Fishermans Death: ಮೀನುಗಾರಿಕೆಗೆ ತೆರಳಿದ್ದ ಯುವಕ ಮರಳಿದ್ದು ಶವವಾಗಿ!

ಕಾರವಾರ: ಮೀನುಗಾರಿಕೆಗೆ ತೆರಳಿದ್ದ ವೇಳೆ ನೀರಲ್ಲಿ ಕಣ್ಮರೆಯಾಗಿದ್ದ ಮೀನುಗಾರ ಶವವಾಗಿ ಪತ್ತೆಯಾದ ಘಟನೆ ಕಾರವಾರದ ಲೇಡೀಸ್ ಬೀಚ್‌ನಲ್ಲಿ ನಡೆದಿದೆ. ಗಜಾನನ ಗೌಡ ಮೀನುಗಾರಿಕೆಗೆ ತೆರಳಿದ್ದ ವೇಳೆ ನಾಪತ್ತೆಯಾಗಿ ಮೃತಪಟ್ಟ ಮೀನುಗಾರನಾಗಿದ್ದಾನೆ. ಶುಕ್ರವಾರ ಗಜಾನನ ತಮ್ಮ…

ಕಾರವಾರ: ಮೀನುಗಾರಿಕೆಗೆ ತೆರಳಿದ್ದ ವೇಳೆ ನೀರಲ್ಲಿ ಕಣ್ಮರೆಯಾಗಿದ್ದ ಮೀನುಗಾರ ಶವವಾಗಿ ಪತ್ತೆಯಾದ ಘಟನೆ ಕಾರವಾರದ ಲೇಡೀಸ್ ಬೀಚ್‌ನಲ್ಲಿ ನಡೆದಿದೆ. ಗಜಾನನ ಗೌಡ ಮೀನುಗಾರಿಕೆಗೆ ತೆರಳಿದ್ದ ವೇಳೆ ನಾಪತ್ತೆಯಾಗಿ ಮೃತಪಟ್ಟ ಮೀನುಗಾರನಾಗಿದ್ದಾನೆ.

ಶುಕ್ರವಾರ ಗಜಾನನ ತಮ್ಮ ಬೋಟು ತೆಗೆದುಕೊಂಡು ಬೈತಕೋಲದಿಂದ ಮೀನುಗಾರಿಕೆಗೆ ತೆರಳಿದ್ದ. ಸಂಜೆಯಾದರೂ ಗಜಾನನ ಮನೆಗೆ ವಾಪಸ್ಸಾಗದಿದ್ದಾಗ ಕುಟುಂಬಸ್ಥರು ಆತಂಕಗೊಂಡು ಎಲ್ಲೆಡೆ ಹುಟುಕಾಟ ನಡೆಸಿದ್ದರು. ಆದರೂ ಸಹ ಆತನ‌‌ ಸುಳಿವು ಸಿಕ್ಕಿಲ್ಲವಾಗಿದ್ದು, ಪೊಲೀಸರು ಹಾಗೂ ಕರಾವಳಿ ಕಾವಲುಪಡೆ ಪೊಲೀಸರಿಗೆ ಹುಡುಕಿಕೊಡುವಂತೆ ಮನವಿ ಮಾಡಿದ್ದರು.

ಶನಿವಾರ ಕರಾವಳಿ ಕಾವಲುಪಡೆ ಹಾಗೂ ಪೊಲೀಸದು ಹುಟುಕಾಟ ನಡೆಸಿದ್ದು, ಈ ವೇಳೆ ಗಜಾನನ ಅವರ ಮೃತದೇಹ ಲೇಡೀಸ್ ಬೀಚ್‌ನಲ್ಲಿ ಪತ್ತೆಯಾಗಿದೆ. ಈ ಬಗ್ಗೆ ಕಾರವಾರ ನಗರ ಠಾಣೆಯಲ್ಲಿ ನಾಪತ್ತೆ ದೂರು ದಾಖಲಾಗಿದ್ದು, ಕುಟುಂಬಸ್ಥರಿಗೆ ಮೃತದೇಹವನ್ನು ಹಸ್ತಾಂತರಿಸಲಾಗಿದೆ.

Vijayaprabha Mobile App free
WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.