ನಟ ಚಿರಂಜೀವಿ ಸರ್ಜಾ ಅಗಲಿ ಇಂದಿಗೆ ಒಂದು ವರ್ಷ: ಚಿರು ಸಮಾಧಿ ಸ್ಥಳದಲ್ಲಿ ಭಾವುಕರಾ ಮೇಘನಾ ರಾಜ್

ಬೆಂಗಳೂರು: ಸ್ಯಾಂಡಲ್‍ವುಡ್ ಯುವ ಸಾಮ್ರಾಟ್ ಚಿರು ಸರ್ಜಾ ಅಗಲಿ ಇಲ್ಲಿಗೆ ಒಂದು ವರ್ಷವಾಗಿದ್ದು, ಚಿರಂಜೀವಿ ಸರ್ಜಾ ಪುಣ್ಯ ಸ್ಮರಣೆ ಅಂಗವಾಗಿ ಕುಟುಂಬಸ್ಥರು ಸಮಾಧಿಗೆ ಪೂಜೆ ಸಲ್ಲಿಸಿದ್ದಾರೆ. ನಟ ಚಿರಂಜೀವಿ ಸರ್ಜಾ ಅವರು ಕಳೆದ ವರ್ಷ…

Meghana Raj

ಬೆಂಗಳೂರು: ಸ್ಯಾಂಡಲ್‍ವುಡ್ ಯುವ ಸಾಮ್ರಾಟ್ ಚಿರು ಸರ್ಜಾ ಅಗಲಿ ಇಲ್ಲಿಗೆ ಒಂದು ವರ್ಷವಾಗಿದ್ದು, ಚಿರಂಜೀವಿ ಸರ್ಜಾ ಪುಣ್ಯ ಸ್ಮರಣೆ ಅಂಗವಾಗಿ ಕುಟುಂಬಸ್ಥರು ಸಮಾಧಿಗೆ ಪೂಜೆ ಸಲ್ಲಿಸಿದ್ದಾರೆ.

ನಟ ಚಿರಂಜೀವಿ ಸರ್ಜಾ ಅವರು ಕಳೆದ ವರ್ಷ ಜೂನ್ 7 ರಂದು ಹೃದಯಾಘಾತದಿಂದ ನಿಧನರಾಗಿದ್ದು, ಕುಟುಂಬ ಹಾಗೂ ಅಪಾರ ಅಭಿಮಾನಿಗಳಿಂದ ದೂರವಾಗಿರು. ಚಿರು ಎಲ್ಲರನ್ನು ಅಗಲಿ ಇಂದಿಗೆ ಸರಿಸುಮಾರು ಒಂದು ವರ್ಷವಾಗಿದ್ದು, ಚಿರು ಪುಣ್ಯ ಸ್ಮರಣಾರ್ಥಕವಾಗಿ ಇಂದು ಕುಟುಂಬಸ್ಥರು ಪೂಜೆ ಮಾಡಿದ್ದಾರೆ.

ಕನಕಪುರ ರಸ್ತೆಯ ನಲಗುಳಿ ಬಳಿ ಸಹೋದರ ಧ್ರುವ ಸರ್ಜಾ ಫಾರ್ಮ್ ಹೌಸ್ ನಲ್ಲಿ ಚಿರಂಜೀವಿ ಸರ್ಜಾ ಅವರ ಅಂತ್ಯ ಕ್ರಿಯೆ ಮಾಡಲಾಗಿದ್ದು, ಇಂದು ಧ್ರುವ ಸರ್ಜಾ ಕುಟುಂಬ ಹಾಗೂ ಚಿರು ಪತ್ನಿ ಮೇಘನಾ ರಾಜ್ ಕುಟುಂಬ ಸ್ಥಳಕ್ಕೆ ಆಗಮಿಸಿ ಪೂಜೆ ಸಲ್ಲಿಸಲಿದ್ದಾರೆ. ಚಿರು ಅಗಲಿಕೆಯ ನೋವಲ್ಲಿ ಕುಟುಂಬ ಜೂನಿಯರ್ ಚಿರುವಿನ ನಗುವನ್ನು ನೋಡುತ್ತಾ ಒಂದು ವರ್ಷ ಕಳೆದಿದ್ದು, ಧ್ರುವ ಸರ್ಜಾ, ಮೇಘನಾ ರಾಜ್, ಪುತ್ರ ಹಾಗೂ ಸುಂದರ್ ರಾಜ್, ಪ್ರಮಿಳಾ ಜೋಷಾಯ್ ಹಾಗೂ ಚಿರು ಕುಟುಂಬಸ್ಥರು ತಮ್ಮ ಫಾರ್ಮ್ ಹೌಸ್‍ನಲ್ಲಿರುವ ಚಿರು ಸಮಾಧಿಗೆ ಪೂಜೆ ಸಲ್ಲಿಸಿದ್ದಾರೆ.

Vijayaprabha Mobile App free

ಇನ್ನು ಇದೇ ವೇಳೆ ಚಿರು ಜೊತೆಗಿನ ಸುಂದರ ಚಿತ್ರವೊಂದನ್ನ ಪತ್ನಿ ಮೇಘನಾ ರಾಜ್ ತಮ್ಮ ಇನ್ಸ್ಟಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.