ಹರಪನಹಳ್ಳಿ: ಮದುವೆಯಾಗಿದ್ದರೂ ಮತ್ತೋರ್ವ ಯುವತಿಯೊಂದಿಗೆ ಮತ್ತೆ ವಿವಾಹವಾದ ಎಂದು ಕುಪಿತಗೊಂಡು ಯುವತಿಯ ಕುಟುಂಬಸ್ಥರು ವಿವಾಹಿತನ ಮನೆ ಧ್ವಂಸಗೊಳಿಸಿರುವ ಘಟನೆ ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಕನ್ನನಾಯಕನಹಳ್ಳಿ (ಅಗ್ರಹಾರ) ಯಲ್ಲಿ ಇಂದು ನಡೆದಿದೆ.
ಹೌದು ಕನ್ನನಾಯಕನಹಳ್ಳಿ ಗ್ರಾಮ ವಾಸಿಯಾದ ದುರ್ಗೇಶ್ ಎಂಬಾತನಿಗೆ ಮದುವೆಯಾಗಿ ಈಗಾಗಲೇ ಇಬ್ಬರು ಮಕ್ಕಳಿದ್ದರು. ಆದರೂ ದುರ್ಗೇಶ್ ಅವರು ಕವಿತಾ ಎಂಬಾಕೆಯೊಂದಿಗೆ 2020ರ ಡಿಸೆಂಬರ್ 17ರಂದು ಓಡಿ ಹೋಗಿ ಮತ್ತೆ ಮದುವೆಯಾಗಿದ್ದರು ಎನ್ನಲಾಗಿದೆ. ಇನ್ನು ಈ ಸಂಬಂಧ 13 ಮಂದಿಯ ವಿರುದ್ಧ ಎಫ್ಐಆರ್ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ತಿಳಿದು ಬಂದಿದೆ.
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮvijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.