Rashi bhavishya | ಶನಿವಾರದ ರಾಶಿ ಭವಿಷ್ಯ, 05 ಜುಲೈ 2025

Rashi bhavishya : ಜಾತಕ ಇಂದು 05 ಜುಲೈ 2025 ಶನಿವಾರ ಜ್ಯೋತಿಷ್ಯ ಶಾಸ್ತ್ರದ (Astrology), ಪ್ರಕಾರ 12 ರಾಶಿ ಸೇರಿದಂತೆ ಹೆಚ್ಚಿನ ಮಾಹಿತಿಗೆ ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು…

Today rashi bhavishya

Rashi bhavishya : ಜಾತಕ ಇಂದು 05 ಜುಲೈ 2025 ಶನಿವಾರ ಜ್ಯೋತಿಷ್ಯ ಶಾಸ್ತ್ರದ (Astrology), ಪ್ರಕಾರ 12 ರಾಶಿ ಸೇರಿದಂತೆ ಹೆಚ್ಚಿನ ಮಾಹಿತಿಗೆ ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು ಸೋಮಶೇಖರ್ ಗುರೂಜಿ (B.Sc) ನೀಡಿರುವ ಮಾಹಿತಿ ನೋಡಿ.

  • ಸೂರ್ಯೋದಯ – 5:50 ಬೆ.
  • ಸೂರ್ಯಾಸ್ತ – 6:50 ಸಂಜೆ.
  • ಶಾಲಿವಾಹನ ಶಕೆ -1947
  • ಸಂವತ್-2081
  • ವಿಶ್ವಾವಸು ನಾಮ ಸಂವತ್ಸರ,
  • ಉತ್ತರ ಅಯಣ,
  • ಶುಕ್ಲ ಪಕ್ಷ,
  • ಆಷಾಢ ಮಾಸ,
  • ಗ್ರೀಷ್ಮ ಋತು,
  • ತಿಥಿ – ದಶಮಿ
  • ನಕ್ಷತ್ರ – ಸ್ವಾತಿ
  • ಯೋಗ – ಸಿದ್ಧ
  • ಕರಣ – ಗರಜೆ
  • ರಾಹು ಕಾಲ -09:00 ದಿಂದ 10:30 ವರೆಗೆ
  • ಯಮಗಂಡ – 01:30 ದಿಂದ 03:00 ವರೆಗೆ
  • ಗುಳಿಕ ಕಾಲ – 06:00 ದಿಂದ 07:30 ವರೆಗೆ
  • ಬ್ರಹ್ಮ ಮುಹೂರ್ತ – 4:14 ಬೆ. ದಿಂದ 5:02 ಬೆ. ವರೆಗೆ
  • ಅಮೃತ ಕಾಲ – 10:00 ಬೆ. ದಿಂದ 11:48 ಬೆ. ವರೆಗೆ
  • ಅಭಿಜಿತ್ ಮುಹುರ್ತ – 11:54 ಬೆ. ದಿಂದ 12:46 ಮ. ವರೆಗೆ

ಮೇಷ ರಾಶಿ

ನಂಬಿದ ವ್ಯಕ್ತಿಯಿಂದ ಉದ್ಯೋಗ ಸಿಗುವ ಯೋಗ ಇದೆ, ಈಗ ಹೊಂದಿರುವ ಕೆಲಸದಲ್ಲಿ ಮುಂದುವರೆಯಿರಿ ಬದಲಾಯಿಸುವುದು ಬೇಡ, ಹೊಸ ಯೋಜನೆಗಳು ಚಾಲನೆ, ನಿಮಗೆ ಹೋಟೆಲ್ ವ್ಯವಹಾರ ಸಾಲಾವಳಿ ಬಂದಿದೆ ಅಧಿಕ ಧನ ಲಾಭ,ಯಂತ್ರಗಳ ಬಿಡಿ ಭಾಗಗಳ ಉದ್ಯಮದಾರರಿಗೆ ಆರ್ಥಿಕ ನಷ್ಟ, ಗುತ್ತಿಗೆದಾರರಿಗೆ ಹೊಸ ಟೆಂಡರ್ ಭಾಗ್ಯ, ಒಳಸಂಚುಗಳ ಬಗ್ಗೆ ಜಾಗೃತಿ ಇರಲಿ,ರಿಯಲ್ ಎಸ್ಟೇಟ್ ಮತ್ತು ಡೆವಲಪರ್ಸ್ ನವರಿಗೆ ಉದ್ಯಮದಲ್ಲಿ ಚೇತರಿಕೆ,ತಮಗೆ ಬರಬೇಕಾದ ಬಾಕಿ ಸಾಲದ ಮೊತ್ತ ಕೈಸೇರುವುದು. ಈ ಹಿಂದೆ ನೀವು ಪಟ್ಟಿದ್ದ ಶ್ರಮಕ್ಕೆ ಈಗ ಪ್ರತಿಫಲ ದೊರೆಯಲಿದೆ. ವ್ಯಾಪಾರ- ವ್ಯವಹಾರ ಮಾಡುವವರಿಗೆ ಹೊಸ ಆದಾಯ ಮೂಲ ಗೋಚರಿಸಲಿದೆ, ಅಷ್ಟೇ ಅಲ್ಲದೆ ಬೇರೆ ಉದ್ಯಮ ಪ್ರಾರಂಭದ ಚಿಂತನೆ ಕೂಡ ಮಾಡುವಿರಿ. ನವ ಯುವಕರಿಗೆ ರಾಜಕೀಯದಲ್ಲಿ ಸಕ್ರಿಯವಾಗಿ ಸಾಮಾಜಿಕವಾಗಿ ಮನ್ನಣೆ ದೊರೆತು, ಗೌರವ- ಸಮ್ಮಾನ ಹುಡುಕಿಕೊಂಡು ಬರಲಿವೆ. ವಿದೇಶಕ್ಕೆ ಹೋಗುವ ಕನಸು ನನಸಾಗಲಿದೆ. ಉದ್ಯೋಗ ಬದಲಾವಣೆಗೆ ಇದು ಸರಿಯಾದ ಸಮಯವಲ್ಲ. ಸರಕಾರಿ ನೌಕರಿ ಪಡೆಯುವವರಿಗೆ ಶ್ರಮ ಅವಶ್ಯಕ. ಶಿಕ್ಷಕ ವೃಂದದ ಮಕ್ಕಳಿಗೆ ಕಂಕಣಬಲದ ಭಾಗ್ಯ.

Vijayaprabha Mobile App free

ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಅತ್ತೆ-ಸೊಸೆ ಜಗಳ, ಸಂತಾನ ಭಾಗ್ಯ, ಸಾಲ ಬಾಧೆ, ಶತ್ರುಗಳಿಂದ ತೊಂದರೆ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಜನ್ಮ ರಾಶಿ ನಕ್ಷತ್ರಗಳ ಮೇಲೆ ವ್ಯಾಪಾರ, ರಾಶಿಗಳಿಗೆ ಅನುಗುಣವಾಗಿ ಜನ್ಮರಾಶಿ ಹರಳು, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು. ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
“ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು”
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

ವೃಷಭ ರಾಶಿ

ವ್ಯಾಪಾರ ವ್ಯವಹಾರಗಳಲ್ಲಿ ಧನ ಲಾಭ, ಬಂಧು ಮಿತ್ರರಿಂದ ಸಹಾಯ, ಜನಪ್ರತಿನಿಧಿಗಳಿಗೆ ಸಾರ್ವಜನಿಕ ಕ್ಷೇತ್ರದಲ್ಲಿ ರಾಜಮನ್ನಣೆ, ಉದ್ಯೋಗದಲ್ಲಿ ಪ್ರಗತಿ,ಕುಟುಂಬ ಮುಖ್ಯ್ ಸದಸ್ಯರು ದೀರ್ಘ ಪ್ರಯಾಣ ಅನಿವಾರ್ಯ, ಹಣ ವರ್ಗಾವಣೆ ವ್ಯವಹಾರಗಳಲ್ಲಿ ಧನ ಲಾಭ, ಅನಿರೀಕ್ಷಿತ ಉದ್ಯೋಗದಲ್ಲಿ ತೊಂದರೆ, ಎದುರಾಳಿಗಳ ಬಗ್ಗೆ ಅಷ್ಟು ಸಲೀಸಾಗಿ ನಂಬಬೇಡಿ, ಆಕಸ್ಮಿಕವಾಗಿ ಧನಪ್ರಾಪ್ತಿ. ಅರ್ಧಕ್ಕೆ ನಿಂತಿದ್ದ ಗ್ರಹ ಕಟ್ಟಡದ ಕೆಲಸಗಳನ್ನುಶುರು ಮಾಡಬೇಕಾಗುತ್ತದೆ. ಸಂಗಾತಿಯ ಸಹಕಾರದಿಂದ ದೂರಪ್ರಯಾಣದ ಯೋಜನೆ ಹಾಕಿಕೊಳ್ಳಲಿದ್ದೀರಿ. ಬಂಧುಗಳ ಆಗಮನದಿಂದ ಮನೆಯಲ್ಲಿ ಮನಸ್ತಾಪ ಆಗಲಿದೆ. ಮನರಂಜನೆಗಾಗಿ ಎಲೆಕ್ಟ್ರಾನಿಕ್ ಉಪಕರಣಗಳು ಖರೀದಿಸುವಿರಿ. ಮಗಳ ಸಂಸಾರದ ಬಗ್ಗೆ ಹೆಚ್ಚು ಚಿಂತನೆ ಮಾಡಲಿದ್ದೀರಿ.

ಮಿಥುನ ರಾಶಿ

ಶುಭ ಕಾರ್ಯ ಯತ್ನ ಸಫಲ, ವ್ಯಾಪಾರ ವ್ಯಾಪಾರ ವ್ಯವಹಾರಗಳಲ್ಲಿ ಭಾರಿ ಧನ ಲಾಭ, ನಿಮಗೆ ಕೆಳ ಸಹೋದ್ಯೋಗಿಗಳಿಂದ ತೊಂದರೆ, ತೊಂದರೆ, ರಾಜಕಾರಣಿಗಳು ರಾಜಕೀಯ ಕ್ಷೇತ್ರದಲ್ಲಿ ಎಚ್ಚರಿಕೆ ನಡೆ ಅಗತ್ಯ, ಹೆಣ್ಣು- ಗಂಡು ಹಿತೈಷಿಗಳ ಬಗ್ಗೆ ಎಚ್ಚರಿಕೆ ಇರಲಿ, ವಾಣಿಜ್ಯ ಪದವಿ ಪಡೆದವರಿಗೆ ಉದ್ಯೋಗ ಪ್ರಾಪ್ತಿ, ಸಂಗಾತಿಯ ಜೊತೆ ಮಿಲನ ಸಂತೋಷವಾಗಿರುವುದು. ಸಂಗಾತಿ ಜತೆಗೆ ಸರಸ ಸಲ್ಲಾಪ ಮಾಡುವಾಗ ಭಿನ್ನಾಭಿಪ್ರಾಯ ಮೂಡದಂತೆ ನೋಡಿಕೊಳ್ಳಿ. ಮೂಲ ಕಸುಬುದಾರರಿಗೆ ವ್ಯಾಪಾರ- ವ್ಯವಹಾರ ಮಾಡುತ್ತಿರುವವರಿಗೆ ಲಾಭದ ಪ್ರಮಾಣದಲ್ಲಿ ಹೆಚ್ಚಳ ಆಗಲಿದೆ. ಕಾಯಕವೇ ಕೈಲಾಸ ಎಂದು ನಂಬಿರುವ ನಿಮಗೆ ಜವಾಬ್ದಾರಿಯೊಂದು ಹೆಗಲೇರಲಿದೆ. ಕೆಲಸದಲ್ಲಿ ಸ್ವಲ್ಪ ಮಟ್ಟಿಗೆ ಒತ್ತಡ ಕಾಣಿಸಿಕೊಳ್ಳಲಿದೆ. ಹಣದ ಒಳಹರಿವು ಉತ್ತಮವಾಗಿದೆ. ಕೆಲಸದ ವಿಚಾರದಲ್ಲಿ ಸಹೋದ್ಯೋಗಿಗಳ ಜೊತೆ ವಾಗ್ವಾದ ಸಂಭವ. ನಿಮ್ಮ ಮದುವೆ ವಿಳಂಬ ಸಾಧ್ಯತೆಯಿದೆ.

ಕರ್ಕಾಟಕ ರಾಶಿ

ಕೈ ಹಾಕಿದ ಕೆಲಸ ಕಾರ್ಯಗಳಲ್ಲಿ ಅಲ್ಪ ಪ್ರಗತಿ, ಹೋಟೆಲ್ ವ್ಯಾಪಾರದಲ್ಲಿ ನಷ್ಟ ಉಂಟಾಗುತ್ತದೆ, ವ್ಯಾಪಾರದಲ್ಲಿ ಆದಾಯ ಇಳಿಕೆ ಕಂಡುಬರಲಿದೆ, ಸಾಲಗಾರರಿಂದ ತೊಂದರೆ ಅನುಭವಿಸುವಿರಿ, ಮಕ್ಕಳ ನಡವಳಿಕೆಯಿಂದ ಬೇಸರ, ದುಡ್ಡಿನ ವಿಚಾರದಲ್ಲಿ ಮನಸ್ತಾಪ ಸಹಜ ಮುಂದುವರೆಯಲಿದೆ. ಪ್ರೇಮಿಗಳ ಮನಸ್ಸು ಚಂಚಲಚಿತ್ತತೆ ಇರುತ್ತದೆ. ಲಕ್ಷ್ಮಿ ತಾಂಡವ ಆದರೆ ಕೈಯಲ್ಲಿ ಹಣ ನಿಲ್ಲುವುದಿಲ್ಲ. ನಿಮಗೆ ಸಂಬಂಧ ಪಡದ ಸಂಗತಿಗಳಿಂದ ನಿಮ್ಮ ಮೇಲೆ ಅಪವಾದ ಬರಲಿದೆ. ಕುಟುಂಬದ ಸಂಬಂಧಿಗಳ ಚುಚ್ಚು ಮಾತುಗಳಿಂದ ಮನಸಿಗೆ ಬೇಸರ ಆಗಲಿದೆ. ದೂರ ಪ್ರಯಾಣ ಬೇಡ. ವಿದೇಶ ಪ್ರವಾಸ ಮಾಡುವ ಮುನ್ನ ಫಲಿತಾಂಶದ ಬಗ್ಗೆ ಮುಂಚಿತವಾಗಿಯೇ ಆಲೋಚಿಸಿದ ಮೇಲೆ ಹೆಜ್ಜೆ ಇಡಿ. ಆಮಿಷಕ್ಕೆ ಒಳಗಾಗಬೇಡಿ. ತಾವು ನೆಲೆಸಿರುವ ಊರಿನಲ್ಲಿಯೇ ಹೊಸ ಉದ್ಯಮ ಪ್ರಾರಂಭ ಮಾಡುವಿರಿ. ಮದುವೆ ವಿಳಂಬ ಏಕೆ ?ಎಂಬ ಪ್ರಶ್ನೆ ಕಾಡುತ್ತಿದೆ

ಸಿಂಹ ರಾಶಿ

ವ್ಯವಹಾರಗಳಿಂದ ಬಂಧು ಮಿತ್ರರಲ್ಲಿ ವಿರೋಧ, ದಾಯಾದಿಗಳ ಕಲಹ ಮುಂದುವರಿದವು, ಗಂಡ ಹೆಂಡತಿ ಮಧ್ಯೆ ಅನಾವಶ್ಯಕವಾದ ವಿವಾದ ಉಂಟಾಗಬಹುದು, ಹೋಟೆಲ್ ವ್ಯವಹಾರಗಳಲ್ಲಿ ಹೆಚ್ಚಿನ ಲಾಭ, ಆಕಸ್ಮಿಕ ಆರೋಗ್ಯದಲ್ಲಿ ಏರುಪೇರು ಸಂಭವ, ದಂಪತಿಗಳಿಗೆ ಸಂತಾನ ಏಕೆ ಆಗುತ್ತಿಲ್ಲ ಎಂಬ ಪ್ರಶ್ನೆ ಕಾಡುತ್ತಿದೆ. ಮಾತಾಪಿತೃ ಆರೋಗ್ಯದ ಕಡೆ ಹೆಚ್ಚಿನ ನಿಗಾ ವಹಿಸಿ. ನಿಮ್ಮದಲ್ಲದ ತಪ್ಪಿಗ ಶಿಕ್ಷೆ ನುಭವಿಸಬೇಕಾದಿತು, ಇದು ಮಧ್ಯಸ್ಥಿಕೆ ಜನರ ಕುತಂತ್ರ. ದುಡುಕು ಮಹಾ ಕೆಡುಕು ಇದರಿಂದ ಸಾಲದ ಜವಾಬ್ದಾರಿ ಹೊರಬೇಕಾಗುತ್ತದೆ. ಸರ್ಕಾರಿ ಕೆಲಸ ಸೇರುವುದಕ್ಕಾಗಿ ಯಾರಿಂದಲೋ ಸಹಾಯ ನಿರೀಕ್ಷೆ ಮಾಡುತ್ತಿದ್ದಲ್ಲಿ ಅದು ದೊರೆಯುವುದು ಕಷ್ಟವಾಗಲಿದೆ. ಯಾವುದೇ ನಿರೀಕ್ಷೆ ಇಟ್ಟುಕೊಳ್ಳಬೇಡಿ ಏಕೆಂದರೆ ಆರ್ಥಿಕ ಪರಿಸ್ಥಿತಿ ಸರಿಯಿಲ್ಲ. ನಿಮ್ಮ ಯೋಚನೆ ಸರಿಯಾಗಿದೆ ಆದರೆ ನಿಮಗೆ ಮಾನ್ಯತೆ ಇಲ್ಲ.ಯಾವುದು ಹೇಗೋ ಬರುತ್ತದೋ ಹಾಗೇ ಸ್ವೀಕರಿಸಿ ಗುರಿ ಮುಟ್ಟಲು ಹೋರಾಡಿರಿ.

ಕನ್ಯಾ ರಾಶಿ

ತಂದೆ ಮಗನಿಗೆ ಪ್ರತಿದಿನ ಕಿರಿಕಿರಿ, ಪಾರ್ಟ್ನರ್ಶಿಪ್ ವ್ಯವಹಾರಗಳಲ್ಲಿ ಭಾರಿ ನಷ್ಟ,ದಾಂಪತ್ಯ ಸಾಮರಸ್ಯ ವೃದ್ಧಿ, ಪ್ರೇಮಿಗಳು ಮದುವೆ ದೃಢ ತೀರ್ಮಾನ ಕೈಗೊಳ್ಳಲು ವಿಫಲ, ಮಹಿಳಾ ಉದ್ಯೋಗಿಗಳಿಗೆ ಉದ್ಯೋಗದಲ್ಲಿ ಬಡ್ತಿ, ನಿಮ್ಮ ಸ್ವಂತ ದುಡಿಮೆಯಿಂದ ವಾಹನ ಖರೀದಿ. ಕೃಷಿ ಉತ್ಪನ್ನ ವ್ಯವಹಾರಗಳಲ್ಲಿ ಬೆಳವಣಿಗೆ ಇದೆ. ಹಣಕಾಸಿನ ವ್ಯವಹಾರ ಸುಗಮವಾಗಲಿದೆ. ಸರ್ಕಾರದ ಕೆಲಸ- ಕಾರ್ಯಗಳಿಗಾಗಿ ಹೋರಾಟ ಮುಂದುವರೆಯಲಿದೆ. ನಿಮ್ಮ ಸಹನೆದಿಂದ ವಿರೋಧಿಗಳು ಒಳಸಂಚು ಮಾಡಲಿದ್ದಾರೆ. ವಿರೋಧಿಗಳು ನಾಶವಾಗಲು ಮಿತಿ ಹಾಕಿಕೊಳ್ಳಿ, ಇಲ್ಲದಿದ್ದಲ್ಲಿ ನಿಮ್ಮನ್ನು ದುರುಪಯೋಗ ಮಾಡಿಕೊಳ್ಳುವ ಸಾಧ್ಯತೆ ಇದೆ. ನಿಮ್ಮ ಹಣ ಮರಳಿ ಬರಲು ಹರಸಾಹಸ ಪಡುವಿರಿ. ಸಾಲಗಾರರಿಂದ ವೈಷಮ್ಯ.

ತುಲಾ ರಾಶಿ

ಮಕ್ಕಳಿಂದ ಮದುವೆಗೆ ತೃಪ್ತಿದಾಯಕ ಸಂದೇಶ, ಸಂಗಾತಿ ಅನಿರೀಕ್ಷಿತ ಮುನಿಸು, ಬಲವಂತದ ಮದುವೆ ಒಳ್ಳೆಯದಲ್ಲ, ಹಣಕಾಸಿನ ವಿಚಾರದಲ್ಲಿ ನಂಬಿಕೆ ದ್ರೋಹ, ಬಹುದಿನದಿಂದ ಕಣ್ಣಿಗೆ ಸಂಬಂಧಿಸಿದ ಸಮಸ್ಯೆಗಳು ನಿವಾರಣೆಯಾಗಲಿದೆ. ಮದುವೆಗಾಗಿ ಹಣದ ಸಹಾಯ ಕೇಳಲು ಬರುವವರಿದ್ದಾರೆ. ದಾನ- ಧರ್ಮಾದಿ ಕಾರ್ಯಗಳಿಂದ ಮನಸಿಗೆ ನೆಮ್ಮದಿ ದೊರೆಯಲಿದೆ. ದೇವಸ್ಥಾನ ಪ್ರತಿಷ್ಠಾಪನ ದ ಚಿಂತನೆ ಮಾಡುವಿರಿ. ಒಗ್ಗಟ್ಟಿನ ಕುಟುಂಬದ ವಿಚಾರದಲ್ಲಿ ಮೂಗು ತೂರಿಸುತ್ತಿದ್ದಾರೆ ಎಂದು ಬಲವಾಗಿ ಅನಿಸುತ್ತದೆ. ಸೋದರ- ಸೋದರಿಯರ ಜತೆ ಆಸ್ತಿ ವಿಚಾರ ಮಾತನಾಡುವಾಗ ನಾಲಗೆ ಮೇಲೆ ಹಿಡಿತ ಇರಲಿ, ಸಾವಧಾನವಾಗಿ ಬಗೆಹರಿಸಿಕೊಳ್ಳಿ. ವಾಹನ ಓಡಿಸುವಾಗ ಮೊಬೈಲಲ್ಲಿ ಮಾತನಾಡಬೇಡಿ ಇದರಿಂದ ಅಪಘಾತ ಸಂಭವ. ವಾಹನಕ್ಕೆ ಸಂಬಂಧಿಸಿದ ದಾಖಲಾತಿಗಳನ್ನು ಪರೀಕ್ಷಿಸಿ ವಾಹನ ಚಲಾಯಿಸಿ.

ವೃಶ್ಚಿಕ ರಾಶಿ

ಐ. ಟಿ ಉದ್ಯೋಗಿಗಳಿಗೆ ಉದ್ಯೋಗದಲ್ಲಿ ಉನ್ನತ ಸ್ಥಾನ ಗಳಿಕೆ, ದಂಪತಿಗಳಿಗೆ ಹೊಂದಾಣಿಕೆ ಕಡಿಮೆ, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಹಿನ್ನಡೆ, ಕೃಷಿಕರಿಗೆ ಶುಭದಿನ, ಪಿತ್ರಾರ್ಜಿತ ಆಸ್ತಿ ವಿಚಾರದಲ್ಲಿ ಗೊಂದಲ ಸೃಷ್ಟಿ. ತಾಯಿಯ ಆರೋಗ್ಯದ ಬಗ್ಗೆ ಗಮನ ವಹಿಸಿ. ವಿದೇಶದಲ್ಲಿ ಕಾರ್ಯ ನಿರ್ವಹಿಸುವವರಿಗೆ ಉದ್ಯೋಗದ ಸಮಸ್ಯೆ ಕಾಡಲಿದೆ. ನವದಂಪತಿಗಳಿಗೆ ಸಂತಾನ ಅಪೇಕ್ಷಿತರಿಗೆ ಶುಭ ಸುದ್ದಿ ಕೇಳಿಬರಲಿದ್ದು.ದೇಹದ ತೂಕ ಹೆಚ್ಚಾಗದಂತೆ ಆರೋಗ್ಯದ ಸಮಸ್ಯೆ ಹೆಚ್ಚಾಗಲಿದೆ. ಥೈರಾಯ್ಡ್ ಸಮಸ್ಯೆಯಿಂದ ಎಚ್ಚರಿಕೆ ವಹಿಸಿ. ಗೃಹಪಯೋಗಿ ಕರಣಗಳು ಖರೀದಿಸುವ ಚಿಂತನೆ. ತಂತ್ರಜ್ಞಾನ ಪದವಿ ಹೊಂದಿದವರು ಉದ್ಯೋಗಕ್ಕಾಗಿ ಆಲೋಚನೆ ಮಾಡಲಿದ್ದೀರಿ.

ಧನಸ್ಸು ರಾಶಿ

ಮದುವೆ ವಿಚಾರಕ್ಕಾಗಿ ಮನೆಗೆ ಬರುತ್ತಿದ್ದು ಆದರೂ ಮದುವೆ ಫಿಕ್ಸ್ ಆಗುತ್ತಿಲ್ಲ, ಐ.ಟಿ ಉದ್ಯೋಗಿಗಳಿಗೆ ಹೊಸ ಉದ್ಯೋಗ ಲಭ್ಯ, ಕೆಲವರಿಗೆ ವಿದೇಶ ಭಾಗ್ಯ, ಆಹಾರ ತಯಾರಿಕಾ ಘಟಕ ನಡೆಸುತ್ತಿರುವವರಿಗೆ ಧನ ಲಾಭ, ಹಣಕಾಸಿನ ವಿಚಾರಕ್ಕಾಗಿ ಸ್ನೇಹಿತರೊಡನೆ ಜಗಳ, ಪ್ರಯತ್ನ ತಕ್ಕಂತೆ ಫಲ ಸಿಗುವುದು,ಹಗಲುಗನಸು ಕಾಣುವುದನ್ನು ಬಿಡಬೇಕು. ನಿಮ್ಮ ಸಾಮರ್ಥ್ಯವನ್ನು ಮೀರಿದ ಹಣಕಾಸು ವ್ಯವಹಾರ ಮೈಮೇಲೆ ಎಳೆದುಕೊಳ್ಳಬೇಡಿ. ಹಿತಶತ್ರುಗಳಿಂದ ಕಿರುಕುಳ ಇರುತ್ತದೆ, ಇದರ ಶಾಶ್ವತ ಪರಿಹಾರಕ್ಕಾಗಿ ಕರೆ ಮಾಡಿರಿ. ವಿರೋಧಿಗಳು ಪ್ರೇಮದಿಂದ ಗೆಲ್ಲುವುದು ಉತ್ತಮ. ಉದರ ಸಂಬಂಧಿಸಿದ ಕಾಯಿಲೆ ಉಳ್ಳವರು ಆಹಾರ ಪಥ್ಯದಲ್ಲಿ ಕಡ್ಡಾಯವಾಗಿ ವೈದ್ಯರ ಸಲಹೆಯನ್ನು ಪಾಲಿಸಿ. ಮೇಲಧಿಕಾರಿಗಳ ಜತೆಗೆ ಮಾತುಕತೆ ಆಡುವಾಗ ವಿನಮ್ರತೆ ತುಂಬಿರಲಿ, ಇದು ಮುಂದಿನ ದಿನ ಪ್ರಮೋಷನ್ ಭಾಗ್ಯ ನಿಮ್ಮದಾಗಲಿದೆ.

ಮಕರ ರಾಶಿ

ಮಕ್ಕಳ ಮದುವೆ ವಿಳಂಬದಿಂದ ಬೇಸರ, ಸಂಗಾತಿಯ ವಾತ್ಸಲ್ಯವು ಉತ್ತಮವಾಗಿದೆ, ಮಧ್ಯವರ್ತಿಗಳಿಂದ ಅಪಾಯ, ವಾಹನಕ್ಕೆ ಸಂಬಂಧಿಸಿದ ದಾಖಲಾತಿಗಳು ನಿಮ್ಮ ಹತ್ತಿರ ಇರಲಿ,ವಾಹನ ಚಾಲನೆ ವೇಳೆ ಎಚ್ಚರಿಕೆಯಿಂದ ಇರಬೇಕು. ನಿಮ್ಮ ಅಜಾಗೃಕತೆಯಿಂದ ಬೆಲೆಬಾಳುವ ವಸ್ತುಗಳು ಕಳೆದುಕೊಳ್ಳುವ ಸಂಭವ. ನಿಮ್ಮ ಅತಿಯಾದ ಕೋಪ ನಡವಳಿಕೆಯಿಂದ ಆಪ್ತರ ಜತೆಗೆ ಮನಸ್ತಾಪ ಆಗಬಹುದು. ಹಣಕಾಸು ವಿಚಾರದಲ್ಲಿ ಸಮತೋಲನ ಕಾಪಾಡಿಕೊಳ್ಳಿ. ನಿಮ್ಮ ಸಂಗಾತಿ ಜೊತೆ ಭಾವನಾತ್ಮಕವಾದ ವಿಚಾರದಲ್ಲಿ ಸೂಕ್ತವಾದ ತೀರ್ಮಾನವನ್ನು ತೆಗೆದುಕೊಳ್ಳಿ.

ಕುಂಭ ರಾಶಿ

ಮಕ್ಕಳು ಮದುವೆ ಮಾಡಿಕೊಳ್ಳಲು ವಿರೋಧ, ಉದ್ಯೋಗ ಕ್ಷೇತ್ರದಲ್ಲಿ ಮತ್ತು ಕುಟುಂಬದಲ್ಲಿ ಬಾವೊದ್ರೇಕ ಸಾಧ್ಯತೆ, ಹಣಕಾಸಿನ ಸ್ಥಿತಿ ಉತ್ತಮದ ಕಡೆಗೆ, ಲೇವಾದೇವಿಗಾರರರಿಗೆ ಸ್ವಲ್ಪಮಟ್ಟಿಗೆ ನೆಮ್ಮದಿ ಸಿಗಲಿದೆ. ಹಣದ ಬಾಕಿ ಬರಬೇಕಾದಲ್ಲಿ ಹೆಚ್ಚು ಶ್ರಮ ಹಾಕಿ ಪ್ರಯತ್ನಿಸಿ. ದೀರ್ಘಾವಧಿ ಹೂಡಿಕೆ ಬೇಡ. ಹಿರಿಯರಲ್ಲಿ ದಯಾ- ದಾಕ್ಷಿಣ್ಯ ತೋರಿಸಿ, ಮಾತಿನಲ್ಲಿ ಸೌಜನ್ಯ ಇರಲಿ. ಯಾರದೋ ಮೇಲಿನ ಸಿಟ್ಟು ಮತ್ಯಾರ ಮೇಲೋ ತೋರಿಸಬೇಡಿ, ಇದರಿಂದ ತುಂಬಾ ಕಷ್ಟ ಅನುಭವಿಸಬೇಕಾದಿತು. ಪ್ರೇಯಸಿ ಜೊತೆ ತುಂಬಾ ಸೌಜನ್ಯವಾಗಿ ವರ್ತಿಸಿ. ಅವರು ತುಂಬಾ ಮೃದು ಸ್ವಭಾವದವರು.

ಮೀನ ರಾಶಿ

ಮಕ್ಕಳ ನಡವಳಿಕೆಯಿಂದ ತುಂಬ ಬೇಸರ ತಂದಿದೆ, ಸಂಗಾತಿಯ ಮುಖದಲ್ಲಿ ಸಂತಸ, ಹೊಸ ವ್ಯಾಪಾರ ಪ್ರಾರಂಭಿಸುವ ಪ್ರಸ್ತಾಪ,ತಂತ್ರಜ್ಞಾನ ಪದವಿ ಓದಿದವರಿಗೆ ಬೇಡಿಕೆ ಹೆಚ್ಚಾಗಲಿದೆ, ಎಲ್ಲಾ ದಾಖಲೆಗಳು ಭದ್ರವಾಗಿ ಜೋಡಿಸಿ.ಉದ್ಯೋಗಸ್ಥರಿಗೆ ಪ್ರಾಮುಖ್ಯ ಹೆಚ್ಚಾಗಲಿದೆ. ಪ್ರೇಯಸಿ ಜೊತೆ ರುಚಿಕಟ್ಟಾದ ಊಟ- ತಿಂಡಿಯನ್ನು ಸವಿಯಲಿದ್ದೀರಿ. ದಂಪತಿಗಳಿಗೆ ಸಂಬಂಧಿಕರಿಂದ ಔತಣಕೂಟಕ್ಕೆ ಆಹ್ವಾನ ಬರಲಿದೆ. ದೇವತಾರಾಧನೆಗೆ ಕುಟುಂಬ ಸಮೇತ ಭಾಗವಹಿಸುವಿರಿ. ಕುಟುಂಬದೊಳಗೆ ಮದುವೆ ವಿಚಾರ ಪ್ರಸ್ತಾವ ಆಗಲಿದೆ. ದಂಪತಿ ಮಧ್ಯೆ ಸಣ್ಣ- ಪುಟ್ಟ ಭಿನ್ನಾಭಿಪ್ರಾಯ ಮಧ್ಯಸ್ಥಿಕೆ ಜನರಿಂದ ಕಾಣಿಸಿಕೊಳ್ಳಬಹುದು. ಅನುಮಾನಕ್ಕೆ ಕುಟುಂಬದಲ್ಲಿ ಅಶಾಂತಿ.

ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಅತ್ತೆ-ಸೊಸೆ ಜಗಳ, ಸಂತಾನ ಭಾಗ್ಯ, ಸಾಲ ಬಾಧೆ, ಶತ್ರುಗಳಿಂದ ತೊಂದರೆ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಜನ್ಮ ರಾಶಿ ನಕ್ಷತ್ರಗಳ ಮೇಲೆ ವ್ಯಾಪಾರ, ರಾಶಿಗಳಿಗೆ ಅನುಗುಣವಾಗಿ ಜನ್ಮರಾಶಿ ಹರಳು, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು. ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
“ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು”
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.

Leave a Reply