ನೈರುತ್ಯ ಮುಂಗಾರು ಕರಾವಳಿ ಹಾಗೂ ಉತ್ತರ ಒಳನಾಡಿನಲ್ಲಿ ಚುರುಕಾಗಿದ್ದು, ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದ್ದು, ಮುಂದಿನ 48 ಗಂಟೆಗಳಲ್ಲಿ ಕರಾವಳಿ ಉತ್ತರ ಒಳನಾಡು, ದಕ್ಷಿಣ ಒಳನಾಡು ಸಾಧಾರಣ ಮಳೆಯಾಗುವ ಸಾಧ್ಯತೆಗಳಿದ್ದು, ಅಲರ್ಟ್ ಘೋಷಿಸಲಾಗಿದೆ.
ಇನ್ನು ಉತ್ತರ ಒಳನಾಡಿನ ಜಿಲ್ಲೆಗಳಾದ ಬೆಳಗಾವಿ, ಧಾರವಾಡ, ಗದಗ, ಕಲಬುರ್ಗಿ, ವಿಜಯಪುರ, ಬೀದರ ಸೇರಿದಂತೆ, ಮುಂದಿನ 24 ಗಂಟೆಗಳ ಉಡುಪಿ, ಉತ್ತರಕನ್ನಡದಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಪ್ರಮುಖ ಜಿಲ್ಲೆಯ ತಾಪಮಾನ
ಬೆಂಗಳೂರು: 28-19, ಮಂಗಳೂರು: 28-24, ಶಿವಮೊಗ್ಗ: 27-21 , ಬೆಳಗಾವಿ: 24-20, ಮೈಸೂರು: 28-19, ಚಿಕ್ಕಬಳ್ಳಾಪುರ: 28-19, ಕೋಲಾರ: 39-20, ತುಮಕೂರು: 28-19, ಉಡುಪಿ: 28-24, ಚಿಕ್ಕಮಗಳೂರು: 23-18, ಕೊಪ್ಪಳ: 29-22, ರಾಯಚೂರು: 32-23, ಯಾದಗಿರಿ: 30-23, ವಿಜಯಪುರ: 29-22, ಬೀದರ್: 28-21, ಕಲಬುರಗಿ: 31-22,ಬಾಗಲಕೋಟೆ: 30-22 ಡಿಗ್ರಿ ಸೆಲ್ಸಿಯಸ್ ಇರಲಿದೆ.




