ವಿಧಾನಸೌಧ ಆವರಣದಲ್ಲಿ ವಿಶ್ವಗುರು “ಬಸವಣ್ಣ”ನವರ ಪುತ್ಥಳಿ ಸ್ಥಾಪನೆಗೆ ಮುರುಘಾ ಶರಣರ ಆಗ್ರಹ!

ಬೆಂಗಳೂರು: ಡಾ ಶಿವಮೂರ್ತಿ ಮುರುಘಾ ಶರಣರು ಇಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿಯಾಗಿ ವಿಧಾನಸೌಧದ ಆವರಣದಲ್ಲಿ ವಿಶ್ವಗುರು ಬಸವಣ್ಣನವರ ಪುತ್ಥಳಿಯನ್ನು ಸ್ಥಾಪಿಸಲು ಕ್ರಮ ವಹಿಸುವಂತೆ ಮನವಿ ಸಲ್ಲಿಸಿದರು. ವಿಧಾನಸೌಧವು ಆಡಳಿತ ಕೇಂದ್ರವಾಗಿದ್ದು, ಇಲ್ಲಿ…

ಬೆಂಗಳೂರು: ಡಾ ಶಿವಮೂರ್ತಿ ಮುರುಘಾ ಶರಣರು ಇಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿಯಾಗಿ ವಿಧಾನಸೌಧದ ಆವರಣದಲ್ಲಿ ವಿಶ್ವಗುರು ಬಸವಣ್ಣನವರ ಪುತ್ಥಳಿಯನ್ನು ಸ್ಥಾಪಿಸಲು ಕ್ರಮ ವಹಿಸುವಂತೆ ಮನವಿ ಸಲ್ಲಿಸಿದರು.

ವಿಧಾನಸೌಧವು ಆಡಳಿತ ಕೇಂದ್ರವಾಗಿದ್ದು, ಇಲ್ಲಿ ಎಲ್ಲ ದಾರ್ಶನಿಕರ ಪುತ್ಥಳಿಗಳು ಸ್ಥಾಪಿತವಾಗಿವೆ. ಆಯಾ ಜಯಂತಿಗಳಂದು ಮುಖ್ಯಮಂತ್ರಿಗಳು, ಸಚಿವರು, ಶಾಸಕರು, ಗಣ್ಯಾತಿಗಣ್ಯರು ಪತ್ಥಳಿಗಳಿಗೆ ಗೌರವಾರ್ಪಣೆ ಮಾಡುವ ಸಂದರ್ಭ ಇದೆ.

ಆದರೆ ಮಹಾ ಮಾನವತಾವಾದಿ, ವಚನಕಾರ ಅನುಭವ ಮಂಟಪ ಸಂಸ್ಥಾಪಕ ಬಸವಣ್ಣನವರ ಪುತ್ಥಳಿ ಇಂಗ್ಲೆಂಡ್ ಪಾಲಿ೯ಮೆಂಟನಲ್ಲಿ ಸ್ಥಾಪನೆ ಆಗಿದೆ. ಬಸವಣ್ಣನವರು ಜನಿಸಿದ ಕನಾ೯ಟಕದ ವಿಧಾನಸೌಧ ಆವರಣದಲ್ಲಿ ಇಲ್ಲದಿರವದು ದುರದೃಷ್ಟಕರ ಸಂಗತಿಯಾಗಿದೆ.

Vijayaprabha Mobile App free

ಆದ್ದರಿಂದ ಮಹಾಮಾನವತಾವಾದಿ, ವಚನಕಾರ, ಅನುಭವ ಮಂಟಪ ಸಂಸ್ಥಾಪಕ ಬಸವಣ್ಣನವರ ಪುತ್ಥಳಿಯನ್ನು ವಿಧಾನಸೌಧದ ಆವರಣದಲ್ಲಿ ಸ್ಥಾಪನೆ ಮಾಡಲು ಕೂಡಲೇ ಯೋಜನೆಯನ್ನು ಕೈಗೆತ್ತಿಕೊಳ್ಳಬೇಕೆಂದು ಡಾ ಶಿವಮೂರ್ತಿ ಮುರುಘಾ ಶರಣರು ಆಗ್ರಹಿಸಿದ್ದಾರೆ.

ಇದನ್ನು ಓದಿ: ಎಲ್ಲಾ ದೇಶಗಳ ಪಾರ್ಲಿಮೆಂಟ್‍ಗೆ ತಾಯಿ ಯಾವುದೆಂದರೆ ಬಸವಣ್ಣ ಸ್ಥಾಪಿಸಿದ ಅನುಭವ ಮಂಟಪ: ಶ್ರೀ ಮುರುಘಾ ಶರಣರ ಹೇಳಿಕೆ

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.