ಹರಪನಹಳ್ಳಿ: ಪಟ್ಟಣದ ಬೆಸ್ಕಾಂ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತುರ್ತು ನಿರ್ವಹಣಾ ಕೆಲಸದಿಂದ ಇಂದು ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಎಇಇ ಟಿ. ವಿರುಪಾಕ್ಷಪ್ಪ ಅವರು ತಿಳಿಸಿದ್ದಾರೆ.
ಹೌದು, ಇಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 5ರವರೆಗೆ ಹರಪನಹಳ್ಳಿ ಹೌಸಿಂಗ್ ಬೋರ್ಡ್ ಕಾಲೊನಿ, ಪ್ರವಾಸಿ ಮಂದಿರ ವೃತ್ತ, ಶಿಕ್ಷಕರ ಬಡಾವಣೆ, ಕೊಟ್ಟೂರು ರಸ್ತೆ, ಬಸ್ ನಿಲ್ದಾಣ, ಆಶ್ರಯ ಕಾಲೊನಿ, ಸರ್ಕಾರಿ ಆಸ್ಪತ್ರೆ, ಹೊಸಪೇಟೆ ರಸ್ತೆ, ಮೇಗಳಪೇಟೆ ರಸ್ತೆ, ದೇವರ ತಿಮ್ಲಾಪುರ, ಬಂಡ್ರಿ, ಅನಂತನಹಳ್ಳಿ, ಗೋವೆರಹಳ್ಳಿ, ಹಾರಕನಾಳ, ಯಲ್ಲಾಪುರ, ಕಡಬಗೆರೆ, ಬಾಗಳಿ, ಕುಮಾರನಹಳ್ಳಿ, ಕೋಡಿಹಳ್ಳಿ, ಕಾನಹಳ್ಳಿ, ನಿಚ್ಚಾಪುರ, ಕೂಲಹಳ್ಳಿ, ಹುಲಿಕಟ್ಟೆ ಮಾರ್ಗಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಎಇಇ ಟಿ. ವಿರುಪಾಕ್ಷಪ್ಪ ತಿಳಿಸಿದ್ದಾರೆ.



