Accident: ಟೆಂಪೋಗೆ ಗುದ್ದಿದ ಬೈಕು: ಹೆಸ್ಕಾಂ ನೌಕರನಿಗೆ ಗಾಯ

ಭಟ್ಕಳ: ನಿಂತಿದ್ದ ಟೆಂಪೋಗೆ ಹಿಂಬದಿಯಿಂದ ಬೈಕ್ ಗುದ್ದಿದ ಪರಿಣಾಮ ಬೈಕ್ ಸವಾರ ಗಾಯಗೊಂಡ ಘಟನೆ ಪಟ್ಟಣದ ಶಿವಾನಿ ಪೆಟ್ರೋಲ್ ಬಂಕ್ ಬಳಿ ನಡೆದಿದೆ. ಬೈಲೂರು ಬಳಿಯ ಕೆಳಗಿನ ಶೇರುಗಾರಕೇರಿಯ ಅಭಿಷೇಕ ನಾಯ್ಕ(22) ಗಾಯಗೊಂಡ ಬೈಕ್…

ಭಟ್ಕಳ: ನಿಂತಿದ್ದ ಟೆಂಪೋಗೆ ಹಿಂಬದಿಯಿಂದ ಬೈಕ್ ಗುದ್ದಿದ ಪರಿಣಾಮ ಬೈಕ್ ಸವಾರ ಗಾಯಗೊಂಡ ಘಟನೆ ಪಟ್ಟಣದ ಶಿವಾನಿ ಪೆಟ್ರೋಲ್ ಬಂಕ್ ಬಳಿ ನಡೆದಿದೆ. ಬೈಲೂರು ಬಳಿಯ ಕೆಳಗಿನ ಶೇರುಗಾರಕೇರಿಯ ಅಭಿಷೇಕ ನಾಯ್ಕ(22) ಗಾಯಗೊಂಡ ಬೈಕ್ ಸವಾರನಾಗಿದ್ದಾನೆ.

ಹೆಸ್ಕಾಂ ಉದ್ಯೋಗಿಯಾಗಿರುವ ಅಭಿಷೇಕ ಬುಧವಾರ ಸಂಜೆ ಕೆಲಸ ಮುಗಿಸಿ ಮುರ್ಡೇಶ್ವರದಿಂದ ಬೈಲೂರಿನತ್ತ ತೆರಳುತ್ತಿದ್ದರು. ಈ ವೇಳೆ ಟೆಂಪೋವೊಂದು ಅವರನ್ನು ಓವರ್‌ಟೆಕ್ ಮಾಡಿದೆ. ಶಿವಾನಿ ಪೆಟ್ರೋಲ್ ಬಂಕ್ ಬಳಿ ಟೆಂಪೋ ಚಾಲಕ ಏಕಾಏಕಿ ತನ್ನ ವಾಹನ ನಿಲ್ಲಿಸಿದ್ದು, ಹಿಂದಿನಿಂದ ಬರುತ್ತಿದ್ದ ಅಭಿಷೇಕ ನಾಯ್ಕ ಟೆಂಪೋಗೆ ಬೈಕ್ ಗುದ್ದಿದ್ದಾರೆ.

ಬೈಕ್ ಗುದ್ದಿದ ರಭಸಕ್ಕೆ ಅಭಿಷೇಕ ಅವರ ಮೂಗು, ದವಡೆ ಜೊತೆ ಭುಜಕ್ಕೆ ಪೆಟ್ಟಾಗಿದೆ. ಈ ಅಪಘಾತಕ್ಕೆ ಟೆಂಪೋ ಚಾಲಕನಾದ ಹೊನ್ನಾವರ ಮಂಕಿ ಬಳಿಯ ರಾಮನಗರ ಕೇಶವ ನಾಯ್ಕ ಕಾರಣ ಎಂದು ಅಭಿಷೇಕರ ತಂದೆ ನಾರಾಯಣ ನಾಯ್ಕ ಮುರ್ಡೇಶ್ವರ ಠಾಣೆಯಲ್ಲಿ ದೂರು ನೀಡಿದ್ದಾರೆ.

Vijayaprabha Mobile App free
WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.