BIG NEWS: ಕಾರಣವೇ ಇಲ್ಲದೆ ಸಾಯುತ್ತಿರುವ ಕುರಿಗಳು; ಒಂದೇ ಕಡೆ 40 ಕುರಿಗಳು ಸಾವು!

ಚಿಕ್ಕಮಗಳೂರು: ಏಕಾಏಕಿ 40 ಕುರಿಗಳು ಒಂದೇ ಕಡೆಯಲ್ಲಿ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರಿನ ಕಡೂರು ತಾಲೂಕಿನ ಎರೆಹಳ್ಳಿಯಲ್ಲಿ ಈ ಘಟನೆ ನಡೆದಿದ್ದು ಕುರಿಗಾಹಿಗಳಲ್ಲಿ ಅತಂತಕಕ್ಕೆ ಎಡೆ ಮಾಡಿದೆ. ಹೌದು ನಾಗಮಂಗಲದ ರೈಲ್ವೆಗೇಟ್ ಪ್ರದೇಶಕ್ಕೆ ಕುರಿಗಳು ಮೇಯಲು…

sheeps-vijayaprabha-news

ಚಿಕ್ಕಮಗಳೂರು: ಏಕಾಏಕಿ 40 ಕುರಿಗಳು ಒಂದೇ ಕಡೆಯಲ್ಲಿ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರಿನ ಕಡೂರು ತಾಲೂಕಿನ ಎರೆಹಳ್ಳಿಯಲ್ಲಿ ಈ ಘಟನೆ ನಡೆದಿದ್ದು ಕುರಿಗಾಹಿಗಳಲ್ಲಿ ಅತಂತಕಕ್ಕೆ ಎಡೆ ಮಾಡಿದೆ.

ಹೌದು ನಾಗಮಂಗಲದ ರೈಲ್ವೆಗೇಟ್ ಪ್ರದೇಶಕ್ಕೆ ಕುರಿಗಳು ಮೇಯಲು ಹೋಗಿದ್ದು, ಸೊಪ್ಪು-ಸೆದೆ ತಿಂದ ನಂತರ ಕಾರಣವೇ ಇಲ್ಲದೆ ಮೇಕೆ, ಕುರಿಗಳು ಸಾವನ್ನಪ್ಪಿದ್ದು ರೈತರ ಆತಂಕಕ್ಕೆ ಕಾರಣವಾಗಿದ್ದು, ಕ್ಷಣಕ್ಷಣಕ್ಕೂ ಈ ಸಂಖ್ಯೆ ಹೆಚ್ಚುತ್ತಿದ್ದು, ಇನ್ನೂ 150 ಕುರಿಗಳು ಸಾವನ್ನಪ್ಪುವ ಸಾಧ್ಯತೆ ಇದೆ ಎನ್ನಲಾಗಿದೆ ಕುರಿಗಳನ್ನೇ ನಂಬಿಕೊಂಡು ಜೀವನ ಮಾಡುತ್ತಿರುವ ಕುರಿಗಾಹಿಗಳಿಗೆ ಆತಂಕ ಶುರುವಾಗಿದೆ.

ಕಳೆದ ಮೂರೂ ನಾಲ್ಕು ದಿನದಿಂದ ರಾಜ್ಯ ಹಲವೆಡೆ ಮಳೆಯಾಗಿದ್ದು, ಕುರಿಗಳು ಮಳೆಯಲ್ಲಿ ನೆನೆದಿದ್ದು, ಬೆಳಗ್ಗೆಯಿಂದ ಒಂದೊಂದೆ ಕುರಿಗಳು ಸಾವನ್ನಪ್ಪುತ್ತಿದ್ದು, ಸ್ಥಳಕ್ಕೆ ತಹಶೀಲ್ದಾರ್‌ ಹಾಗೂ ಪಶುವೈದ್ಯರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Vijayaprabha Mobile App free

ಇದನ್ನು ಓದಿ: ಕುರಿಗಾಹಿಗಳಿಗೆ ಭಯ ಹುಟ್ಟಿಸಿದ ಹಿರೇಬೇನೆ ರೋಗ; ಕುರಿ,ಮೇಕೆಗಳಿಗೆ ಹಬ್ಬುತ್ತಿರುವ ರೋಗಕ್ಕೆ ವೈದ್ಯರು ತಿಳಿಸಿದ ಮನೆಮದ್ದು ಏನು ಗೊತ್ತೇ?

 

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.