Akshaya Tritiya | ಅಕ್ಷಯ ತೃತೀಯ ದಿನ ಚಿನ್ನವಷ್ಟೇ ಅಲ್ಲ ಈ ವಸ್ತುಗಳನ್ನು ಖರೀದಿಸಿದರೂ ಶುಭಫಲ

ಎಲ್ಲರಿಗೂ ತಿಳಿದಿರುವಂತೆ, ಅಕ್ಷಯ ತೃತೀಯ ದಿನದ೦ದು ಚಿನ್ನವನ್ನು ಖರೀದಿಸುವುದು ಸೂಕ್ತ. ಆದರೆ, ಚಿನ್ನದ ಬೆಲೆ ಏರಿಕೆಯಾಗಿದ್ದು, ಕೆಲವರಿಗೆ ಅಸಾಧ್ಯವಾಗಬಹುದು. ಅಂತವರು ನಿಮ್ಮ ಕೈಗೆಟುವ ವಸ್ತುಗಳನ್ನು ಖರೀದಿಸಬಹುದು. ಯಾವ ಎಲ್ಲ ವಸ್ತುಗಳನ್ನು ಖರೀದಿಸಬೇಕು ಹಾಗೂ ಖರೀದಿಸಬಾರದು…

Akshaya Tritiya

ಎಲ್ಲರಿಗೂ ತಿಳಿದಿರುವಂತೆ, ಅಕ್ಷಯ ತೃತೀಯ ದಿನದ೦ದು ಚಿನ್ನವನ್ನು ಖರೀದಿಸುವುದು ಸೂಕ್ತ. ಆದರೆ, ಚಿನ್ನದ ಬೆಲೆ ಏರಿಕೆಯಾಗಿದ್ದು, ಕೆಲವರಿಗೆ ಅಸಾಧ್ಯವಾಗಬಹುದು. ಅಂತವರು ನಿಮ್ಮ ಕೈಗೆಟುವ ವಸ್ತುಗಳನ್ನು ಖರೀದಿಸಬಹುದು. ಯಾವ ಎಲ್ಲ ವಸ್ತುಗಳನ್ನು ಖರೀದಿಸಬೇಕು ಹಾಗೂ ಖರೀದಿಸಬಾರದು ಎ೦ಬುದನ್ನು ಈ ಲೇಖನದಲ್ಲಿ ನೀಡಲಾಗಿದೆ.

ಬೆಳ್ಳಿ ನಾಣ್ಯ

ಬೆಳ್ಳಿ ನಾಣ್ಯವು ಲಕ್ಷ್ಮಿ ದೇವಿಯ ಸಂಕೇತವಾಗಿದೆ ಎ೦ದು ನ೦ಬಲಾಗಿದೆ. ಬೆಳ್ಳಿಯ ನಾಣ್ಯದ ಮೇಲೆ ಲಕ್ಷ್ಮಿದೇವಿಯ ರೂಪವಿದ್ದರೆ ಇನ್ನೂ ಉತ್ತಮವಾಗಿರುವುದಲ್ಲದೆ, ಬೆಳ್ಳಿಯ ನಾಣ್ಯವನ್ನು ಲಾಕರ್ ನಲ್ಲಿ ಸುರಕ್ಷಿತವಾಗಿ ಇಡುವುದು ಸಂಪತ್ತನ್ನು ದ್ವಿಗುಣಗೊಳಿಸುತ್ತದೆ.

ಮಣ್ಣಿನ ಮಡಿಕೆ

100 ರೂಪಾಯಿಗಳ ಮಣ್ಣಿನ ಮಡಿಕೆಯನ್ನು ಎಲ್ಲಾ ವರ್ಗದವರು ಖರೀದಿಸಬಹುದು. ಅಕ್ಷಯ ತೃತೀಯ ದಿನದಂದು ಮಣ್ಣಿನ ಮಡಿಕೆಯನ್ನು ಖರೀದಿಸುವ ಮೂಲಕ ಸಾಕಷ್ಟು ಸಂಪತ್ತು ಒದಗುತ್ತದೆ. ಮಣ್ಣಿನ ಮಡಿಕೆ ಹಣ & ಸಂಪತ್ತನ್ನು ಸೂಚಿಸುತ್ತದೆ. ಆ ದಿನ ಮಣ್ಣಿನ ಮಡಿಕೆಯನ್ನು ಪೂಜಿಸಿ, ಅಕ್ಕಿ ಮತ್ತು ಅರಿಶಿನದಿ೦ದ ತುಂಬಿಸಬೇಕು.

Vijayaprabha Mobile App free

ಹೊಸ ಬಟ್ಟೆ

ಅಕ್ಷಯ ತೃತೀಯದಂದು ಹೊಸ ಬಟ್ಟೆಗಳನ್ನು ಖರೀದಿಸುವುದು ಶುಭವೆ೦ದು ಪರಿಗಣಿಸಲಾಗುತ್ತದೆ. ಏಕೆಂದರೆ, ಇದು ಮನೆಗೆ ಅದೃಷ್ಟ ಮತ್ತು ಸಮೃದ್ಧಿಯನ್ನು ತರುತ್ತದೆ ಎ೦ದು ನ೦ಬಲಾಗಿದೆ.

ಪುಸ್ತಕ ಖರೀದಿಸಿ

ಪುಸ್ತಕಗಳನ್ನು ಖರೀದಿಸುವುದು ಸರಸ್ಕೃತಿ ದೇವಿಗೆ ಸಮಾನ. ಅಕ್ಷಯ ತೃತೀಯದ೦ದು ಹೊಸ ಪುಸ್ತಕಗಳನ್ನು ಖರೀದಿಸುವುದು ವೈಯಕ್ತಿಕ ಬೆಳವಣಿಗೆಗೆ ಕಾರಣವಾಗುತ್ತದೆ ಎ೦ದು ನ೦ಬಲಾಗಿದೆ. ಶಿಕ್ಷಣದ ದೇವತೆಯಾದ ಸರಸ್ವತಿ ದೇವಿ ಆಶೀರ್ವಾದವನ್ನು ಪಡೆಯಬಹುದು ಎ೦ದು ಹೇಳಲಾಗುತ್ತದೆ.

ಪಾತ್ರೆಗಳು

ಅಕ್ಷಯ ತೃತೀಯದಂದು, ತಾಮ್ರ ಮತ್ತು ಹಿತ್ತಾಳೆ ಪಾತ್ರೆಗಳಿಂದ ಮಾಡಿದ ಪಾತ್ರೆಗಳನ್ನು ಖರೀದಿಸಲು ಸಹ ಸಲಹೆ ನೀಡಲಾಗುತ್ತದೆ. ಇದು ಮಂಗಳಕರ ಎನ್ನಲಾಗುತ್ತದೆ.

ಅಕ್ಷಯ ತೃತೀಯದಂದು ಖರೀದಿಸಬಾರದ ವಸ್ತುಗಳು

ಅಕ್ಷಯ ತೃತೀಯದಂದು ಯಾವುದೇ ಚೂಪಾದ ವಸ್ತುಗಳನ್ನು ಖರೀದಿಸಬಾರದು. ಅಂದರೆ ಕತ್ತಿ, ಕತ್ತರಿ, ಸೂಜಿ, ಕುಡಗೋಲು, ಕೊಡಲಿ, ಬೇಡ್ ಮು೦ತಾದ ಚೂಪಾದ ವಸ್ತುಗಳನ್ನು ಖರೀದಿಸಬಾರದು. ಪ್ಲಾಸ್ಟಿಕ್, ಅಲ್ಯೂಮಿನಿಯಂ ಪಾತ್ರೆಗಳನ್ನು ಖರೀದಿಸುವುದು ಉತ್ತಮ ಅಭ್ಯಾಸವಲ್ಲ ಎ೦ದು ಕೆಲವರು ಹೇಳುತ್ತಾರೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.