Horrible Accident: ಐಷಾರಾಮಿ ಕಾರು ಗುದ್ದಿ ಸುದ್ದಿ ಮಾದ್ಯಮದ ಕ್ಯಾಮೆರಾಮನ್ ಸಾವು!

ಚೆನ್ನೈ: ಐಷಾರಾಮಿ ಕಾರೊಂದು ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ಸುದ್ದಿ ವಾಹಿನಿಯೊಂದರ ಕ್ಯಾಮೆರಾಮ್ಯಾನ್ ಮೃತಪಟ್ಟಿರುವ ಘಟನೆ ಚೆನ್ನೈನಲ್ಲಿ ಮಂಗಳವಾರ ರಾತ್ರಿ ನಡೆದಿದೆ. ಪಾಂಡಿ ಬಜಾರ್‌ನ ಪ್ರದೀಪ್ ಕುಮಾರ್ ಮೃತ ಕ್ಯಾಮರಾಮ್ಯಾನ್.  ಇವರು ತೆಲುಗಿನ ಜನಪ್ರಿಯ…

ಚೆನ್ನೈ: ಐಷಾರಾಮಿ ಕಾರೊಂದು ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ಸುದ್ದಿ ವಾಹಿನಿಯೊಂದರ ಕ್ಯಾಮೆರಾಮ್ಯಾನ್ ಮೃತಪಟ್ಟಿರುವ ಘಟನೆ ಚೆನ್ನೈನಲ್ಲಿ ಮಂಗಳವಾರ ರಾತ್ರಿ ನಡೆದಿದೆ. ಪಾಂಡಿ ಬಜಾರ್‌ನ ಪ್ರದೀಪ್ ಕುಮಾರ್ ಮೃತ ಕ್ಯಾಮರಾಮ್ಯಾನ್. 

ಇವರು ತೆಲುಗಿನ ಜನಪ್ರಿಯ ಸುದ್ದಿ ವಾಹಿನಿಯೊಂದರಲ್ಲಿ ಕ್ಯಾಮೆರಾಮ್ಯಾನ್‌ ಆಗಿ ಕೆಲಸ ಮಾಡುವುದರ ಜತೆ ಪಾರ್ಟ್‌ ಟೈಮ್‌ ರ್‍ಯಾಪಿಡೋ ಚಾಲಕರಾಗಿ ಕೆಲಸ ಮಾಡುತ್ತಿದ್ದರು.

ಮಧುರವಾಯಲ್-ತಾಂಬರಂ ಎಲಿವೇಟೆಡ್ ಬೈಪಾಸ್‌ನಲ್ಲಿ ತನ್ನ ದ್ವಿಚಕ್ರ ವಾಹನದಲ್ಲಿ ಪ್ರದೀಪ್‌ ತೆರಳುತ್ತಿದ್ದರು. ಈ ವೇಳೆ ವೇಗವಾಗಿ ಬಂದ ಐಷಾರಾಮಿ ಬಿಎಂಡಬ್ಲ್ಯು ಕಾರು ಪ್ರದೀಪ್‌ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಕೂಡಲೇ ಪ್ರದೀಪ್ ಬೈಕ್‌ನಿಂದ ಕೆಳಗೆ ಬಿದ್ದಿದ್ದಾರೆ. ಪರಿಣಾಮ ಕಾರಿನಡಿಯಲ್ಲಿ ಪ್ರದೀಪ್‌ ದೇಹ ಸಿಲುಕಿಕೊಂಡಿದೆ. ಘಟನಾ ಸ್ಥಳದಿಂದ ಸುಮಾರು 100 ಮೀಟರ್ ದೂರದವರೆಗೂ ಬೈಕ್ ಸವಾರ ಪ್ರದೀಪ್ ಅವರ ದೇಹವನ್ನು ಕಾರು ಎಳೆದುಕೊಂಡು ಹೋಗಿರುವುದು ಕಂಡುಬಂದಿದೆ.

Vijayaprabha Mobile App free

ಅಪಘಾತವಾದ ದ್ವಿಚಕ್ರ ವಾಹನವನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಕೂಡಲೇ ಅಪಘಾತ ಸ್ಥಳ ತಲುಪಿದ ಪೊಲೀಸರಿಗೆ ಬೈಕ್ ಬಿದ್ದ ಸ್ಥಳದಲ್ಲಿ ಏನನ್ನೋ ಎಳೆದುಕೊಂಡು ಹೋದ ಗುರುತು ಪತ್ತೆಯಾಗಿದ್ದು, ಬಳಿಕ 100 ಮೀಟರ್ ದೂರದಲ್ಲಿ ಪ್ರದೀಪ್ ಮೃತದೇಹ ಪತ್ತೆಯಾಗಿರುವುದು ಅಪಘಾತದ ಭೀಕರತೆಯನ್ನು ಬಿಚ್ಚಿಟ್ಟಿದೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.