heavy rain: ರಾಜ್ಯದಲ್ಲಿ ಭಾರೀ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ

Vijayaprabha

Heavy rain: ದೇಶದಲ್ಲಿ ಸೇರಿ ರಾಜ್ಯದಲ್ಲೂ ಮುಂಗಾರು ಚುರುಕುಗೊಂಡಿದ್ದು, ಈಗಾಗಲೇ ರಾಜ್ಯದ ವಿವಿಧೆಡೆ ಸುರಿಯುತ್ತಿರುವ ಮಳೆ, ಮುಂದಿನ ಐದು ದಿನ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

Heavy rain

ಹೌದು, ಉತ್ತರ ಭಾರತ ಸೇರಿ ಈಶಾನ್ಯ ರಾಜ್ಯಗಳು ಭಾರಿ ಪ್ರಮಾಣದ ಮಳೆಯಿಂದ ತತ್ತರಿಸಿದ್ದು, 62 ವರ್ಷದ ಬಳಿಕ ದೆಹಲಿ ಹಾಗೂ ಮುಂಬೈಗೆ ಒಂದೇ ದಿನ ಮಾನ್ಸೂನ್ ಪ್ರವೇಶಿಸಿದೆ. ಇತ್ತ ರಾಜ್ಯದಲ್ಲೂ ಮಳೆ ಚುರುಕುಗೊಂಡಿದೆ. ಇಂದೂ ಸಹ ಹಲವು ಕಡೆ ಮಳೆ ಮುಂದುವರೆಯಲಿದೆ.

ಇದನ್ನು ಓದಿ: ಇಂದು ಬುಧಗ್ರಹದ ಪ್ರಭಾವದಿಂದ ಈ ರಾಶಿಗಳಿಗೆ ಉತ್ತಮ ಫಲಗಳು..!

ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಸೇರಿದಂತೆ ವಿವಿಧೆಡೆ ಇಂದಿನಿಂದ ಜೂ.30ರವರೆಗೆ ಭಾರೀ ಮಳೆ (Heavy rain) ಬೀಳುವ ಸಾಧ್ಯತೆ ಇರುವುದರಿಂದ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದ್ದು, ಮಲೆನಾಡು, ದಕ್ಷಿಣ ಕರ್ನಾಟಕ ಹಾಗೂ ಉತ್ತರ ಕರ್ನಾಟಕದಲ್ಲಿ ಮುಂದಿನ ಎರಡು ದಿನ ಮಳೆ ಸುರಿಯಲಿದೆ ಎಂದು ರಾಜ್ಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ.

Heavy rain: ಮುಂಗಾರು ಆಗಮನ ಮುನ್ನಡೆಯಲಿದೆ..

ಹವಾಮಾನ ಇಲಾಖೆಯ ಪ್ರಕಾರ, ಮುಂದಿನ ಕೆಲವು ದಿನಗಳಲ್ಲಿ ಮುಂಬೈ, ಮಧ್ಯಪ್ರದೇಶ, ಕರ್ನಾಟಕ, ಕೇರಳ, ತಮಿಳುನಾಡು ಉತ್ತರ ಪ್ರದೇಶ, ಜಮ್ಮು ಕಾಶ್ಮೀರ ಮತ್ತು ಲಡಾಖ್ ಸೇರಿದಂತೆ ಮಹಾರಾಷ್ಟ್ರದ ಬಹುತೇಕ ಭಾಗಗಳು, ಚಂಡೀಗಢ, ದೆಹಲಿ ಸೇರಿದಂತೆ ಹರಿಯಾಣದ ಹೆಚ್ಚಿನ ಭಾಗಗಳು, ಗುಜರಾತ್‌ನ ಕೆಲವು ಭಾಗಗಳು ಮತ್ತು ಪಂಜಾಬ್‌ನ ಮುಂದಿನ ಎರಡು ದಿನಗಳ ಕಾಲ ಮುಂದುವರೆಯಲು ಪರಿಸ್ಥಿತಿಗಳು ಪರಿಪೂರ್ಣವಾಗಿವೆ ಎಂದು ತಿಳಿಸಿದೆ.

ಇದನ್ನು ಓದಿ: ಆಧಾರ್ ಪ್ಯಾನ್ ಲಿಂಕ್ ಗೆ ಅಂತಿಮ ಗಡುವು ಕೊನೆಗೊಳ್ಳುತ್ತಿದೆ.. ಹೀಗೆ ಅಪ್ ಡೇಟ್ ಮಾಡಿ..!

ಪ್ರಮುಖ ಲಿಂಕುಗಳು/ Important links

ವಾಟ್ಸಾಪ್ ಗ್ರೂಪ್ ಇಲ್ಲಿ ಕ್ಲಿಕ್ ಮಾಡಿ
ಫೇಸ್ ಬುಕ್ ಪೇಜ್ ಇಲ್ಲಿ ಕ್ಲಿಕ್ ಮಾಡಿ
ಟೆಲಿಗ್ರಾಮ್ ಗ್ರೂಪ್ ಇಲ್ಲಿ ಕ್ಲಿಕ್ ಮಾಡಿ
ಟ್ವಿಟ್ಟರ್ ಇಲ್ಲಿ ಕ್ಲಿಕ್ ಮಾಡಿ
ಶೇರ್ ಚಾಟ್ ಇಲ್ಲಿ ಕ್ಲಿಕ್ ಮಾಡಿ
Share This Article
Follow:
Kannada news - Vijayaprabha is a live Kannada news portal offering Kannada news online, Movie News in Kannada, Sports News in Kannada, Business News in Kannada & all Kannada Newspaper updates, Current Affairs in Karnataka & around the India in Kannada language.
Leave a comment

Leave a Reply

Your email address will not be published. Required fields are marked *

Exit mobile version