ಪೆನ್ಷನ್ ತೆಗೆದುಕೊಳ್ಳುವವರಿಗೆ ಒಳ್ಳೆಯ ಸುದ್ದಿ: ಕೇಂದ್ರದ ಪ್ರಮುಖ ನಿರ್ಧಾರ

ಮೋದಿ ಸರ್ಕಾರ ಇತ್ತೀಚೆಗೆ ಪಿಂಚಣಿದಾರರಿಗೆ ಪರಿಹಾರ ನೀಡಲು ನಿರ್ಧರಿಸಿದ್ದು, ಪಿಂಚಣಿದಾರರು ಇನ್ನು ಮುಂದೆ ಪಿಂಚಣಿ ಸ್ಲಿಪ್ ಪಡೆಯಲು ಬ್ಯಾಂಕಿಗೆ ಹೋಗಬೇಕಾಗಿಲ್ಲ. ಹೌದು ಕೇಂದ್ರವು ಹೊಸ ಸೇವೆಗಳನ್ನು ಲಭ್ಯಗೊಳಿಸಿದ್ದು, ಇದು ಕೇಂದ್ರ ಸರ್ಕಾರದ ಪಿಂಚಣಿದಾರರಿಗೆ ಅನುಕೂಲವಾಗಲಿದೆ.…

employees-pensioners-vijayaprabha-news

ಮೋದಿ ಸರ್ಕಾರ ಇತ್ತೀಚೆಗೆ ಪಿಂಚಣಿದಾರರಿಗೆ ಪರಿಹಾರ ನೀಡಲು ನಿರ್ಧರಿಸಿದ್ದು, ಪಿಂಚಣಿದಾರರು ಇನ್ನು ಮುಂದೆ ಪಿಂಚಣಿ ಸ್ಲಿಪ್ ಪಡೆಯಲು ಬ್ಯಾಂಕಿಗೆ ಹೋಗಬೇಕಾಗಿಲ್ಲ. ಹೌದು ಕೇಂದ್ರವು ಹೊಸ ಸೇವೆಗಳನ್ನು ಲಭ್ಯಗೊಳಿಸಿದ್ದು, ಇದು ಕೇಂದ್ರ ಸರ್ಕಾರದ ಪಿಂಚಣಿದಾರರಿಗೆ ಅನುಕೂಲವಾಗಲಿದೆ.

ಕೇಂದ್ರ ಸರ್ಕಾರ ಈಗಾಗಲೇ ಬ್ಯಾಂಕುಗಳಿಗೆ ಪಿಂಚಣಿ ಅಥವಾ ಪಿಂಚಣಿ ಸ್ಲಿಪ್ ಅನ್ನು ಪಿಂಚಣಿದಾರರಿಗೆ ತಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ಇಮೇಲ್ ಮಾಡಲು ನಿರ್ದೇಶಿಸಿದೆ. ಇದರರ್ಥ ಪಿಂಚಣಿದಾರರು ತಮ್ಮ ಪಿಂಚಣಿ ಸ್ಲಿಪ್ ಅನ್ನು ವಾಟ್ಸಾಪ್ ಮೂಲಕ ಪಡೆಯಬಹುದು. ಇದಕ್ಕಾಗಿ ಬ್ಯಾಂಕ್‌ಗೆ ಹೋಗುವ ಅಗತ್ಯವಿಲ್ಲ.

ಕೋವಿಡ್ 19 ರ ಪ್ರತಿಕೂಲ ಪರಿಸ್ಥಿತಿಗಳಲ್ಲಿ ಪಿಂಚಣಿದಾರರಿಗೆ ಪರಿಹಾರ ನೀಡಲು ಕೇಂದ್ರ ಸರ್ಕಾರ ಈಗ ನಿರ್ಧರಿಸಿದೆ ಎಂಬುದು ಗಮನಾರ್ಹ. ಇನ್ನು ಪಿಂಚಣಿ ಸ್ಲಿಪ್ ಅನೇಕ ಸಂದರ್ಭದಲ್ಲಿ ಅಗತ್ಯವಾಗಬಹುದು. ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು, ಡಿಯರ್ ನೆಸ್ ಪರಿಹಾರದಂತಹ ವಿಷಯಗಳಿಗೆ ನಿಮಗೆ ಪಿಂಚಣಿ ಸ್ಲಿಪ್ ಅಗತ್ಯವಿದೆ. ಪಿಂಚಣಿ ಸ್ಲಿಪ್‌ನಲ್ಲಿ ತಿಂಗಳಿಗೆ ಎಷ್ಟು ಪಿಂಚಣಿ ಬರುತ್ತಿದೆ? ಏನಾದರು ತೆರಿಗೆ ಕಡಿತಗೊಳಿಸಲಾಗಿದೆಯೇ? ಅಂತಹ ವಿಷಯಗಳು ಇರುತ್ತವೆ.

Vijayaprabha Mobile App free
WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.