ವಿಜಯನಗರ ಜಿಲ್ಲೆ : ಹರಪನಹಳ್ಳಿ ತಾಲೂಕು ಮತ್ತಿಹಳ್ಳಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತಿಹಳ್ಳಿ ಕೇಂದ್ರಕ್ಕೆ ಅನಿರೀಕ್ಷಿತವಾಗಿ ಭೇಟಿ ನೀಡಿದ ವಿಜಯನಗರ ಜಿಲ್ಲೆಯ ಜಿಲ್ಲಾಧಿಕಾರಿಗಳು ಎಂ.ಎಸ್. ದಿವಾಕರ ಅವರು ಆರೋಗ್ಯ ಕೇಂದ್ರದ ಸಿಬಂದಿಗಳ ಮೇಲೆ ಶಿಸ್ತು ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ.

ಹೌದು, ದಿನಾಂಕ 24.08.2025 ರಂದು ಭಾನುವಾರ ಮತ್ತಿಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಅಪರಾಹ್ನ ಒಬ್ಬ ಆರೋಗ್ಯ ಇಲಾಖೆಯ ಸಿಬ್ಬಂಧಿಗಳು ಇಲ್ಲದೇ ಬಾಗಿಲು ಹಾಕಿರುವುದು ಕಂಡುಬಂದಿದ್ದು, ಭಾನುವಾರ ದಿನದಂದು ಸಹಾ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಣೆ ಮಾಡಬೇಕೆಂದು ನಿಯಮವಿದ್ದರೂ ಸಹಾ ಸರ್ಕಾರದ ಆದೇಶಗಳನ್ನು ಪಾಲನೆ ಮಾಡದೇ ಇರುವ ಸಂಬಂದ ಆಸ್ಪತ್ರೆಯ ಸಂಬಂಧಿಸಿದ ವೈದ್ಯರ ವಿರುಧ್ದ ಶಿಸ್ತು ಕ್ರಮ ಕೈಗೊಳ್ಳುವಂತೆ ಜಿಲ್ಲಾ ವೈದ್ಯಾಧಿಕಾರಿಗಳಿಗೆ ಜಿಲ್ಲೆಯ ಜಿಲ್ಲಾಧಿಕಾರಿಗಳು ಎಂ.ಎಸ್. ದಿವಾಕರ ಸೂಚನೆ ನೀಡಿದ್ದಾರೆ.



