ಸಕ್ಕರೆ ಕಾಯಿಲೆ ಅಥವಾ ಸಿಹಿ ಮೂತ್ರಕ್ಕೆ ಮನೆ ಔಷದಿ

ಮಧುಮೇಹಕ್ಕೆ (ಸಕ್ಕರೆ ಕಾಯಿಲೆ ಅಥವಾ ಸಿಹಿ ಮೂತ್ರ) ಮನೆ ಔಷಧಿ:

1. 4 ತೊಲ ಅತ್ತಿ ಚಕ್ಕೆಯನ್ನು, 30 ತೊಲ ನೀರಿನಲ್ಲಿ ಹಾಕಿ ಕುದಿಸಿ, 8 ಅಂಶ ಮಾಡಬೇಕು, ಈ ಕಷಾಯವನ್ನು ಸಿಹಿಮೂತ್ರರೋಗಿಗಳು ಸೇವಿಸಿದರೆ ಸಿಹಿಮೂತ್ರದ ಬಾಧೆ ನಿವಾರಣೆಯಾಗುತ್ತದೆ. ಈ ಕಷಾಯದಿಂದ ಹುಣ್ಣು (ಗ್ಯಾಂಗ್ರಿನ್) ತೊಳೆದರೆ ಮಾಯುತ್ತದೆ. ಈ ಚಕ್ಕೆಯನ್ನು ನುಣ್ಣಗೆ ಪುಡಿಮಾಡಿ ಮಧುಮೇಹ ರೋಗಿಗಳು ಸೇವಿಸಿದರೆ ರೋಗ ನಿವಾರಣೆಯಾಗುತ್ತದೆ.

2. ಹಾಗಲ ಬಳ್ಳಿ ಸಮೂಲ ತಂದು ಒಣಗಿಸಿ ಪುಡಿ ಮಾಡಿಕೊಂಡು, ರಾತ್ರಿ ಮತ್ತು ಬೆಳಿಗ್ಗೆ ಲಿಂಬೇ ರಸದಲ್ಲಿ ಸೇವಿಸಬೇಕು.

Advertisement

3.10 ಗ್ರಾಂ ತುಂಬೇ ಸೊಪ್ಪಿಗೆ, 2-3 ಕರಿ ಮೆಣಸಿನಕಾಳು ಹಾಕಿ. ನೀರಿನಲ್ಲಿ ತೇಯ್ದು (ಅರೆದು) 21 ದಿನ ಸೇವಿಸಬೇಕು.

4. ಕಹಿ ಬೇವಿನ ಚಿಗುರೆಲೆಗಳನ್ನು ಚೆನ್ನಾಗಿ ಅರೆದು, ಕಡಲೇ ಕಾಳಿನ ಗಾತ್ರದ ಉಂಡೆಗಳನ್ನು ಮಾಡಿ ಒಣಗಿಸಿಟ್ಟುಕೊಳ್ಳಬೇಕು. ಪ್ರತಿ ದಿನ ಬೆಳಿಗ್ಗೆ ಹಸಿದ ಹೊಟ್ಟೆಗೆ 1-2 ಮಾತ್ರೆಗಳನ್ನು ಸೇವಿಸಬೇಕು.

5. ಒಂದು ಬಲವಾದ ಹಿಡಿ (ಮುಷ್ಟಿ) ಕರಿ ಬೇವಿನ ಸೊಪ್ಪುಗಳನ್ನು 2-3 ದಿನ ನೆರಳಲ್ಲಿ ಒಣಗಿಸಿ ಪುಡಿ ಮಾಡಿ, ಅದಕ್ಕೆ ಸ್ವಲ್ಪ ಓಮದ ಪುಡಿ ಸೇರಿಸಿ, ಗಾಜಿನ ಪಾತ್ರೆ ಅಥವಾ ಜಾಡಿಯಲ್ಲಿ ಸಂಗ್ರಹಿಸಿಟ್ಟಿಕೊಂಡು ಟೀ ಚಮಚದಷ್ಟು ಮಿಶ್ರಣವನ್ನು ಬಿಸಿ ಹಾಲಿಗೆ ಹಾಕಿ. ಪ್ರತಿ ದಿನ ರಾತ್ರಿ ಮಲಗುವಾಗ, 1 ತಿಂಗಳ ತನಕ ಸೇವಿಸಬೇಕು.

6. ಒಣಕರ್ಜೂರ 5 ಸೇರು ತಂದು, ಅದರ ಬೀಜ ತೆಗೆದು, ಬಿಸಿನೀರಿನಲ್ಲಿ ತೊಳೆದು ಕುಟ್ಟ, 8 ಸೇರು ನೀರಿನಲ್ಲಿ ಹಾಕಿ ಬತ್ತಿಸಿ, 4 ಸೀರಿಗಿಳಿಸಿ ಹಿಸುಕಿ ಸೋಸಿ, ತಿರುಗಿ ಒಲೆಯಮೇಲಿಟ್ಟು ಕುದಿಸಿ, ಎಳೆಯ ಪಾಕದಲ್ಲಿ ಇಳಿಸಿಟ್ಟುಕೊಡು, 1 ರಿಂದ 2 ತಿಂಗಳು ನಿತ್ಯ ಬೆಳಿಗ್ಗೆ ರಾತ್ರಿ 2 ಚಮಚದಂತೆ ಹಾಲಿನಲ್ಲಿ ಸೇವಿಸುವುದು. ಇದನ್ನು ಸೊರಗಿದ ಮಕ್ಕಳಿಗೂ ಕೊಡಬಹುದು.

7. ನಂಜಬಟ್ಟಲು ಎಲೆ ಮತ್ತು ಅಕ್ಕಿಯನ್ನು ಸೇರಿಸಿ ಅರೆದು ಕಡುಬುಮಾಡಿ ತಿನ್ನುವುದು.

8. ಹೊಂಗೆ ಹೂವಿನ ಒಣಗಿದ ಚೂರ್ಣ ಅಥವಾ ಹೊಂಗೆ ಹೂವು 3 ತೋಲ ಅರೆದು ಒಂದು ಲೋಟ ಕುದಿಯುತ್ತಿರುವ ನೀರಿನಲ್ಲಿ ಹಾಕಿ, 1/4 ಘಂಟೆ ಇಟ್ಟಿದ್ದು, ಹಿಸುಕಿ ಸೋಸಿ, ನಿತ್ಯ ಬೆಳಿಗ್ಗೆ ರಾತ್ರಿ ಕುಡಿಯುವುದು.

9. ಹೊಂಗೆಯ ಒಣಗಿದ ಹೂವು, ನೇರಳೆ ಬೀಜ ಮತ್ತು ಹಾಗಲಕಾಯಿಗಳನ್ನು ಸಮಭಾಗ ಚೂರ್ಣಿಸಿ ನಿತ್ಯ ಬೆಳಿಗ್ಗೆ ರಾತ್ರಿ 1/2 ತೊಲದಂತೆ ಸೇವಿಸಿ ಬಿಸಿನೀರು ಕುಡಿಯುವುದು.

10. ಹಾಗಲಕಾಯಿ ಚಟ್ಟಿಪುಡಿ : ಹೆಸರುಬೇಳೆ, ಸೈಂದ್ರ ಲವಣ, ಕರಿಬೇವು, ಹಾಗಲಕಾಯಿಗಳ ಸಮಭಾಗ ತೆಗೆದುಕೊಂಡು, ಕಾಳುಮೆಣಸು ಶುಂಠಿಗಳ ಚೂರ್ಣ ಮಾಡಿ, ಹೆಸರುಬೇಳೆ ಹಾಗಲಕಾಯಿಯನ್ನು ಕೆಂಪಗೆ ಹುರಿದುಕೊಂಡು, ಎಲ್ಲವನ್ನು ಸೇರಿಸಿ ಕುಟ್ಟಿಕೊಳ್ಳುವುದು. ಇದು ಮಧುಮೇಹಿಗಳಿಗೆ ಒಳ್ಳೆಯದು.

11. ಪ್ರತಿ ದಿನ ರಾತ್ರಿ ಮಲಗುವ ಮುಂಚೆ 5-6 ಕರಿಬೇವಿನ ಎಲೆ ಅಗಿದು ತಿಂದರೆ ಮಧುಮೇಹ ಹತೋಟಿಯಲ್ಲಿರುತ್ತದೆ.

12.ದಿನಾ ಬೆಳಿಗ್ಗೆ ರಾತ್ರಿ 2 -2 ಚಮಚ ಬೇವಿನ ಎಲೆರಸ ಕುಡಿಯಬೇಕು. ಬರೀ ಬಿಸಿ ನೀರನ್ನು ಕುಡಿಯಬೇಕು. ದಿನಾ ಬೆವರು ಬರುವಷ್ಟು ವೇಗವಾಗಿ ಚಕ್ರಂಬಣ (ವಾಕ್) ಮಾಡಬೇಕು.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.
Add a comment

Leave a Reply

Your email address will not be published. Required fields are marked *

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement