Rashi bhavishya : ಜಾತಕ ಇಂದು 09 ಗುರುವಾರ 2025 ಜ್ಯೋತಿಷ್ಯ ಶಾಸ್ತ್ರದ (Astrology), ಪ್ರಕಾರ 12 ರಾಶಿ ಸೇರಿದಂತೆ ಹೆಚ್ಚಿನ ಮಾಹಿತಿಗೆ ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು ಸೋಮಶೇಖರ್ ಗುರೂಜಿ (B.Sc) ನೀಡಿರುವ ಮಾಹಿತಿ ನೋಡಿ
- ಗುರುವಾರದ ರಾಶಿ ಭವಿಷ್ಯ, 09 ಜನವರಿ 2025
- ಸೂರ್ಯೋದಯ – 6:52 ಬೆ.
- ಸೂರ್ಯಾಸ್ತ – 5:54 ಸಂ.
- ಶಾಲಿವಾಹನ ಶಕೆ -1946
- ಸಂವತ್-2080
- ಕ್ರೋಧಿನಾಮ ಸಂವತ್ಸರ,
- ದಕ್ಷಿಣ ಅಯಣ, ಶುಕ್ಲ ಪಕ್ಷ,
- ಹೇಮಂತ್ ಋತು,
- ಪುಷ್ಯ ಮಾಸ,
- ತಿಥಿ – ದಶಮಿ 12:22 ಮ ವರೆಗೆ
- ನಕ್ಷತ್ರ – ಭರಣಿ 3:06 ಮ ವರೆಗೆ
- ರಾಹು ಕಾಲ – 01:30 ದಿಂದ 03:00 ವರೆಗೆ
- ಯಮಗಂಡ – 06:00 ದಿಂದ 07:30 ವರೆಗೆ
- ಗುಳಿಕ ಕಾಲ – 09:00 ದಿಂದ 10:30 ವರೆಗೆ
- ಬ್ರಹ್ಮ ಮುಹೂರ್ತ – 5:16 ಬೆ ದಿಂದ 6:04 ಬೆ ವರೆಗೆ
- ಅಮೃತ ಕಾಲ – 10:34 ಬೆ ದಿಂದ 12:05 ಮ ವರೆಗೆ
- ಅಭಿಜಿತ್ ಮುಹುರ್ತ – 12:01 ಮ ದಿಂದ 12:45 ಮ ವರೆಗೆ
ಮೇಷ ರಾಶಿ ಭವಿಷ್ಯ (Mesha rashi bhavishya)
ಸ್ಟಾಕ್ ಷೇರಿನ ವ್ಯಾಹಾರದಲ್ಲಿ ಸಾಕಷ್ಟು ಲಾಭ ಗಳಿಸುವಿರಿ,ಜ್ಯೂಸು ಅಂಗಡಿ ಮಾರಾಟಗಾರರಿಗೆ ಲಾಭ, ರಂಗಭೂಮಿ ಕಲಾವಿದರಿಗೆ ಶುಭದಾಯಕ, ಪಾಲುದಾರಿಕೆ ವ್ಯಾಪಾರ ಬೇಡವೇ ಬೇಡ, ರಾಜಕೀಯ ಮುಖಂಡರಿಗೆ ಸೂಕ್ತ ಸಮಯವಲ್ಲ, ಗೃಹ ನಿರ್ಮಾಣ ವೃತ್ತಿ ಹೊಂದಿದವರಿಗೆ ನಷ್ಟವಾಗಬಹುದು,ಗರ್ಭಿಣಿಯರು ಎಚ್ಚರದಿಂದ ಇರಿ.
ಮದುವೆ ಅಡತಡೆ ಎದುರಿಸುವ ಸಾಧ್ಯತೆ, ಸ್ತ್ರೀಶಕ್ತಿ ಮತ್ತು ಸಂಘಟನೆಗಳು ಆರ್ಥಿಕ ಸಂಕಷ್ಟ ಎದುರಿಸುವ ಸಾಧ್ಯತೆ, ಕಛೇರಿಯಲ್ಲಿನ ಮುಖ್ಯ ಕಡತಗಳು ವಸ್ತುಗಳ ಬಗ್ಗೆ ಜಾಗೃತಿ ವಹಿಸಿ, ಅಧಿಕಾರಿಗಳೊಡನೆ ವಾಗ್ವಾದ ಮಾಡಬೇಡಿ, ದಾಂಪತ್ಯದಲ್ಲಿ ಅಸಮಾಧಾನ ಸೃಷ್ಟಿ, ನಿನ್ನ ಪ್ರಯತ್ನ ತುಂಬಾ ಚೆನ್ನಾಗಿದೆ ಆದರೆ ಫಲಿತಾಂಶ ವ್ಯರ್ಥ, ಕೆಲಸದಲ್ಲಿ ನಿಮಗೆ ಉತ್ತಮ. ಕುಟುಂಬ ವ್ಯವಹಾರದಲ್ಲಿ ಕೆಲವು ಉತ್ತಮ ಲಾಭಗಳನ್ನು ಪಡೆಯಬಹುದು. ಉದ್ಯೋಗಿಗಳಿಗೆ ಸಾಮಾನ್ಯ. ಬಾಕಿ ಇರುವ ಕಾರ್ಯಗಳಿಗೆ ಹೆಚ್ಚು ಗಮನ ಹರಿಸಿ. ವೈಯಕ್ತಿಕ ಜೀವನದ ವಿಚಾರದಲ್ಲಿ ಬಾಲ್ಯದ ಸ್ನೇಹಿತನಿಂದ ಮಾರ್ಗದರ್ಶನ ಪಡೆಯಿರಿ. ವೈವಾಹಿಕ ಜೀವನದಲ್ಲಿ ಶಾಂತಿ. ಪ್ರೀತಿ ಪ್ರಣಯ ಸಮಸ್ಯೆಗಳು ಇರುವುದರಿಂದ ತುಂಬಾ ಅಸಮಾಧಾನ. ಹಣದ ವಿಷಯದಲ್ಲಿ ಮಿಶ್ರ ಫಲಿತಾಂಶ.
- ಅದೃಷ್ಟ ಬಣ್ಣ: ಕೆಂಪು
- ಅದೃಷ್ಟ ಸಂಖ್ಯೆ: 2,4
- ಅದೃಷ್ಟ ದಿನ: ಮಂಗಳವಾರ
ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಅತ್ತೆ-ಸೊಸೆ ಜಗಳ, ಸಂತಾನ ಭಾಗ್ಯ, ಸಾಲ ಬಾಧೆ, ಶತ್ರುಗಳಿಂದ ತೊಂದರೆ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಜನ್ಮ ರಾಶಿ ನಕ್ಷತ್ರಗಳ ಮೇಲೆ ವ್ಯಾಪಾರ, ರಾಶಿಗಳಿಗೆ ಅನುಗುಣವಾಗಿ ಜನ್ಮರಾಶಿ ಹರಳು, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು.
ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
“ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು”
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob.93534 88403
ಇದನ್ನೂ ಓದಿ: Rashi bhavishya | ಬುಧವಾರದ ರಾಶಿ ಭವಿಷ್ಯ 08-ಜನವರಿ 2025
ವೃಷಭ ರಾಶಿ ಭವಿಷ್ಯ (Vrushabha rashi bhavishya)
ರಾಜಕಾರಣಿಗಳು ಉನ್ನತ ಅಧಿಕಾರ ಗಳಿಸುತ್ತಾರೆ, ಸ್ವಂತ ವಾಣಿಜ್ಯ ಸಂಕೀರ್ಣ ಅಥವಾ ಕಲ್ಯಾಣ ಮಂಟಪ ಹೊಂದಿದವರಿಗೆ ಹೆಚ್ಚಿನ ಲಾಭ ಪಡೆಯಲಿದ್ದೀರಿ, ಅಡುಗೆ ಮಾಡುವವರು ಹೆಚ್ಚಿನ ಆರ್ಡರ್ ಪಡೆಯಲಿದ್ದೀರಿ, ಕಾನೂನು ಸಂಬಂಧಪಟ್ಟ ಕೆಲಸ ಕಾರ್ಯಗಳಲ್ಲಿ ಹಿನ್ನಡೆ ಇರುತ್ತದೆ, ಉದ್ಯೋಗದಲ್ಲಿ ಬಡ್ತಿ ಪ್ರಾಪ್ತಿ, ಉನ್ನತ ಹುದ್ದೆ ನಿರ್ವಹಿಸುವ ಅವಕಾಶ, ಪ್ರಭಾವಿ ವ್ಯಕ್ತಿಗಳ ಭೇಟಿ, ಸಂತಾನ ಪ್ರಾಪ್ತಿ, ಆಕಸ್ಮಿಕ ಧನಪ್ರಾಪ್ತಿ, ನಿಮ್ಮ ಆರ್ಥಿಕ ಪರಿಸ್ಥಿತಿ ಕುಸಿಯುವ ಸಾಧ್ಯತೆ.
ವ್ಯಾಪಾರಿಗಳಿಗೆ ಏರಿಳಿತ. ಈ ಸಮಯದಲ್ಲಿ ಯಾವುದೇ ಪ್ರಮುಖ ನಿರ್ಧಾರ ಬೇಡ. ವ್ಯವಹಾರವನ್ನು ವಿಸ್ತರಿಸಲು ಯೋಜಿಸುತ್ತಿದ್ದರೆ ಅನುಕೂಲಕರವಾಗಿಲ್ಲ. ಉದ್ಯೋಗದಲ್ಲಿದ್ದರೆ ಅಷ್ಟೇನೂ ಪ್ರಗತಿ ಇರುವುದಿಲ್ಲ. ಆದರೆ ಕ್ರಮೇಣ ಪರಿಸ್ಥಿತಿ ಸುಧಾರಿಸುತ್ತದೆ. ಕೆಲಸದ ಹೆಚ್ಚಿನ ಒತ್ತಡವು ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ. ಇಂದು ಸವಾಲನ್ನು ಎದುರಿಸಬಹುದು. ಕುಟುಂಬ ಜೊತೆ ಅಸಮಾಧಾನ. ಪತಿ-ಪತ್ನಿ ಮಧ್ಯೆ ಭಿನ್ನಾಭಿಪ್ರಾಯ. ಮಕ್ಕಳಿಂದ ವಿರೋಧ. ಅಳಿಯನಿಂದ ಜಗಳ ಸಂಭವ.
- ಅದೃಷ್ಟ ಬಣ್ಣ: ಬಿಳುಪು
- ಅದೃಷ್ಟ ಸಂಖ್ಯೆ: 2,8
- ಅದೃಷ್ಟ ದಿನ: ಬುಧವಾರ
ಇದನ್ನೂ ಓದಿ: Tuesday Puja Method | ಮಂಗಳವಾರ ಹೀಗೆ ಮಾಡಿದರೆ ಎಲ್ಲ ಸಮಸ್ಯೆಗಳು ಮಾಯ
ಮಿಥುನ ರಾಶಿ ಭವಿಷ್ಯ (Mithuna rashi bhavishya)
ನಿಮ್ಮ ವಂಶಸ್ಥರ ಆಸ್ತಿ ನಿಮ್ಮ ಪಾಲಿಗೆ ಬರಲಿದೆ, ವಿದೇಶ ಪ್ರಯಾಣ ಭಾಗ್ಯ, ರಿಯಲ್ ಎಸ್ಟೇಟ್ ಉದ್ಯಮದಾರರಿಗೆ ಅನಿರೀಕ್ಷಿತ ಧನ ಲಾಭವಿದೆ, ಉದ್ಯೋಗಸ್ಥರು ಕೆಲಸ ಕಳೆದುಕೊಳ್ಳುವ ಭೀತಿ, ಒಡವೆ ವ್ಯಾಪಾರ ಮತ್ತು ಒಡವೆ ತಯಾರಿ ಮಾಡುವವರಿಗೆ ಲಾಭ, ರಫ್ತು ಮತ್ತು ಆಮದು ಮಾರಾಟಗಾರರಿಗೆ ಧನಲಾಭ, ಕಲಾವಿದರಿಗೆ ಬೇಡಿಕೆ, ಹೊಸ ಉದ್ಯಮ ಪ್ರಾರಂಭದ ಚಿಂತನೆ, ಮದುವೆ ಯೋಗ ಕೂಡಿ ಬರಲಿದೆ,ಮನೆಯಲ್ಲಿ ಕುಟುಂಬ ಸದಸ್ಯರ ಜೊತೆ ಅರ್ಥೈಸಿಕೊಳ್ಳುವುದು ಕಷ್ಟಕರವಾಗಿರುತ್ತದೆ.ಅದು ನಿಮ್ಮನ್ನು ಮಾನಸಿಕವಾಗಿ ಅಸಮಾಧಾನಗೊಳಿಸುತ್ತದೆ. ಕುಟುಂಬ ಸದಸ್ಯರೊಂದಿಗಿನ ನಿಮ್ಮ ಸಂಬಂಧ ಹದಗೆಡಬಹುದು.
ನಿಮ್ಮ ಪ್ರೀತಿಪಾತ್ರರೊಡನೆ ಪ್ರೀತಿ ಮತ್ತು ಪರಸ್ಪರ ಸಂಬಂಧ ಮದುವೆಗೆ ಒಪ್ಪಿ. ತೊಂದರೆಗಳು ನಿಮ್ಮ ಮೇಲೆ ಪ್ರಾಬಲ್ಯ ಬೀರುವವು. ನಿಮ್ಮ ತಿಳುವಳಿಕೆಯೊಂದಿಗೆ ಅವುಗಳನ್ನು ನಿಭಾಯಿಸಲು ವಿಫಲ. ನಿಮ್ಮ ಸಂಗಾತಿಯೊಂದಿಗೆ ಹೆಚ್ಚು ಸಮಯ ಕಳೆಯಲು ಬಯಸುತ್ತೀರಿ ಆದರೆ ಸಂಗಾತಿಯಿಂದ ಸಹಕಾರ ಇಲ್ಲ. ಕೆಲಸದ ಸ್ಥಳದಲ್ಲಿ ನಿಮ್ಮ ಕಾರ್ಯಕ್ಷಮತೆಯನ್ನು ಪ್ರಶಂಸಿಸಲಾಗುತ್ತದೆ. ನಿಮ್ಮ ಕೆಲಸವನ್ನು ಪ್ರಾಮಾಣಿಕವಾಗಿ ಮತ್ತು ಗಂಭೀರವಾಗಿ ಪೂರ್ಣಗೊಳಿಸುತ್ತೀರಿ. ನಿಮ್ಮ ಆರೋಗ್ಯ ಉತ್ತಮವಾಗಿರುವುದಿಲ್ಲ. ತಲೆನೋವು, ಕಣ್ಣಿನ ಕಿರಿಕಿರಿ, ಬೆನ್ನು ನೋವು ಇತ್ಯಾದಿಗಳಿಂದ ನೀವು ತೊಂದರೆಗೊಳಗಾಗುತ್ತೀರಿ.
- ಅದೃಷ್ಟ ಬಣ್ಣ: ಹಳದಿ
- ಅದೃಷ್ಟ ಸಂಖ್ಯೆ: 1,9
- ಅದೃಷ್ಟ ದಿನ: ಶನಿವಾರ
ಕರ್ಕಾಟಕ ರಾಶಿ ಭವಿಷ್ಯ (Karkataka rashi bhavishya)
ಮನೆ ಖರೀದಿಸುವ ಆಸೆ ಈಡೇರುವುದು, ಶಿಕ್ಷಕರಿಗೆ ರಾಜಕಾರಣಿಗಳಿಗೆ ಮತ್ತು ಅಧಿಕಾರಿಗಳಿಗೆ ವಿಶೇಷ ಸ್ಥಾನಮಾನ ಲಭ್ಯ, ವಕೀಲರ ಕೀರ್ತಿ ಸುತ್ತು ಕಡೆ ಹರಡಲಿದೆ, ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ತೊಂದರೆ, ಸ್ತ್ರೀ ಉದ್ಯೋಗಿಗಳಿಗೆ ಬಡ್ತಿ ಸಂಭವ, ಮುದ್ರಣ ಜೆರಾಕ್ಸ್ ವ್ಯಾಪಾರ ವಿದ್ಯುತ್ ಉಪಕರಣಗಳ ವ್ಯಾಪಾರಸ್ಥರಿಗೆ ಹೆಚ್ಚಿನ ಲಾಭ ಪಡೆಯಲಿದ್ದೀರಿ, ಜಾಹೀರಾತು ಉದ್ಯಮ ದಾರರಿಗೆ ಧನಲಾಭ, ವಿದೇಶೀ ಉತ್ಪನ್ನಗಳ ಮಾರಾಟದಿಂದ ಧನಲಾಭ, ಮಂಗಲ ಕಾರ್ಯಗಳಲ್ಲಿ ಭಾಗಿ,ಸಂಗಾತಿಯೊಂದಿಗಿನ ಸಂಬಂಧದಲ್ಲಿ ಕಹಿ.
ಪ್ರಣಯ ಜೀವನದಲ್ಲಿಯೂ ಕಹಿ. ನಿಮ್ಮ ಕೋಪನಿಯಂತ್ರಣವಿರಲಿ. ಹಣಕಾಸಿನ ವ್ಯವಹಾರ ಸದೃಢವಾಗಿರುತ್ತವೆ.ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಅನ್ನು ಹೆಚ್ಚಿಸಲು ನಿಮಗೆ ಸಾಧ್ಯ. ವ್ಯಾಪಾರಿಗಳಿಗೆ ಉದ್ಯೋಗದಲ್ಲಿ ಪ್ರಗತಿ. ಉದ್ಯೋಗಿಗಳಿಗೆ ಹೆಚ್ಚಿನ ಕೆಲಸದ ಜವಾಬ್ದಾರಿ ಪ್ರಾಪ್ತಿ. ಹೆಚ್ಚು ಒತ್ತಡವನ್ನು ಪಡೆಯಬಹುದು. ಆರೋಗ್ಯ ಉತ್ತಮವಾಗಿರುತ್ತದೆ. ಅಜಾಗರೂಕತೆ ನಿಂದ ದೊಡ್ಡ ಸಮಸ್ಯೆ.
- ಅದೃಷ್ಟ ಬಣ್ಣ: ಕೆಂಪು
- ಅದೃಷ್ಟ ಸಂಖ್ಯೆ: 2,7
- ಅದೃಷ್ಟ ದಿನ: ಬುಧವಾರ
ಇದನ್ನೂ ಓದಿ: Rashi bhavishya | ಈ ರಾಶಿಯವರಿಗೆ ಉದ್ಯೋಗ ಸಿಗದೇ ರಾತ್ರಿ ಹಗಲು ಚಿಂತೆ!
ಸಿಂಹ ರಾಶಿ ಭವಿಷ್ಯ (Simha rashi bhavishya)
ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಸ್ಥಾನಕ್ಕೆ ಧಕ್ಕೆ ಬರಬಹುದು, ದಂಪತಿಗಳಿಗೆ ಕಷ್ಟ ನಷ್ಟದ ದಿನಗಳು ಕಳೆದು ಸಂತಸ ನೆಮ್ಮದಿಯ ದಿನಗಳು ಆರಂಭವಾಗಲಿವೆ, ಇಂದಿನಿಂದ ಶುಭ ಫಲ ಕಾಣುವಿರಿ, ಕುಟುಂಬ ಸದಸ್ಯರೊಂದಿಗೆ ಅಥವಾ ಆತ್ಮೀಯರೊಂದಿಗೆ ಪಾಲುದಾರಿಕೆ ವ್ಯಾಪಾರ ಆರಂಭಿಸಿ, ನೂಲು ತೆಗೆಯುವ, ಶೃಂಗಾರ ಸಾಮಗ್ರಿ ಹಾಗೂ ಔಷಧ ತಯಾರಿಕರಿಗೆ ವಿಶೇಷ ಬೇಡಿಕೆ ಹಾಗೂ ಧನಲಾಭ, ಸ್ವಂತ ಉದ್ಯಮ ಮಾಲಕರಿಗೆ ಧನಲಾಭ,ವಿವಿಧ ಮೂಲಗಳಿಂದ ಹೆಚ್ಚಿನ ಆದಾಯ, ಉದ್ಯಮ ವಿಸ್ತರಿಸುವ ಬಗ್ಗೆ ಚಿಂತನೆ, ಮದುವೆ ಚಿಂತನೆ, ವಿದೇಶ ಪ್ರಯಾಣ ಯಶಸ್ಸು.
ಜೀವನದ ಪ್ರತಿಯೊಂದು ಅಂಶಗಳಲ್ಲೂ ಸುಧಾರಣೆಗೆ ಪ್ರಯತ್ನ. ನೀವು ಪೂರ್ಣ ಏಕಾಗ್ರತೆಯಿಂದ ಕೆಲಸ ಮಾಡುತ್ತೀರಿ ಅದು ನಿಮ್ಮ ಪ್ರಗತಿಗೆ ದಾರಿ ಮಾಡಿಕೊಡುತ್ತದೆ. ಸೃಜನಶೀಲ ಕ್ಷೇತ್ರಗಳಿಗೆ ಸಂಬಂಧಿಸಿದ ಜನರು ಉತ್ತಮ ಪ್ರಯೋಜನಗಳನ್ನು ಪಡೆಯುವ ನಿರೀಕ್ಷೆಯಿದೆ. ಮನೆಯ ವಾತಾವರಣವು ಶಾಂತವಾಗಿರುತ್ತದೆ. ಹೆತ್ತವರೊಂದಿಗೆ ಉತ್ತಮ ಸಂಬಂಧ ವೃದ್ಧಿಯಾಗುವುದು. ಸಂಗಾತಿಯೊಂದಿಗೆ ಸಂತೋಷದ ಸಮಯವನ್ನು ಹೊಂದಿರುತ್ತೀರಿ. ಅವಿವಾಹಿತರಾಗಿದ್ದರೆ ಕುಟುಂಬದ ಹಿರಿಯರು ಮದುವೆಗಾಗಿ ನಿಮ್ಮ ಮೇಲೆ ಒತ್ತಡ ಹೇರಬಹುದು. ಇದಕ್ಕಾಗಿ ನೀವು ಸಿದ್ಧರಿಲ್ಲದಿದ್ದರೆ, ನಿಮ್ಮ ಅಭಿಪ್ರಾಯವನ್ನು ಬಹಿರಂಗವಾಗಿ ತಿಳಿಸಿ. ದಿನಸಿ ವ್ಯಾಪಾರಸ್ಥರು, ಬಟ್ಟೆ ವ್ಯಾಪಾರಸ್ಥರು ಆರ್ಥಿಕ ಪರಿಸ್ಥಿತಿ ಉತ್ತಮವಾಗಿರುತ್ತದೆ. ಆರೋಗ್ಯದ ವಿಷಯದಲ್ಲಿ ನಿಮ್ಮ ಬಗ್ಗೆ ನೀವು ಕಾಳಜಿ ವಹಿಸಬೇಕು.
- ಅದೃಷ್ಟ ಬಣ್ಣ: ಬಿಳಿ
- ಅದೃಷ್ಟ ಸಂಖ್ಯೆ: 6,7
- ಅದೃಷ್ಟ ದಿನ: ಸೋಮವಾರ
ಕನ್ಯಾ ರಾಶಿ ಭವಿಷ್ಯ (Kanya rashi bhavishya)
ನಿಮ್ಮ ಮಕ್ಕಳ ಭವಿಷ್ಯದ ಬಗ್ಗೆ ಚಿಂತೆ, ಪಕ್ಕದ ಕೃಷಿ ಭೂಮಿ ಖರೀದಿ, ವಾಹನ ಖರೀದಿ, ಅಧಿಕಾರಿ ವರ್ಗದವರಿಗೆ ನಿಮ್ಮದಲ್ಲದ ತಪ್ಪಿಗೆ ಶಿಕ್ಷೆ ಅನುಭವಿಸಬೇಕಾಗಿದೆ, ಭೂ ವ್ಯವಹಾರದಲ್ಲಿ ಉತ್ತಮ ಆದಾಯ, ಮ್ಯಾರೇಜ್ ಬ್ರೋಕರಿಗೆ ಆದಾಯ ವೃದ್ಧಿ,ವಿವಿಧ ಮೂಲಗಳಿಂದ ಹೆಚ್ಚಿನ ಆದಾಯ, ಉದ್ಯಮ ವಿಸ್ತರಿಸುವ ಬಗ್ಗೆ ಚಿಂತನೆ, ಮದುವೆ ಚಿಂತನೆ, ವಿದೇಶ ಪ್ರಯಾಣ ಯಶಸ್ಸು, ಗುತ್ತಿಗೆ ವ್ಯವಹಾರ ನಡೆಸುತ್ತಿರುವವರಿಗೆ ಸರಕಾರದ ಕಾಮಗಾರಿಗಳು ದೊರೆತು ಸಂತಸ ನೀಡಲಿದೆ, ಬಾಕಿ ಇರುವ ಕೆಲಸಗಳನ್ನು ಪೂರ್ಣಗೊಳಿಸಲು ಸಕಾಲವಾಗಿದೆ, ಆದಾಯ ಹೆಚ್ಚುವರಿ ಕಾಣಲಿದೆ,
ಯಾವುದೇ ವಿಶೇಷ ಮತ್ತು ಪ್ರಮುಖ ಕಾರ್ಯವನ್ನು ಪೂರ್ಣಗೊಳಿಸುವಲ್ಲಿ ವಿಫಲ. ಸ್ನೇಹಿತರ ಮೂಲಕ ಉದ್ಯೋಗ ಪಡೆಯುವ ಸಾಧ್ಯತೆಯಿದೆ. ನಿಮ್ಮ ಜೀವನ ಚಿಂತಾಜನಕ. ಹಣಕಾಸಿನ ದೀರ್ಘಕಾಲದವರೆಗೆ ಸಮಸ್ಯೆ ಎದುರಿಸಬೇಕಾದೀತು. ಸಾಲ ಸಿಲುಕಿರುವ ವಿಷಯವನ್ನು ಪರಿಹರಿಸುವುದರಿಂದ ಆರ್ಥಿಕವಾಗಿ ಬಲಶಾಲಿಯಾಗುತ್ತೀರಿ. ವಿವಾಹಿತರಿಗೆ ಒಳ್ಳೆಯದು. ನಿಮ್ಮಿಬ್ಬರ ನಡುವೆ ಮಾಧುರ್ಯ ಸರಸ ಸಲ್ಲಾಪ ಇರುತ್ತದೆ. ಪ್ರಣಯ ಜೀವನದಲ್ಲಿ ಕೆಲವು ಸಮಸ್ಯೆ. ಸಂಗಾತಿಯ ಬಗ್ಗೆ ನಿಮಗೆ ಅನುಮಾನ. ಅದು ನಿಮ್ಮ ನಡುವೆ ಸಮಸ್ಯೆಯನ್ನು ಉಂಟುಮಾಡುತ್ತದೆ. ಆರೋಗ್ಯದ ಬಗ್ಗೆ ಹೆಚ್ಚು ಚಿಂತೆ. ಕೆಲವು ಹಳೆಯ ಸ್ನೇಹಿತರನ್ನು ಭೇಟಿ ಮಾಡಬಹುದು.
- ಅದೃಷ್ಟ ಬಣ್ಣ: ಕೆಂಪು
- ಅದೃಷ್ಟ ಸಂಖ್ಯೆ:5, 6
- ಅದೃಷ್ಟ ದಿನ: ಗುರುವಾರ
ತುಲಾ ರಾಶಿ ಭವಿಷ್ಯ (Tula rashi bhavishya)
ಸ್ತ್ರೀ ರಾಜಕಾರಣಿಗಳಿಗೆ ಪ್ರಮುಖ ಹುದ್ದೆ ಅಲಂಕರಿಸಲಿದ್ದಾರೆ,ಮಾತಾ ಪಿತೃ ಕಡೆಯಿಂದ ಬರಬೇಕಾದ ಸ್ಥಿರ ಆಸ್ತಿ ಅಥವಾ ಹಣ ನಿಮ್ಮ ಕೈ ಸೇರುತ್ತದೆ, ವಧು-ವರ ಅನ್ವೇಷಣಾ ಕೇಂದ್ರ ನಡೆಸುತ್ತಿರುವವರಿಗೆ ಹಣದ ಜೊತೆಗೆ ಜನಪ್ರಿಯತೆಯು ಸಿಗಲಿದೆ, ಕೃಷಿಕರು ಬೆಳೆದ ಫಸಲಿಗೆ ಉತ್ತಮ ಬೆಲೆ ಸಿಗಲಿದೆ, ಕೃಷಿ ಚಟುವಟಿಕೆಗಳಲ್ಲಿ ಉತ್ಸಾಹ, ತೈಲ ಉತ್ಪನ್ನಗಳ ಮಾರಾಟಗಾರರಿಗೆ ಧನಲಾಭ ಹೆಚ್ಚಾಗಲಿದೆ,ಹಣಕಾಸಿನ ಸಮಸ್ಯೆ ನಿವಾರಣೆ. ಉದ್ಯಮ ಪ್ರಾರಂಭ ನಿರ್ಧಾರಗಳು ಬೇಕಾಗುತ್ತವೆ. ಇತರರ ಪ್ರಭಾವಕ್ಕೆ ಒಳಗಾಗಿ ಪಾಲುದಾರಿಕೆ ವ್ಯವಹಾರ ಬೇಡ.
ನಿಮ್ಮ ಸಾಮರ್ಥ್ಯ ಶಕ್ತಿಶಾಲಿ. ವ್ಯಾಪಾರಿಗಳು ಸ್ವಲ್ಪ ಜಾಗರೂಕರಾಗಿರಬೇಕು. ಯಾವುದೇ ತಪ್ಪು ನಿರ್ಧಾರವನ್ನು ಮಾಡಬೇಡಿ.ಇದರಿಂದ ನಷ್ಟದ ಸಾಧ್ಯತೆಯೂ ಇದೆ. ಉದ್ಯೋಗಿಗಳಿಗೆ ಈ ವಾರ ಉತ್ತಮವಾಗಿರುತ್ತದೆ. ನಿಮ್ಮ ಕೆಲಸವನ್ನು ಶ್ರದ್ಧೆಯಿಂದ ಮಾಡುತ್ತೀರಿ, ಆದರೆ ಕೊನೆಯ ದಿನಗಳು ನಿಮಗೆ ತುಂಬಾ ಕಾರ್ಯನಿರತವಾಗಿರುತ್ತವೆ. ಈ ಅವಧಿಯಲ್ಲಿ, ನೀವು ಏಕಕಾಲದಲ್ಲಿ ಅನೇಕ ಕಾರ್ಯಗಳನ್ನು ಮಾಡಬೇಕಾಗಬಹುದು. ಕೌಟುಂಬಿಕ ಜೀವನದಲ್ಲಿ ಸಂತೋಷ ಮತ್ತು ಶಾಂತಿ ಇರುತ್ತದೆ. ಹಣದ ಪರಿಸ್ಥಿತಿ ಚೆನ್ನಾಗಿರುವುದಿಲ್ಲ, ಆದಾಯಕ್ಕಿಂತ ಹೆಚ್ಚು ವೆಚ್ಚವಾಗಬಹುದು ಈ ಬಗ್ಗೆ ಗಮನವಿರಲಿ.
- ಅದೃಷ್ಟ ಬಣ್ಣ: ಬೂದು ಬಣ್ಣ
- ಅದೃಷ್ಟ ಸಂಖ್ಯೆ: 2
- ಅದೃಷ್ಟ ದಿನ: ಶುಕ್ರವಾರ
ವೃಶ್ಚಿಕ ರಾಶಿ ಭವಿಷ್ಯ (Vrishchika rashi bhavishya)
ರಾಜಕಾರಣಿಯ ಮಕ್ಕಳು ಮಾಡುವ ತಪ್ಪಿಗೆ ಕೆಟ್ಟ ಹೆಸರು ಬರುವ ಸಾಧ್ಯತೆ, ಸಂಗೀತ ನಾಟ್ಯ ಕಲಾವಿದರು ಅತ್ಯುನ್ನತ ಸ್ಥಾನ ಗಳಿಸುವರು, ಕಡಿಮೆ ಬಂಡವಾಳ ಹೂಡಿಕೆ ಮಾಡಿ ಹೆಚ್ಚಿನ ಲಾಭ ಗಳಿಸಿ, ಶಸ್ತ್ರಚಿಕಿತ್ಸೆ ರಿಗೆ ವಿಶೇಷ ಅವಕಾಶ ಬೇಡಿಕೆ ದೊರೆಯುತ್ತದೆ, ಉದ್ಯೋಗಿಗಳಿಗೆ ಬಡ್ತಿ, ವರ್ಗಾವಣೆ ಸಾಧ್ಯತೆ, ಹೊಸ ನಿವೇಶನ ಖರೀದಿ, ಗೃಹ ನಿರ್ಮಾಣ ಸಾಧ್ಯತೆ,ಕಂಪ್ಯೂಟರ್ಗೆ ಸಂಬಂಧಿಸಿದ ಯಾವುದೇ ಕೆಲಸವನ್ನು ಮಾಡಿದರೆ ಉತ್ತಮ ಪ್ರಯೋಜನಗಳನ್ನು ಪಡೆಯಬಹುದು.
ನೀವು ನಿಮ್ಮ ಆರೋಗ್ಯದ ಬಗ್ಗೆ ಹೆಚ್ಚು ಗಮನ ಹರಿಸುತ್ತೀರಿ. ಮಾನಸಿಕವಾಗಿ ಮತ್ತು ದೈಹಿಕವಾಗಿ ಉತ್ತಮವಾಗಿರುತ್ತೀರಿ ಆದರೆ ಎದೆನೋವಿನ ಮನೋರೋಗ ಕಾಡಲಿದೆ. ಯಾವುದೇ ದೀರ್ಘಕಾಲೀನ ಆರೋಗ್ಯದ ಸಮಸ್ಯೆ ಕಾಡಲಿದೆ. ಜಮೀನಿನ ಹಣಕಾಸಿನ ವ್ಯವಹಾರ ಪರಿಹರಿಸಲಾಗುವುದು ಅದು ನಿಮ್ಮ ಒತ್ತಡವನ್ನು ಕಡಿಮೆ ಮಾಡುತ್ತದೆ. ಕುಟುಂಬ ಜೀವನವು ಸಂತೋಷವಾಗಿರುತ್ತದೆ.ಕುಟುಂಬದೊಂದಿಗೆ ಬಹಳ ಮೋಜಿನ ಸಮಯವನ್ನು ಕಳೆಯುತ್ತೀರಿ. ಸಂಗಾತಿಯೊಂದಿಗಿನ ಸಂಬಂಧದಲ್ಲಿ ಸಾಮರಸ್ಯ ಇರುತ್ತದೆ. ಇಬ್ಬರೂ ಮಕ್ಕಳ ಬಗ್ಗೆ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು. ಆರ್ಥಿಕ ಪರಿಸ್ಥಿತಿ ಸಾಮಾನ್ಯಕ್ಕಿಂತ ಉತ್ತಮವಾಗಿರುತ್ತದೆ. ಕೊನೆಯ ದೀರ್ಘಕಾಲ ಪ್ರಯಾಣ ನಿಮ್ಮ ಆರೋಗ್ಯವನ್ನು ದುರ್ಬಲಗೊಳಿಸಬಹುದು.
- ಅದೃಷ್ಟ ಬಣ್ಣ: ಬಿಳುಪು
- ಅದೃಷ್ಟ ಸಂಖ್ಯೆ: 1,1
- ಅದೃಷ್ಟ ದಿನ: ಮಂಗಳವಾರ
ಧನಸ್ಸು ರಾಶಿ ಭವಿಷ್ಯ (Dhanu rashi bhavishya)
ನಿಮ್ಮ ತಂದೆ ಆಸ್ತಿಯಲ್ಲಿ ಸಿಂಹ ಪಾಲು ಸಿಗಲಿದೆ, ನೀರಿಗೆ ಸಂಬಂಧಿಸಿದ ವ್ಯಾಪಾರದಲ್ಲಿ ಭಾರಿ ಲಾಭವಿದೆ, ಸುಸಜ್ಜಿತ ಮನೆ ಖರೀದಿ ಆಸೆ ಹೀಡೆರುವುದು, ಹೋಟೆಲ್ ಹೊಂದಿದವರಿಗೆ ಲಾಭವಿದೆ, ನಿಮ್ಮ ಮಕ್ಕಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಗೆಲವು,ಅಧಿಕಾರಿಗಳಿಗೆ ಉನ್ನತ ಸ್ಥಾನ ಸಿಗಲಿದೆ,ನಿಂತ ಕಾರ್ಯಗಳು ಮರುಚಾಲನೆ, ಪತ್ನಿಯ ಆರೋಗ್ಯದಲ್ಲಿ ಚೇತರಿಕೆ, ವಿವಾಹ ಕಾರ್ಯ ಪ್ರಯತ್ನ ಯಶಸ್ಸು, ನಿರುದ್ಯೋಗಿಗಳಿಗೆ ಪರೀಕ್ಷೆ ಹಾಗೂ ಸಂದರ್ಶನದಲ್ಲಿ ಯಶಸ್ಸು, ಉದ್ಯೋಗದಲ್ಲಿ ಬಡ್ತಿ ಯೋಗ, ಕಿರಾಣಿ ಸ್ಟೇಷನರಿ ಮಾಲಕರಿಗೆ ಆರ್ಥಿಕ ಚೇತರಿಕೆ.
ಮಕ್ಕಳ ನೀಚ ಕಾರ್ಯಗಳಿಂದ ತೊಂದರೆ, ಮಾತಾಪಿತೃ ಆರೋಗ್ಯದಲ್ಲಿ ಕಿರಿಕಿರಿ ಸಂಭವ, ಸಹೋದರನಿಂದ ಸ್ವಲ್ಪ ಆಕಸ್ಮಿಕ ಧನಪ್ರಾಪ್ತಿ, ಕೋರ್ಟ್ ಕೇಸ್ ವಿಳಂಬ, ಹಳೆಯ ಸಾಲ ಮರುಪಾವತಿ ಸಾಧ್ಯತೆ, ಬೆಂಕಿ ಮತ್ತು ವಿದ್ಯುತ್ ಉಪಕರಣಗಳಿಂದ ಅವಗಡ ಸಂಭವ, ಹಳೆಯ ಚಿಂತೆ ಕಾಡುತ್ತಿದೆ, ಸೋದರ ಮಾವನಿಂದ ಧನಸಹಾಯ, ನಂಬಿದ ಸ್ತ್ರೀ-ಪುರುಷ ರಿಂದ ಮನಸ್ತಾಪ.
- ಅದೃಷ್ಟ ಬಣ್ಣ: ಬಿಳುಪು
- ಅದೃಷ್ಟ ಸಂಖ್ಯೆ: 4, 5
- ಅದೃಷ್ಟ ದಿನ: ಗುರುವಾರ
ಮಕರ ರಾಶಿ ಭವಿಷ್ಯ (Makara rashi bhavishya)
ಹಣಕಾಸಿನ ತೊಂದರೆ ಕಾಣಲಿದೆ, ವಿದೇಶ ಪ್ರಯಾಣ ಅಡಚಣೆ, ಬ್ರೋಕರ್ಸ್ ದಂದೆ ಹೊಂದಿದವರಿಗೆ ಅನಿರೀಕ್ಷಿತ ಧನ ಲಾಭವಿದೆ, ಸರಕಾರಿ ನೌಕರರು ಮರಳಿ ಉದ್ಯೋಗ ಪಡೆಯುವಿರಿ,ದಿನಸಿ ವ್ಯಾಪಾರಸ್ಥರಿಗೆ ಆರ್ಥಿಕ ಸಂಕಷ್ಟ, ರಕ್ಷಣಾ ಇಲಾಖೆ ಹೊಂದಿದವರಿಗೆ ಉನ್ನತ ಸ್ಥಾನ, ಸ್ವಂತ ವಾಣಿಜ್ಯ ಸಂಕೀರ್ಣ ನಿರ್ಮಾಣ ಚಿಂತನೆ, ರಾಸಾಯನಿಕ ವಸ್ತುಗಳ ರಫ್ತು ವ್ಯಾಪಾರಿಗಳಿಂದ ಅಧಿಕ ವರಮಾನ ದೊರಕಲಿದೆ, ಗೃಹ ನಿರ್ಮಾಣ ಕೆಲಸಗಳು ಶೀಘ್ರಗತಿಯಲ್ಲಿ ಸಾಗುವವು, ಮದುವೆ ನಿಶ್ಚಿತಾರ್ಥ ಸಂಭವ,ಸಂಗಾತಿಯ ಸಹಕಾರದಿಂದ ಜೀವನದಲ್ಲಿ ದೊಡ್ಡ ಬದಲಾವಣೆಯಾಗಬಹುದು.
ಆರಂಭದಲ್ಲಿ ನಿಮಗೆ ಸ್ವಲ್ಪ ಗರಂ ಇರುತ್ತದೆ.ನಿಧಾನವಾಗಿ ವಿಷಯಗಳನ್ನು ಸಾಮಾನ್ಯ ಸ್ಥಿತಿಗೆ ತರಬಹುದು. ಪ್ರತಿಯೊಂದು ನಿರ್ಧಾರವನ್ನು ಎಚ್ಚರಿಕೆಯಿಂದ ತೆಗೆದುಕೊಳ್ಳುವುದರಲ್ಲಿ ನೀವು ನಂಬಿದ್ದೀರಿ, ಆದರೆ ನಿಮ್ಮ ಮುಂದೆ ಒಂದು ಪರಿಸ್ಥಿತಿ ಉದ್ಭವಿಸಬಹುದು, ಅಲ್ಲಿ ನೀವು ತಕ್ಷಣ ನಿರ್ಧಾರ ತೆಗೆದುಕೊಳ್ಳಬೇಕು. ನೀವು ಗೊಂದಲದ ಸ್ಥಿತಿಯಲ್ಲಿದ್ದರೆ ಆಪ್ತರ ಸಲಹೆ ಪಡೆಯಲು ಹಿಂಜರಿಯಬೇಡಿ. ಕೆಲಸದ ಸ್ಥಳದಲ್ಲಿ ಸಹೋದ್ಯೋಗಿಗಳೊಂದಿಗೆ ನಿಮ್ಮ ನಡವಳಿಕೆಯನ್ನು ಸರಿಯಾಗಿ ಇಟ್ಟುಕೊಳ್ಳಿ. ಆರ್ಥಿಕ ದೃಷ್ಟಿಯಿಂದ ಈ ವಾರ ಪ್ರಯೋಜನಕಾರಿಯಾಗಲಿದೆ. ಹಳೆಯ ಹೂಡಿಕೆಗಳು ಬೇಡ. ವೈವಾಹಿಕ ಜೀವನದಲ್ಲಿ ಪ್ರೀತಿ ಮತ್ತು ಶಾಂತಿ ಕಾಪಾಡಿಕೊಳ್ಳಲು ಬಯಸಿದರೆ ನಡವಳಿಕೆ ಮತ್ತು ಮಾತುಗಳ ಬಗ್ಗೆ ಗಮನಹರಿಸಬೇಕು. ಆರೋಗ್ಯವಾಗಿರಲು ನಿಮ್ಮ ತೂಕವನ್ನು ನಿಯಂತ್ರಿಸಬೇಕು.
- ಅದೃಷ್ಟ ಬಣ್ಣ: ಹಳದಿ
- ಅದೃಷ್ಟ ಸಂಖ್ಯೆ: 3,4
- ಅದೃಷ್ಟ ದಿನ: ಗುರುವಾರ
ಕುಂಭ ರಾಶಿ ಭವಿಷ್ಯ (Kumba rashi bhavishya)
ವಕೀಲರಿಗೆ ಆದಾಯದ ಜೊತೆಗೆ ಕೀರ್ತಿ ಪ್ರತಿಷ್ಠೆ ದೊರೆಯುತ್ತದೆ, ಸರ್ಕಾರಿ ಉದ್ಯೋಗಿಗಳು ಅಧಿಕಾರ ಸ್ಥಾನ ಪಡೆಯುತ್ತಾರೆ, ಆಗಾಗ ಕುಟುಂಬದಲ್ಲಿ ಆರೋಗ್ಯದಿಂದ ಅಶಾಂತಿ, ಮಿತ್ರರು ಶತ್ರುಗಳಾಗುವರು, ಸಂಗಾತಿಯೊಂದಿಗೆ ಕಲಹ, ಅನಿರೀಕ್ಷಿತ ಧನ ಹಾನಿ ಹಾಗೂ ಮಾನಹಾನಿ, ನಿಮ್ಮ ಮಕ್ಕಳಿಗೆ ದುಷ್ಟ ಜನರ ಸಹವಾಸ ಇರುವುದು,ಕೈಗೊಂಡ ಕೆಲಸ ಕಾರ್ಯಗಳು ಸಫಲ, ಹಿರಿಯರ ಪ್ರಶಂಸೆಗೆ ಪಾತ್ರರಾಗುವಿರಿ, ನವ ದಂಪತಿಗಳಿಗೆ ಸಂತಾನಭಾಗ್ಯ, ವಿದೇಶ ಪ್ರವಾಸ ಸಾಧ್ಯತೆ, ಜನಪ್ರತಿನಿಧಿಗಳಿಗೆ ಖುಷಿ ಸಂದೇಶ,
ಕೆಲಸದ ಸ್ಥಳದಲ್ಲಿ ನೀವು ತುಂಬಾ ಶಾಂತ ಮತ್ತು ಸಮತೋಲನದಲ್ಲಿರಬೇಕು.
ಕಚೇರಿಯಲ್ಲಿ ಕೆಲಸದ ಒತ್ತಡ ಹೆಚ್ಚಿರಬಹುದು. ನೀವು ತಂಡವಾಗಿ ಕೆಲಸ ಮಾಡಿದರೆ ಕೆಲಸ ಶೀಘ್ರದಲ್ಲೇ ಪೂರ್ಣಗೊಳ್ಳುತ್ತದೆ. ಅಲ್ಲದೆ, ಉನ್ನತ ಅಧಿಕಾರಿಯ ಮುಂದೆ ಒಳ್ಳೆಯ ಪ್ರಶಂಸೆ ಇರುತ್ತದೆ. ಇದು ಭವಿಷ್ಯಕ್ಕೆ ಬಹಳ ಪ್ರಯೋಜನಕಾರಿಯಾಗಿದೆ. ಇದರಿಂದ ಬಡ್ತಿ ಭಾಗ್ಯ ಲಭಿಸಲಿದೆ.ಖಾಸಗಿ ಶಿಕ್ಷಕರಿಗೆ ಜೀವನದಲ್ಲಿ, ಬಹಳಷ್ಟು ತೊಂದರೆಗಳು ಉಂಟಾಗಬಹುದು. ನಿಮ್ಮ ಜೀವನವನ್ನು ಬದಲಾಯಿಸುವಂತಹ ನಿರ್ಧಾರವನ್ನು ನೀವು ತೆಗೆದುಕೊಳ್ಳಬೇಕಾಗಬಹುದು. ಈ ಅವಧಿಯಲ್ಲಿ, ನೀವು ನಿಮ್ಮ ಪತ್ನಿಯ ಹೆಚ್ಚಿನ ಬೆಂಬಲವನ್ನು ಪಡೆಯುವ ಸಾಧ್ಯತೆ. ಮಕ್ಕಳು ಆಸ್ತಿ ವಿಚಾರಕ್ಕಾಗಿ ನಿಮ್ಮ ಬಗ್ಗೆ ಅತೃಪ್ತರಾಗುತ್ತಾರೆ. ವಿರೋಧಿಗಳು ಅಥವಾ ಸ್ನೇಹಿತ ನಿಧಾನವಾಗಿ ನಿಮ್ಮ ಪರವಾಗಿ ಬರಲಿದ್ದಾರೆ. ಆರೋಗ್ಯದ ದೃಷ್ಟಿಯಿಂದ ಏರಿಳಿತ ತುಂಬಿರುತ್ತದೆ. ಅತಿಯಾದ ಆತಂಕವು ನಿಮ್ಮ ಆರೋಗ್ಯವನ್ನು ಇನ್ನಷ್ಟು ಹದಗೆಡಿಸುತ್ತದೆ.
- ಅದೃಷ್ಟ ಬಣ್ಣ: ಕೆಂಪು
- ಅದೃಷ್ಟ ಸಂಖ್ಯೆ: 2,6
- ಅದೃಷ್ಟ ದಿನ: ಗುರುವಾರ
ಮೀನ ರಾಶಿ ಭವಿಷ್ಯ (Meena rashi bhavishya)
ನಿಮ್ಮ ಮಕ್ಕಳಿಗೆ ದುಷ್ಟ ಜನರ ಸಹವಾಸ ಬಿಡುವುದು ಹೇಗೆ? ಪಾಲುದಾರಿಕೆ ವ್ಯಾಪಾರ ಹಾಗೂ ವ್ಯವಹಾರ ಬೇಡ, ನಿಮಗೆ ವಿರೋಧಿಗಳ ಸಂಖ್ಯೆನೇ ಹೆಚ್ಚು, ಮಕ್ಕಳು ದೊಡ್ಡ ಸಂಸ್ಥೆಯಲ್ಲಿ ಉದ್ಯೋಗ ಪಡೆಯುತ್ತಾರೆ, ನಿಮ್ಮ ಪತ್ನಿ ಕಡೆಯಿಂದ ಧನ ಲಾಭವಿದೆ, ವಕೀಲರಿಗೆ ಉನ್ನತ ಸ್ಥಾನ ಲಭ್ಯ, ರಾಜಕಾರಣಿಗಳು ಸ್ಥಾನಮಾನ ಉಳಿಸಿಕೊಳ್ಳುತ್ತಾರೆ, ಸರಕಾರದಡಿ ಮಾಡುವ ಗುತ್ತಿಗೆ ಕೆಲಸದಲ್ಲಿ ಧನ ಲಾಭವಿದೆ, ಅಲ್ಲಿ ವಿರೋಧಗಳ ಸಂಖ್ಯೆ ಹೆಚ್ಚು ನಿಯಂತ್ರಣ ಮಾಡುವುದು ಹೇಗೆ? ಹಣಕಾಸಿನ ತೊಂದರೆ ಸಾಧ್ಯತೆ, ನೀವು ಬಯಸಿದ ಸ್ವಂತ ಉದ್ಯಮ ಪ್ರಾರಂಭಿಸಲು ಸಕಾಲವಲ್ಲ, ನಿವೇಶನ ಖರೀದಿ, ಗೃಹ ನಿರ್ಮಾಣ ಅಡತಡೆ ಸಂಭವ, ಮದುವೆ ಅತಂತ್ರ ಸ್ಥಿತಿ, ಆರ್ಥಿಕ ದೃಷ್ಟಿಯಿಂದ ನಿಮಗೆ ತುಂಬಾ ತಲೆನೋವು. ಕಠಿಣ ಪರಿಶ್ರಮದ ನಂತರವೂ ಪಡೆದ ಹಣವು ನಿರೀಕ್ಷೆಯಂತೆ ಸಿಗುವುದಿಲ್ಲ.
ಹಣಕಾಸಿನ ವಿಷಯಗಳಲ್ಲಿ ನೀವು ಸ್ವಲ್ಪ ಗಮನ ಹರಿಸಬೇಕು. ಕೆಲಸದ ಸ್ಥಳದಲ್ಲಿ ಯಶಸ್ಸನ್ನು ನಿರೀಕ್ಷಿಸಲಾಗುತ್ತಿದೆ. ನಿಮ್ಮ ಕಠಿಣ ಪರಿಶ್ರಮವನ್ನು ಪ್ರಶಂಸಿಸಲಾಗುತ್ತದೆ ಮತ್ತು ನೀವು ಯಶಸ್ಸನ್ನು ಪಡೆಯುತ್ತೀರಿ. ಹಿರಿಯರು ಮತ್ತು ಸಹೋದ್ಯೋಗಿಗಳೊಂದಿಗಿನ ನಿಮ್ಮ ಸಂವಹನವೂ ಉತ್ತಮವಾಗಿರುತ್ತದೆ, ಅದು ನಿಮಗೆ ಸಾಕಷ್ಟು ಪ್ರಯೋಜನಗಳನ್ನು ನೀಡುತ್ತದೆ. ವೈವಾಹಿಕ ಜೀವನ ಉತ್ತಮವಾಗಿರುತ್ತದೆ. ಸಂಗಾತಿಯೊಂದಿಗೆ ಸ್ವಲ್ಪ ಮೋಜಿನ ಸಮಯವನ್ನು ಕಳೆಯುವುದರ ಮೂಲಕ ನೀವು ಉಲ್ಲಾಸವನ್ನು ಅನುಭವಿಸುವಿರಿ. ಪ್ರೀತಿಯ ವಿಷಯದಲ್ಲಿ ಈ ವಾರ ನೀವು ಉತ್ತಮ ಫಲಿತಾಂಶಗಳನ್ನು ಪಡೆಯಬಹುದು. ಆದರೂ, ಪ್ರೀತಿಯ ಜೀವನಕ್ಕೆ ಸಂಬಂಧಿಸಿದಂತೆ ಬಹಳ ಎಚ್ಚರಿಕೆಯಿಂದ ನಿರ್ಧಾರ ತೆಗೆದುಕೊಳ್ಳಬೇಕು.
- ಅದೃಷ್ಟ ಬಣ್ಣ: ಹಳದಿ
- ಅದೃಷ್ಟ ಸಂಖ್ಯೆ: 8,9
- ಅದೃಷ್ಟ ದಿನ: ಸೋಮವಾರ
ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಅತ್ತೆ-ಸೊಸೆ ಜಗಳ, ಸಂತಾನ ಭಾಗ್ಯ, ಸಾಲ ಬಾಧೆ, ಶತ್ರುಗಳಿಂದ ತೊಂದರೆ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಜನ್ಮ ರಾಶಿ ನಕ್ಷತ್ರಗಳ ಮೇಲೆ ವ್ಯಾಪಾರ, ರಾಶಿಗಳಿಗೆ ಅನುಗುಣವಾಗಿ ಜನ್ಮರಾಶಿ ಹರಳು, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು.
ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
“ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು”
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403