ವಿಜಯನಗರ,ಫೆ.16: ವಿಜಯನಗರ ಜಿಲ್ಲೆಯಲ್ಲಿ ಹೊಸದಾಗಿ ಸೃಜಿಸಲಾಗಿರುವ ಜಂಟಿ ಕೃಷಿ ನಿರ್ದೇಶಕರ ಕಛೇರಿಗೆ ಜಂಟಿಕೃಷಿ ನಿರ್ದೇಶಕರಾಗಿ ಶರಣಪ್ಪ ಮುದಗಲ್ ಅವರು ಆಗಮಿಸಿದ್ದಾರೆ. ಜಂಟಿ ಕೃಷಿ ನಿರ್ದೇಶಕರಾಗಿ ಶರಣಪ್ಪ ಮುದಗಲ್ ಅವರು ಬುಧವಾರ ಕರ್ತವ್ಯಕ್ಕೆ ಹಾಜರಾಗಿದ್ದಾರೆ.
ಆದ ಕಾರಣ ಜಿಲ್ಲೆಯ ಎಲ್ಲಾ ರೈತಭಾಂದವರು ತಮ್ಮ ಕೃಷಿ ಚಟುವಟಿಕೆಯ ಕುರಿತು ಸಲಹೆ ಸೂಚನೆ ಹಾಗೂ ಅಹವಾಲುಗಳಿಗೆ ಮೊ : 8277930448 ಸಂಪರ್ಕಿಸಬಹುದಾಗಿದೆ.
ಜಂಟಿ ಕೃಷಿ ನಿರ್ದೇಶಕರ ಕಚೇರಿಯು ತಾತ್ಕಾಲಿಕವಾಗಿ ವಿಜಯನಗರ ಜಿಲ್ಲಾಕೇಂದ್ರವಾಗಿರುವ ಹೊಸಪೇಟೆಯ ಎಂ.ಪಿ.ಪ್ರಕಾಶ ನಗರದ ಶಂಕರ ಕಾಲೋನಿ ಕಾರ್ಯನಿರ್ವಹಿಸುತ್ತಿದೆ ಎಂದು ಪ್ರಕಟಣೆ ತಿಳಿಸಿದೆ.
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮvijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.