ಅಯೋಧ್ಯೆ: ಅಯೋಧ್ಯೆಯಲ್ಲಿ ರಾಮ ಲಲ್ಲಾ ವಿಗ್ರಹ ಪ್ರತಿಷ್ಠಾಪನೆಯ ಮೊದಲ ವಾರ್ಷಿಕೋತ್ಸವದ ಆಚರಣೆಗಳು ಶನಿವಾರ ಪ್ರಾರಂಭವಾಗಿದ್ದು, ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಹೆಚ್ಚಿನ ಸಂಖ್ಯೆಯ ಭಕ್ತರು ಪವಿತ್ರ ನಗರಕ್ಕೆ ಭೇಟಿ ನೀಡುತ್ತಿದ್ದಾರೆ.
ಶನಿವಾರದಿಂದ ರಾಮ ಮಂದಿರ ಸಂಕೀರ್ಣದಲ್ಲಿ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಆರಂಭವಾಗಲಿವೆ. ಯಜುರ್ವೇದ ಪಠಣದೊಂದಿಗೆ ವಾರ್ಷಿಕೋತ್ಸವದ ಆಚರಣೆಗಳು ಪ್ರಾರಂಭವಾದವು.
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ರಾಮಲಲ್ಲಾ ಮೂರ್ತಿಗೆ ಅಭಿಷೇಕ ನೆರವೇರಿಸಲಿದ್ದಾರೆ. ಮಧ್ಯಾಹ್ನ 12.20ರ ಸುಮಾರಿಗೆ ದೇವರ ಭವ್ಯ ಆರತಿ ನಡೆಯಲಿದ್ದು, ನಂತರ ದೇವರಿಗೆ 56 ಭಕ್ಷ್ಯಗಳನ್ನು ಅರ್ಪಿಸಲಾಗುತ್ತದೆ.
ಪ್ರಾಣ ಪ್ರತಿಷ್ಠಾಪನಾ ಮಹೋತ್ಸವದ ಪ್ರಥಮ ವರ್ಷದ ಹಿನ್ನಲೆ ರಾಮ ಲಲ್ಲಾ ದೇವಾಲಯ ಆವರಣವನ್ನು ಹೂವುಗಳಿಂದ ಅಲಂಕರಿಸಲಾಗಿದೆ.
ಜನವರಿ 11 ರಿಂದ 13 ರವರೆಗೆ ನಿಗದಿಯಾಗಿರುವ ಆಚರಣೆಗಳು, ಕಳೆದ ವರ್ಷ ಐತಿಹಾಸಿಕ ಸಮಾರಂಭಕ್ಕೆ ಹಾಜರಾಗಲು ಸಾಧ್ಯವಾಗದ ಸಾಮಾನ್ಯ ಜನರನ್ನು, ಸುಮಾರು 110 ಆಹ್ವಾನಿತ ವಿಐಪಿಗಳೊಂದಿಗೆ ಸೇರಿಸುವ ಗುರಿಯನ್ನು ಹೊಂದಿವೆ ಎಂದು ದೇವಾಲಯದ ಟ್ರಸ್ಟ್ ತಿಳಿಸಿದೆ.
ಟ್ರಸ್ಟ್ ಈಗಾಗಲೇ ದೇಶಾದ್ಯಂತದ ಸಂತರು ಮತ್ತು ಭಕ್ತರಿಗೆ ಆಹ್ವಾನಗಳನ್ನು ನೀಡಿದೆ, ರೈ ನಿವಾಸಿಗಳು ಮತ್ತು ಯಾತ್ರಾರ್ಥಿಗಳನ್ನು ಆಚರಣೆಗಳಲ್ಲಿ ಭಾಗವಹಿಸಲು ಕರೆಕೊಟ್ಟಿದೆ, ಮೂರು ದಿನಗಳ ಹಬ್ಬದ ಸಮಯದಲ್ಲಿ ಕನಿಷ್ಠ ಒಂದು ದಿನದ ಭೇಟಿ ನೀಡಿ ಅಯೋಧ್ಯೆಯ ಆಧ್ಯಾತ್ಮಿಕ ವಾತಾವರಣವನ್ನು ಅನುಭವಿಸಿ ಎಂದಿದ್ದಾರೆ.