ಕಲುಬುರಗಿ: ತಾಜ್ ವೆಸ್ಟೆಂಡ್ ನಲ್ಲಿ ಕುಳಿತು ಸರ್ಕಾರ ನಡೆಸಲು ಆಗುತ್ತಾ ? ನನ್ನ ಹೇಳಿಕೆಯಿಂದ ಕುಮಾಸ್ವಾಮಿಗೆ ಮುಜುಗರ ಆಗುತ್ತೆ ಎಂದು ಕಲುಬುರಗಿಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ. “ನಾನು ಯಾವತ್ತೂ ವಿಲನ್ ಆಗಿ ಕೆಲಸವನ್ನು ಮಾಡಿಲ್ಲ ನಾನು ಹೀರೊ ಹಾಗಿ ಮಾತ್ರವೇ ಮಾಡಿದ್ದೇನೆ” ಎಂದು ಸಿದ್ದರಾಮಯ್ಯ ಅವರು ಹೇಳಿದ್ದಾರೆ.
ಇನ್ನು ರಾಜ್ಯದ 23 ಜಿಲ್ಲೆಗಳಲ್ಲಿ ಅತಿವೃಷ್ಟಿಯಿಂದ ರೈತರಿಗೆ ಸಂಕಷ್ಟ ಎದುರಾಗಿದೆ. ರೈತರು, ಜನ ಸಂಕಷ್ಟದಲ್ಲಿದ್ದರು ಸಚಿವರು ಇತ್ತ ತಲೆ ಹಾಕಿಲ್ಲ. ನೆರೆ ಪರಿಸ್ಥಿತಿ ನಿಭಾಯಿಸುವಲ್ಲಿ ರಾಜ್ಯ ಸಂಪೂರ್ಣ ವಿಫಲವಾಗಿದೆ ಎಂದು ಕಲುಬುರಗಿಯಲ್ಲಿ ವಿಪಕ್ಷನಾಯಕ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ
ಇಂತಹ ಸಂದರ್ಭದಲ್ಲಿ ಉಸ್ತುವಾರಿ ಸಚಿವರು ಇಲ್ಲೇ ಇರಬೇಕು. ಜಿಲ್ಲೆಗಳಲ್ಲಿಯೇ ಬೀಡುಬಿಟ್ಟು ಪರಿಹಾರ ಕೆಲಸ ಮಾಡಬೇಕು. ಆದ್ರೆ ಕಲುಬುರಗಿ ಉಸ್ತುವಾರಿ ಸಚಿವರು ಈ ಕಡೆ ತಲೆ ಹಾಕಿಲ್ಲ. ಮೇ ತಿಂಗಳಿಂದ ಜಿಲ್ಲೆಯ ಕಡೆ ಅವರು ತಲೆಯೇ ಹಾಕಿಲ್ಲ ಎಂದು ಕಲುಬುರಗಿ ಉಸ್ತುವಾರಿ ಸಚಿವ ಕಾರಜೋಳ ವಿರುದ್ಧ ಕಿಡಿಕಾರಿದ್ದಾರೆ.
ಕಂದಾಯ ಸಚಿವರು ಪಿಕ್ ನಿಕ್ ಗೆ ಬಂದಂತೆ ಬಂದು ಹೋಗಿದ್ದಾರೆ. ಸಿಎಂ ಬಿಎಸ್ ಯಡಿಯೂರಪ್ಪ ಮೇಲೆಯೇ ಹಾರಾಟ ಮಾಡಿ ಹೋಗಿದ್ದಾರೆ. ಯಡಿಯೂರಪ್ಪಗೆ ಮೇಲಿಂದ ಅದು ಏನು ಕಾಣಿಸ್ತೋ ಗೊತ್ತಿಲ್ಲ. ಒಬ್ಬನೇ ಒಬ್ಬ ನೆರೆ ಸಂತ್ರಸ್ತನ ಕಷ್ಟವನ್ನು ಸಿಎಂ ಬಿಎಸ್ ಯಡಿಯೂರಪ್ಪ ಆಲಿಸಲಿಲ್ಲ.
ಸಿಎಂ ಬಿಎಸ್ ಯಡಿಯೂಪ್ಪ, ಮಂತ್ರಿಗಳು ಈ ರೀತಿ ನಡೆದುಕೊಳ್ಳುತ್ತಿದ್ದರೆ, ಅಧಿಕಾರಿಗಳಿಗೆ ಲಂಗು ಲಗಾಮಿಲ್ಲದಂತಾಗಿದೆ ಎಂದು ಹೇಳಿದ್ದು, ನೆರೆ ಸಂತ್ರಸ್ತರಿಗೆ ಕೇಂದ್ರ, ರಾಜ್ಯ ಸರ್ಕಾರಗಳು ನಯಾಪೈಸೆ ಪರಿಹಾರ ನೀಡಿಲ್ಲ ಎಂದು ಕಲುಬುರಗಿಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಕಿಡಿಕಾರಿದ್ದಾರೆ.