ನ.21 ಅರಣ್ಯವಾಸಿಗಳ ಬೃಹತ್ ಬೆಂಗಳೂರು ಚಲೋ: ರವೀಂದ್ರ ನಾಯ್ಕ

ಕಾರವಾರ: ಕೇಂದ್ರ ಸರ್ಕಾರ ಕಸ್ತೂರಿರಂಗನ್ ವರದಿ ಸಂಪೂರ್ಣವಾಗಿ ತಿರಸ್ಕರಿಸಬೇಕು ಹಾಗೂ ನಿರ್ದಿಷ್ಟ ದಾಖಲೆಗಳಿಗೆ ಸಂಬಂಧಿಸಿ ಅರಣ್ಯ ಹಕ್ಕು ಕಾಯಿದೆ, ಬುಡಕಟ್ಟು ಮಂತ್ರಾಲಯದ ನವದೆಹಲಿ ಆದೇಶ ಮತ್ತು ಗುಜರಾತ್ ಉಚ್ಛನ್ಯಾಯಾಲಯದ ಆದೇಶದಂತೆ ಮೂರು ತಲೆಮಾರಿನ ದಾಖಲೆಗಳಿಗೆ…

ಕಾರವಾರ: ಕೇಂದ್ರ ಸರ್ಕಾರ ಕಸ್ತೂರಿರಂಗನ್ ವರದಿ ಸಂಪೂರ್ಣವಾಗಿ ತಿರಸ್ಕರಿಸಬೇಕು ಹಾಗೂ ನಿರ್ದಿಷ್ಟ ದಾಖಲೆಗಳಿಗೆ ಸಂಬಂಧಿಸಿ ಅರಣ್ಯ ಹಕ್ಕು ಕಾಯಿದೆ, ಬುಡಕಟ್ಟು ಮಂತ್ರಾಲಯದ ನವದೆಹಲಿ ಆದೇಶ ಮತ್ತು ಗುಜರಾತ್ ಉಚ್ಛನ್ಯಾಯಾಲಯದ ಆದೇಶದಂತೆ ಮೂರು ತಲೆಮಾರಿನ ದಾಖಲೆಗಳಿಗೆ ಒತ್ತಾಯಿಸತ್ತಕ್ಕದ್ದಲ್ಲ ಎಂಬ ಮತ್ತು ಮುಂತಾದ 6 ಬೇಡಿಕೆಗಳ ಒತ್ತಾಯಿಸಿ ನ.21 ರಂದು ಬೃಹತ್ ಬೆಂಗಳೂರು ಚಲೋ ಬೆಂಗಳೂರು ಪ್ರೀಡಮಂ ಪಾರ್ಕನಲ್ಲಿ ಜರುಗಿಸಲು ತೀರ್ಮಾನಿಸಲಾಗಿದೆ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು.

ಅವರು ಭಾನುವಾರ ಕಾರವಾರ ಪತ್ರಿಕಾ ಭವನದಲ್ಲಿ ಬೇಡಿಕೆಯ ಭಿತ್ತಿಪತ್ರವನ್ನು ಬಿಡುಗಡೆಗೊಳಿಸುತ್ತಾ ಮಾತನಾಡಿದರು.

27-04-1978ರ ಪೂರ್ವದ ಅರಣ್ಯ ಮಂಜೂರಿಗೆ ಕೇಂದ್ರ ಸರ್ಕಾರ ಅನುಮತಿ ನೀಡಿದ ರಾಜ್ಯದಲ್ಲಿನ ಪ್ರಕರಣಗಳ ಅರಣ್ಯವಾಸಿಗಳ ಕುಟುಂಬಕ್ಕೆ ಶೀಘ್ರದಲ್ಲಿ ಹಕ್ಕು ಪತ್ರ ವಿತರಿಸುವುದು, ಅಸಮರ್ಪಕ ಜಿಪಿಎಸ್ ಮೇಲ್ಮನವಿ ಅಪೀಲ್‌ಗೆ ಮಾನ್ಯತೆ ನೀಡುವುದು, ಕರ್ನಾಟಕದಲ್ಲಿ ಮತ್ತು ಕರ್ನಾಟಕದ ವಿವಿಧ ಜಿಲ್ಲೆಗಳಗೊಂಡ ಉತ್ತರ ಕನ್ನಡ ಜಿಲ್ಲೆಯು ಸೇರಿ ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಅರ್ಜಿ ಸಲ್ಲಿಸಲು ವಂಚಿತರಾದ ಅರಣ್ಯವಾಸಿಗಳ ಕುಟುಂಬಕ್ಕೆ ಪುನಃ ಅರ್ಜಿ ಸಲ್ಲಿಸಲು ಅವಕಾಶ ನೀಡುವದು, ಅರಣ್ಯವಾಸಿಗಳ ಮೇಲೆ ಕಾನೂನು ಭಾಹಿರವಾಗಿ ಒಕ್ಕಲೇಬ್ಬಿಸುವ ಮತ್ತು ದೌರ್ಜನ್ಯ ಎಸಗುವ ಕ್ರಮವನ್ನು ನಿಯಂತ್ರಿಸುವುದು, ಬೇಡಿಕೆಗಳಿಗೆ ಸರ್ಕಾರದ ಗಮನ ಸೆಳೆಯಲಾಗುವುದೆಂದು ಅವರು ಹೇಳಿದರು.

Vijayaprabha Mobile App free

ಪತ್ರಿಕಾ ಗೋಷ್ಠಿಯಲ್ಲಿ ಕುಮಟಾ ತಾಲೂಕಿನ ಅರಣ್ಯ ಹೋರಾಟ ಸಮಿತಿಯ ಅಧ್ಯಕ್ಷ ಮಂಜುನಾಥ ಮರಾಠಿ, ಜಿಲ್ಲಾ ಸಂಚಾಲಕರಾದ ರಾಜೇಶ ಮಿತ್ರ ನಾಯ್ಕ, ಅಂಕೋಲಾ ಜಿಲ್ಲಾ ಸಂಚಾಲಕರಾದ ವಿಜು ಪೀಟರ್ ಪಿಳ್ಳೆ, ಅರವಿಂದ ಗೌಡ ಮತ್ತು ರಾಜೀವ ಹರಿಕಾಂತ ವೇದಿಕೆಯ ಮೇಲೆ ಉಪಸ್ಥಿತರಿದ್ದರು.

10 ಸಾವಿರ ಅರಣ್ಯವಾಸಿಗಳ ನಿರೀಕ್ಷೆ: ಬೆಂಗಳೂರು ಚಲೋ ಕಾರ್ಯಕ್ರಮಕ್ಕೆ ರಾಜ್ಯದ 16 ಜಿಲ್ಲೆಗಳಿಂದ ಸುಮಾರು 10 ಸಾವಿರ ಅರಣ್ಯವಾಸಿಗಳು ಭಾಗವಹಿಸುರೆಂಬ ನಿರೀಕ್ಷೆಯನ್ನು  ಅವರು ಈ ಸಂದರ್ಭದಲ್ಲಿ ವ್ಯಕ್ತಪಡಿಸಿದರು.

1 ಲಕ್ಷ ಕುಟುಂಬದಿಂದ ಆಕ್ಷೇಪಣೆ: ಕರಡು ಕಸ್ತೂರಿರಂಗನ್ ವರದಿ ತಿರಸ್ಕರಿಸಲು ಕೇಂದ್ರ ಸರ್ಕಾರಕ್ಕೆ ಆಗ್ರಹಿಸಿ ಒಂದು ಲಕ್ಷ ಕುಟುಂಬದಿಂದ ಆಕ್ಷೇಪಣಾ ಪತ್ರವನ್ನ ಕೇಂದ್ರ ಸರ್ಕಾರಕ್ಕೆ ಸಲ್ಲಿಸುವ ಅಭಿಯಾನ ಸಂಘಟಿಸಲಾಗಿತ್ತೆಂದು ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.