ಇಂದು ‘ಇಂಜಿನಿಯರ್ಸ್ ಡೇ’; ಭಾರತ ರತ್ನ ಸರ್.ಎಂ ವಿಶ್ವೇಶ್ವರಯ್ಯ ಅವರ ಕುರಿತ ಈ ವಿಚಾರ ನೀವು ತಿಳಿದುಕೊಳ್ಳಲೇಬೇಕು !

ದಾವಣಗೆರೆ: ಇಂದು ನಾಡಿನಾದ್ಯಂತ ಇಂಜಿನಿಯರ್ಸ್ ಡೇ ಆಚರಿಸಲಾಗುತ್ತದೆ. ಇದಕ್ಕೆ ಸ್ಫೂರ್ತಿ ಮತ್ತು ಕಾರಣ ಭಾರತ ರತ್ನ ಸರ್.ಎಂ ವಿಶ್ವೇಶ್ವರಯ್ಯ ಅವರು. ಹೌದು ಸರ್.ಎಂ.ವಿ. ಜನ್ಮದಿನದ ಅಂಗವಾಗಿ ಇಂದು ಇಂಜಿನಿಯರ್ಸ್ ಡೇ ಆಚರಿಸಲಾಗುತ್ತಿದೆ.

ನಾಡಿನ ಪ್ರಗತಿಗೆ ಶ್ರಮಿಸಿದ ಹಲವು ಮಹಾನ್ ವ್ಯಕ್ತಿಗಳಲ್ಲಿ ಸರ್.ಎಂ.ವಿಶ್ವೇಶ್ವರಯ್ಯ ಕೂಡ ಅಗ್ರಸ್ಥಾನದಲ್ಲಿದೆ ನಿಲ್ಲುತ್ತಾರೆ. ನಾಡಿನ ಕೀರ್ತಿ ವಿಶ್ವದಗಲ ಹರಡಿದ ಈ ಧೀಮಂತ ವ್ಯಕ್ತಿ ಸರ್.ಎಂ ವಿಶ್ವೇಶ್ವರಯ್ಯ.

ಭಾರತ ರತ್ನ ಸರ್.ಎಂ ವಿಶ್ವೇಶ್ವರಯ್ಯ ಅವರ ಸಾಧನೆ ಮೈಲುಗಲ್ಲುಗಳು

Advertisement

ಕೋಲಾರದ ಮುದ್ದೇನಹಳ್ಳಿಯಲ್ಲಿ 1861 ಸೆ.15ರಂದು ಜನಿಸಿದ ವಿಶ್ವೇಶ್ವರಯ್ಯ ಅವರು ಮೈಸೂರು ಸಂಸ್ಥಾನದಲ್ಲಿ ಸೇವೆ ಸಲ್ಲಿಸಿದರು. ಅವರ ಕಾಲದಲ್ಲಿ
ಸೃಷ್ಟಿಸಿದ ಮೈಲುಗಳು ಈ ಕೆಳಗಿನಂತಿವೆ.

  • 1. ಮೈಸೂರಿನ ಕನ್ನಂಬಾಡಿ ಆಣೆಕಟ್ಟು ವಿಶ್ವದ ಗಮನ ಸೆಳೆದ ಹೆಮ್ಮೆಯ ಪ್ರತೀಕ.
  • 2. ಭದ್ರಾವತಿ ಸಕ್ಕರೆ ಮತ್ತು ಉಕ್ಕಿನ ಕಾರ್ಖಾನೆ.
  • 3. ಮೈಸೂರು ವಿಶ್ವವಿದ್ಯಾನಿಲಯ ಹಾಗೂ ಕನ್ನಡ ಸಾಹಿತ್ಯ ಪರಿಷತ್ ಸ್ಥಾಪನೆ.
  • 4. ಮೈಸೂರಿನ ಮಹಾರಾಜ ಕೃಷ್ಣರಾಜ ಒಡೆಯರ್ ಅವರ ಜೊತೆ ನಾಡಿನ ಸರ್ವತೋಮುಖ ಬೆಳವಣಿಗೆಗೆ ಕೆಲಸ.
  • 5.ದೇಶದಲ್ಲಿ ಮೊದಲ EDUSAT ತರಗತಿಗಳನ್ನು ಆರಂಭಿಸಿದ ಕೀರ್ತಿ ಬೆಳಗಾವಿಯಲ್ಲಿನ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯಕ್ಕೆ ಸಲ್ಲುತ್ತದೆ. ಇದರ ಹಿಂದಿನ ಸ್ಪೂರ್ತಿ ವಿಶ್ವೇಶ್ವರಯ್ಯ ಅವರು.
WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.
Add a comment

Leave a Reply

Your email address will not be published. Required fields are marked *

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement