ರಾಜ್ಯ ಸರ್ಕಾರ ಬಡವರಿಗೆ ಭರ್ಜರಿ ಗುಡ್ ನ್ಯೂಸ್ ನೀಡಿದ್ದು, 2023ರ ಮಾರ್ಚ್ ವೇಳೆಗೆ ರಾಜ್ಯದಲ್ಲಿರುವ ಬಡವರಿಗೆ 16 ಲಕ್ಷ ಮನೆಗಳನ್ನು ಹಸ್ತಾಂತರಿಸಲಾಗುವುದು ಎಂದು ವಸತಿ ಸಚಿವ ವಿ.ಸೋಮಣ್ಣ ಹೇಳಿದ್ದಾರೆ.
ಹೌದು, ಈ ಕುರಿತು ಮಾತನಾಡಿರುವ ವಸತಿ ಸಚಿವ ವಿ.ಸೋಮಣ್ಣ, ಸದ್ಯ 6 ಲಕ್ಷ ಮನೆಗಳ ನಿರ್ಮಾಣ ಪೂರ್ಣಗೊಂಡಿದ್ದು, ಹಿಂದಿನ ಸರ್ಕಾರದ ಲೋಪದಿಂದಾಗಿ 10 ಲಕ್ಷ ಮನೆಗಳು ಬಾಕಿ ಉಳಿದಿವೆ. ಆ ಲೋಪಗಳನ್ನು ಸರಿಪಡಿಸಿ ಹಾಗೂ ನಿಜವಾದ ಬಡವರು ಯಾರೆಂದು ಗುರುತಿಸಿ, ಸೌಲಭ್ಯ ನೀಡಲಾಗುತ್ತಿದೆ. ನಿಗದಿತ ಗಡುವಿನೊಳಗೆ ಎಲ್ಲ ಫಲಾನುಭವಿಗಳಿಗೆ ಮನೆಗಳನ್ನು ಹಸ್ತಾಂತರಿಸಲಿದ್ದೇವೆ ಎಂದು ಹೇಳಿದ್ದಾರೆ.