ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಾದ ಪದ್ಮ ವಿಭೂಷಣ, ಪದ್ಮಭೂಷಣ & ಪದ್ಮಶ್ರೀ ಪ್ರಶಸ್ತಿಗಳನ್ನು ಕೇಂದ್ರ ಸರ್ಕಾರ ಪ್ರಕಟಿಸಿದ್ದು, ಸಾಧಕರಿಗೆ ರಾಷ್ಟ್ರಪತಿ ಪ್ರಶಸ್ತಿ ಪ್ರದಾನ ಮಾಡಲಿದ್ದು, ಕರ್ನಾಟಕದ ಮಾಜಿ ಸಿಎಂ ಎಸ್.ಎಂ.ಕೃಷ್ಣ ಸೇರಿ 6 ಸಾಧಕರಿಗೆ ಪದ್ಮವಿಭೂಷಣ, ಸುಧಾಮೂರ್ತಿ, ಎಸ್.ಎಲ್.ಭೈರಪ್ಪ ಸೇರಿದಂತೆ 9 ಸಾಧಕರಿಗೆ ಪದ್ಮಭೂಷಣ ನೀಡಿ ಗೌರವಿಸಿದ್ದಾರೆ.
ಇನ್ನು, ರಾಜ್ಯದ ರಾಣಿ ಮಾಚಯ್ಯ ಹಾಗೂ ತಮಟೆಯ ತಂದೆ ಎಂದೇ ಖ್ಯಾತರಾಗಿರುವ ಮುನಿ ವೆಂಕಟಪ್ಪಗೆ ಸೇರಿ 91 ಮಂದಿಗೆ ಕೇಂದ್ರ ಸರ್ಕಾರ ಪದ್ಮಶ್ರೀ ಪ್ರಶಸ್ತಿ ಘೋಷಿಸಿ ಆದೇಶಿಸಿದೆ.
‘ಪದ್ಮ ಪ್ರಶಸ್ತಿ’ಗೆ ಭಾಜನರಾದ ಕನ್ನಡಿಗರು!
ಎಸ್.ಎಂ.ಕೃಷ್ಣ- ಪದ್ಮವಿಭೂಷಣ (ಸಾರ್ವಜನಿಕ ವಿದ್ಯಮಾನ)
ಸುಧಾಮೂರ್ತಿ- ಪದ್ಮಭೂಷಣ (ಸಮಾಜ ಸೇವೆ)
ಎಸ್.ಎಲ್.ಭೈರಪ್ಪ- ಪದ್ಮಭೂಷಣ (ಸಾಹಿತ್ಯ & ಶಿಕ್ಷಣ)
ಮುನಿ ವೆಂಕಟಪ್ಪ- ಪದ್ಮಶ್ರೀ (ಕಲೆ)
ರಾಣಿ ರಾಚಯ್ಯ- ಪದ್ಮಶ್ರೀ (ಕಲೆ)
ಶ್ರೀಶಾ ರಶೀದ್ ಅಹ್ಮದ್ ಖಾದ್ರಿ- ಪದ್ಮಶ್ರೀ (ಕಲೆ)
ಎಸ್.ಸುಬ್ಬರಾಮನ್- ಪದ್ಮಶ್ರೀ (ಪುರಾತತ್ವ ಶಾಸ್ತ್ರ)
ಖಾದರ್ ವಲ್ಲಿ ದೂದೇಕುಲ- ಪದ್ಮಶ್ರೀ (ವಿಜ್ಞಾನ & ಇಂಜಿನಿಯರಿಂಗ್)