ಸ್ವಂತ ಮಗಳು ಮತ್ತು ಆಕೆಯ ಪ್ರಿಯಕರ ಸೇರಿ ತಂದೆಯನ್ನೇ ಹತ್ಯೆ ಮಾಡಿರುವ ಆಘಾತಕಾರಿ ಘಟನೆ ನಡೆದಿದ್ದು, ಜಾರ್ಖಂಡ್ನ ಆದಿತ್ಯಾಪುರ್ ಮೂಲದ ಬಿಲ್ಡರ್ ಕನ್ಹಯ್ಯಾ ಸಿಂಗ್ ಹತ್ಯೆಯಾದ ವ್ಯಕ್ತಿಯಾಗಿದ್ದಾರೆ.
ಇನ್ನು, ಈ ಘಟನೆ ಸಂಬಂಧ ಮಗಳು ಅಪರ್ಣಾ ಸಿಂಗ್ ಮತ್ತು ಆಕೆಯ ಗೆಳೆಯ ರಾಜವೀರ್ ಸಿಂಗ್ ಅವರನ್ನ ಪೊಲೀಸರು ಬಂಧಿಸಿದ್ದಾರೆ. ಜೂನ್ 30ರಂದು ನಡೆದಿದ್ದ ಹತ್ಯೆಯ ತನಿಖೆ ನಡೆಸಿದಾಗ ಆಘಾತಕಾರಿ ಅಂಶಗಳು ಬೆಳಕಿಗೆ ಬಂದಿದ್ದು, ಮಗಳು ಹಾಗೂ ಪ್ರಿಯಕರ ಹತ್ಯೆಗಾಗಿ ಸುಪಾರಿ ನೀಡಿದ್ದರು. ಮೂವರು ದುಷ್ಕರ್ಮಿಗಳು ಮಚ್ಚಿನಿಂದ ಕೊಚ್ಚಿ ಉದ್ಯಮಿಯ ಹತ್ಯೆ ಮಾಡಲಾಗಿತ್ತು.
ಆದರೆ ಈ ಹತ್ಯೆಯೂ ಟೆಂಡರ್ ವಿಚಾರವಾಗಿ ನಡೆದಿದೆ ಎಂದೇ ಶಂಕಿಸಲಾಗಿತ್ತು. ಆದರೆ ಮಗಳಿಗೆ ಮದುವೆಯಾಗಿ ಹುಡುಗನ ಹುಡುಕುತ್ತಿದ್ದ ತಂದೆಗೆ ಆಕೆಯ ಪ್ರೀತಿಯ ವಿಚಾರ ತಿಳಿದು ಗಲಾಟೆ ನಡೆದಿದ್ದು, ಇದರಿಂದ ಕೋಪಗೊಂಡಿದ್ದ ಮಗಳು ತಂದೆಯನ್ನೇ ಹತ್ಯೆ ಮಾಡಲು ಸುಪಾರಿ ನೀಡಿದ್ದಳು. ಸದ್ಯ ಈ ಘಟನೆ ಸಂಬಂಧ 8 ಮಂದಿಯನ್ನ ಪೊಲೀಸರು ಬಂಧಿಸಿದ್ದಾರೆ.