ನವ ಭಾರತ ನಿರ್ಮಾಣವೇ ಎನ್‌ಡಿಎ ಸರ್ಕಾರದ ಗುರಿಯಾಗಿದೆ: ಪ್ರಧಾನಿ ಮೋದಿ

ನವದೆಹಲಿ: ನವ ಭಾರತವನ್ನು ನಿರ್ಮಾಣ ಮಾಡಿ ಭಾರತವನ್ನು ಅಭಿವೃದ್ಧಿ ಹೊಂದಿದ ದೇಶವಾಗಿಸುವುದು ಎನ್‌ಡಿಎ ಸರ್ಕಾರದ ಉದ್ದೇಶವಾಗಿದ್ದು, ಕೇಂದ್ರದಲ್ಲಿ ಅಧಿಕಾರದಲ್ಲಿರುವ ನಮ್ಮ ಸರ್ಕಾರ ಮತ ಬ್ಯಾಂಕ್‌ ರಾಜಕಾರಣದಿಂದ ಸಾವಿರಾರು ಮೈಲು ದೂರದಲ್ಲಿದೆ. ‘ಜನರಿಂದ, ಜನರಿಗಾಗಿ, ಜನರಿಗೋಸ್ಕರ…

ನವದೆಹಲಿ: ನವ ಭಾರತವನ್ನು ನಿರ್ಮಾಣ ಮಾಡಿ ಭಾರತವನ್ನು ಅಭಿವೃದ್ಧಿ ಹೊಂದಿದ ದೇಶವಾಗಿಸುವುದು ಎನ್‌ಡಿಎ ಸರ್ಕಾರದ ಉದ್ದೇಶವಾಗಿದ್ದು, ಕೇಂದ್ರದಲ್ಲಿ ಅಧಿಕಾರದಲ್ಲಿರುವ ನಮ್ಮ ಸರ್ಕಾರ ಮತ ಬ್ಯಾಂಕ್‌ ರಾಜಕಾರಣದಿಂದ ಸಾವಿರಾರು ಮೈಲು ದೂರದಲ್ಲಿದೆ. ‘ಜನರಿಂದ, ಜನರಿಗಾಗಿ, ಜನರಿಗೋಸ್ಕರ ಅಭಿವೃದ್ಧಿ’ ಎಂಬ ಮಂತ್ರದೊಂದಿಗೆ ನಮ್ಮ ಸರ್ಕಾರ ನಡೆಯುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ.

ಶನಿವಾರ ‘ಹಿಂದುಸ್ತಾನ್‌ ಟೈಮ್ಸ್‌’ ಆಂಗ್ಲಪತ್ರಿಕೆ ಆಯೋಜಿಸಿದ್ದ ನಾಯಕತ್ವ ಶೃಂಗದಲ್ಲಿ ಪ್ರಧಾನ ಭಾಷಣಕಾರರಾಗಿ ಮಾತನಾಡಿ, ಹಿಂದಿನ ಸರ್ಕಾರಗಳು ಮತ ಬ್ಯಾಂಕ್‌ ರಾಜಕಾರಣ ಮಾಡಿದ್ದರಿಂದ ಆದ ಅತಿದೊಡ್ಡ ತೊಂದರೆ ಏನೆಂದರೆ, ಅಸಮತೋಲನದ ಅಸಮಾನತೆಗೆ ದೇಶದಲ್ಲಿ ಅವಕಾಶ ಹೆಚ್ಚುತ್ತಾ ಹೋಯಿತು ಎಂದು ಹೇಳಿದರು.

90ರ ದಶಕದಲ್ಲಿ ಭಾರತ 10 ವರ್ಷದಲ್ಲಿ ಐದು ಚುನಾವಣೆಗಳನ್ನು ಎದುರಿಸುವಂತಾಗಿತ್ತು. ದೇಶದಲ್ಲಿ ಅಷ್ಟೊಂದು ಅಸ್ಥಿರತೆ ಇತ್ತು. ನಮ್ಮ ದೇಶದ ಕತೆ ಇಷ್ಟೆ, ಹೀಗೇ ನಡೆಯುತ್ತದೆ ಎಂದು ಪತ್ರಿಕೆಗಳಲ್ಲಿ ಲೇಖನ ಬರೆಯುತ್ತಿದ್ದ ತಜ್ಞರು ಹೇಳುತ್ತಿದ್ದರು. ಆದರೆ ದೇಶದ ನಾಗರಿಕರು ಅಂತಹ ಪರಿಣತರ ಎಣಿಕೆಯನ್ನು ಮತ್ತೊಮ್ಮೆ ಸುಳ್ಳಾಗಿಸಿದರು. ವಿಶ್ವಾದ್ಯಂತ ಸರ್ಕಾರಗಳು ಪ್ರತಿ ಚುನಾವಣೆಗೂ ಬದಲಾಗುತ್ತಿದ್ದರೆ ಭಾರತದಲ್ಲಿ ಮಾತ್ರ ನಮ್ಮ ಸರ್ಕಾರವನ್ನು ಸತತ ಮೂರು ಬಾರಿ ಆಯ್ಕೆ ಮಾಡಿದರು ಎಂದು ತಿಳಿಸಿದರು.

Vijayaprabha Mobile App free

ಈ ಹಿಂದೆ ಸರ್ಕಾರಗಳನ್ನು ಚುನಾವಣೆ ಗೆಲ್ಲುವ ಉದ್ದೇಶದಿಂದ ಮಾತ್ರ ನಡೆಸಲಾಗುತ್ತಿತ್ತು. ಯೋಜನೆಗಳನ್ನು ಘೋಷಣೆ ಮಾಡಿ ಮತ ಬ್ಯಾಂಕ್‌ ಸೃಷ್ಟಿ ಮಾಡಿಕೊಳ್ಳಲಾಗುತ್ತಿತ್ತು. ಅಭಿವೃದ್ಧಿ ಮಂಡಳಿಗಳನ್ನು ನೇಮಿಸಲಾಯಿತಾದರೂ ಅವು ಕಾಣಲಿಲ್ಲ. ಇಂತಹ ಅಸಮತೋಲನದ ಪರಿಸ್ಥಿತಿಯಿಂದಾಗಿ ಸರ್ಕಾರದ ಮೇಲಿದ್ದ ಸಾರ್ವಜನಿಕ ವಿಶ್ವಾಸಕ್ಕೆ ಕುಂದುಂಟಾಯಿತು. ಆ ವಿಶ್ವಾಸವನ್ನು ನಾವೀಗ ಮರುಸ್ಥಾಪಿಸಿದ್ದೇವೆ. ಈ ಸಾಮಾಜಿಕ ಜಾಲತಾಣದ ಯುಗದಲ್ಲೂ ಸುಳ್ಳು ಮಾಹಿತಿ, ತಪ್ಪು ಮಾಹಿತಿಯ ಕಾಲದಲ್ಲೂ ಜನರು ನಮ್ಮ ಸರ್ಕಾರದ ಮೇಲೆ ವಿಶ್ವಾಸವಿರಿಸಿದ್ದಾರೆ ಎಂದು ಮೋದಿ ಹೇಳಿದರು.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.