ಬೆಂಗಳೂರು: ಒಂದು ರಾಷ್ಟ್ರ-ಒಂದು ಚುನಾವಣೆ ವಿಚಾರ ಇದು RSS ನ ರಹಸ್ಯ ಕಾರ್ಯಸೂಚಿಯಾಗಿದೆ ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಹೇಳಿಕೆ ನೀಡಿದ್ದಾರೆ
ಈ ಕುರಿತು ಟ್ವೀಟ್ ಮಾಡಿರುವ ದಿನೇಶ್ ಗುಂಡೂರಾವ್ ಅವರು, ಒಂದು ರಾಷ್ಟ್ರ-ಒಂದು ಚುನಾವಣೆ ವಿಧಾನಸಭೆಯಲ್ಲಿ ಚರ್ಚಿಸುವಷ್ಟು ಪ್ರಸ್ತುತವಲ್ಲ.ಈ ಸಂಬಂಧ ಸಂವಿಧಾನಕ್ಕೆ ತಿದ್ದುಪಡಿ ಮಾಡುವ ಅಗತ್ಯವಿದ್ದು, ಆ ತಿದ್ದುಪಡಿಯ ಪರಮಾಧಿಕಾರವಿರುವುದು ಸಂಸತ್ತಿಗೆ ಮಾತ್ರ. ಈ ವಿಚಾರ ಚರ್ಚಿಸುವ ಅಗತ್ಯವೇನು? ಇದು RSS ನ ರಹಸ್ಯ ಕಾರ್ಯಸೂಚಿಯಾಗಿದೆ. ಸದನವು RSSನ ಅಜ್ಞಾನುವರ್ತಿಯಲ್ಲ.
ಈ ಬಾರಿಯ ಬಜೆಟ್ ಅಧಿವೇಶನದಲ್ಲಿ ಚರ್ಚೆಯಾಗಬೇಕಿರುವುದು ಜನರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ. ಅದರ ಬದಲು ಒಂದು ರಾಷ್ಟ್ರ-ಒಂದು ಚುನಾವಣೆಯ ಬಗ್ಗೆಯಲ್ಲ.ಈಗಾಗಲೇ ಕೇಂದ್ರ-ರಾಜ್ಯ ಸರ್ಕಾರದ ದುರಾಡಳಿತದಿಂದ ಜನ ನೋವು ತಿನ್ನುತ್ತಿದ್ದಾರೆ. ಬೆಲೆಯೇರಿಕೆ ಭೂತಕ್ಕೆ ಜನ ನಡುಗಿದ್ದಾರೆ. ಈ ಅಧಿವೇಶನ ಜನರ ಸಂಕಷ್ಟದ ಬಗ್ಗೆ ಬೆಳಕು ಚೆಲ್ಲಲಿ ಎಂದು ಹೇಳಿದ್ದಾರೆ.
1
ಒಂದು ರಾಷ್ಟ್ರ-ಒಂದು ಚುನಾವಣೆ ವಿಧಾನಸಭೆಯಲ್ಲಿ ಚರ್ಚಿಸುವಷ್ಟು ಪ್ರಸ್ತುತವಲ್ಲ.
ಈ ಸಂಬಂಧ ಸಂವಿಧಾನಕ್ಕೆ ತಿದ್ದುಪಡಿ ಮಾಡುವ ಅಗತ್ಯವಿದ್ದು, ಆ ತಿದ್ದುಪಡಿಯ ಪರಮಾಧಿಕಾರವಿರುವುದು ಸಂಸತ್ತಿಗೆ ಮಾತ್ರ. ಈ ವಿಚಾರ ಚರ್ಚಿಸುವ ಅಗತ್ಯವೇನು?
ಇದು RSS ನ ರಹಸ್ಯ ಕಾರ್ಯಸೂಚಿಯಾಗಿದೆ. ಸದನವು RSSನ ಅಜ್ಞಾನುವರ್ತಿಯಲ್ಲ. https://t.co/oXZKrVfuYW— Dinesh Gundu Rao/ದಿನೇಶ್ ಗುಂಡೂರಾವ್ (@dineshgrao) March 5, 2021