ಹೊಸಪೇಟೆ(ವಿಜಯನಗರ)ಆ.30: ವಿಜಯನಗರ ಜಿಲ್ಲೆಯಾದ್ಯಂತ ಶ್ರೀ ಗಣೇಶ ಹಬ್ಬವನ್ನು ಜಿಲ್ಲೆಯಾದ್ಯಂತ ಶಾಂತಿಯುತವಾಗಿ ಆಚರಿಸುವ ನಿಟ್ಟಿನಲ್ಲಿ ಹಾಗೂ ಗಣೇಶ ಮೂರ್ತಿಗಳ ವಿಸರ್ಜನೆಯ ಮೆರವಣಿಗೆ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಮುಂಜಾಗ್ರತ ಕ್ರಮವಾಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ನೆರವೇರಿಸುವ ದೃಷ್ಟಿಯಿಂದ ಜಿಲ್ಲೆಯಾದ್ಯಂತ ಆ.31ರಿಂದ ಸೆ.10ರವರೆಗೆ ಜಿಲ್ಲೆಯ ವಿವಿಧೆಡೆ ಅನ್ವಯವಾಗುವಂತೆ ಮದ್ಯಪಾನ ಮಾರಾಟ ಮತ್ತು ಸಾಗಾಣಿಕೆ ಮಾಡದಂತೆ ಹಾಗೂ ಮದ್ಯದ ಅಂಗಡಿಗಳನ್ನು ಮುಚ್ಚುವಂತೆ ನಿಷೇಧಾಜ್ಞೆ ಜಾರಿಗೊಳಿಸಿ ವಿಜಯನಗರ ಜಿಲ್ಲಾಧಿಕಾರಿಗಳು ಆಗಿರುವ ಜಿಲ್ಲಾ ದಂಡಾಧಿಕಾರಿಗಳಾದ ಅನಿರುದ್ದ್ ಶ್ರವಣ್.ಪಿ ಅವರು ಆದೇಶ ಹೊರಡಿಸಿದ್ದಾರೆ.
ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಕಾನೂನು ಸುವ್ಯವಸ್ಥೆ ಹಾಗೂ ಶಾಂತಿ ಪಾಲನೆಗಾಗಿ ಮತ್ತು ಸಾರ್ವಜನಿಕರ ಹಿತಾಸಕ್ತಿ ಕಾಪಾಡುವ ಹಿತದೃಷ್ಟಿಯಿಂದ ವಿಜಯನಗರ ಜಿಲ್ಲೆಯ ಹೊಸಪೇಟೆ ಉಪವಿಭಾಗದಲ್ಲಿ ಸೆ.02ರಂದು ಬೆಳಿಗ್ಗೆ 6ರಿಂದ ಸೆ.03ರ ಬೆಳಿಗ್ಗೆ 6ರವರೆಗೆ. ಸೆ.04ರಂದು ಬೆಳಿಗ್ಗೆ 6ರಿಂದ ಸೆ.05ರ ಬೆಳಿಗ್ಗೆ 6ರವರೆಗೆ.
ಕೂಡ್ಲಿಗಿ ಉಪವಿಭಾಗ (ಕೂಡ್ಲಿಗಿ, ಕೊಟ್ಟೂರು, ಹಗರಿಬೊಮ್ಮನಹಳ್ಳಿ ತಾಲೂಕುಗಳು): ಆ.31ರಂದು ಬೆ.6ರಿಂದ ಸೆ.01ರ ಬೆಳಗ್ಗೆ 6ರವರೆಗೆ.ಸೆ.02ರಂದು ಬೆಳಿಗ್ಗೆ 6ರಿಂದ ಸೆ.03ರ ಬೆಳಗ್ಗೆ 6ರವರೆಗೆ. ಸೆ.04ರಂದು ಬೆಳಿಗ್ಗೆ 6ರಿಂದ ಸೆ.05ರ ಬೆಳಿಗ್ಗೆ 6ರವರೆಗೆ. ಹಗರಿಬೊಮ್ಮನಹಳ್ಳಿ ತಾಲೂಕು ವ್ಯಾಪ್ತಿಯಲ್ಲಿ ಸೆ.08ರಂದು ಬೆಳಿಗ್ಗೆ 6ರಿಂದ ಸೆ.09ರ ಬೆಳಿಗ್ಗೆ6ರವರೆಗೆ.
ಹರಪನಹಳ್ಳಿ ಉಪವಿಭಾಗ (ಹರಪನಹಳ್ಳಿ,ಹೂವಿನಹಡಗಲಿ) ಸೆ.02ರಂದು ಬೆಳಿಗ್ಗೆ 6ರಿಂದ ಸೆ.03ರ ಬೆಳಿಗ್ಗೆ 6ರವರೆಗೆ. ಸೆ.04ರಂದು ಬೆಳಿಗ್ಗೆ 6ರಿಂದ ಸೆ.05ರಂದು ಬೆಳಿಗ್ಗೆ 6ರವರೆಗೆ. ಸೆ.08ರಂದು ಬೆಳಿಗ್ಗೆ 6ರಿಂದ ಸೆ.09ರಂದು ಬೆಳಿಗ್ಗೆ 6ರವರೆಗೆ.ಸೆ.10ರಂದು ಬೆಳಿಗ್ಗೆ 6ರಿಂದ ಸೆ.11ರಂದು ಬೆಳಿಗ್ಗೆ 6ರವರೆಗೆ ಮದ್ಯ ಮಾರಾಟ ಮತ್ತು ಮದ್ಯ ಸಾಗಾಣಿಕೆ ಮಾಡದಂತೆ ಹಾಗೂ ಮದ್ಯದ ಅಂಗಡಿಗಳನ್ನು ಮುಚ್ಚುವಂತೆ ಜಿಲ್ಲಾಧಿಕಾರಿ ಅನಿರುದ್ದ್ ಶ್ರವಣ್.ಪಿ ಅವರು ಆದೇಶಿಸಿದ್ದಾರೆ.
ಈ ಆದೇಶವನ್ನು ಅನುಷ್ಠಾನಕ್ಕೆ ತರಲು ಅಗತ್ಯ ಕಟ್ಟುನಿಟ್ಟಿನ ಕ್ರಮಗಳನ್ನು ವಿಜಯನಗರ ಜಿಲ್ಲೆಯ ಜಿಲ್ಲಾ ಪೊಲೀಸ್ ಅಧೀಕ್ಷಕರು ಹಾಗೂ ಅಬಕಾರಿ ಇಲಾಖೆಯ ಅಬಕಾರಿ ಉಪ ಆಯುಕ್ತರು ಹಾಗೂ ಸಂಬಂಧಿಸಿದ ಅಧಿಕಾರಿಗಳು ಜರುಗಿಸಬೇಕು ಎಂದು ಜಿಲ್ಲಾಧಿಕಾರಿಗಳು ಆದೇಶದಲ್ಲಿ ತಿಳಿಸಿದ್ದಾರೆ.