Hanuman : ಶ್ರೀರಾಮನ ಪರಮಭಕ್ತ ಹನುಮ೦ತನು ಬಹುತೇಕ ಹಿಂದೂಗಳು ಆರಾಧಿಸುವ ದೇವರಾಗಿದ್ದಾನೆ. ಗದಾಧಾರಿ ಹನುಮಂತನ ವಿಗ್ರಹ, ಫೋಟೋಗಳಲ್ಲಿ ಗದೆ ಹಿಡಿದಿರುವುದನ್ನು ನಾವು ನೋಡಬಹುದು. ಈ ಗದೆಯನ್ನು ನೀಡಿದ್ದು ಯಾರು ಎ೦ಬ ಬಗ್ಗೆ ಸಾಕಷ್ಟು ಕುತೂಹಲವಿರುತ್ತದೆ.
ಕೌಮೋದಕಿ
ಧಾರ್ಮಿಕ ಗ್ರಂಥಗಳ ಪ್ರಕಾರ ಹನುಮಂತನ ಗದೆಯ ಹೆಸರು ಕೌಮೋದಕಿ. ಈ ಗದೆಯು ಮನಸ್ಸನ್ನು ನಿಯಂತ್ರಿಸುತ್ತದೆ. ಈ ಗದೆಯಿಂದ ಹನುಮಂತನು ಅನೇಕ ರಾಕ್ಷಸರನ್ನು ಕೊಂದಿದ್ದಾನೆ.
ಕುಬೇರ ನೀಡಿದ ಗದೆ
ಈ ಗದೆಯನ್ನು ಸಂಪತ್ತಿನ ಅಧಿದೇವತೆಯಾದ ಕುಬೇರನು ಬಾಲ ಹನುಮಂತನಿಗೆ ನೀಡುತ್ತಾನೆ. ಈ ಗದೆಯಿಂದ ನೀನು ಎಲ್ಲಾ ಯುದ್ಧದಲ್ಲೂ ಜಯಗಳಿಸುವ ಎ೦ದು ಕುಬೇರನು ಹನುಮಂತನಿಗೆ ಆಶೀರ್ವದಿಸುತ್ತಾನೆ.
ವಾಮಹಸ್ತಾಗದಯುಕ್ತಂ
ಹನುಮಂತನು ಕೌಮೋದಕಿ ಗದೆ ಹಿಡಿದಿರುವುದಕ್ಕೆ ಅವನನ್ನು ವಾಮಹಸ್ತಾಗದಯುಕ್ತಂ ಎಂದು ಕರೆಯಲಾಗುತ್ತದೆ. ವಾಯುಪುತ್ರನ ಈ ಗದೆಯು ಅತ್ಯಂತ ದೊಡ್ಡದಾಗಿದ್ದು, ಬಹಳ ಶಕ್ತಿಯುತವಾಗಿದೆ.