ಚಿಕ್ಕಮಗಳೂರು: ಏಕಾಏಕಿ 40 ಕುರಿಗಳು ಒಂದೇ ಕಡೆಯಲ್ಲಿ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರಿನ ಕಡೂರು ತಾಲೂಕಿನ ಎರೆಹಳ್ಳಿಯಲ್ಲಿ ಈ ಘಟನೆ ನಡೆದಿದ್ದು ಕುರಿಗಾಹಿಗಳಲ್ಲಿ ಅತಂತಕಕ್ಕೆ ಎಡೆ ಮಾಡಿದೆ.
ಹೌದು ನಾಗಮಂಗಲದ ರೈಲ್ವೆಗೇಟ್ ಪ್ರದೇಶಕ್ಕೆ ಕುರಿಗಳು ಮೇಯಲು ಹೋಗಿದ್ದು, ಸೊಪ್ಪು-ಸೆದೆ ತಿಂದ ನಂತರ ಕಾರಣವೇ ಇಲ್ಲದೆ ಮೇಕೆ, ಕುರಿಗಳು ಸಾವನ್ನಪ್ಪಿದ್ದು ರೈತರ ಆತಂಕಕ್ಕೆ ಕಾರಣವಾಗಿದ್ದು, ಕ್ಷಣಕ್ಷಣಕ್ಕೂ ಈ ಸಂಖ್ಯೆ ಹೆಚ್ಚುತ್ತಿದ್ದು, ಇನ್ನೂ 150 ಕುರಿಗಳು ಸಾವನ್ನಪ್ಪುವ ಸಾಧ್ಯತೆ ಇದೆ ಎನ್ನಲಾಗಿದೆ ಕುರಿಗಳನ್ನೇ ನಂಬಿಕೊಂಡು ಜೀವನ ಮಾಡುತ್ತಿರುವ ಕುರಿಗಾಹಿಗಳಿಗೆ ಆತಂಕ ಶುರುವಾಗಿದೆ.
ಕಳೆದ ಮೂರೂ ನಾಲ್ಕು ದಿನದಿಂದ ರಾಜ್ಯ ಹಲವೆಡೆ ಮಳೆಯಾಗಿದ್ದು, ಕುರಿಗಳು ಮಳೆಯಲ್ಲಿ ನೆನೆದಿದ್ದು, ಬೆಳಗ್ಗೆಯಿಂದ ಒಂದೊಂದೆ ಕುರಿಗಳು ಸಾವನ್ನಪ್ಪುತ್ತಿದ್ದು, ಸ್ಥಳಕ್ಕೆ ತಹಶೀಲ್ದಾರ್ ಹಾಗೂ ಪಶುವೈದ್ಯರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.