ, ಉದ್ಯೋಗಿಗೆ ಮೇಲಾಧಿಕಾರಿಯ ನೆರವು ಸಿಗಲಿದೆ.

ಗುಪ್ತ ಶತ್ರುಗಳಿಂದ ನಿಮ್ಮ ವ್ಯವಹಾರಗಳಲ್ಲಿ ತೊಡಕು ಸಂಭವ, ಭೂ ವ್ಯವಹಾರಗಳಲ್ಲಿ ಯಶಸ್ಸಿನೊಂದಿಗೆ ಹಣಕಾಸಿನ ಅನುಕೂಲ, ಸಂಗಾತಿಯೊಂದಿಗೆ ತಾಳ್ಮೆಯಿಂದ ಇರುವುದು ಉತ್ತಮ, ತಾಂತ್ರಿಕ ಪದವಿ ಹೊಂದಿದವರಿಗೆ ವಿದೇಶದೊಂದಿಗೆ ವ್ಯವಹರಿಸುವ ಅವಕಾಶಗಳು ಕೂಡಿ ಬರಲಿವೆ, ಕ್ರೀಡಾಪಟು ವಿಜ್ಞಾನಿ ಹಾಗೂ ಸಂಶೋಧಕರಿಗೆ ಸ್ಥಾನಮಾನ ಗೌರವ ಪ್ರಾಪ್ತಿ, ಮಿತ್ರನಿಂದ ಉದ್ಯೋಗ ಸಿಗುವ ಸಾಧ್ಯತೆ, ಸಂತಾನ ಫಲದ ನಿರೀಕ್ಷಣೆ, ನಿವೇಶನ ಖರೀದಿಸುವ ಸಾಧ್ಯತೆ.

ಮಕರ ರಾಶಿ ಭವಿಷ್ಯ (Makara rashi bhavishya)

Makara rashi bhavishya

ಉದ್ಯೋಗಕ್ಕಾಗಿ ಪರಸ್ಥಳ ಅಲೆದಾಟ, ಪ್ರಯತ್ನಿಸಿದ ಕಾರ್ಯಗಳಲ್ಲಿ ಅನುಕೂಲ,ಬಂಧು ಮಿತ್ರರ ಸಹಾಯ ಕುಟುಂಬ ಸೌಖ್ಯ, ಮನಸ್ಸಿಗೆ ನೆಮ್ಮದಿ, ಆರೋಗ್ಯ ಸುಧಾರಣೆ, ರಾಜಕಾರಣಿಗಳಿಗೆ ಅಧಿಕಾರಿ ಪ್ರಾಪ್ತಿ ಸಂಭವ, ಉದ್ಯೋಗಿಗಳಿಗೆ ಬಹುದಿನದ ಕನಸು ನನಸಾಗುವ ದಿನ, ವೇತನ ಬೇಡಿಕೆ ಸಲ್ಲಿಸಿದವರಿಗೆ ಲಾಭವಾಗಲಿದೆ, ಉದ್ಯೋಗಿಗಳಿಗೆ ಪ್ರಮೋಷನ್ ಭಾಗ್ಯದ ಜೊತೆ ವರ್ಗಾವಣೆ ಆಗುವ ಸಾಧ್ಯತೆ, ಕೋರ್ಟು ಮತ್ತು ಸರ್ಕಾರಿ ಕಚೇರಿ ಎಲ್ಲಾ ಕೆಲಸಗಳಲ್ಲಿ ಜಯ, ಭೂಮಿ ಖರೀದಿಯ ಸುಯೋಗ, ಪುತ್ರ ಸಂತಾನ ಭಾಗ್ಯ ಲಭಿಸಲಿದೆ.

ವ್ಯಾಪಾರಸ್ಥರ ಆರ್ಥಿಕ ಅಭಿವೃದ್ಧಿ, ಧಾರ್ಮಿಕ ಕಾರ್ಯಕ್ರಮಗಳಿಗೆ ಭೇಟಿ ಸಂಭವ, ಹಣದ ಜಾಮೀನ್ ವಿಚಾರಕ್ಕೆ ಮನಸ್ತಾಪ, ಆಸ್ತಿ ವಿಚಾರಕ್ಕಾಗಿ ಬಂಧುಮಿತ್ರರೊಡನೆ ಕಲಹ, ಸಂಗಾತಿಯೊಂದಿಗೆ ಸಣ್ಣ ವಿಚಾರಗಳಿಗೆ ವಾಗ್ವಾದ ಬೇಡ, ಸಹೋದರ ಶಿಕ್ಷಣಕ್ಕಾಗಿ ಹಣ ವ್ಯಯ, ಅರ್ಧಕ್ಕೆ ನಿಂತ ಗೃಹ ಕಟ್ಟಡ ಕಾರ್ಯ ಪೂರ್ಣಗೊಳ್ಳಲಿದೆ, ನೋಡಿ ಹೋಗಿರುವ ಮದುವೆ ವಿಚಾರ ಮರಳಿ ಒಳ್ಳೆಯ ಸಂದೇಶ ಬರಲಿದೆ, ಮಕ್ಕಳ ವಿದ್ಯಾಭ್ಯಾಸದ ಚಿಂತನೆ, ಅಳಿಯ ಕೆಲಸಕಾರ್ಯಗಳಲ್ಲಿ ನಿರಾಸಕ್ತಿ, ಒಡವೆ ವಿಚಾರ ಬಂಧುಗಳೊಂದಿಗೆ ಕಲಹ ಮನೆಯಲ್ಲಿ ಅಶಾಂತಿ ವಾತಾವರಣ ಕಂಡು ಬರುತ್ತದೆ.

ಕುಂಭ ರಾಶಿ ಭವಿಷ್ಯ (Kumba rashi bhavishya)

Kumba rashi bhavishya

ವ್ಯಾಪಾರ ವ್ಯವಹಾರಗಳಲ್ಲಿ ಪ್ರಗತಿ,ಹಣಕಾಸು ಪರಿಸ್ಥಿತಿಯಲ್ಲಿ ಸುಧಾರಣೆ ಕಂಡು ಬಂದರೂ ಸಾಲಗಾರರ ಕಾಟ ತಪ್ಪಿದ್ದಲ್ಲ, ಅಧಿಕ ಧನ ವ್ಯಯ ಮಾನಸಿಕ ಚಿಂತೆ, ಕುಟುಂಬ ಸದಸ್ಯರಿಗೆ ಪದೇ ಪದೇ ಅನಾರೋಗ್ಯ ಕಾಡುವುದು,ನಿಂತ ಕಾರ್ಯಗಳು ಮರುಚಾಲನೆ, ಪತ್ನಿಯ ಆರೋಗ್ಯದಲ್ಲಿ ಚೇತರಿಕೆ, ವಿವಾಹ ಕಾರ್ಯ ಪ್ರಯತ್ನ ಯಶಸ್ಸು, ನಿರುದ್ಯೋಗಿಗಳಿಗೆ ಪರೀಕ್ಷೆ ಹಾಗೂ ಸಂದರ್ಶನದಲ್ಲಿ ಯಶಸ್ಸು.

ಉದ್ಯೋಗದಲ್ಲಿ ಬಡ್ತಿ ಯೋಗ, ಕಿರಾಣಿ ಸ್ಟೇಷನರಿ ಮಾಲಕರಿಗೆ ಆರ್ಥಿಕ ಚೇತರಿಕೆ, ಮಕ್ಕಳ ನೀಚ ಕಾರ್ಯಗಳಿಂದ ತೊಂದರೆ, ಮಾತಾಪಿತೃ ಆರೋಗ್ಯದಲ್ಲಿ ಕಿರಿಕಿರಿ ಸಂಭವ, ಸಹೋದರನಿಂದ ಸ್ವಲ್ಪ ಆಕಸ್ಮಿಕ ಧನಪ್ರಾಪ್ತಿ, ಕೋರ್ಟ್ ಕೇಸ್ ವಿಳಂಬ, ಹಳೆಯ ಸಾಲ ಮರುಪಾವತಿ ಸಾಧ್ಯತೆ, ಬೆಂಕಿ ಮತ್ತು ವಿದ್ಯುತ್ ಉಪಕರಣಗಳಿಂದ ಅವಗಡ ಸಂಭವ, ಹಳೆಯ ಚಿಂತೆ ಕಾಡುತ್ತಿದೆ, ಸೋದರ ಮಾವನಿಂದ ಧನಸಹಾಯ, ನಂಬಿದ ಸ್ತ್ರೀ-ಪುರುಷ ರಿಂದ ಮನಸ್ತಾಪ.

ಮೀನ ರಾಶಿ ಭವಿಷ್ಯ (Meena rashi bhavishya)

Meena rashi bhavishya

ಒಳ್ಳೆ ಯೋಜನೆಗಳು ಪ್ರಾರಂಭ, ಶುಭ ಮಂಗಳ ಕಾರ್ಯ ತಯಾರಿ, ಕೈ ಹಾಕಿದ ಕೆಲಸ ಕಾರ್ಯಗಳು ಯಶಸ್ಸು, ಆರೋಗ್ಯದಲ್ಲಿ ಚೇತರಿಕೆ, ಬಂಧು ಮಿತ್ರರಲ್ಲಿ ವಿರಸ ಮಾಯ, ಮಕ್ಕಳಿಂದ ದುಷ್ಟ ಕಾರ್ಯಗಳಲ್ಲಿ ಆಸಕ್ತಿ, ಕೃಷಿಯಲ್ಲಿ ನಷ್ಟ, ಆರ್ಥಿಕ ಪರಿಸ್ಥಿತಿ ಸ್ವಲ್ಪಮಟ್ಟಿನ ಸುಧಾರಣೆ,ಇಂದು ಲಾಭದಾಯಕ ದಿನ, ದೀರ್ಘಕಾಲದ ಕಾಯಿಲೆ ಗುಣಮುಖ, ಸಂಗಾತಿಯ ಭೇಟಿಮಾಡುವ ಒಳ್ಳೆಯ ದಿನವಾಗಿದೆ, ನಿರುದ್ಯೋಗಿಗಳಿಗೆ ಉದ್ಯೋಗ ಪಡೆಯುವ ಅವಕಾಶವಿದೆ.

ಪತಿ-ಪತ್ನಿ ಮಧ್ಯೆ ಜಗಳ ಆಗುವ ಸಾಧ್ಯತೆ ಇದೆ, ಮಾನಸಿಕ ಒತ್ತಡ ಉಂಟಾಗಬಹುದು, ಮಕ್ಕಳೊಡನೆ ಸಂತೋಷದಾಯಕ ಕ್ಷಣಗಳು ಅನುಭವಿಸುವಿರಿ, ಸಾಲದ ಸಮಸ್ಯೆ ಎದುರಾಗಬಹುದು, ಸ್ನೇಹಿತರ ಹತ್ತಿರ ಸಾಲ ಕೇಳುವ ಪ್ರಸಂಗ ಬರುವ ಸಾಧ್ಯತೆ, ವ್ಯಾಪಾರಸ್ಥರಿಗೆ ಲಾಭ, ನವದಂಪತಿಗಳ ವೈವಾಹಿಕ ಜೀವನ ಬಹಳ ಸುಮಧುರವಾಗಿರುತ್ತದೆ, ಫೈನಾನ್ಸಿಯಲ್ ಬಿಸಿನೆಸ್ ಮಾಡುವವರು ಉತ್ತಮ ಪ್ರಗತಿ ಕಾಣುವಿರಿ, ನಿಮ್ಮ ಬಾಸ್ ಜೊತೆ ಸಂಬಂಧ ವೃದ್ಧಿ, ಹಠಾತ್ ಮದುವೆ ಚರ್ಚೆ ನಡೆಯಲಿದೆ.

ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಅತ್ತೆ-ಸೊಸೆ ಜಗಳ, ಸಂತಾನ ಭಾಗ್ಯ, ಸಾಲ ಬಾಧೆ, ಶತ್ರುಗಳಿಂದ ತೊಂದರೆ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಜನ್ಮ ರಾಶಿ ನಕ್ಷತ್ರಗಳ ಮೇಲೆ ವ್ಯಾಪಾರ, ರಾಶಿಗಳಿಗೆ ಅನುಗುಣವಾಗಿ ಜನ್ಮರಾಶಿ ಹರಳು, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು.

ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
“ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು”
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.