ಹರಪನಹಳ್ಳಿ: ತಾಲ್ಲೂಕಿನ ಅರಸೀಕೆರೆ ಗ್ರಾಮದ ನಿವಾಸಿ, ಶ್ರೀ ದಂಡಿನ ದುರುಗಮ್ಮ ದೇವಿ ಪೂಜಾರಿ ದುರುಗಪ್ಪ ಅವರು ನಿಧನ ಹೊಂದಿದ್ದಾರೆ.
ಪ್ರತಿ ಕಾರ್ತೀಕ ಮಾಸದಲ್ಲಿ ನಡೆಯುವ ಹರಪನಹಳ್ಳಿ ತಾಲೂಕಿನ ಅರಸೀಕೆರೆ ಗ್ರಾಮದ ಐತಿಹಾಸಿಕ ಶ್ರೀ ದಂಡಿನ ದುರುಗಮ್ಮ ದೇವಿಯ ಜಾತ್ರೆ ವೇಳೆ ದಲಿತ ಪೂಜಾರಿ ಭಕ್ತಸಮೂಹದ ಬೆನ್ನಮೇಲೆ ಪೂಜಾರಿ ಅವರು ನಡೆದುಕೊಂಡು ಬರುತ್ತಿದ್ದ ವಿಶೇಷ ಸಂಪ್ರದಾಯ ಇದೆ.
ಹೀಗೆ ದಲಿತರು ಇತರೆ ಸಮುದಾಯದ ಬೆನ್ನ ಮೇಲೆ ನಡೆದುಕೊಂಡು ಬರುವ ಸಂಪ್ರದಾಯ ತುಂಬ ವಿರಳ. ಈವರೆಗೆ ಪೂಜಾರಿ ದುರುಗಪ್ಪ ಅವರು ಆ ಸೇವೆ ನೆರವೇರಿಸುತ್ತಿದ್ದರು. ಪೂಜಾರಿ ದುರುಗಪ್ಪ ಅವರ ನಿಧನಕ್ಕೆ ಭಕ್ತರು ಮತ್ತು ಊರಿನ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.
ಇದನ್ನು ಓದಿ: ಸಾಲಬಾದೆ ತಾಳಲಾರದೆ ವಿಷ ಸೇವಿಸಿ ರೈತ ಆತ್ಮಹತ್ಯೆ!