Ration card: ಪಡಿತರ ಚೀಟಿದಾರರಿಗೆ ಭರ್ಜರಿ ಗುಡ್ ನ್ಯೂಸ್; ಉಚಿತ ರೇಷನ್ ಬದಲು ಹಣ, ಇವರಿಗೆ ಮಾತ್ರ..!

Ration Card Ration Card

Ration Card: ನೀವು ಪಡಿತರ ಚೀಟಿ (Ration Card) ಹೊಂದಿದ್ದು, ಏಪ್ರಿಲ್ ತಿಂಗಳ ನಿಮ್ಮ ಪಡಿತರವನ್ನು (Ration) ಇನ್ನೂ ಸ್ವೀಕರಿಸದಿದ್ದರೆ, ಈ ಸುದ್ದಿ ಖಂಡಿತವಾಗಿಯೂ ನಿಮಗೆ ಸಂತೋಷವನ್ನು ನೀಡುತ್ತದೆ.

ನಿಮ್ಮ ಬಳಿ ಪಡಿತರ ಚೀಟಿ ಇದ್ದು ಏಪ್ರಿಲ್ ತಿಂಗಳ ಪಡಿತರ ಇನ್ನೂ ಬಂದಿಲ್ಲ ಎಂದಾದಲ್ಲಿ ಈ ಸುದ್ದಿ ಖಂಡಿತಾ ನಿಮಗೆ ಖುಷಿ ಕೊಡುತ್ತದೆ. ಆದರೆ, ಈ ಸುದ್ದಿ ಕೇವಲ ಕೇರಳ ರಾಜ್ಯದ (Kerala State) ಜನರಿಗೆ ಮಾತ್ರ. ಕೇರಳ ರಾಜ್ಯ ಆಹಾರ ಆಯೋಗದ ಪರವಾಗಿ, ಗುಲಾಬಿ ಮತ್ತು ಹಳದಿ ಪಡಿತರ ಚೀಟಿದಾರರಿಗೆ ಹಣವನ್ನು ಪಾವತಿಸಲು ಸೂಚಿಸಲಾಗಿದೆ. ಇ-ಪಿಒಎಸ್ ಸಿಸ್ಟಂ ಸರ್ವರ್ (E-POS System Server) ದೋಷದಿಂದ ಏಪ್ರಿಲ್‌ನಲ್ಲಿ ಪಡಿತರ ಸಾಮಗ್ರಿಗಳನ್ನು ಪಡೆಯಲು ಸಾಧ್ಯವಾಗದ ಕಾರ್ಡ್‌ದಾರರಿಗೆ ಈ ಹಣವನ್ನು ನೀಡಲಾಗುತ್ತದೆ.

ಇದನ್ನು ಓದಿ: ರೇಷನ್‌ ಕಾರ್ಡ್‌ ಇದ್ದವರು ಈ ಕೆಲಸ ಮಾಡದಿದ್ದರೆ, ರೇಷನ್‌ ಕಾರ್ಡ್‌ ರದ್ದು; ಸರ್ಕಾರದಿಂದ ಹೊಸ ರೂಲ್ಸ್‌ ಜಾರಿ!

Advertisement

ಪಡಿತರ ಪಡೆಯಲು ಸಾಧ್ಯವಾಗದ 2.66 ಲಕ್ಷ ಕಾರ್ಡ್‌ದಾರರು

rationers vijayaprabha
Ration card holders

ಅಧಿಕೃತ ಅಂಕಿಅಂಶಗಳ ಪ್ರಕಾರ, ಏಪ್ರಿಲ್‌ನಲ್ಲಿ 2.66 ಲಕ್ಷ ಗುಲಾಬಿ ಮತ್ತು ಹಳದಿ ಪಡಿತರ ಕಾರ್ಡ್ ಹೊಂದಿರುವವರು ಪಡಿತರವನ್ನು ಪಡೆಯಲು ಸಾಧ್ಯವಾಗಿಲ್ಲ. ಸರ್ವರ್ ಸಮಸ್ಯೆಯಿಂದ ಪಡಿತರ ಪಡೆಯಲು ಸಾಧ್ಯವಾಗದ ಪಡಿತರ ಚೀಟಿದಾರರಿಗೆ ಆಹಾರ ಭತ್ಯೆ ನೀಡಲಾಗುವುದು ಎಂದು ಆಯೋಗ ತನ್ನ ಆದೇಶದಲ್ಲಿ ತಿಳಿಸಿದೆ. ರಾಷ್ಟ್ರೀಯ ಆಹಾರ ಭದ್ರತಾ ಕಾಯಿದೆ (NFSA) ಪ್ರಕಾರ ಆಹಾರ ಭತ್ಯೆಯನ್ನು ಲೆಕ್ಕ ಹಾಕಲಾಗುತ್ತದೆ. ಇದು ಪಡಿತರ ಕನಿಷ್ಠ ಬೆಲೆಗಿಂತ 1.25 ಪಟ್ಟು ಹೆಚ್ಚು ಇರುತ್ತದೆ.

ಇದನ್ನು ಓದಿ: ಪಡಿತರ ಚೀಟಿದಾರರಿಗೆ ಭರ್ಜರಿ ಸಿಹಿ ಸುದ್ದಿ; ಈ ತಿಂಗಳಲ್ಲೇ ಸಿಗಲಿದೆ ಎರಡು ಬಾರಿ ಉಚಿತ ರೇಷನ್!

ಹಳದಿ ಮತ್ತು ಗುಲಾಬಿ ಪಡಿತರ ಚೀಟಿದಾರರಿಗೆ ಪಡಿತರ:

ration-card
Yellow and pink ration card

ಉದಾಹರಣೆಗೆ ಪಡಿತರ ಬೆಲೆ ರೂ.100 ಇದ್ದರೆ, ಕಾರ್ಡ್ ಹೊಂದಿರುವವರಿಗೆ ಸರ್ಕಾರ ರೂ.125 ಆಹಾರ ಭತ್ಯೆ ನೀಡುತ್ತದೆ. ರಾಜ್ಯದ ಗುಲಾಬಿ ಕಾರ್ಡ್ (Pink Card) ಕುಟುಂಬದ ಪ್ರತಿಯೊಬ್ಬ ಸದಸ್ಯರಿಗೆ ನಾಲ್ಕು ಕೆಜಿ ಗೋಧಿ ಹಿಟ್ಟು ಮತ್ತು ಒಂದು ಕೆಜಿ ಗೋಧಿಯನ್ನು ನೀಡಲಾಗುವುದು. ಅದೇ ರೀತಿ ಹಳದಿ ಕಾರ್ಡ್ (Yellow Card) ಹೊಂದಿರುವವರ ಕುಟುಂಬಕ್ಕೆ 30 ಕೆಜಿ ಅಕ್ಕಿ ಮತ್ತು 3 ಕೆಜಿ ಗೋಧಿ ಉಚಿತವಾಗಿ ಸಿಗಲಿದೆ.

ಕೇರಳದಲ್ಲಿ 41.43 ಲಕ್ಷ ಪಡಿತರ ಚೀಟಿದಾರರು

ಕೇರಳದಲ್ಲಿ 41.43 ಲಕ್ಷ ಪಡಿತರ ಚೀಟಿದಾರರಿದ್ದಾರೆ (Ration Card Holder). ಇವರಲ್ಲಿ 35.58 ಲಕ್ಷ ಗುಲಾಬಿ (ಪಿಂಕ್) ಕಾರ್ಡ್ ಹೊಂದಿರುವವರು ಮತ್ತು 5.85 ಲಕ್ಷ ಹಳದಿ ಕಾರ್ಡ್ ಹೊಂದಿರುವವರು ಇದ್ದಾರೆ. ಈ ಪೈಕಿ 38.77 ಲಕ್ಷ ಕಾರ್ಡುದಾರರು ಏಪ್ರಿಲ್‌ನಲ್ಲಿ ಪಡಿತರ ಪಡೆದಿದ್ದಾರೆ. ಅದೇ ರೀತಿ ಫೆಬ್ರವರಿಯಲ್ಲಿ 39.65 ಲಕ್ಷ ಮತ್ತು ಮಾರ್ಚ್‌ನಲ್ಲಿ 39.57 ಲಕ್ಷ ಕಾರ್ಡುದಾರರು ಪಡಿತರ ಪಡೆದಿದ್ದಾರೆ. ಇ-ಪಿಒಎಸ್ ವ್ಯವಸ್ಥೆಯಲ್ಲಿನ ದೋಷದಿಂದ ಏಪ್ರಿಲ್‌ನಲ್ಲಿ ಐದು ದಿನಗಳ ಕಾಲ ಪಡಿತರ ವಿತರಣೆಯಾಗಿಲ್ಲ.

ಇದನ್ನು ಓದಿ: ಆಧಾರ್ ಕಾರ್ಡ್ ಹೊಂದಿರುವವರಿಗೆ ಉತ್ತಮ ಅವಕಾಶ; ಉಚಿತವಾಗಿ address proof ನವೀಕರಿಸಿಕೊಳ್ಳಿ!

ಇದಾದ ನಂತರ ಪಡಿತರ ಅಂಗಡಿಗಳು ಶಿಫ್ಟ್ (ಪಾಳೆಯ)ರೂಪದಲ್ಲಿ ತೆರೆಯಲಾರಂಭಿಸಿದವು. ಇದರಿಂದಾಗಿ ಅನೇಕ ಪಡಿತರ ಚೀಟಿದಾರರಿಗೆ ಪಡಿತರ ಸಿಕ್ಕಿಲ್ಲ. ಇದರ ಬೆನ್ನಲ್ಲೇ ಕೇರಳದ ಮಾಜಿ ಶಾಸಕ ಜೋಸೆಫ್ ಎಂ ಪುತ್ತುಸೇರಿ ಅವರ ದೂರಿನ ಆಧಾರದ ಮೇಲೆ ರಾಜ್ಯ ಆಹಾರ ಆಯೋಗವು ಪಡಿತರ ಪಡೆಯದೇ ಇರುವ ಪಡಿತರಾದಾರರಿಗೆ ಆಹಾರ ಭತ್ಯೆ ನೀಡಲು ಆದೇಶಿಸಿದೆ.

ಇದನ್ನು ಓದಿ:ರೈತರಿಗೆ ಗುಡ್ ನ್ಯೂಸ್, ಸರ್ಕಾರದಿಂದ ಬರೋಬ್ಬರಿ 18 ಲಕ್ಷ ರೂ ನೇರವಾಗಿ ಖಾತೆಗೆ..!

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.
Add a comment

Leave a Reply

Your email address will not be published. Required fields are marked *

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement