Guarantee Schemes: ಇಂದು ಕಾಂಗ್ರೆಸ್​​ ಮೊದಲ ಸಂಪುಟ ಸಭೆ: 5 ಗ್ಯಾರಂಟಿ ಯೋಜನೆಗಳ ಬಗ್ಗೆ ನಿರ್ಧಾರ ಪ್ರಕಟ..!?

Vijayaprabha

Guarantee Schemes: ಇಂದು ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ, ಹಾಗು ಉಪಮುಖ್ಯಮಂತ್ರಿಯಾಗಿ ಡಿ ಕೆ ಶಿವಕುಮಾರ್ ಪ್ರಮಾಣವಚನ ಸ್ವೀಕರಿಸಿದ ಬಳಿಕ ಕಾಂಗ್ರೆಸ್​​ನ ಮೊದಲ ಸಂಪುಟ ಸಭೆ ನಡೆಯಲಿದೆ. ಈ ವೇಳೆ ಕಾಂಗ್ರೆಸ್​ ಘೋಷಣೆ ಮಾಡಿರುವ 5 ಗ್ಯಾರಂಟಿಗಳ (Guarantee Schemes) ಜಾರಿ ಕುರಿತು ಮಹತ್ವದ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.

ಇದನ್ನು ಓದಿ: 2000 ನೋಟು ವಾಪಸಾತಿ, ಯಾರ ಮೇಲೆ ಹೇಗೆ ಪರಿಣಾಮ ಬೀರುತ್ತದೆ? ಭೂಮಿಯ ಬೆಲೆ ಕುಸಿಯುತ್ತದೆಯೇ?

ಹೌದು, ಈ ಮೊದಲೇ ಕಾಂಗ್ರೆಸ್ ಹೇಳಿದ್ದಂತೆ ಈ 5 ಗ್ಯಾರಂಟಿಗಳನ್ನು ಮೊದಲ ಸಂಪುಟ ಸಭಯಲ್ಲೇ ಚರ್ಚೆ ಮಾಡಿ ಜಾರಿ ಮಾಡುವುದಾಗಿ ತಿಳಿಸಿದೆ. ಹೀಗಾಗಿ ಕಾಂಗ್ರೆಸ್​​​ನ ಮೊದಲ ಸಂಪುಟ ಸಭೆ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಗೃಹ ಜ್ಯೋತಿ, ಗೃಹಲಕ್ಷ್ಮಿ, ಯುವನಿಧಿ ಹಾಗೂ ಉಚಿತ ಬಸ್​ ಪ್ರಯಾಣ ಸೇರಿ 10 ಕೆ.ಜಿ ಅಕ್ಕಿ ನೀಡುವ ಯೋಜನೆಯ ರೂಪುರೇಷೆ ಚರ್ಚೆಯಾಗಲಿದೆ.

ಇದನ್ನು ಓದಿ: BSNL ಬಂಪರ ಆಫರ್, 50 ಪ್ರತಿಶತ ರಿಯಾಯಿತಿಯೊಂದಿಗೆ ರೂ.49 ಕ್ಕೆ OTT ಪ್ಲಾನ್ ಲಭ್ಯ!

ಕಾಂಗ್ರೆಸ್ ಗ್ಯಾರಂಟಿಗೆ ಬೇಕಿದೆ 62 ಸಾವಿರ ಕೋಟಿ ರೂ..!!

ಕಾಂಗ್ರೆಸ್ ಸರ್ಕಾರ ರಾಜ್ಯದ ಜನತೆಗೆ 5 ಗ್ಯಾರಂಟಿ ಘೋಷಿಸಿದ್ದು, ಸದ್ಯ ಈ ಗ್ಯಾರಂಟಿಗಳು ಎಷ್ಟರ ಮಟ್ಟಿಗೆ ಜಾರಿಯಾಗಲಿದೆ ಎಂಬುದು ಕುತೂಹಲ ಮೂಡಿಸಿದೆ. ಈ ನಡುವೆ ಈ ಗ್ಯಾರಂಟಿಗಳ ಈಡೇರಿಸಲು ಬರೋಬ್ಬರಿ 62 ಸಾವಿರ ಕೋಟಿ ಅಗತ್ಯವಿದೆ. ಇದು ರಾಜ್ಯಕ್ಕೆ ಹೆಚ್ಚುವರಿ ಹೊರೆಯಾಗಲಿದ್ಯಾ ಅಥವಾ ಕೊರತೆ ಉಂಟಾಗದಂತೆ ಸರ್ಕಾರ ನಿರ್ವಹಣೆ ಮಾಡಲಿದ್ಯಾ ಎಂಬುದು ತಿಳಿದುಬರಬೇಕಿದೆ. ಇನ್ನು ಕಾಂಗ್ರೆಸ್ ಈ ಯೋಜನೆಗಳ ಜಾರಿಗೆ ಕೇವಲ 47 ಸಾವಿರ ಕೋಟಿ ರೂಪಾಯಿ ಸಾಕಾಗಲಿದೆ ಎನ್ನುತ್ತಿದೆ, ಇದು ರಾಜ್ಯ ಬಜೆಟ್​​ನ ಶೇ.15ರಷ್ಟು ಎಂದು ತಿಳಿಸಿದೆ.

ಯಾವ ಗ್ಯಾರಂಟಿ ಯೋಜನೆಗಳಿಗೆ ಎಷ್ಟು ದುಡ್ಡು ಬೇಕು?

ಕಾಂಗ್ರೆಸ್‌ ಘೋಷಿಸಿರುವ 5 ಉಚಿತ ಗ್ಯಾರಂಟಿ ಯೋಜನೆಗಳಿಗೆ ಎಷ್ಟು ದುಡ್ಡು ಬೇಕು ಅನ್ನುವ ಬಗ್ಗೆ ಆರ್ಥಿಕ ತಜ್ಞರು ವಿಶ್ಲೇಷಣೆ ಮಾಡಿದ್ದಾರೆ.

  • 200 ಯೂನಿಟ್‌ ಉಚಿತ ವಿದ್ಯುತ್‌ ಯೋಜನೆಗೆ ಮಾಸಿಕ ಕನಿಷ್ಠ ₹26000 ಕೋಟಿ,
  • ಮನೆ ಯಜಮಾನಿಗೆ ₹2000 ನೀಡಲು ವಾರ್ಷಿಕ ₹36,000 ಕೋಟಿ ,
  • 10kgಕೆಜಿ ಉಚಿತ ಅಕ್ಕಿ ನೀಡಲು ವಾರ್ಷಿಕ ₹10,000 ಕೋಟಿ,
  • ಮಹಿಳೆಯರ ಉಚಿತ ಬಸ್‌ ಪ್ರಯಾಣಕ್ಕೆ ವಾರ್ಷಿಕ ₹3250 ಕೋಟಿ
  • ನಿರುದ್ಯೋಗ ಭತ್ಯೆ ನೀಡಲು ₹3000 ಕೋಟಿ ಬೇಕಾಗುತ್ತದೆ ಎಂದು ಅಂದಾಜಿಸಿದ್ದಾರೆ.

ಇದನ್ನು ಓದಿ: ನಿಮಗೆ ಬ್ಯಾಂಕ್ ಖಾತೆ ಇದೆಯೇ? ರೂ.436 ಕಟ್ ಆಗುತ್ತೆ.. ಯಾಕೆ ಗೊತ್ತೇ?

Share This Article
Follow:
Kannada news - Vijayaprabha is a live Kannada news portal offering Kannada news online, Movie News in Kannada, Sports News in Kannada, Business News in Kannada & all Kannada Newspaper updates, Current Affairs in Karnataka & around the India in Kannada language.
Leave a comment

Leave a Reply

Your email address will not be published. Required fields are marked *

Exit mobile version