ಬೆಳಗಾವಿ: ರಾಜ್ಯ ಕಾಂಗ್ರೆಸ್ ಯುವ ನಾಯಕಿ ನವ್ಯಾಶ್ರೀ ರಾಮಚಂದ್ರರಾವ್ ಅವರು ಕೃಷಿ ಇಲಾಖೆ ಅಧಿಕಾರಿ ರಾಜ್ ಕುಮಾರ್ ಟಾಕಳೆ ವಿರುದ್ಧ ಬೆಳಗಾವಿಯ ಎಪಿಎಂಸಿ ಠಾಣೆಯಲ್ಲಿ ದೂರು ದಾಖಲಿಸಿದ್ದು, ಐಪಿಸಿ ಸೆಕ್ಷನ್ 376, 366, 312, 420, 354, 504, 506, 509 ಹಾಗೂ ಐಟಿ ಕಾಯಿದೆ 66E, 67A ಅಡಿ ದೂರು ದಾಖಲಾಗಿದೆ.
ಇನ್ನು, ಪ್ರಕರಣದ ಆರೋಪಿ ಕೃಷಿ ಇಲಾಖೆ ಅಧಿಕಾರಿ ರಾಜ್ ಕುಮಾರ್ ಟಾಕಳೆ ಈ ಹಿಂದೆ ಯುವ ನಾಯಕಿ ನವ್ಯಾಶ್ರೀ ವಿರುದ್ಧ ಆರೋಪಿಸಿ, ಹನಿ ಟ್ರ್ಯಾಪ್, ಬ್ಲ್ಯಾಕ್ ಮೇಲ್, ವಂಚನೆ ಮಾಡಿದ್ದಾರೆ ಎಂದು ಆರೋಪಿಸಿದ್ದರು. ಬಳಿಕ ಮಾತನಾಡಿದ್ದ ಕಾಂಗ್ರೆಸ್ ಯುವ ನಾಯಕಿ ನವ್ಯಾಶ್ರೀ ರಾಮಚಂದ್ರರಾವ್ ಟಾಕಳೆ ನನ್ನ ಗಂಡ ಎಂದೂ ಹೇಳಿದ್ದರು.
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮvijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.