Rashi bhavishya | ಈ ರಾಶಿಯವರಿಗೆ ಹೊಸ ಜಾಗ ಖರೀದಿಸಿ ಮನೆ ಕಟ್ಟಿಸುವ ಭಾಗ್ಯ!

Rashi bhavishya : ಜಾತಕ ಇಂದು 27 ಶುಕ್ರವಾರ 2024  ಜ್ಯೋತಿಷ್ಯ ಶಾಸ್ತ್ರದ (Astrology), ಪ್ರಕಾರ 12 ರಾಶಿ ಸೇರಿದಂತೆ ಹೆಚ್ಚಿನ ಮಾಹಿತಿಗೆ ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು ಸೋಮಶೇಖರ್…

Today rashi bhavishya

Rashi bhavishya : ಜಾತಕ ಇಂದು 27 ಶುಕ್ರವಾರ 2024  ಜ್ಯೋತಿಷ್ಯ ಶಾಸ್ತ್ರದ (Astrology), ಪ್ರಕಾರ 12 ರಾಶಿ ಸೇರಿದಂತೆ ಹೆಚ್ಚಿನ ಮಾಹಿತಿಗೆ ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು ಸೋಮಶೇಖರ್ ಗುರೂಜಿ (B.Sc) ನೀಡಿರುವ ಮಾಹಿತಿ ನೋಡಿ

  • ಶುಕ್ರವಾರ- ರಾಶಿ ಭವಿಷ್ಯ ಡಿಸೆಂಬರ್-27,2024
  • ಸೂರ್ಯೋದಯ: 06:48, ಸೂರ್ಯಾಸ್ತ : 05:46
  • ಶಾಲಿವಾಹನ ಶಕೆ -1946
  • ಸಂವತ್-2080
  • ಕ್ರೋಧಿನಾಮ ಸಂವತ್ಸರ,
  • ದಕ್ಷಿಣ ಅಯಣ,
  • ಶುಕ್ಲ ಪಕ್ಷ,
  • ಹೇಮಂತ್ ಋತು,
  • ಮಾರ್ಗಶೀರ ಮಾಸ,
  • ತಿಥಿ: ದ್ವಾದಶಿ
  • ನಕ್ಷತ್ರ: ವಿಶಾಖಾ
  • ರಾಹು ಕಾಲ: 10:30 ನಿಂದ 12:00 ತನಕ
  • ಯಮಗಂಡ:03:00 ನಿಂದ 04:30bತನಕ
  • ಗುಳಿಕ ಕಾಲ: 07:30 ನಿಂದ 09:00 ತನಕ
  • ಅಮೃತಕಾಲ: ಬೆ.10:49 ನಿಂದ ಮ.12:34 ತನಕ
  • ಅಭಿಜಿತ್ ಮುಹುರ್ತ: ಬೆ.11:55 ನಿಂದ ಮ.12:39 ತನಕ

ಮೇಷ ರಾಶಿ ಭವಿಷ್ಯ (Mesha rashi bhavishya)

Mesha rashi bhavishya

ವ್ಯಾಪಾರದಲ್ಲಿ ದ್ವಿಗುಣ ಲಾಭ, ವಿದೇಶ ಪ್ರವಾಸ ಯೋಗವಿದೆ, ನೌಕರನಿಗೆ ಮಹತ್ವದ ಕೆಲಸಕ್ಕೆ ವರ್ಗಾವಣೆ, ಸರ್ಕಾರದ ಸೌಲತ್ತು ದೊರೆಯುವುದು, ಹೊಸ ಜಾಗ ಖರೀದಿಸಿ ಮನೆ ಕಟ್ಟಿಸುವ ಭಾಗ್ಯ ನಿಮಗಿದೆ,ಇಂದು ಅತ್ಯಂತ ಪ್ರೀತಿಯ ಕನಸು ನನಸಾಗುತ್ತದೆ, ವ್ಯಾಪಾರದಲ್ಲಿ ಉತ್ತಮ ಲಾಭ ಗಳಿಸುವಿರಿ, ನಿಮ್ಮ ಪ್ರಿಯತಮೆ ಜೊತೆ ವಾದಗಳಿಗೆ ಕಾರಣರಾಗುವಿರಿ, ವಿವದಾತ್ಮಕ ವಿಷಯಗಳ ಬಗ್ಗೆ ಚರ್ಚಿಸಬೇಡಿ, ಪತ್ನಿಯ ಸಹಾಯವನ್ನು ಗೌರವದಿಂದ ಸ್ವೀಕರಿಸಿ, ಉದ್ಯೋಗದ ಸಮಸ್ಯೆ ನಿವಾರಣೆಗಾಗಿ ಹಣಕಾಸು ನೀಡಲು ಸಿದ್ದರಾಗುತ್ತಿರಿ, ಸಾಮಾಜಿಕ ಸಮಾರಂಭಗಳು ಮತ್ತು ಪ್ರಭಾವಿ ಜನರೊಡನೆ ಬಾಂಧವ್ಯ ವೃದ್ಧಿ, ವಿದೇಶದಲ್ಲಿ ವ್ಯಾಪಾರ ಆರಂಭಿಸುವುದಕ್ಕಾಗಿ ಹಣದ ಲಾಭ ಪಡೆಯುವಿರಿ, ಸಂಗಾತಿಯ ಸೇವೆ ನಿರ್ಲಿಕ್ಷಿಸಿದಲ್ಲಿ ನಿಮ್ಮ ಮನ ಶಾಂತಿಗೆ ಭಂಗ,ಅಜ್ಞಾತ ಮೂಲಗಳಿಂದ ಹಣ ಸಿಗಲಿದೆ ಇದರಿಂದ ಆರ್ಥಿಕ ಸಮಸ್ಯೆ ನಿವಾರಣೆ, ನಿಮ್ಮ ಸಂಗಾತಿಯ ಮನಸ್ಸು ಮಗುವಿನಂಥ ಮತ್ತು ಮುಗ್ಧ ಮನಸ್ಸು ದ್ರೋಹ ಮಾಡಬೇಡಿ,

Vijayaprabha Mobile App free

ಶ್ರೀ ಸೋಮಶೇಖರ್ ಗುರೂಜಿ B.Sc
Mob.No.9353488403

ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ವಿವಾಹ, ಪ್ರೇಮ ವಿವಾಹ, ಪ್ರೇಮಿಗಳಲ್ಲಿ ಮನಸ್ತಾಪ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಅತ್ತೆ-ಸೊಸೆ ಜಗಳ, ಸಂತಾನ ಭಾಗ್ಯ, ಸಾಲ ಬಾಧೆ, ಶತ್ರುಗಳಿಂದ ತೊಂದರೆ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಜನ್ಮ ರಾಶಿ ನಕ್ಷತ್ರಗಳ ಮೇಲೆ ವ್ಯಾಪಾರ, ರಾಶಿಗಳಿಗೆ ಅನುಗುಣವಾಗಿ ಜನ್ಮರಾಶಿ ಹರಳು, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು.

ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
“ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು”
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

ಇದನ್ನೂ ಓದಿ: Rashi bhavishya | ಈ ರಾಶಿಯವರು ಹಿರಿಯರು ಹೇಳಿದಂತೆ ಕೇಳಿ, ನಿಮ್ಮ ಮದುವೆ ಇಷ್ಟಪಟ್ಟವರ ಜೊತೆ ನೆರವೇರುವುದು

ವೃಷಭ ರಾಶಿ ಭವಿಷ್ಯ (Vrushabha rashi bhavishya)

Vrushabha rashi bhavishya

ಕೋರ್ಟ್ ಕಚೇರಿ ಕೆಲಸಗಳು ಮುಗಿಯುವ ಹಂತದಲ್ಲಿ ಇವೆ, ಕೋರ್ಟ್ಗೆ ಹಾಜರಾಗಿ, ಬಂಧುಗಳ ಆಗಮನದಿಂದ ಸಂತಸ, ಮಕ್ಕಳಿಗೆ ಉನ್ನತ ಶಿಕ್ಷಣ ಭಾಗ್ಯ, ಮಕ್ಕಳಿಗೆ ಸರ್ಕಾರಿ ನೌಕರಿ ಆಗುವ ಸಾಧ್ಯತೆ ಇದೆ,ಹಳೆಯ ಸಂಗಾತಿಗೆ ಆರ್ಥಿಕ ಸಂಕಷ್ಟದಿಂದ ಪಾರಾಗಲು ತಾವು ಸಹಾಯ ಮಾಡುವಿರಿ, ನಿಮ್ಮ ಪ್ರೀತಿಯ ಸಂಗಾತಿಗೆ ಶಾಶ್ವತ ಪರಿಹಾರ ಕೊಡಲು ಸಫಲರಾಗುವಿರಿ, ಆಪ್ತ ಸಂಬಂಧಿಕರ ಬೆಂಬಲದಿಂದ ಹೊಸ ಉದ್ಯಮ ಪ್ರಾರಂಭ,ಈ ವ್ಯವಹಾರದಲ್ಲಿ ಧನ ಲಾಭ ಪಡೆಯುವಿರಿ,

ಒತ್ತಡದ ಕೆಲಸದ ನಡುವೆ ಕುಟುಂಬ ಮರೆಯದಿರಿ, ಪತ್ನಿಯ ಕಷ್ಟ ಸುಖ ಅರೆಯಿರಿ, ಕೆಲವರು ಹಣಕಾಸಿನ ಸಮಸ್ಯೆ ಎದುರಿಸುವಿರಿ ಮಾತಾ ಪಿತೃ ಸಲಹೆ ಪಡೆಯುವಿರಿ, ಮಧ್ಯಸ್ಥಿಕೆ ವಹಿಸಿದ ಹಣಕ್ಕೆ ತೊಂದರೆಗೊಳಗಾಗಬಹುದು, ಪ್ರೀತಿ ಪ್ರೇಮ ಪ್ರಣಯ ನಿಮ್ಮ ಅಮೂಲ್ಯ ಸಮಯ ಹಾಳು ಮಾಡಬಹುದು, ಹಳೆಯ ಸಂಗಾತಿ ಜೊತೆ ಪುನರ್ಮಿಲನ ಸಾಧ್ಯತೆ,

ಇದನ್ನೂ ಓದಿ: Rashi bhavishya | ಈ ಪಂಚ ರಾಶಿಗಳ ಮದುವೆ ವಿಳಂಬದಿಂದ ಶುರುವಾಯಿತು ಟೆನ್ಷನ್

ಮಿಥುನ ರಾಶಿ ಭವಿಷ್ಯ (Mithuna rashi bhavishya)

Mithuna rashi bhavishya

ಅವಿವಾಹಿತರಿಗೆ ಮಾಂಗಲ್ಯ ಭಾಗ್ಯ, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತೀರ್ಣ ಹೊಂದುವರು, ಉದ್ಯೋಗದಲ್ಲಿ ಮಾನಸಿಕ ಕಿರುಕುಳ ಮುಂದುವರೆಯಲಿದೆ, ಸಾರ್ವಜನಿಕ ಇಲಾಖೆಯ ಉದ್ಯೋಗಿಗಳಿಗೆ ಅಧಿಕಪ್ರಸಂಗದಿಂದ ಸಾರ್ವಜನಿಕರಿಂದ ತೊಂದರೆ, ಎದುರಾಳಿಗಳು ನಿಮ್ಮನ್ನು ತುಳಿಯಲು ಕಾಯುತ್ತಿದ್ದಾರೆ, ವ್ಯಾಪಾರಿಗಳಿಗೆ ಶುಭ ಫಲ, ಉದ್ಯೋಗ ಇಲ್ಲದವರಿಗೆ ಉದ್ಯೋಗ ಪ್ರಾಪ್ತಿ, ಭೂಮಿ ವಿಷಯಗಳಲ್ಲಿ ಸಮಸ್ಯೆ ನಿವಾರಣೆ, ಕೋರ್ಟ್ ಕಚೇರಿ ಕೆಲಸಗಳಲ್ಲಿ ಜಯ, ವಾಹನ ಖರೀದಿ, ವಿದೇಶ ಪ್ರವಾಸ ಪ್ರಯತ್ನ ಚುರುಕು,

ಹಿಂದೆ ಮಾಡಿರುವ ಹಣದ ಹೂಡಿಕೆ ಇಂದು ನಿಮಗೆ ಭವ್ಯ ಬಂಗ್ಲೆಯಲ್ಲಿ ವಾಸವಾಗುವ ಸುವರ್ಣವಕಾಶ, ನಿಮ್ಮ ಸುತ್ತಲಿನ ಜನರು ಬಹುಶಃ ಪಿಸು ಮಾತಾಡಲಿದ್ದಾರೆ, ನೌಕರದಾರರಿಗೆ ಅಧಿಕಾರಿಗಳಿಂದ ಶುಭವಾರ್ತೆ, ಇಚ್ಚಿಸಿದ ಕಾರ್ಯಗಳು ಕೈಗೂಡುವ ಸಮಯ, ಖಾಸಗಿ ಉದ್ಯೋಗಸ್ಥರಿಗೆ ಅನಿರೀಕ್ಷಿತ ಪ್ರಗತಿ, ಪ್ರೇಮ ಪ್ರಕರಣಗಳು ಹೊಸ ತಿರುವು, ವ್ಯಾಪಾರದಲ್ಲಿ ನಿರೀಕ್ಷೆಗೆ ಮೀರಿದ ಧನ ಲಾಭ, ಪರಸ್ತ್ರೀ ಮೋಹ ಕಂಡುಬರುವುದು, ವಿವಾಹ ಯೋಗ ಕೂಡಿ ಬರಲಿದೆ, ದಂಪತಿಗಳಿಗೆ ಸಂತಾನ ಭಾಗ್ಯ, ಮಾತಾ ಪಿತೃ ಕಡೆಯಿಂದ ಧನ ಸಹಾಯ, ನವದಂಪತಿಗಳು ವೈರಾಗ್ಯ ಅಧಿಕ, ಗಣ್ಯ ವ್ಯಕ್ತಿ ಭೇಟಿಯಿಂದ ಉದ್ಯೋಗದಲ್ಲಿ ಇಚ್ಚಿಸಿದ ಸ್ಥಳಕ್ಕೆ ವರ್ಗಾವಣೆ, ಅನೈತಿಕ ಪ್ರೀತಿಯಲ್ಲಿ ಉಲ್ಲಾಸ ತೇಲಾಡುತ್ತಿದೆ.

ಇದನ್ನೂ ಓದಿ: Rashi bhavishya | ಈ ರಾಶಿಯವರ ವೈರಿಗಳಿಂದ ಎಲ್ಲಾ ಕಾರ್ಯಗಳನ್ನು ವಿಘ್ನಗೊಳಿಸಲು ಒಳಸಂಚು

ಕರ್ಕಾಟಕ ರಾಶಿ ಭವಿಷ್ಯ (Karkataka rashi bhavishya) 

Karkataka rashi bhavishya

ವ್ಯಾಪಾರಸ್ಥರಿಗೆ ಹೂಡಿಕೆಗೆ ತಕ್ಕ ಲಾಭ, ಹೋಟೆಲ್ ಉದ್ಯಮದಾರಿಗೆ ಅಲ್ಪತೃಪ್ತಿ, ನೌಕರರಿಗೆ ಹಿರಿಯ ಅಧಿಕಾರಿಗಳಿಂದ ಕಿರಿಕಿರಿ ಆಗಿ ಮನಸ್ಥಾಪ, ಹೊಸ ಪಾಲಿನ ವ್ಯವಹಾರ ವಗೈರೆ ಮಾಡದಿರಿ, ನೆರೆಹೊರೆಯ ಮಹಿಳೆಯರಿಂದ ಅಪವಾದಗಳು ಬರುವವು,ಸರ್ಕಾರಿ ನೌಕರಿ ಪ್ರಯತ್ನ ಬಿಟ್ಟು ವ್ಯವಸಾಯದ ಕಡೆ ಗಮನಹರಿಸಿ, ಮದುವೆಯಾಗಿ ತುಂಬಾ ವರ್ಷಗಳಾಯಿತು ಮಕ್ಕಳಾಗಲಿಲ್ಲ ಎಂಬ ಚಿಂತೆ, ವ್ಯಾಪಾರಕ್ಕೆ ಹೂಡಿಕೆ ಮಾಡಿರುವ ಹಣಕಾಸಿನ ಬಗ್ಗೆ ಚಿಂತೆ, ಉದ್ಯೋಗದಲ್ಲಿ ಇಲ್ಲಸಲ್ಲದ ಆರೋಪ, ಪರಸ್ಪರ ಇಷ್ಟಪಟ್ಟವರು ಮದುವೆ ಕಾರ್ಯ ನೆರವೇರಲಿದೆ.

ಉದ್ಯೋಗದಲ್ಲಿ ಕಿರುಕುಳ ತಾಳಲಾರದೆ ಕೆಲಸ ಬಿಡುವ ಯೋಚನೆ, ಸಾಲಗಾರರಿಂದ ಕಿರುಕುಳ, ವಸ್ತ್ರ ವ್ಯಾಪಾರಸ್ಥರಿಗೆ ಮುಂದಗತಿಯ ಲಾಭ, ಗೃಹ ಕಟ್ಟಡ ಸಾಮಗ್ರಿಗಳ ಮಾರಾಟಗಾರರಿಗೆ ಧನ ಲಾಭ, ಉಪನ್ಯಾಸಕರ ಮಕ್ಕಳಿಗೆ ಮದುವೆ ಯೋಗ, ಆದರೆ ಕೆಲವರು ಮಕ್ಕಳ ಹಠ, ಸ್ವೀಟ್ಮಾರ್ಟ್,ಬೇಕರಿ, ಕಾಂಡಿಮೆಂಟ್ಸ್ ಮಾಲಕರಿಗೆ ವ್ಯಾಪಾರದಲ್ಲಿ ಅಧಿಕ ಲಾಭ, ಮದುವೆಯಾಗಿ ತುಂಬಾ ವರ್ಷಗಳ ನಂತರ ಗರ್ಭಧಾರಣೆ ಸುದ್ದಿ ಕೇಳಿ ಸಂತಸ, ಆತ್ಮೀಯ ಬಂಧುಗಳಿಂದ ಹಣಕಾಸಿನ ನೆರವು ಗೃಹ ಕಟ್ಟಡ ಪೂರ್ಣಗೊಳ್ಳಲಿದೆ, ಉದ್ಯೋಗ ಕ್ಷೇತ್ರದಲ್ಲಿ ಎದುರಾಳಿಗಳಿಂದ ತೊಂದರೆ ಕಾಡಲಿದೆ ಜಾಗೃತಿ ಇರಲಿ, ಉದ್ಯೋಗ ಸದ್ಯಕ್ಕೆ ಬದಲಾಯಿಸುವುದು ಬೇಡ ಅಲ್ಲಿಯೇ ಮುಂದುವರೆಯಿರಿ, ಹೊರದೇಶಕ್ಕೆ ಹೊರಡುವವರು ಉದ್ಯೋಗ ಪ್ರಾಪ್ತಿ,ಮದುವೆ ಯೋಗ ಕೂಡಿ ಬರಲಿದೆ.

ಇದನ್ನೂ ಓದಿ:

ಸಿಂಹ ರಾಶಿ ಭವಿಷ್ಯ (Simha rashi bhavishya)

Simha rashi bhavishya

ಬರಬೇಕಾದ ಹಣ ಬಾರದೆ ಕೊಡಬೇಕಾದ ಹಣದ ಸಾಲದ ಬಾಧೆಗೆ ತುತ್ತಾಗುವಿರಿ, ಈ ಸಮಯದಲ್ಲಿ ಕಷ್ಟ ನಷ್ಟಗಳು ಬರುವವು, ಹೊಸದಾಗಿ ಉದ್ಯೋಗ ಮಾಡುವ ಹಂಬಲ ಬೇಡ, ಉದ್ಯೋಗ ಕ್ಷೇತ್ರದಲ್ಲಿ ನಿಮ್ಮನ್ನು ದುರುಪಯೋಗ ಮಾಡಿ ನಿಮಗೆ ತೊಂದರೆ ಮಾಡುವರು,
ಹಿರಿಯರೊಂದಿಗೆ ಆಸ್ತಿ ವಿಚಾರಕ್ಕಾಗಿ ವಾದ ಹಾಗೂ ಮನಸ್ಥಾಪ, ದಂಪತಿಗಳಲ್ಲಿ ಕಿರಿಕಿರಿ ಮುಂದುವರೆಯಲಿದೆ, ವ್ಯಾಪಾರದಲ್ಲಿ ಎದುರಾಳಿ ಮತ್ತು ಪಕ್ಕದವರಿಂದ ತೊಂದರೆ, ಅವಿವಾಹಿತನವರಿಗೆ ವಿವಾಹ ಯೋಗ,ಎರಡನೇ ಮದುವೆ ಬಯಸಿದವರಿಗೆ ಅಡತಡೆ ಸಂಭವ, ಪ್ರೇಮಿಗಳಲ್ಲಿ ಭಿನ್ನಾಭಿಪ್ರಾಯ, ವ್ಯವಹಾರದಲ್ಲಿ ಆರ್ಥಿಕ ನಷ್ಟದಿಂದ ಚಿಂತೆ ಅಧಿಕ, ಆಸ್ತಿ ಖರೀದಿಯಲ್ಲಿ ಮೋಸ ಸಂಭವ.

ಸಹ ಉದ್ಯೋಗಿಗಳ ಜೊತೆ ಅನಾವಶ್ಯಕ ಜಗಳ ಬೇಡ, ಪರಸ್ತ್ರಿ ಸಂಪರ್ಕದಿಂದ ಕುಟುಂಬದಲ್ಲಿ ಕಲಹ, ಮಕ್ಕಳು ವಿದ್ಯೆಯಲ್ಲಿ ಅನಾಸಕ್ತಿ ನೀಚ ಹುಡುಗರ ಸಹವಾಸ, ಬಂಧುಗಳಿಂದ ಕೆಟ್ಟು ಸುದ್ದಿ ಕೇಳುವಿರಿ,ಉದ್ಯೋಗ ಸ್ಥಳಾಂತರ ಬಯಸಿದವರಿಗೆ ಶುಭ ದಿನವಲ್ಲ, ಉದ್ಯೋಗದಲ್ಲಿ ಅಪಮಾನ ಮತ್ತು ಅವಾಮಾನದ ಭೀತಿ, ವಾಹನ ಅಪಘಾತ ಸಂಭವ ಜಾಗೃತಿ ವಹಿಸಿ, ಮಧ್ಯಸ್ಥಿಕೆ ವಹಿಸಿದ ಹಣಕ್ಕೆ ನೀವೇ ಜವಾಬ್ದಾರಿ ಇದರ ಭೀತಿ ಕಾಡಲಿದೆ, ಟ್ರಾನ್ಸ್ಪೋರ್ಟ್ ಹಣಕಾಸಿನ ಮುಗ್ಗಟ್ಟಿನೊಂದಿಗೆ ವ್ಯಾಪಾರದಲ್ಲಿ ಏರುಪೇರು, ಸಂಗಾತಿಯ ಮನೆಯಿಂದ ಕೆಟ್ಟ ಸುದ್ದಿ ಕೇಳುವಿರಿ,

ಕನ್ಯಾ ರಾಶಿ ಭವಿಷ್ಯ (Kanya rashi bhavishya) 

Kanya rashi bhavishya

ಪ್ರವಾಸದ ಸಮಯದಲ್ಲಿ ಜಾಗೃತಿ ವಹಿಸಿ, ನೌಕರರಿಗೆ ಪ್ರಗತಿ ಇದ್ದರೂ ಸಣ್ಣವರ ಕಿರುಕುಳ ನಿಮ್ಮ ಪ್ರಗತಿಗೆ ಅಡ್ಡಿ ಆತಂಕ, ನಿಮ್ಮ ಸಂಗಾತಿ ನಿಮ್ಮ ಬೆಂಬಲಕ್ಕೆ ಕಂಕಣ ಬದ್ಧವಾಗಿ ನಿಲ್ಲುವರು, ಉನ್ನತ ವ್ಯಾಸಂಗಕ್ಕಾಗಿ ವಿದೇಶ ಪ್ರವಾಸ ಕೈಗೊಳ್ಳುವಿರಿ,ನಿಮಗೆ ಈ ಬಾರಿ ಗಂಡು ಸಂತಾನ ಪ್ರಾಪ್ತಿ,ಭೂಮಿ ಹಾಗೂ ಆಸ್ತಿ ವ್ಯವಹಾರಗಳಲ್ಲಿ ಉತ್ತಮ ಫಲಿತಾಂಶ, ಈಸಾರಿ ನಿವೇಶನ ಖರೀದಿಸುವ ಪ್ರಯತ್ನ ಯಶಸ್ಸು ಆಗಲಿದೆ, ಕೆಲವರು ಕೃಷಿಭೂಮಿ ಖರೀದಿಸುವಿರಿ, ಒಳ್ಳೆಯ ಕರ್ಮಕ್ಕೆ ಉತ್ತಮ ಫಲ ಇದರಿಂದg ಮನೆಯಲ್ಲಿ ಶುಭಮಂಗಲ ಕಾರ್ಯ ನೆರವೇರುವುದು, ಕೆಲವರಿಗೆ ಕೆಟ್ಟ ಕರ್ಮಕ್ಕೆ ಕೆಟ್ಟಫಲ ಇದರಿಂದ ಹಣಕಾಸಿನ ಸಮಸ್ಯೆ ಮದುವೆ ವಿಳಂಬ ಸಾಧ್ಯತೆ, ದಂಪತಿಗಳು ಸಂತಾನಕ್ಕಾಗಿ ಮೊರೆ, ಮೊದಲನೇ ಬಾರಿ ಗರ್ಭಧರಿಸಿರುವ ಗರ್ಭಿಣಿಯರು ಜಾಗ್ರತೆಯಿಂದಿರಬೇಕು.

ಲೇವಾದೇವಿಗಾರರರಿಗೆ ಸಾಲ ಮರುಪಾವತಿ ಕಷ್ಟಗಳು ಎದುರಾಗಬಹುದು, ಈ ಹಿಂದೆ ಮಾಡಿರುವ ಶ್ರಮಕ್ಕೆ ಇಂದು ನಿಮಗೆ ಫಲಿತಾಂಶ ಸಿಗಲಿದೆ, ದಾಂಪತ್ಯ ಜೀವನದಲ್ಲಿ ಸಂತೋಷದ ಕ್ಷಣಗಳನ್ನು ಅನುಭವಿಸುವ ಸಾಧ್ಯತೆ , ಕೆಲಸಕಾರ್ಯಗಳಲ್ಲಿ ಏಕಾಗ್ರತೆ ರೂಢಿಸಿಕೊಳ್ಳಿ. ನಿಮ್ಮ ಒತ್ತಡವನ್ನು ನಿವಾರಿಸಿಕೊಳ್ಳಲು ಆದಷ್ಟು ಜನರೊಂದಿಗೆ ಬೆರೆತುಕೊಳ್ಳುವುದು ಒಳಿತು. ಕೆಲಸದ ವಿಷಯವಾಗಿ ಕೆಲವೊಂದು ಅಪಮಾನಕರ ಪ್ರಸಂಗಗಳನ್ನು ಎದುರಿಸುವಿರಿ. ನಿಮ್ಮ ಚತುರತೆಗೆ ಈ ದಿನ ಮಹತ್ವ ನೀಡಬಹುದಾಗಿದೆ. ಆರ್ಥಿಕವಾಗಿ ಉತ್ತಮ ಸ್ವರೂಪ ಕಂಡುಬರುವುದು.

ತುಲಾ ರಾಶಿ ಭವಿಷ್ಯ (Tula rashi bhavishya) 

Tula rashi bhavishya

ನೌಕರನಿಗೆ ಬಡ್ತಿ ಯೋಗ ಇಲ್ಲ ಪ್ರಯತ್ನಿಸಬಾರದು, ಹಿತ ಶತ್ರುಗಳು ನಿಮಗೆ ತೊಂದರೆ ಕೊಡುವ ಸಾಧ್ಯತೆ, ಕೃಷಿಕರ ಬಹುಪಾಲು ಬೆಳೆ ಕಳ್ಳರ ಪಾಲಾಗುವುದು, ಸಾಲದ ಬಾಧೆ ನಿಮಗೆ ತೊಂದರೆಗೀಡು ಮಾಡುತ್ತದೆ,ಸಾಲ ಮರುಪಾವತಿ ಯಶಸ್ವಿ ಕಾರ್ಯಾಚರಣೆ, ನವದಂಪತಿಗಳಿಗೆ ಗಂಡು ಸಂತಾನ ಪ್ರಾಪ್ತಿ,ಸೋದರಿ ಸೋದರ ಮಧ್ಯೆ ಭಿನ್ನಾಭಿಪ್ರಾಯಗಳು, ಸಂಗಾತಿಯೊಂದಿಗಿನ ಮನಸ್ತಾಪಗಳು ಮರೆಯುತ್ತಿರಿ, ವೃತ್ತಿ ಕ್ಷೇತ್ರದಲ್ಲಿ ಟಾರ್ಗೆಟ್ ಸಾಧಿಸುವಲ್ಲಿ ಸಫಲರಾಗಿ.

ಕುಟುಂಬದೊಂದಿಗೆ ಕಲಹಗಳು ಏರ್ಪಡುವ ಸಾಧ್ಯತೆ ಕಾಣಬಹುದು. ಆಸ್ತಿ ವ್ಯವಹಾರಗಳು ವ್ಯಾಜ್ಯಗಳಿಂದ ಕೂಡಿರುತ್ತದೆ. ಬಾಕಿ ಹಣಕಾಸು ಗಳನ್ನು ಯಶಸ್ವಿಯಾಗಿ ವಸೂಲಿ ಮಾಡುವಿರಿ. ಕೆಲವು ಅಹಿತಕರ ಘಟನೆಗಳು ಮನಸ್ಸಿಗೆ ಕಿರಿಕಿರಿ ತಂದುಕೊಡುತ್ತದೆ. ಅಗತ್ಯ ಕಾರ್ಯಗಳಿಗೆ ಬಂಧುಗಳಿಂದ ಅಡಚಣೆ, ಚುಚ್ಚು ಮಾತು ಹಾಗೂ ಕೆಟ್ಟ ಮಾರ್ಗದರ್ಶನ ನೀಡುವರು, ಅಧಿಕಾರಿಗಳಿಂದ ಸಮಸ್ಯೆ,

ವೃಶ್ಚಿಕ ರಾಶಿ ಭವಿಷ್ಯ (Vrishchika rashi bhavishya)

Vrishchika rashi bhavishya

ಮಹಿಳಾ ಉದ್ಯೋಗಿಗಳಿಗೆ ಅಪವಾದವೇ ಹೆಚ್ಚು, ವಿವಾಹ ಮಂಗಳ ಕಾರ್ಯಗಳು ನಡೆಯುವವು, ಯಾರಿಂದಲೂ ಸಹಾಯ ಸಹಕಾರ ಪಡೆಯದೆ ನಿಮ್ಮಷ್ಟಕ್ಕೆ ನೀವೇ ಉದ್ಯೋಗ ಪ್ರಾರಂಭಿಸಿ, ದೂರದ ಪ್ರವಾಸ ಮಾಡಬೇಡಿ, ಪಾಲುದಾರಿಕೆ ವ್ಯವಹಾರ ಬೇಡ, ವಿವಾಹ ಯೋಗ, ಮನಸ್ಸಿನ ಕಾರ್ಯ ಕೈಗೂಡುತ್ತದೆ, ಕುಟುಂಬದಲ್ಲಿ ಸಂತಸದ ವಾತಾವರಣ, ವ್ಯಾಪಾರದಲ್ಲಿ ಅಧಿಕ ಲಾಭ, ದಂಪತಿಗಳಿಗೆ ಆಗಾಗ ಅನಾರೋಗ್ಯ, ಆರೋಗ್ಯಕ್ಕಾಗಿ ಧನ ನಷ್ಟ, ಸಾಲಗಾರರಿಂದ ಸಮಸ್ಯೆ, ಉದ್ಯೋಗ ಸ್ಥಳಾಂತರ ಬಯಸಿದರೆ ಉತ್ತಮವಲ್ಲ.

ನೌಕರರಿಗೆ ಅಧಿಕಾರಿಗಳಿಂದ ಕಿರುಕುಳ, ಉದ್ಯೋಗದ ಭದ್ರತೆಯ ತೊಂದರೆ, ಅಪಮಾನ ಮಾನ ಅವಮಾನದ ಭೀತಿ, ಸತಿಪತಿಯರಲ್ಲಿ ವಿರಸ, ಅನಾವಶ್ಯಕ ಪತ್ನಿ ಸಂಚಾರ, ಕೆಲವರಿಗೆ ನಂಬಿಕೆ ಸ್ತ್ರೀ ಕಡೆಯಿಂದ ಮೋಸ, ತಂದೆ, ಸಹೋದರ ಹಾಗೂ ಸಹೋದರಿಯರ ಜೊತೆ ವಾಗ್ವಾದ, ವಿದೇಶಕ್ಕೆ ಹೊರಡುವ ಕನಸು ನನಸಾಗಲಿದೆ, ಎರಡನೇ ವಿವಾಹ ಬಯಸಿದವರಿಗೆ ಶುಭ ಫಲ, ಕೋರ್ಟ್ ಕಚೇರಿಗಳ ಕೆಲಸದಲ್ಲಿ ಅಪ ಯಶಸ್ಸು,

ಧನಸ್ಸು ರಾಶಿ ಭವಿಷ್ಯ (Dhanu rashi bhavishya)

Dhanu rashi bhavishya

ಮಹಿಳೆಯರಿಗೆ ಉತ್ತಮ ದಿನ, ಸರಕಾರಿ ನೌಕರಿ ಯೋಗ ಇದೆ, ಕೈಯಲ್ಲಿ ಕಾಸು ಉಳಿಯುವುದು, ಹೊಸ ಉದ್ಯೋಗ ಪ್ರಾರಂಭಿಸಲು ಉತ್ತಮ, ನೌಕರದಾರರು ನಿಶ್ಚಿತವಾಗಿ ಬಡ್ತಿ ಹಾಗೂ ವರ್ಗಾವಣೆ ಪಡೆದು ಸುಖ ಸಂತೋಷ ಪಡುವರು, ಉದ್ಯೋಗಸ್ಥರಿಗೆ ನೆಮ್ಮದಿಯ ಕಾಲ, ಸ್ನೇಹಿತರು ಮತ್ತು ಸಹೋದರನಿಂದಲೂ ಹೊಸ ವ್ಯಾಪಾರ ಪ್ರಾರಂಭ ಮಾಡಲು ಹಣಕಾಸಿನ ನೆರವು, ಪರಸ್ತ್ರೀರಿಗಾಗಿ ಹಣ ಅಪವ್ಯಯ, ಮೊಬೈಲ್, ಎಲೆಕ್ಟ್ರಿಕಲ್, ಸ್ಟೇಷನರಿ ವ್ಯಾಪಾರಿಯ ಉದ್ಯೋಗಿಗಳಿಗೆ ಉತ್ತಮ ಸಮಯ, ಜೀವ ವಿಮೆಯಲ್ಲಿ ಹೂಡಿಕೆ ಮಾಡಬಹುದು.

ಮಕ್ಕಳು ನೀಚ ಕಾರ್ಯದಲ್ಲಿ ಆಸಕ್ತಿ, ಧರ್ಮದ ಮಠಾಧಿಪತಿಗಳು ಹಣ ಗಳಿಸುವರು, ಕೋರ್ಟ್ ತೀರ್ಪು ತಡೆ, ಭೂಮಿಗೆ ಸಂಬಂಧಪಟ್ಟ ಕದನ, ಸೋದರ ಮಾವನಿಂದ ಧನ ಸಹಾಯ, ಹಳೆಯ ಸಾಲ ಮರುಪಾವತಿಯ ಕ್ಷಣ, ಮೂರನೇ ವ್ಯಕ್ತಿಯಿಂದ ದಂಪತಿಗಳಿಗೆ ಕಲಹ, ಸ್ಟೇಷನರಿ, ಪುಸ್ತಕ,ಕಂಪ್ಯೂಟರ್ ವ್ಯಾಪಾರಿಗಳಿಗೆ ಧನ ಲಾಭ, ನಿರುದ್ಯೋಗಿಗಳಿಗೆ ಪರೀಕ್ಷೆಯಲ್ಲಿ ಅನುಕೂಲ ಸಂಭವ.

ಮಕರ ರಾಶಿ ಭವಿಷ್ಯ (Makara rashi bhavishya)

Makara rashi bhavishya

ನಿಮ್ಮ ಕೆಲಸದಲ್ಲಿ ಲೋಪವಾದರೆ ಅದರಿಂದ ಅನೇಕ ತೊಂದರೆಗಳು ಉದ್ಭವ, ಅಧಿಕಾರಿಗಳಿಂದ ಉಪದ್ರವ ಹೆಚ್ಚಿನ ಬಡ್ತಿ ಪ್ರಮೋಷನ್ ದೊರೆಯಲಾರದು, ಕೃಷಿಕರು ವಾಣಿಜ್ಯ ಬೆಳೆ ಬೆಳೆದು ಆರ್ಥಿಕ ಪ್ರಗತಿ ತೋರುವವರು, ಹೊಸ ಯೋಜನೆ ಈಗ ಸದ್ಯಕ್ಕೆ ಬೇಡ,ಭೂ ವ್ಯವಹಾರದಲ್ಲಿ ಹಣಕಾಸು ಅಪವ್ಯಯವಾಗದಂತೆ ಜಾಗ್ರತೆ ವಹಿಸಿ,ಅವಿವಾಹಿತನವರಿಗೆ ವಿವಾಹ ಯೋಗ,ದಂಪತಿಗಳಿಗೆ ಸಂತಾನಯೋಗ, ಸಹೋದರನೊಂದಿಗೆ ಆಸ್ತಿ ವಿಚಾರ ಸಮಸ್ಯೆ ಬಗೆಹರಿಯಲಿದೆ.

ತಪ್ಪುಗಳಿಂದ ಅನಾವಶ್ಯಕ ತೊಂದರೆ, ಭೂಮಿ ವ್ಯವಹಾರಗಳಲ್ಲಿ ಮೋಸ ಹೋಗುವಿರಿ, ಉದ್ಯೋಗದಲ್ಲಿ ಬಡ್ತಿ ಹೊಂದಿ ಜವಾಬ್ದಾರಿ ಅಧಿಕವಾಗುವುದು, ಕೋರ್ಟ್ ಕಚೇರಿ ಕೆಲಸದಲ್ಲಿ ಹಿನ್ನಡೆ, ಇದ್ದಕ್ಕೆಇದ್ದಂತೆ ಪ್ರೇಮಿಗಳಲ್ಲಿ ವಿರಸ, ಉದ್ಯೋಗದಲ್ಲಿ ಸ್ಥಾನ ಬದಲಾವಣೆ,ಶತ್ರುಗಳಿಂದ ನಿಮಗೆ ಹಾನಿ, ಗುತ್ತಿಗೆದಾರರಿಗೆ ಆರ್ಥಿಕ ಪ್ರಗತಿ ಕಾಣುವುದು, ಷೇರು ಮಾರುಕಟ್ಟೆ ಅಲ್ಪ ಅನುಕೂಲ, ನಟ ನಟಿಯರಿಗೆ ಬೇಡಿಕೆ, ನಿಮ್ಮ ಉದ್ಯೋಗದಲ್ಲಿ ಹಿರಿಯ ಅಧಿಕಾರಿಗಳಿಂದ ಉತ್ತಮ ಪ್ರತಿಕ್ರಿಯೆ ,

ಕುಂಭ ರಾಶಿ ಭವಿಷ್ಯ (Kumba rashi bhavishya)

Kumba rashi bhavishya

ಬಂಧು ಮಿತ್ರರು ನಿಮ್ಮ ಬಗ್ಗೆ ತಪ್ಪು ಭಾವಿಸುವರು, ಸಹೋದ್ಯೋಗಿಗಳು ನಿಮ್ಮನ್ನು ಹಿಂಡಿ ಹಿಪ್ಪಿ ಮಾಡುವವರು, ದೂರದ ಪ್ರವಾಸ ಯೋಗ್ಯವಲ್ಲ, ರಾಜಕಾರಣಿಗಳಿಂದ ಜಾಗೃತರಾಗಿರಿ, ಹಿಂದಿನ ವೈಶ್ಯಮ್ಯ ಈಗ ಬಗೆಹರಿಯುವ ಸಾಧ್ಯತೆ ಇದೆ, ವ್ಯಾಪಾರ ವ್ಯವಹಾರಗಳ ಆರ್ಥಿಕ ಸ್ಥಿತಿಯಲ್ಲಿ ಗಣನೀಯ ಸುಧಾರಣೆ, ನಿಮ್ಮ ಆರೋಗ್ಯಉತ್ತಮ, ವಿವಾಹ ಯೋಗ, ಸಂತಾನಯೋಗ ಪುತ್ರ ಯೋಗ, ರಿಯಲ್ ಎಸ್ಟೇಟ್ ವ್ಯವಹಾರಗಳಲ್ಲಿ ಉತ್ತಮ ಬದಲಾವಣೆ, ಅಳಿಸಿ ಹೋದ ಬಂಧುಗಳಲ್ಲಿ ಮತ್ತೆ ಉತ್ತಮ ಬಾಂಧವ್ಯ, ಪತಿ ಪತ್ನಿಯಲ್ಲಿ ಪ್ರೇಮ ಮಧುರ, ಶತ್ರು ನಾಶದ ಕಡೆ ಗಮನ ಇರಲಿ, ಸಂಗಾತಿ ಜೊತೆ ಪ್ರೇಕ್ಷಣೀಯ ಸ್ಥಳಕ್ಕೆ ಭೇಟಿ, ಮನೋಕಾಮನೆಗಳು ಈಡೇರುತ್ತವೆ.

ಪ್ರೇಮಿಗಳಿಗೆ ಉತ್ತಮ ದಿವಸ,ಸಿದ್ಧ ಉಡುಪು ಸ್ಯಾರಿ ಸೆಂಟರ್ ವ್ಯಾಪಾರಿಗಳಿಗೆ ಲಾಭದ ದಿನ, ಉದ್ಯೋಗಿಗಳಿಗೆ ಅಧಿಕಾರಿಯಿಂದ ಉತ್ತಮ ಪ್ರಶಂಸೆ, ಮಕ್ಕಳ ಮದುವೆ ವಿಷಯ ಚರ್ಚಿಸುವುದು ಉತ್ತಮ ಕಾಲ, ಮಕ್ಕಳ ದೇಹಾಲಸ್ಯದಿಂದ ತೊಂದರೆ, ಖಾಸಗಿ ಉದ್ಯೋಗಿಗಳಿಗೆ ಸಂಬಳ ಏರಿಕೆ, ಟ್ರಾವೆಲ್ಸ್ ಆರ್ಥಿಕ ನಷ್ಟ, ಭೂಮಿ ವ್ಯಾಜ್ಯದಲ್ಲಿ ಜಯ ನಿಮ್ಮದಾಗಿರುತ್ತದೆ, ಸರ್ಕಾರಿ ಕೆಲಸಗಳು ಸುಲಭವಾಗಿ ಪೂರ್ಣಗೊಳ್ಳುತ್ತವೆ, ಬಾಕಿ ಹಣ ವಸುಲಾಗುತ್ತದೆ, ದಾಂಪತ್ಯ ಜೀವನದಲ್ಲಿ ನೆಮ್ಮದಿ, ಕಾನೂನು ಹೋರಾಟ ನಿಮ್ಮ ಪರವಾಗಿ ಆಗಲಿದೆ, ಮದುವೆ ಬಯಸಿದವರಿಗೆ ಯಶಸ್ಸು, ಸಿಮೆಂಟ್ ಕಬ್ಬಿಣ ಮರಳು ಇಟ್ಟಿಗೆ ವ್ಯಾಪಾರದಲ್ಲಿ ಅಭಿವೃದ್ಧಿ ಕಾಡುವಿರಿ,

ಮೀನ ರಾಶಿ ಭವಿಷ್ಯ (Meena rashi bhavishya)

Meena rashi bhavishya

ನೌಕರರಿಗೆ ಬದಲಿ ನೌಕರಿ ಯೋಗವಿದೆ,ಅವಿವಾಹಿತನವರಿಗೆ ವಿವಾಹ ಯೋಗ ಇದೆ, ಬಂಧುಗಳಿಗೆ ಮಾಡಿರುವ ನಿಮ್ಮ ಸಹಾಯ ನೆನೆದು ಈಗ ಸಹಾಯ ಮಾಡಲು ಮುಂದೆ ಬರುವರು, ಲಾಭವಿಲ್ಲದೆ ಕೈಕಟ್ಟಿ ಕುಂತಂತೆ ಆಗುತ್ತದೆ, ಬರಬೇಕಾದ ಹಣ ಸರಿಯಾದ ವೇಳೆಗೆ ಬಾರದೆ ಸಾಲದ ಮೊರೆ ಹೋಗುವಿರಿ, ಉದ್ಯೋಗದಲ್ಲಿ ಸಮಸ್ಯೆ ಎದುರಾದಾಗ ಚಾಣಾಕ್ಷತೆಯಿಂದ ಪಾರಾಗುವಿರಿ, ಹೊಸ ವ್ಯಾಪಾರ ಅಂಗಡಿ ಪ್ರಾರಂಭಿಸಿದವರು ಮಂದಗತಿಯಲ್ಲಿ ಭಾಗ್ಯೋದಯ, ಪತಿ ಪತ್ನಿಯರಲ್ಲಿ ಸಾಮರಸ್ಯ ಅಧಿಕ, ಪ್ರೇಮಿಗಳು ಇಂದು ಸೇರಲು ಉತ್ಸಾಹ, ಐ.ಟಿ ಉದ್ಯೋಗಸ್ಥರು ಒತ್ತಡದಿಂದ ಕಾರ್ಯ ನಿರ್ವಹಿಸಬೇಕಾಗುತ್ತದೆ.

ಹಳೆಯ ಸಂಗಾತಿಯ ನೆನಪು ಕಾಡುವುದು, ಭೂಮಿ ಕಟ್ಟಡ ವ್ಯಾಪಾರಗಳಿಗೆ ಧನ ಲಾಭವಿದೆ, ಆಸ್ತಿ ವಿಚಾರಕ್ಕಾಗಿ ಸಹೋದರಿಂದ ಮಾನಸಿಕ ಕಿರಿಕಿರಿ, ಆರೋಗ್ಯದಲ್ಲಿ ಏರುಪೇರು, ಮೂಲವ್ಯಾಧಿ, ಪಾದ ಉರಿತ, ಮೋಹನ ಚಲಿಸುವಾಗ ಜಾಗೃತಿ ಇರಲಿ, ಮಧ್ಯಸ್ಥಿಕೆ ವಹಿಸಿದ ವ್ಯವಹಾರಗಳಲ್ಲಿ ಎಚ್ಚರವಹಿಸಿ, ಹೊಸ ಒಪ್ಪಂದಗಳಿಗೆ ಅಂಗೀಕಾರ, ಆದಾಯದ ಮೂಲ ಗೋಚರ, ಕಾನೂನು ವ್ಯಾಜ್ಯಗಳು ನಿಮ್ಮ ಪರವಾಗಿ ಆಗಲಿದೆ, ಪ್ರೇಮ ಪ್ರಸಂಗಗಳಲ್ಲಿ ಯಶಸ್ಸು, ಕಷ್ಟದಲ್ಲಿರುವ ಬಂಧುಗಳಿಗೆ ಸಹಾಯ ಮಾಡಲಿದ್ದೀರಿ.

ಶ್ರೀ ಸೋಮಶೇಖರ್ ಗುರೂಜಿ B.Sc
Mob.No.9353488403
ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ವಿವಾಹ, ಪ್ರೇಮ ವಿವಾಹ, ಪ್ರೇಮಿಗಳಲ್ಲಿ ಮನಸ್ತಾಪ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಅತ್ತೆ-ಸೊಸೆ ಜಗಳ, ಸಂತಾನ ಭಾಗ್ಯ, ಸಾಲ ಬಾಧೆ, ಶತ್ರುಗಳಿಂದ ತೊಂದರೆ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಜನ್ಮ ರಾಶಿ ನಕ್ಷತ್ರಗಳ ಮೇಲೆ ವ್ಯಾಪಾರ, ರಾಶಿಗಳಿಗೆ ಅನುಗುಣವಾಗಿ ಜನ್ಮರಾಶಿ ಹರಳು, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು. ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
“ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು”
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.