ಕೊಲೊಂಬೊ: ಆರ್ ಪ್ರೇಮದಾಸ್ ಸ್ಟೇಡಿಯಂ ನಲ್ಲಿ ಶ್ರೀಲಂಕಾ ವಿರುದ್ಧದ ಮೂರು ಏಕದಿನ ಪಂದ್ಯಗಳ ಸರಣಿಯ ಮೊದಲ ಪಂದ್ಯದಲ್ಲಿ ಭಾರತ 7 ವಿಕೆಟ್ ಗಳ ಭರ್ಜರಿ ಜಯ ದಾಖಲಿಸಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಅತಿಥಿಯ ಶ್ರೀಲಂಕಾ ನಿಗದಿತ 50 ಓವರ್ ಗಳಲ್ಲಿ 9 ವಿಕೆಟ್ ಕಳೆದುಕೊಂಡು 262 ರನ್ ದಾಖಲಿಸಿತು. ಲಂಕಾ ಪರ ಅವಿಷ್ಕಾ ಫರ್ನಾಂಡೊ 33 ರನ್, ಎಂ ಬಾನುಕ 27 ರನ್, ರಾಜಪಕ್ಷ 24 ರನ್, ಅಸಾಲಂಕಾ 38 ರನ್, ಶಣಕ 39 ರನ್, ಕರುಣಾರತನೇ 43 ರನ್ ಗಳಿಸಿದರು. ಭಾರತ ಪರ ದೀಪಕ್ ಚಾಹರ್, ಚಾಹಲ್, ಕುಲದೀಪ್ ಯಾದವ್ ತಲಾ 2 ವಿಕೆಟ್ ಮತ್ತು ಹಾರ್ದಿಕ್ ಪಾಂಡ್ಯ, ಕೃಣಾಲ್ ಪಾಂಡ್ಯ ತಲಾ 1ವಿಕೆಟ್ ಪಡೆದರು.
ಇನ್ನು, 263 ರನ್ ಗಳ ಗುರಿ ಬೆನ್ನಟ್ಟಿದ್ದ ಭಾರತ 36.4 ಓವರ್ಗಳಲ್ಲಿ 3 ಕಳೆದುಕೊಂಡು 7 ವಿಕೆಟ್ ಗಳ ಭರ್ಜರಿ ಗೆಲುವು ದಾಖಲಿಸಿತು. ಭಾರತದ ಪರ ಇಶಾನ್ ಕಿಶನ್ 59 ರನ್, ಪೃಥ್ವಿ ಶಾ 43 ರನ್, ಧವನ್ ಅಜೇಯ 86 ರನ್, ಮನೀಶ್ ಪಾಂಡೆ 26 ರನ್, ಸೂರ್ಯ ಕುಮಾರ್ ಯಾದವ್ ಅಜೇಯ 31 ರನ್ ಗಳಿಸುವ ಮೂಲಕ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಲಂಕಾ ಪರ ಧನಂಜಯ್ 2 ವಿಕೆಟ್ ಪಡೆದರು.
ಇನ್ನು, ಭಾರತ ಪರ ಆಕರ್ಷಕ ಬ್ಯಾಟಿಂಗ್ ಪ್ರದರ್ಶನ ನೀಡಿದ ಪೃಥ್ವಿ ಶಾ ಪಂದ್ಯ ಪುರುಷೋತ್ತಮ ಪ್ರಶಸ್ತಿಗೆ ಭಾಜನರಾದರು.