ನಿಮ್ಮ ಫೋನ್ ಕಳೆದು ಹೋದರೆ, ತಕ್ಷಣ ಹೀಗೆ ಬ್ಲಾಕ್ ಮಾಡಿ.. ಎಲ್ಲವೂ ಸೇಫ್..!

Mobile phone Mobile phone

ನಿಮ್ಮ ಫೋನ್ (Mobile Phone) ಇತ್ತೀಚೆಗೆ ಕಳ್ಳತನವಾಗಿದೆಯೇ ? ಅಥವಾ ಎಲ್ಲೋ ಕಳೆದುಹೋಗಿದೆಯೇ? ಡೇಟಾ ದುರುಪಯೋಗದ ಬಗ್ಗೆ ಚಿಂತೆ ಪಡುತ್ತಿದ್ದೀರಾ? ಇನ್ನು ಆ ಭಯ ನಿನಗೆ ಬೇಡ. ಏಕೆಂದರೆ ಆ ಆತಂಕದಿಂದ ನಮ್ಮನ್ನು ಪಾರು ಮಾಡಲು ಕೇಂದ್ರ ಸರ್ಕಾರವು(central government)  ಕೇಂದ್ರ ಸಲಕರಣೆ ಗುರುತಿನ ನೋಂದಣಿಯನ್ನು(Central Equipment Identity Register) ಲಭ್ಯಗೊಳಿಸಿದೆ. ಅದರ ಸಹಾಯದಿಂದ ನೀವು ಕಳೆದುಹೋದ ಅಥವಾ ಕದ್ದ ಫೋನ್ ಅನ್ನು ಇತರರು ಬಳಸದಂತೆ ನಿರ್ಬಂಧಿಸಬಹುದು.

ಇದನ್ನು ಓದಿ: ಕಾಜಲ್‌ ಅಗರ್​ವಾಲ್ ಸ್ಟೇಟ್‌ಮೆಂಟ್‌ಗೆ ಬಿಟೌನ್‌ ಶಾಕ್‌; ಭಾರಿ ವಿವಾದ ಹುಟ್ಟುಹಾಕಿದ ಕಾಜಲ್ ಅಗರ್​ವಾಲ್ ಹೇಳಿಕೆ

ಬಳಸುವುದು ಹೇಗೆ..

Advertisement

ನಮ್ಮ ಮೊಬೈಲ್ ಫೋನ್  (Mobile Phone) ಕಳೆದುಹೋದ ತಕ್ಷಣ ನಾವು ಕೇಂದ್ರ ದೂರಸಂಪರ್ಕ ಇಲಾಖೆ ನಡೆಸುವ ಸಿಇಐಆರ್ (CEIR) ಪೋರ್ಟಲ್‌ಗೆ ಹೋಗಿ ಅದನ್ನು ನಿರ್ಬಂಧಿಸಬಹುದು. ಅಂದರೆ ನಮ್ಮ ಫೋನ್ ಬೇರೆಯವರ ಕೈಗೆ ಸಿಕ್ಕರೂ ಕೆಲಸ ಮಾಡದಂತೆ ನಿಯಂತ್ರಿಸಬಹುದು. ಜತೆಗೆ ಕಳೆದು ಹೋದ ಫೋನ್ ಬಗ್ಗೆ ಪೊಲೀಸರಿಗೆ ನೀಡಿರುವ ದೂರಿನ ಹಂತವನ್ನು ತಿಳಿಯಬಹುದು. ಅದೇ ರೀತಿ, ಫೋನ್ ಸಿಕ್ಕ ನಂತರ, ನೀವು ಅದನ್ನು ಅನ್ಲಾಕ್ ಕೂಡ ಮಾಡಬಹುದು.

ಇದನ್ನು ಓದಿ: ಪಡಿತರ ಚೀಟಿದಾರರಿಗೆ ಸರ್ಕಾರದಿಂದ ಮಹತ್ವದ ಆದೇಶ; ಆಯುಷ್ಮಾನ್ ಭಾರತ್ ಕಾರ್ಡ್​ ವಿತರಣೆ ಸಂಪೂರ್ಣ ಸ್ಥಗಿತ

ಆದರೆ ಈ ಸೇವೆಗಳನ್ನು ಪಡೆಯಲು, ಮೊದಲು ಕೆಲವು ವಿವರಗಳನ್ನು ಒದಗಿಸಬೇಕು. CEIR ಪೋರ್ಟಲ್‌ನಲ್ಲಿ ನಿಮ್ಮ ಹತ್ತಿರದ ಪೊಲೀಸ್ ಠಾಣೆಯಲ್ಲಿ ಸಲ್ಲಿಸಿದ ದೂರಿನ ಪ್ರತಿಯೊಂದಿಗೆ ನಿಮ್ಮ ಮೊಬೈಲ್ ಸಂಖ್ಯೆ, IMEI ಸಂಖ್ಯೆ, ಮೊಬೈಲ್ ಖರೀದಿಯ ಸರಕುಪಟ್ಟಿ ಲಗತ್ತಿಸಿ. ಎಲ್ಲಾ ವಿವರಗಳನ್ನು ಅಪ್‌ಲೋಡ್ ಮಾಡಿದರೆ, ಸಿಇಐಆರ್ ಕೇಂದ್ರ ಡೇಟಾಬೇಸ್‌ನಲ್ಲಿ ಈಗಾಗಲೇ ನೋಂದಾಯಿಸಲಾದ ನಿಮ್ಮ ಫೋನ್ ಅನ್ನು ಕಪ್ಪುಪಟ್ಟಿಗೆ ಸೇರಿಸಲಾಗುತ್ತದೆ. ಈ ಪೋರ್ಟಲ್‌ನಲ್ಲಿ ನಮ್ಮ ದೂರಿನ ಸ್ಥಿತಿಯನ್ನು ತಿಳಿದುಕೊಳ್ಳುವ ಆಯ್ಕೆಯೂ ಇದೆ.

ಇದನ್ನು ಓದಿ: ಹೊಸ ಆರ್ಥಿಕ ವರ್ಷ: ಸಿಲಿಂಡರ್ ಬೆಲೆ ಭಾರೀ ಇಳಿಕೆ, ಚಿನ್ನ ಕೊಳ್ಳಲು ಹೊಸ ನಿಯಮ, ಇಂದಿನಿಂದ‌ ಏನೆಲ್ಲಾ ಬದಲಾವಣೆ?

ವಾಸ್ತವವಾಗಿ, ಕೇಂದ್ರ ಸರ್ಕಾರವು 2019 ರ ಕೊನೆಯಲ್ಲಿ ಪ್ರಾಯೋಗಿಕ ಆಧಾರದ ಮೇಲೆ CEIR ಸೇವೆಗಳನ್ನು ಜಾರಿಗೆ ತಂದಿತ್ತು. ಆರಂಭದಲ್ಲಿ ಕೆಲವು ರಾಜ್ಯಗಳಲ್ಲಿ ಪ್ರಾಯೋಗಿಕ ಯೋಜನೆಯಾಗಿ ಆರಂಭಿಸಿ ಅಲ್ಲಿ ಯಶಸ್ವಿಯಾದ ಬಳಿಕ ಹಂತಹಂತವಾಗಿ ಎಲ್ಲ ರಾಜ್ಯಗಳಿಗೂ ವಿಸ್ತರಿಸುತ್ತಿದೆ. ಇಲ್ಲಿ, ಕಳೆದುಹೋದ ಮೊಬೈಲ್ ಫೋನ್‌ಗಳಿಗೆ ಸಂಬಂಧಿಸಿದಂತೆ ಈ ಸೇವೆಗಳನ್ನು ಪಡೆಯಬಹುದು.

ಇದನ್ನು ಓದಿ: 7 ದಿನಗಳಲ್ಲಿ ಪಾನ್ ಕಾರ್ಡ್‌ ಪಡೆಯುವುದು ಹೇಗೆ? PAN ಕಳೆದು ಹೋದರೆ 5 ನಿಮಿಷದಲ್ಲಿ ಹೀಗೆ ಡೌನ್‌ಲೋಡ್ ಮಾಡಿ

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.
Add a comment

Leave a Reply

Your email address will not be published. Required fields are marked *

vijayaprabha news google news

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement
ಅಮ್ಮ ಎಂದರೆ ಕಿಚ್ಚನಿಗೆ ಕಣ್ಣಿಗೆ ಕಾಣುವ ದೇವರು!