Lawyer Jagadish : ಜಗಳಗಳಿಂದಲೇ ಸುದ್ದಿಯಾದ ಲಾಯರ್ ಜಗದೀಶ್ ಕೊನೆಗೂ ಬಿಗ್ಬಾಸ್ ಸೀಸಸ್ 11ರ ಮನೆಯಿಂದ ಹೊರಕ್ಕೆ ಬಿದ್ದಿದ್ದಾರೆ. ಲಾಯರ್ ಜಗದೀಶ್ ಬಿಗ್ಬಾಸ್ನಿಂದ ಔಟ್ ಆಗಿದ್ದು ಹೌದೋ ಅಥವಾ ಇಲ್ಲವೋ ಎನ್ನುವ ಕುತೂಹಲ ಅಭಿಮಾನಿಗಳಿಗೆ ಇತ್ತು. ಇದಕ್ಕೆ ಉತ್ತರ ಸಿಕ್ಕಿದೆ. ಅವರು ದೊಡ್ಮನೆಯಿಂದ ಹೊರ ಬಂದಿದ್ದು ಖಚಿತವಾಗಿದೆ.
ಬಿಗ್ಬಾಸ್ನಿಂದಾಗಿ ಜಗದೀಶ್ ಅವರಿಗೆ ಕೆಲ ಅಭಿಮಾನಿಗಳೂ ಹುಟ್ಟಿಕೊಂಡಿದ್ದು, ‘ಜಗ್ಗುದಾದಾ’, ‘ಸಿಂಗಲ್ ಸಿಂಹ’ ಎಂದೆಲ್ಲಾ ಹೊಗಳುತ್ತಿದ್ದಾರೆ. ಪ್ರತಿಸ್ಪರ್ಧಿಗಳ ಜೊತೆ ಲಾಯರ್ ಜಗಳ ಮಾಡಿಕೊಂಡಿದ್ದರು. ಬಿಗ್ಬಾಸ್ನಲ್ಲಿ ಮಾರಾಮಾರಿ ಆಗಿತ್ತು. ಈ ಕುರಿತು ಮಾಹಿತಿ ಹಂಚಿಕೊಂಡಿರುವ ಜಗ್ಗು, ವೀಕ್ಷಕರಿಗೆ ಧನ್ಯವಾದ ತಿಳಿಸಿದ್ದಾರೆ. ನಿಮ್ಮ ಪ್ರೀತಿಯಿಂದ ಸಾರ್ಥಕವಾಯಿತು ಎಂದಿದ್ದಾರೆ.
ಇದನ್ನೂ ಓದಿ: 80 ಸಾವಿರ ಗಡಿಯತ್ತ ಚಿನ್ನದ ಬೆಲೆ; ಇಂದಿನ ಚಿನ್ನ-ಬೆಳ್ಳಿಯ ಬೆಲೆ ಎಷ್ಟು..?
ಕ್ಷಮೆ ಕೇಳಿದ ಲಾಯರ್ ಜಗದೀಶ್
ಬಿಗ್ಬಾಸ್ನಲ್ಲಿ ಮಾರಾಮಾರಿ ನಡೆಸಿ ಹೊರಗೆ ಬಂದಿರುವ ಲಾಯರ್ ಜಗದೀಶ್ ಪ್ರತಿಕ್ರಿಯಿಸಿದ್ದಾರೆ. ‘ನೂರಾರು ಕ್ಯಾಮೆರಾ, ಸಾವಿರಾರು ಬಿಗ್ಬಾಸ್ ಸಿಬ್ಬಂದಿ, ಆ ನಿರ್ದೇಶಕ, ಆ ಮಾಂತ್ರಿಕ ತಂತ್ರಜ್ಞರು, ಅವರ 24/7 ಡೆಡಿಕೇಷನ್ & 20 ಕೋಟಿಗೂ ಹೆಚ್ಚಿನ ಬಿಗ್ಬಾಸ್ ಅಭಿಮಾನಿ ದೇವರುಗಳ ಆಶೀರ್ವಾದ ಈ ಹೊಸ ಕರ್ನಾಟಕ ಕ್ರಶ್ ಲಾಯರ್ ಜಗದೀಶ್ ಆಗಿದ್ದಾನೆ’ ಎಂದಿದ್ದಾರೆ. ‘ನನ್ನ ಹೀರೋ ಸುದೀಪ್, ಕ್ಷಮೆಯನ್ನು ದಯವಿಟ್ಟು ಸ್ವೀಕರಿಸಿ. ರಂಜಿತ್, ಮಾನಸ ಮತ್ತು ಎಲ್ಲರೂ ನನ್ನನ್ನು ಕ್ಷಮಿಸಿ’ ಎಂದಿದ್ದಾರೆ.
ಲಾಯರ್ ಜಗದೀಶ್ ಬಿಗ್ಬಾಸ್ ಮನೆಗೆ ಹೋದಾಗಿನಿಂದಲೂ ಒಂದರ ಹಿಂದೊಂದರಂತೆ ನಿಯಮಗಳನ್ನು ಮುರಿಯುತ್ತಾ ಸ್ಪರ್ಧಿಗಳ ಮೇಲೆ ಜಗಳವಾಡುತ್ತಾ, ಏಕ ವಚನದಲ್ಲಿ ಮಾತನಾಡುತ್ತಾ ಮನೆಯವರ ಸಿಟ್ಟಿಗೆ ಗುರಿಯಾಗಿದ್ದರು.