ಹೈದರಾಬಾದ್: ರಕ್ಷಣಾ ಸಂಸ್ಥೆಯೊಂದರಲ್ಲಿ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದ ನಿವೃತ್ತ ಸೇನಾ ಯೋಧನೊಬ್ಬ ಜ.15 ರಂದು ತನ್ನ ಪತ್ನಿಯನ್ನು ಹತ್ಯೆ ಮಾಡಿ, ದೇಹವನ್ನು ತುಂಡುಗಳಾಗಿ ಕತ್ತರಿಸಿ, ಪ್ರೆಶರ್ ಕುಕ್ಕರ್ನಲ್ಲಿ ಕುದಿಸಿ, ಮೂಳೆಗಳನ್ನು ಪುಡಿ ಮಾಡಿ ಅವಶೇಷಗಳನ್ನು ಕೆರೆಯಲ್ಲಿ ಎಸೆದಿದ್ದಾನೆ.
ಸಂತ್ರಸ್ತ ಪುಟ್ಟವೆಂಕಟ ಮಾಧವಿ (35) ಜ.18 ರಂದು ನಾಪತ್ತೆಯಾಗಿದ್ದು, ಆಕೆಯ ಕುಟುಂಬದವರು ಶಂಕಿತ ಗುರುಮೂರ್ತಿ ಬಳಿ ಆಕೆಯ ಇರುವಿಕೆಯ ಬಗ್ಗೆ ಪ್ರಶ್ನಿಸಿದ್ದಾರೆ. ಈ ವೇಳೆ ಸಂಬಂಧಿಕರ ಮನೆಗೆ ಭೇಟಿ ನೀಡಿದ ಕಾರಣಕ್ಕೆ ಜಗಳವಾಡಿದ್ದು, ಆಕೆ ಮನೆಬಿಟ್ಟು ಹೋಗಿದ್ದಾಗಿ ತಿಳಿಸಿದ್ದಾನೆ. ಈ ಹಿನ್ನಲೆ ಮಾಧವಿ ಅವರ ಪೋಷಕರು ಮೀರ್ಪೇಟೆ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ಗುರುಮೂರ್ತಿಯನ್ನು ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಆತ ಕೋಪದಿಂದ ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ.
ಸಾಕ್ಷ್ಯವನ್ನು ಅಳಿಸಲು, ಅವನು ಅವಳ ದೇಹವನ್ನು ಅವರ ಸ್ನಾನಗೃಹದಲ್ಲಿ ಕತ್ತರಿಸಿ, ಒಲೆಯ ಮೇಲೆ ಕುಕ್ಕರ್ನಲ್ಲಿ ಭಾಗಗಳನ್ನು ಕುದಿಸಿ, ನಂತರ ಮೂಳೆಗಳನ್ನು ಬೇರ್ಪಡಿಸಿ, ಪುಡಿಮಾಡಿ ನೆಲಕ್ಕೆ ಹಾಕಿ ಮತ್ತೆ ಕುದಿಸಿದನು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಮೂರು ದಿನಗಳ ಕಾಲ ಮಾಂಸ ಮತ್ತು ಮೂಳೆಗಳನ್ನು ಅಡುಗೆ ಮಾಡಿದ ನಂತರ, ಆತ ಅವುಗಳನ್ನು ಒಂದು ಚೀಲದಲ್ಲಿ ಪ್ಯಾಕ್ ಮಾಡಿ ಮತ್ತು ಎಲ್ಲವನ್ನೂ ಹತ್ತಿರದ ಸರೋವರದಲ್ಲಿ ಎಸೆದಿದ್ದಾನೆ.
ಬುಧವಾರ ತಡರಾತ್ರಿಯವರೆಗೆ ಮೀರ್ಪೇಟೆಯ ಕೆರೆಯಲ್ಲಿ ಪೊಲೀಸರು ಗುರುಮೂರ್ತಿ ಎಸೆದ ಪತ್ನಿಯ ಶವದ ಅವಶೇಷಗಳಿದ್ದ ಚೀಲಕ್ಕಾಗಿ ಹುಡುಕಾಟ ನಡೆಸಿದ್ದರು. ಅದರೆ ಸಂಜೆಯವರೆಗೂ ಯಾವುದೇ ಅವಶೇಷ ಸಿಕ್ಕಿಲ್ಲ ಎನ್ನಲಾಗಿದೆ. ವ್ಯಾಪಕ ಶೋಧಕ್ಕಾಗಿ ಸುಳಿವು ತಂಡಗಳು ಮತ್ತು ಶ್ವಾನ ದಳವನ್ನು ನಿಯೋಜಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಗುರುಮೂರ್ತಿ ಸುಮಾರು 13 ವರ್ಷಗಳ ಹಿಂದೆ ಮಾಧವಿಯನ್ನು ಮದುವೆಯಾಗಿದ್ದು, ಕುಟುಂಬವು ಹೈದರಾಬಾದ್ನ ಜಿಲ್ಲೇಲಗುಡದಲ್ಲಿ ವಾಸಿಸುತ್ತಿದ್ದರು. ಪತ್ನಿ ಹತ್ಯೆ ಮಾಡಿದ ಆತ ಬಳಿಕ ಆಕೆ ಕಾಣೆಯಾಗಿದ್ದಾಗಿ ಕತೆಕಟ್ಟಿ ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದ.
ಶಂಕಿತನ ವಿರುದ್ಧ ಕೊಲೆಗೆ ಯಾವುದೇ ಸಾಕ್ಷ್ಯಗಳು ಸಿಗದ ಹಿನ್ನಲೆ ಪೊಲೀಸರು ಇದನ್ನು “ಕಾಣೆಯಾದ ವ್ಯಕ್ತಿ ಪ್ರಕರಣ” ಎಂದು ತನಿಖೆ ನಡೆಸುತ್ತಿದ್ದಾರೆ ಎಂದು ಮೀರ್ಪೆಟ್ ಎಸ್ಎಚ್ಒ ಕೆ ನಾಗರಾಜು ಹೇಳಿದ್ದಾರೆ.