ಬಸವಕಲ್ಯಾಣ: ಚೆನ್ನಬಸವಾನಂದ ಸ್ವಾಮೀಗೂ ನಮಗೂ ಸಂಬಂಧವಿಲ್ಲ. ಕಾನೂನಾತ್ಮಕವಾಗಿ ಅವರನ್ನು ಉಚ್ಛಾಟಿಸಲಾಗಿದೆ ಅವರಿಗೆ ಬಸವ ಧರ್ಮ ಪೀಠ ಕುರಿತು ಮಾತನಾಡುವ ಯಾವುದೇ ನೈತಿಕ ಹಕ್ಕಿಲ್ಲ ಎಂದು ಡಾ.ಗಂಗಾ ಮಾತಾಜಿ ಸ್ಪಷ್ಟನೆ ನೀಡಿದ್ದಾರೆ.
ಬಸವಕಲ್ಯಾಣದಲ್ಲಿ ಸ್ವಾಭಿಮಾನಿ ಕಲ್ಯಾಣ ಪರ್ವ ನಡೆಯಿಸಿ ಅದರಲ್ಲಿ ಸಂಬಂಧವಿಲ್ಲದ ನಿರ್ಣಯ ಕೈಗೊಂಡಿದ್ದು ಖಂಡಿಸಿ ಡಾ.ಗಂಗಾ ಮಾತಾಜಿ ಅವರು ನಗರದ ಬಸವ ಮಹಾಮನೆಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಕರ್ನಾಟಕದಲ್ಲಿ ಮೂರು ವರ್ಷಗಳ ಹಿಂದೆ ಸ್ವತಂತ್ರ ಲಿಂಗಾಯತ ಧರ್ಮ ಮಾನ್ಯತೆಗಾಗಿ ಹೋರಾಟ ತೀವ್ರಗೊಂಡಾಗ ಮಾತಾಜಿಯವರು ತಮ್ಮೆಲ್ಲಾ ಭೀನ್ನಾಭಿಪ್ರಾಯಗಳನ್ನು ಒತ್ತಿಟ್ಟು ಮಾತಾಜಿ ಅವರ ಒತ್ತಾಸೆಯಂತೆ ಮಠಾಧೀಶರಲ್ಲಿ ಒಕ್ಕೂಟ ಮೂಡಿಸಲು ಎಲ್ಲಾ ಮಠಾಧೀಶರ ಒತ್ತಾಸೆಯಂತೆ ಹಾಗೂ ಸುಪ್ರಿಂಕೋರ್ಟಿನ ಆದೇಶಕ್ಕೆ ಮಾನ್ಯತೆಗಾಗಿ ಲಿಂಗದೇವ ವಚನಾಂಕಿತ ಬಳಸುವುದು ಬಿಟ್ಟು ಬಿಡಲಾಗಿದೆ.
ಬಸವಣ್ಣನವರ ಮೂಲ ವಚನಾಂಕಿತ ಕೂಡಲಸಂಗಮದೇವ ಬಳಿಸುವುದಾಗಿ ಘೋಷಿಸಲಾಗಿದೆ. ಕೆಲವರು ಇದನ್ನೆ ಅಸ್ತ್ರವಾಗಿ ಬಳಸಿಕೊಂಡು ಸಮಾಜದ ವಿರೋಧ ಚಟುವಟಿಕೆಯಲ್ಲಿ ಮತ್ತು ಬಸವ ಧರ್ಮ ಪೀಠದ ವಿರುದ್ಧ ಇಲ್ಲ ಸಲ್ಲದ ಆರೋಪ ಮಾಡುವುದು ಬಸವ ಧರ್ಮ ಪೀಠಕ್ಕೆ ಸಂಬಂಧಿಸಿದ ರಾಷ್ಟ್ರೀಯ ಬಸವ ದಳ, ಅಕ್ಕಮಹಾದೇವಿ ಪೀಠ, ಬಸವ ಧರ್ಮ ಪೀಠ, ಲಿಂಗಾಯತ ಮಹಾಸಭಾದ ಬಗ್ಗೆ ಹೇಳಿಕೆ ನೀಡಿ ಗೊಂದಲ ಸೃಷ್ಠಿಸುತ್ತಿರುವ ಚೆನ್ನಬಸವಾನಂದ ಸ್ವಾಮೀಜಿ ವಿರುದ್ಧ ಕಾನೂನು ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಸಿದ್ಧರಾಮೇಶ್ವರ ಸ್ವಾಮೀಜಿ ಮಾತನಾಡಿ, ಬಸವ ಧರ್ಮ ಪೀಠವು ಟ್ರಸ್ಟ ವ್ಯವಸ್ಥೆ ಹೊಂದಿದ್ದು ಇದಕ್ಕೆ ಸಂಬಂಧಿಸಿದ ಎಲ್ಲಾ ಆಸ್ತಿಗಳು ಸಮಾಜಕ್ಕೆ ಸಂಬಂಧಿಸಿದ್ದು ಲಿಂಗಾನಂದ ಸ್ವಾಮೀಜಿ ಆಗಲಿ ಮಾತೆ ಮಹಾದೇವಿ ಆಗಲಿ ಟ್ರಸ್ಟಿನ ವ್ಯವಸ್ಥೆಯಂತೆ ನಡೆದಿದ್ದಾರೆ. ಟ್ರಸ್ಟಿನ ನಿಯಮ ಪ್ರಕಾರವೇ ಗಂಗಾ ಮಾತಾಜೀ ಅವರನ್ನು ಬಸವ ಧರ್ಮಪೀಠದ ಮುಖ್ಯಸ್ಥರನ್ನಾಗಿ ಮಾಡಿದ್ದಾರೆ. ಈಗ ಚೆನ್ನಬಸವಾನಂದ ಸ್ವಾಮಿಗೂ ನಮಗೂ ಯಾವುದೇ ಸಂಬಂಧವಿಲ್ಲ ಎಂದು ತಿಳಿಸಿದ್ದಾರೆ.
ಅಲ್ಲಮಪ್ರಭು ಯೋಗಿಪೀಠದ ಬಸವಕುಮಾರ ಸ್ವಾಮೀಜಿ ಮಾತನಾಡಿ, ಡಾ.ಗಂಗಾ ಮಾತಾಜಿಯವರಿಗೆ ನಮ್ಮೆಲ್ಲರ ಬೆಂಬಲವಿದೆ. ಮಾತೆ ಮಹಾದೇವಿ ಅವರಂತೆ ಬಸವ ಧರ್ಮ ಪೀಠದ ಮುಖ್ಯಸ್ಥರಾದ ಗಂಗಾ ಮಾತಾಜಿಯವರ ಎಲ್ಲಾ ಅಂಗ ಸಂಸ್ಥೆಗಳನ್ನು ಸಮರ್ಪಕವಾಗಿ ನಡೆಸಿಕೊಂಡು ಬರುತ್ತಿದ್ದಾರೆ. ನಾವೆಲ್ಲರು ಅವರ ಜೊತೆಗಿದ್ದೇವೆ ಚೆನ್ನಬಸವಾನಂದ ಸ್ವಾಮೀಯ ಸ್ವಾರ್ಥಕ್ಕಾಗಿ ಇಲ್ಲ ಸಲ್ಲದ ಆರೋಪ ಮಾಡುವುದು ಖಂಡಿಸುತ್ತೇವೆ ಇವರು ಹುಚ್ಚು ನಿರ್ಣಯಗಳಿಗೆ ಭಕ್ತರು ಯಾರು ಕಿವಿಗೂಡಬಾರದೆಂದು ವಿನಂತಿಸಿದರು.