ಅಂತರ್ಜಾತಿ ವಿವಾಹ: ಮಗಳು-ಅಳಿಯನಿಗೆ ಚಾಕು ಹಾಕಿ ಆತ್ಮಹತ್ಯೆ ಯತ್ನಿಸಿದ ಮಾವ!

ಶಿರಸಿ: ಶಿವರಾತ್ರಿ ದಿನವೇ ಮಾವ ತನ್ನ  ಮಗಳಿಗೆ ಹಾಗೂ ಅಳಿಯನಿಗೆ ಚಾಕು ಇರಿದ ಘಟನೆ ಉತ್ತರಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಬದನಗೋಡ ಪಂಚಾಯಿತಿ ವ್ಯಾಪ್ತಿಯ ರಂಗಾಪುರದಲ್ಲಿ ನಡೆದಿದೆ. ಮಾವ ಶಂಕರ ಕಮ್ಮಾರ ಹಲ್ಲೆ ನಡೆಸಿದ…

ಶಿರಸಿ: ಶಿವರಾತ್ರಿ ದಿನವೇ ಮಾವ ತನ್ನ  ಮಗಳಿಗೆ ಹಾಗೂ ಅಳಿಯನಿಗೆ ಚಾಕು ಇರಿದ ಘಟನೆ ಉತ್ತರಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಬದನಗೋಡ ಪಂಚಾಯಿತಿ ವ್ಯಾಪ್ತಿಯ ರಂಗಾಪುರದಲ್ಲಿ ನಡೆದಿದೆ.

ಮಾವ ಶಂಕರ ಕಮ್ಮಾರ ಹಲ್ಲೆ ನಡೆಸಿದ ಆರೋಪಿಯಾದರೆ, ಅಳಿಯ ಮನೋಜ ಕಮಾಟಿ ಹಾಗೂ ಮಗಳು ಕವನ ಹಲ್ಲೆಗೊಳಗಾಗಿದ್ದಾರೆ.

ಅಂತರ್ಜಾತಿ ವಿವಾಹವೇ ಈ ಘಟನೆಗೆ ಕಾರಣವೆಂದು ತಿಳಿದು ಬಂದಿದ್ದು ಹಲ್ಲೆ ನಡೆಸಿದ ಮಾವ ತಾನೂ ಕೂಡಾ ಹಲ್ಲೆ ನಡೆಸಿದ ಬಳಿಕ ವಿಷ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಪಟ್ಟು ಅಳಿಯ ಮಗಳೊಂದಿಗೆ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದಾನೆ‌. ಹೆಚ್ಚಿನ ಮಾಹಿತಿ ತಿಳಿದು ಬಂದಿಲ್ಲ.

Vijayaprabha Mobile App free

ಡಿವೈಎಸ್ಪಿ ಗಣೇಶ ಕೆ ಎಲ್ ಮಾರ್ಗದರ್ಶನದಲ್ಲಿ ಸಿಪಿಐ ಶಶಿಕಾಂತ ವರ್ಮಾ ಆಸ್ಪತ್ರೆಗೆ ಭೇಟಿ ನೀಡಿ ತನಿಖೆ ಕೈಗೊಂಡಿದ್ದಾರೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.