ನೀವು ಪೋಸ್ಟ್ ಆಫೀಸ್ ನಲ್ಲಿ ಪಿಪಿಎಫ್, ಸುಕನ್ಯಾ ಸಮೃಧಿ ಯೋಜನೆಗಳಿಗೆ ಸೇರಿದ್ದೀರಾ? ಹೊಸ ನಿಯಮಗಳು ಜಾರಿಗೆ ಬರುತ್ತಿವೆ!

ಅಂಚೆ ಕಚೇರಿಯಲ್ಲಿ ಹಲವು ರೀತಿಯ ಯೋಜನೆಗಳು ಲಭ್ಯವಿದ್ದು, ಇವುಗಳಲ್ಲಿ ಹಣವನ್ನು ಇಡುವುದರಿಂದ ನಿಮಗೆ ಯಾವುದೇ ರಿಸ್ಕ್ ಇಲ್ಲದೆ ನಿರ್ದಿಷ್ಟ ಲಾಭ ಸಿಗುತ್ತದೆ. ಆದರೆ, ಅಂಚೆ ಕಚೇರಿಯಲ್ಲಿ ಖಾತೆ ಹೊಂದಿರುವವರು, ಇತರ ಯೋಜನೆಗಳಿಗೆ ಸೇರಿದವರು ಕೆಲವು…

post office scheme vijayaprabha

ಅಂಚೆ ಕಚೇರಿಯಲ್ಲಿ ಹಲವು ರೀತಿಯ ಯೋಜನೆಗಳು ಲಭ್ಯವಿದ್ದು, ಇವುಗಳಲ್ಲಿ ಹಣವನ್ನು ಇಡುವುದರಿಂದ ನಿಮಗೆ ಯಾವುದೇ ರಿಸ್ಕ್ ಇಲ್ಲದೆ ನಿರ್ದಿಷ್ಟ ಲಾಭ ಸಿಗುತ್ತದೆ. ಆದರೆ, ಅಂಚೆ ಕಚೇರಿಯಲ್ಲಿ ಖಾತೆ ಹೊಂದಿರುವವರು, ಇತರ ಯೋಜನೆಗಳಿಗೆ ಸೇರಿದವರು ಕೆಲವು ವಿಷಯಗಳನ್ನು ತಿಳಿದಿರಬೇಕು.

ಇಂಡಿಯಾ ಪೋಸ್ಟ್ ಇತ್ತೀಚೆಗೆ ಹೊಸ ನಿಯಮಗಳನ್ನು ಜಾರಿಗೆ ತಂದಿದ್ದು, ಇದು ಪೋಸ್ಟ್ ಆಫೀಸ್ ಗ್ರಾಹಕರ ಮೇಲೆ ಪರಿಣಾಮ ಬೀರುತ್ತದೆ. ಜಿಡಿಎಸ್ (ಗ್ರಾಮೀಣ ಡಕ್ ಸೇವೆ) ಶಾಖೆಗಳಲ್ಲಿ ನಗದು ಹಿಂಪಡೆಯುವಿಕೆಯ ಮಿತಿಯನ್ನು ಹೆಚ್ಚಿಸಲು ಪೋಸ್ಟ್ ಆಫೀಸ್ ನಿರ್ಧರಿಸಿದ್ದು, 5 ಸಾವಿರ ರೂ.ಗಳಿಂದ ಹೆಚ್ಚಿಸಲು ನಿರ್ಧರಿಸಿದೆ.

ಪೋಸ್ಟ್ ಆಫೀಸ್ ಜಿಡಿಎಸ್ ಶಾಖೆಗಳಿಂದ ಗ್ರಾಹಕರು ಈಗ 5,000 ರೂ ಬದಲಿಗೆ 20,000 ರೂ. ತೆಗೆದುಕೊಳ್ಳಬಹುದು. ಶಾಖೆ ಪೋಸ್ಟ್ ಮಾಸ್ಟರ್ ದಿನಕ್ಕೆ ಒಂದು ಖಾತೆಯಲ್ಲಿ 50,000 ರೂ.ಗಿಂತ ಹೆಚ್ಚಿನ ಹಣವನ್ನು ಜಮಾ ಮಾಡಲು ಅನುಮತಿಸುವುದಿಲ್ಲ. ಇನ್ನೂ ಅನೇಕ ವಿಷಯಗಳು ಬದಲಾಗಿವೆ.

Vijayaprabha Mobile App free

ವಿತ್ ಡ್ರಾ ಫಾರ್ಮ್ ಅಥವಾ ಚೆಕ್ ಅನ್ನು ಪಬ್ಲಿಕ್ ಪ್ರಾವಿಡೆಂಟ್ ಫಂಡ್ (ಪಿಪಿಎಫ್), ಸೀನಿಯರ್ ಸಿಟಿಜನ್ ಸೇವಿಂಗ್ ಸ್ಕೀಮ್ (ಎಸ್‌ಸಿಎಸ್‌ಎಸ್), ಮಂತ್ಲಿ ಇಂಕಮ್ ಸ್ಕೀಮ್ (ಎಂಐಎಸ್), ಕಿಸಾನ್ ವಿಕಾಸ್ ಪತ್ರ (ಕೆವಿಪಿ), ನ್ಯಾಷನಲ್ ಸೇವಿಂಗ್ ಸರ್ಟಿಫಿಕೇಟ್ (ಎನ್‌ಎಸ್‌ಸಿ) ಮುಂತಾದ ಯೋಜನೆಗಳಲ್ಲಿ ಠೇವಣಿ ಇಡಲು ಬಳಸಬಹುದು. ಉಳಿತಾಯ ಖಾತೆದಾರರು ಕನಿಷ್ಠ 500 ರೂ. ಮಿನಿಮಮ್ ಬ್ಯಾಲನ್ಸ್ ಇಡಬೇಕು. ನಿಮ್ಮ ಖಾತೆಯಲ್ಲಿ ಕನಿಷ್ಠ 500 ರೂ. ಬಾಕಿ ಇಲ್ಲದಿದ್ದರೆ, ನಿಮ್ಮ ಖಾತೆಯಿಂದ ರೂ.100 ಕಡಿತಗೊಳಿಸಲಾಗುತ್ತದೆ.

ಇದನ್ನು ಓದಿ: ಒಳ್ಳೆಯ ಸುದ್ದಿ: ರೈತರಿಗೆ 3 ಲಕ್ಷ ರೂ. ಸುಲಭ ಸಾಲ; ಸಾಲ ಪಡೆಯಲು ಹೀಗೆ ಮಾಡಿ!

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.