Bengaluru: ಆಕ್ಸಿಸ್ ಬ್ಯಾಂಕ್ ನೌಕರರು ಸೇರಿದಂತೆ, 8 ಸೈಬರ್ ಕ್ರೈಂ ವಂಚಕರ ಬಂಧನ!

ಬೆಂಗಳೂರು: ಬ್ಯಾಂಕಿನಲ್ಲೇ ಕುಳಿತು ಟ್ರೇಡಿಂಗ್ ನೆಪದಲ್ಲಿ ಕೋಟಿಗಟ್ಟಲೆ ಹಣ ಲಪಟಾಯಿಸಿದ್ದ ಆಕ್ಸಿಸ್ ಬ್ಯಾಂಕ್ ನೌಕರರು ಸೇರಿದಂತೆ 8 ಮಂದಿ ಸೈಬರ್ ಕ್ರೈಂ‌ ವಂಚಕರನ್ನ ಬೆಂಗಳೂರು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ನಡೆದಿದ್ದೇನು?: ದಿನಾಂಕ:01/07/2024 ರಂದು ಯಲಹಂಕ…

ಬೆಂಗಳೂರು: ಬ್ಯಾಂಕಿನಲ್ಲೇ ಕುಳಿತು ಟ್ರೇಡಿಂಗ್ ನೆಪದಲ್ಲಿ ಕೋಟಿಗಟ್ಟಲೆ ಹಣ ಲಪಟಾಯಿಸಿದ್ದ ಆಕ್ಸಿಸ್ ಬ್ಯಾಂಕ್ ನೌಕರರು ಸೇರಿದಂತೆ 8 ಮಂದಿ ಸೈಬರ್ ಕ್ರೈಂ‌ ವಂಚಕರನ್ನ ಬೆಂಗಳೂರು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ನಡೆದಿದ್ದೇನು?: ದಿನಾಂಕ:01/07/2024 ರಂದು ಯಲಹಂಕ ವಾಸಿಯಾದ ಪಿಯಾದುದಾರರು ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರನ್ನು ಸಲ್ಲಿಸಿರುತ್ತಾರೆ. ದೂರಿನಲ್ಲಿ ಪಿರಾಮದಾರರನ್ನು ಮಾರ್ಜಿ-2024 ನೇ ಸಾಲಿನಲ್ಲಿ ಒಂದು ವ್ಯಾಟ್ಸ್ ಆಫ್ ಗ್ರೂಪ್‌ನ ಸದಸ್ಯರನ್ನಾಗಿ ಸೇರಿಸಿಕೊಂಡಿದ್ದು, ಗ್ರೂಪ್ ಮೆಸೆಜ್‌ನಲ್ಲಿ ಷೇರ್ ಟ್ರೆಡಿಂಗ್ ಬಗ್ಗೆ ತರಬೇತಿಯನ್ನು ನೀಡಿ, ನಂತರ ವಿ.ಐ.ಪಿ ಟ್ರೆಡಿಂಗ್ ಆಕೌಂಟ್‌ನಲ್ಲಿ ಹಣವನ್ನು ಹೂಡಿದರೆ ಹತ್ತು ಪಟ್ಟು ಹೆಚ್ಚಿನ ಹಣವನ್ನು ನೀಡುವುದಾಗಿ ಅಮಿಷವೊಡ್ಡಿರುತ್ತಾರೆ.

ಪಿರಾದುದಾರರು ಈ ಅಮಿಷಕ್ಕೆ ಒಳಗಾಗಿ ಮೊದಲು 50 ಸಾವಿರ ಹಣವನ್ನು ವಿ.ಐ.ಪಿ ಟ್ರೆಡಿಂಗ್ ಅಕೌಂಟ್‌ಗೆ ಜಮಾ ಮಾಡಿದ ನಂತರ, ಪಿಯಾದುವಾರರ ವಿ.ಐ.ಪಿ ಟ್ರೇಡಿಂಗ್ ಆಕೌಂಟ್‌ನಲ್ಲಿ ಹಣ ದ್ವಿಗುಣವಾಗಿರುವುದಾಗಿ ಮೇಸೆಜ್ ಬಂದಿರುತ್ತದೆ. ಹಾಗೂ ಪಿರಾಮದಾರರಿಗೆ ಮೇಲಿಂದ ಮೇಲೆ ಹಣವನ್ನು ಮತ್ತಷ್ಟು ಹೂಡುವಂತೆ ವ್ಯಾಟ್ಸ್ ಆಫ್ ಮುಖಾಂತರ ಒತ್ತಡವನ್ನು ಹೇರಿರುತ್ತಾರೆ. ಹೀಗೆ ಹಂತ ಹಂತವಾಗಿ ಪಿರಾದುದಾರರ ಕಡೆಯಿಂದ ಮಾರ್ಜಿ-2024ನೇ ಸಾಲಿನಿಂದ ಜೂನ್-2024 ರ ಅವದಿಯಲ್ಲಿ ಒಟ್ಟು 2 1.5 ಕೋಟಿ ಹಣವನ್ನು ವಿವಿಧ ಬ್ಯಾಂಕ್ ಅಕೌಂಟ್‌ ಗಳಿಗೆ ಹೂಡಿಕೆ ಮಾಡಿಸಿಕೊಂಡಿರುತ್ತಾರೆ.

Vijayaprabha Mobile App free

ಪಿರಾದುದಾರರು ವಿ.ಐ.ಪಿ ಟ್ರೆಡಿಂಗ್ ಆಕೌಂಟ್‌ನಲ್ಲಿ ಹೂಡಿಕೆ ಮಾಡಿದ ಹಣಕ್ಕೆ * 28 ಕೋಟಿ ಆಗಿರುವುದಾಗಿ ವ್ಯಾಟ್ಸ್ ಆಫ್‌ನಲ್ಲಿ ತೋರಿಸಿ, ಈ ಹಣವನ್ನು ಪಿರಾದುದಾರರು ಹಿಂಪಡೆಯಬೇಕಾದರೆ ಸರ್ವರ್ ಮ್ಯಾನೆಜ್ ಮೆಂಟ್ ಫೀ ಆದ * 75 ಲಕ್ಷ ಹಣವನ್ನು ಸಂದಾಯ ಮಾಡಿದರೆ ಮಾತ್ರ ₹ 28 ಕೋಟಿ ಹಣವನ್ನು ಪಿರಾದುದಾರರು ಹಿಂಪಡೆಯಬಹುದೆಂದು ತಾಕೀತು ಮಾಡಿರುತ್ತಾರೆ. ಈ ಕುರಿತು ಅನುಮಾನಗೊಂಡ ಪಿರಾದುದಾರರು ತಾನು ಮೋಸಗೊಂಡಿರುವ ಬಗ್ಗೆ ಅರಿತು ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರನ್ನು ಸಲ್ಲಿಸಿರುತ್ತಾರೆ. ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣವು ದಾಖಲಾಗಿರುತ್ತದೆ.

ಪ್ರಕರಣದ ತನಿಖೆಯನ್ನು ಮುಂದುವರೆಸಿದ ಪೊಲೀಸರು, ವಿವಿಧ ಆಯಾಮಗಳಲ್ಲಿ ತನಿಖೆ ಕೈಗೊಂಡು, ಪಿರಾದುದಾರರ ಹೂಡಿಕೆ ಮಾಡಿದ್ದ ವಿವಿಧ ಬ್ಯಾಂಕ್ ಖಾತೆಯ ವಿವರವನ್ನು ಪಡೆದುಕೊಂಡು ಎನ್.ಸಿ.ಆರ್.ಪಿ~ 1930 ಪೋರ್ಟಲ್‌ನಲ್ಲಿ ಎರಡು ಕರೆಂಟ್ ಅಕೌಂಟ್‌ಗಳು ಬೆಂಗಳೂರಿನ ನಾಗರಭಾವಿ ಆಕ್ಸಿಸ್ ಬ್ಯಾಂಕ್ ಶಾಖೆಯದಾಗಿದ್ದು, ಈ ಖಾತೆದಾರರು ಚಿಕ್ಕಮಗಳೂರಿನವರಾಗಿದ್ದರಿಂದ ತನಿಖಾಧಿಕಾರಿಗಳು ನಾಗರಭಾವಿ ಆಕ್ಸಿಸ್ ಬ್ಯಾಂಕ್ ಶಾಖೆಯ ಮ್ಯಾನೇಜರ್‌ನನ್ನು ವಿಚಾರಣೆ ಮಾಡಲಾಗಿ ಕರೆಂಟ್ ಅಕೌಂಟ್‌ದಾರರು ಬೆಂಗಳೂರಿನಲ್ಲಿ ವಾಸಿಸುವ ಬಗ್ಗೆಯಾಗಲೀ ಅಥವಾ ಬಿಸಿನೆಸ್ ಮಾಡುವ ಬಗ್ಗೆಯಾಗಲೀ ದಾಖಲೆಗಳನ್ನು ಸಲ್ಲಿಸಿರುವುದಿಲ್ಲವೆಂಬುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿರುತ್ತದೆ. ಮುಂದುವರೆದು ಅದೇ ಬ್ಯಾಂಕ್‌ನಲ್ಲಿ ಇನ್ನೂ ನಾಲ್ಕು ಬ್ಯಾಂಕ್ ಖಾತೆಗಳು ಇದೇ ರೀತಿ ತೆರೆದಿದ್ದು, ತನಿಖೆಯಿಂದ ತಿಳಿದು ಬಂದಿದ್ದು, ಈ ಮೇಲ್ಕಂಡ ಎಲ್ಲಾ ಆರು ಬ್ಯಾಂಕ್ ಖಾತೆಗಳಿಗೆ ಒಟ್ಟು 97 ಕೋಟಿ ಹಣದ ವಹಿವಾಟು ನಡೆದಿರುವ ಬಗ್ಗೆ ತನಿಖೆಯಿಂದ ತಿಳಿದುಬಂದಿರುತ್ತದೆ. ಈ ಬಗ್ಗೆ ಅಕ್ಸಿಸ್ ಬ್ಯಾಂಕ್ ಶಾಖೆಯ ಮ್ಯಾನೇಜರ್ ಹಾಗೂ ಮೂವರು ಸೇಲ್ಸ್ ಎಕ್ಸಿಕ್ಯೂಟಿವ್ ರವರುಗಳು ಶಾಮೀಲಾಗಿರುವ ಬಗ್ಗೆ ತನಿಖೆಯಿಂದ ದೃಢಪಟ್ಟಿದ್ದರಿಂದ ಹಾಗೂ ಅವರುಗಳು ತನ್ನೊಪ್ಪಿಕೊಂಡಿದ್ದರಿಂದ, ದಿನಾಂಕ:26/09/2024 ರಂದು ಮ್ಯಾನೇಜರ್ ಹಾಗೂ ಮೂವರು ಸೇಲ್ಸ್ ಎಕ್ಸಿಕ್ಯೂಟಿವ್ ರವರುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.

ನಾಲ್ವರು ಆರೋಪಿಗಳನ್ನು ಮಾನ್ಯ ನ್ಯಾಯಾಲಕ್ಕೆ ಹಾಜರುಪಡಿಸಿ, 12 ದಿನಗಳ ಕಾಲ ಪೊಲೀಸ್ ಅಭಿರಕ್ಷೆಗೆ ಪಡೆಯಲಾಗಿದೆ ಎಂದು ಪೊಲೀಸ್ ಕಮಿಷನರ್ ಬಿ.ದಯಾನಂದ ತಿಳಿಸಿದ್ದಾರೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.