ಬೆಂಗಳೂರು: ಡಾ ಶಿವಮೂರ್ತಿ ಮುರುಘಾ ಶರಣರು ಇಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿಯಾಗಿ ವಿಧಾನಸೌಧದ ಆವರಣದಲ್ಲಿ ವಿಶ್ವಗುರು ಬಸವಣ್ಣನವರ ಪುತ್ಥಳಿಯನ್ನು ಸ್ಥಾಪಿಸಲು ಕ್ರಮ ವಹಿಸುವಂತೆ ಮನವಿ ಸಲ್ಲಿಸಿದರು.
ವಿಧಾನಸೌಧವು ಆಡಳಿತ ಕೇಂದ್ರವಾಗಿದ್ದು, ಇಲ್ಲಿ ಎಲ್ಲ ದಾರ್ಶನಿಕರ ಪುತ್ಥಳಿಗಳು ಸ್ಥಾಪಿತವಾಗಿವೆ. ಆಯಾ ಜಯಂತಿಗಳಂದು ಮುಖ್ಯಮಂತ್ರಿಗಳು, ಸಚಿವರು, ಶಾಸಕರು, ಗಣ್ಯಾತಿಗಣ್ಯರು ಪತ್ಥಳಿಗಳಿಗೆ ಗೌರವಾರ್ಪಣೆ ಮಾಡುವ ಸಂದರ್ಭ ಇದೆ.
ಆದರೆ ಮಹಾ ಮಾನವತಾವಾದಿ, ವಚನಕಾರ ಅನುಭವ ಮಂಟಪ ಸಂಸ್ಥಾಪಕ ಬಸವಣ್ಣನವರ ಪುತ್ಥಳಿ ಇಂಗ್ಲೆಂಡ್ ಪಾಲಿ೯ಮೆಂಟನಲ್ಲಿ ಸ್ಥಾಪನೆ ಆಗಿದೆ. ಬಸವಣ್ಣನವರು ಜನಿಸಿದ ಕನಾ೯ಟಕದ ವಿಧಾನಸೌಧ ಆವರಣದಲ್ಲಿ ಇಲ್ಲದಿರವದು ದುರದೃಷ್ಟಕರ ಸಂಗತಿಯಾಗಿದೆ.
ಆದ್ದರಿಂದ ಮಹಾಮಾನವತಾವಾದಿ, ವಚನಕಾರ, ಅನುಭವ ಮಂಟಪ ಸಂಸ್ಥಾಪಕ ಬಸವಣ್ಣನವರ ಪುತ್ಥಳಿಯನ್ನು ವಿಧಾನಸೌಧದ ಆವರಣದಲ್ಲಿ ಸ್ಥಾಪನೆ ಮಾಡಲು ಕೂಡಲೇ ಯೋಜನೆಯನ್ನು ಕೈಗೆತ್ತಿಕೊಳ್ಳಬೇಕೆಂದು ಡಾ ಶಿವಮೂರ್ತಿ ಮುರುಘಾ ಶರಣರು ಆಗ್ರಹಿಸಿದ್ದಾರೆ.
ಇದನ್ನು ಓದಿ: ಎಲ್ಲಾ ದೇಶಗಳ ಪಾರ್ಲಿಮೆಂಟ್ಗೆ ತಾಯಿ ಯಾವುದೆಂದರೆ ಬಸವಣ್ಣ ಸ್ಥಾಪಿಸಿದ ಅನುಭವ ಮಂಟಪ: ಶ್ರೀ ಮುರುಘಾ ಶರಣರ ಹೇಳಿಕೆ