ಬೆಂಗಳೂರು: ಚಲನಚಿತ್ರ ಪ್ರದರ್ಶನವನ್ನು ವಿಳಂಬಗೊಳಿಸಿದ್ದಕ್ಕಾಗಿ ಚಲನಚಿತ್ರ ವೀಕ್ಷಕರಿಗೆ ವಿಸ್ತೃತ ಜಾಹೀರಾತುಗಳೊಂದಿಗೆ ಪರಿಹಾರ ನೀಡುವಂತೆ ಪಿವಿಆರ್ ಸಿನೆಮಾಕ್ಕೆ ನಿರ್ದೇಶನ ನೀಡಿದ ಗ್ರಾಹಕ ನ್ಯಾಯಾಲಯದ ಆದೇಶವನ್ನು ಕರ್ನಾಟಕ ಹೈಕೋರ್ಟ್ ಮಂಗಳವಾರ ತಡೆಹಿಡಿದಿದೆ.
ಬೆಂಗಳೂರಿನ ಗ್ರಾಹಕ ಅಭಿಷೇಕ್ ಎಂಆರ್, ಡಿಸೆಂಬರ್ 26,2023 ರಂದು ಸ್ಯಾಮ್ ಬಹದ್ದೂರ್ ಚಿತ್ರದ ಪ್ರದರ್ಶನ ವಿಳಂಬಕ್ಕಾಗಿ ಪಿವಿಆರ್ ಸಿನಿಮಾಸ್ ಮತ್ತು ಐನಾಕ್ಸ್ (ಈಗ ಪಿವಿಆರ್ ಜೊತೆ ವಿಲೀನಗೊಂಡಿದೆ) ವಿರುದ್ಧ ಪ್ರಕರಣ ದಾಖಲಿಸಿದ್ದರು.
ಪ್ರಕರಣವನ್ನು ಆಲಿಸಿದ ನಂತರ, ಬೆಂಗಳೂರು ಜಿಲ್ಲಾ ಗ್ರಾಹಕ ವಿವಾದ ಪರಿಹಾರ ಆಯೋಗವು ಪಿವಿಆರ್ ಐನಾಕ್ಸ್ಗೆ ಟಿಕೆಟ್ಗಳಲ್ಲಿ ಚಲನಚಿತ್ರದ ನೈಜ ಸಮಯವನ್ನು ಪ್ರದರ್ಶಿಸಬೇಕು. ಸಭಾಂಗಣಗಳಲ್ಲಿ ಜಾಹೀರಾತುಗಳು ಪ್ರಾರಂಭಿಸುವ ಸಮಯವನ್ನಲ್ಲ ಎಂದು ನಿರ್ದೇಶಿಸಿತ್ತು.
ಜಿಲ್ಲಾ ಗ್ರಾಹಕ ವೇದಿಕೆಯು ಪಿವಿಆರ್ ಮತ್ತು ಐನಾಕ್ಸ್ “ಚಲನಚಿತ್ರವನ್ನು ಪ್ರದರ್ಶಿಸುವ ಸಮಯದ ಅವಧಿಯಲ್ಲಿ ದೀರ್ಘ ವಾಣಿಜ್ಯ ಜಾಹೀರಾತುಗಳನ್ನು ತೋರಿಸುವ ಮೂಲಕ ಚಲನಚಿತ್ರ ಪ್ರೇಕ್ಷಕರ ಸಮಯವನ್ನು ವ್ಯರ್ಥ ಮಾಡುವ ಮತ್ತು ಈ ರೀತಿ ಅನ್ಯಾಯದ ಅಭ್ಯಾಸದಲ್ಲಿ ತೊಡಗುವಂತಿಲ್ಲ” ಎಂದು ಹೇಳಿದೆ.