ರೈತರಿಗೆ ಸಿಹಿಸುದ್ದಿ: ರಸಗೊಬ್ಬರ ಬೆಲೆಯಲ್ಲಿ ಭಾರಿ ಇಳಿಕೆ

ನವದೆಹಲಿ: ದೇಶಾದ್ಯಂತ ಕೃಷಿಕರು ಹೆಚ್ಚಾಗಿ ಬಳಸುವ ಡೈ ಅಮೋನಿಯಂ ಫಾಸ್ಪೆಟ್ (ಡಿಎಪಿ) ಮತ್ತು ಯೂರಿಯಾ ರಹಿತ ರಸಗೊಬ್ಬರದ ಮೇಲಿನ ಸಬ್ಸಿಡಿಯನ್ನು ಕೇಂದ್ರ ಸರಕಾರ ಏರಿಕೆ ಮಾಡಿದೆ. ಕಳೆದ ತಿಂಗಳೇ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ…

fertilizers-vijayaprabha-news

ನವದೆಹಲಿ: ದೇಶಾದ್ಯಂತ ಕೃಷಿಕರು ಹೆಚ್ಚಾಗಿ ಬಳಸುವ ಡೈ ಅಮೋನಿಯಂ ಫಾಸ್ಪೆಟ್ (ಡಿಎಪಿ) ಮತ್ತು ಯೂರಿಯಾ ರಹಿತ ರಸಗೊಬ್ಬರದ ಮೇಲಿನ ಸಬ್ಸಿಡಿಯನ್ನು ಕೇಂದ್ರ ಸರಕಾರ ಏರಿಕೆ ಮಾಡಿದೆ.

ಕಳೆದ ತಿಂಗಳೇ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಉನ್ನತ ಸಮಿತಿ ರಸಗೊಬ್ಬರದ ಮೇಲಿನ ಸಬ್ಸಿಡಿಯನ್ನು ಶೇ.140ರಷ್ಟು ಏರಿಕೆ ಮಾಡಲು ನಿರ್ಧರಿಸಿತ್ತು. ಅದರಂತೆ ಬುಧವಾರ ನಡೆದ ಕೇಂದ್ರ ಸಚಿವ ಸಂಪುಟದಲ್ಲಿ ಡಿಎಪಿ ಮತ್ತು ಯೂರಿಯಾ ರಹಿತ ರಸಗೊಬ್ಬರದ ಮೇಲಿನ ಸಬ್ಸಿಡಿ ಹೆಚ್ಚಳ ಮಾಡಲು ಕೇಂದ್ರ ಸರ್ಕಾರ ನಿರ್ಧಾರ ತೆಗೆದುಕೊಂಡಿದೆ.

ಈ ನಿರ್ಧಾರದಿಂದಾಗಿ ರೈತರಿಗೆ ಪ್ರತೀ ಬ್ಯಾಗ್ ಡಿಎಪಿ ಹಳೇ ದರ 1,200 ರೂ.ಗಳಿಗೇ ಸಿಗಲಿದ್ದು, ಪ್ರತೀ ಚೀಲ 50 ಕೆಜಿ ಇರಲಿದೆ. ಇದಕ್ಕೂ ಮೊದಲು ಡಿಎಪಿ ಗೊಬ್ಬರದ ಮೇಲಿನ ಸಬ್ಸಿಡಿ ಪ್ರತಿ ಬ್ಯಾಗ್ ಗೆ 500 ರೂ.ಗಳಿತ್ತು. ಆದರೆ ರಸಗೊಬ್ಬರ ಕಂಪೆನಿಗಳು ಗೊಬ್ಬರದ ಮೇಲಿನ ದರ ಏರಿಕೆ ಮಾಡಿದ್ದರಿಂದ ಡಿಎಪಿ ದರವೂ ಹೆಚ್ಚಾಗಿತ್ತು. ಇದನ್ನು ಮನಗಂಡ ಕೇಂದ್ರ ಸರಕಾರ ಸಬ್ಸಿಡಿಯನ್ನು 500ರಿಂದ 1,200 ರೂ.ಗಳಿಗೆ ಏರಿಸಿದೆ.

Vijayaprabha Mobile App free
WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.